Latest Updates
-
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ! -
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ?
ಪತಿಯ ಕಿರುಕುಳಕ್ಕೆ ಬೇಸತ್ತು ಮದುವೆಯಾದ ಮಹಿಳೆಯರು! ಇನ್ಸ್ಸ್ಟಾಗ್ರಾಮ್ನಿಂದ ಹುಟ್ಟಿಕೊಂಡ ಪ್ರೀತಿಯಂತೆ..!
ಇತ್ತೀಚಿನ ದಿನಗಳಲ್ಲಿ ನಾವು ಚಿತ್ರ ವಿಚಿತ್ರ ಮದುವೆ ಘಟನೆಗಳ ನೋಡುತ್ತಿದ್ದೇವೆ. ಈಗ ಇದೇ ಸಾಲಿಗೆ ಇಬ್ಬರು ಮಹಿಳೆಯರು ಪರಸ್ಪರ ಒಪ್ಪಿ ಮದುವೆಯಾಗಿರುವ ಅಪರೂಪದ ಘಟನೆ ನಡೆದಿದೆ. ಪತಿ ಮದ್ಯ ಸೇವಿಸಿ ಹಿಂಸೆ ನೀಡುತ್ತಿದ್ದ ಎಂಬ ಕಾರಣದಿಂದ ಇಬ್ಬರು ಮಹಿಳೆಯರು ಮದುವೆಯಾಗಿದ್ದಾರೆ. ಉತ್ತರ ಪ್ರದೇಶದ ಗೋರಖ್ಪುರ್ನ ಗ್ರಾಮದಲ್ಲಿ ಈ ಘಟನೆ ವರದಿಯಾಗಿದೆ.
ಕವಿತಾ ಮತ್ತು ಗುಂಜಾ ಎಂಬ ಇಬ್ಬರು ಮನೆ ಬಿಟ್ಟು ಬಂದು ಮದುವೆಯಾಗಲು ನಿರ್ಧರಿಸಿ, ಬಳಿಕ ಶಿವನ ದೇವಾಲಯದಲ್ಲಿ ಹಾರ ಬದಲಾಯಿಸಿಕೊಂಡಿದ್ದಾರೆ. ಹಾಗೆ ಈ ವೇಳೆ ಹಿಂಸೆ ರಹಿತ, ಸುಖ ಜೀವನ ನಡೆಸುವುದಾಗಿ ಇಬ್ಬರೂ ಪ್ರತಿಜ್ಞೆ ಮಾಡಿದ್ದಾರೆ. ಸದ್ಯ ಇಬ್ಬರ ಮದುವೆ ಸುದ್ದಿ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಹಾಗೆ ಹಲವು ರೀತಿಯ ಅಭಿಪ್ರಾಯಗಳು ಕೂಡ ಕೇಳಿಬರುತ್ತಿವೆ.

ಇಬ್ಬರ ಮನೆಯಲ್ಲೂ ಪತಿ ಮದ್ಯವ್ಯಸನಿಯಾಗಿದ್ದು, ಯಾವಾಗಲು ಕುಡಿದು ಬಂದು ಗಲಾಟೆ ಮಾಡುವುದು ಮಾಡುತ್ತಿದ್ದನಂತೆ. ಆದರೆ ಈ ಇಬ್ಬರಿಗೂ ಇನ್ಸ್ಸ್ಟಾಗ್ರಾಮ್ ಮೂಲಕ ಪರಿಚಯವಾಗಿತ್ತು. ನಂತರ ಮಾತುಕತೆಯ ಹಂತ ತಲುಪಿತ್ತು. ಇದಾಗಿ ಹಲವು ತಿಂಗಳುಗಳ ಕಾಲ ಮನೆ ಬಿಟ್ಟು ಬರುವ ನಿರ್ಧಾರ ಕುರಿತು ಇಬ್ಬರು ಆಲೋಚಿಸಿದ್ದರು. ಹಾಗೆ ಕೊನೆಯಲ್ಲಿ ಪತಿಯ ಬಿಟ್ಟು ಬಂದು ಮದುವೆಯಾಗಿದ್ದಾರೆ.
ನಮ್ಮ ಗಂಡಂದಿರ ಮದ್ಯಪಾನ ಮತ್ತು ನಿಂದನೆಯಿಂದ ಮುಕ್ತಿ ಪಡೆಯಲು ನಾವು ಬಯಸಿದ್ದೆವು. ಶಾಂತಿ, ಪ್ರೀತಿಯ ಜೀವನದ ಕನಸು ಕಂಡಿದ್ದೆವು. ಹೀಗಾಗಿ ಗೋರಖ್ಪುರ್ನಲ್ಲಿ ನಾವು ದಂಪತಿಯಾಗಿ ಜೀವಿಸಲು ಮುಂದಾಗಿದ್ದೇವೆ ಎಂದು ಇಬ್ಬರು ಹೇಳಿಕೊಂಡಿದ್ದಾರೆ.
ಭಾರತದಲ್ಲಿ ಸಲಿಂಗ ವಿವಾಹ ಕಾನೂನು ಏನು ಹೇಳುತ್ತೆ?
ಭಾರತದಲ್ಲಿ ಸಲಿಂಗ ವಿವಾಹ ಎಂಬುದು ಇನ್ನೂ ಕಾನೂನು ಬದ್ದವಾಗಿಲ್ಲ. ಸದ್ಯಕ್ಕೆ ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಬೇಕೇ ಬೇಡವೇ ಎಂಬ ವಾದ ಇನ್ನೂ ಸುಪ್ರೀಂಕೋರ್ಟ್ ಅಂಗಳದಲ್ಲಿದೆ. ಆದರೆ ಸಲಿಂಗಕಾಮಕ್ಕೆ ಭಾರತದಲ್ಲಿ ಕಾನೂನಿನಿಂದ ಅಡ್ಡಿಯಿಲ್ಲ ಆದರೆ ವಿವಾಹಕ್ಕೆ ಇನ್ನು ಮಾನ್ಯತೆ ಸಿಕ್ಕಿಲ್ಲ. ಸಲಿಂಗ ವಿವಾಹಕ್ಕೆ ಅವಕಾಶ ಕಲ್ಪಿಸಲು ವಿಶೇಷ ವಿವಾಹ ಕಾಯ್ದೆ ಅಡಿಯಲ್ಲಿ ಬದಲಾವಣೆ ಕುರಿತು ಸಂಸತ್ತು ನಿರ್ಧರಿಸಬೇಕಿದೆ. ಆದ್ರೆ ಕೇಂದ್ರ ಸರ್ಕಾರ ಈ ಸಲಿಂಗ ವಿವಾಹದ ವಿರುದ್ಧ ವಾದ ಮಾಡುತ್ತಾ ಬಂದಿದೆ. ಹಾಗೆ ಸಂವಿಧಾನದಲ್ಲಿಯೂ ಕೂಡ ಈ ಕುರಿತ ಹಕ್ಕುಗಳ ಉಲ್ಲೇಖವಿಲ್ಲ. ಹೀಗಾಗಿ ಭಾರತದಲ್ಲಿ ಇಂದಿಗೂ ಸಲಿಂಗ ವಿವಾಹ ಕುರಿತು ಕಾನೂನು ಜಾರಿಯಾಗಿಲ್ಲ.
ಆದ್ರೆ ಸಲಿಂಗ ವಿವಾಹ ಆಗುವ ಮಂದಿಗೆ ಕಾನೂನಿನಿಂದ ಅಡ್ಡಿಯಾಗುತ್ತಿದ್ದರೂ ಭಾರತದಲ್ಲಿಯೂ ಕೂಡ ಸಲಿಂಗ ವಿವಾಹ ಸಂಖ್ಯೆ ಏರುಗತಿಯಲ್ಲಿದೆ. ಆದರೆ ಅವರಿಗೆ ಸಂವಿಧಾನಾತ್ಮಕವಾಗಿ ಸಿಗುವಂತಹ ಹಲವು ಹಕ್ಕುಗಳು ಮಾತ್ರ ಸಿಗುತ್ತಿಲ್ಲ. ಜೋಡಿಯು ಮಕ್ಕಳನ್ನು ದತ್ತು ಪಡೆಯುವ ಹಕ್ಕಿಲ್ಲ. ಹಾಗೆ ವಿಮೆ, ವಿವಾಹನಂತರದ ಹಕ್ಕುಗಳ ಪಡೆಯುವಲ್ಲಿ ಅವರು ವಿಫಲರಾಗುತ್ತಾರೆ.
ಭಾರತದ ಸೇರಿದಂತೆ ಕೆಲವೊಂದು ರಾಷ್ಟ್ರಗಳನ್ನು ಹೊರತುಪಡಿಸಿ ವಿಶ್ವದ ಸುಮಾರು 30ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಸಲಿಂಗ ವಿವಾಹ ಕಾನೂನು ಬದ್ಧವಾಗಿದೆ. ಅದರಲ್ಲೂ ಹಲವು ದೇಶಗಳಲ್ಲಿ ಜನರ ಅಭಿಪ್ರಾಯ ಪಡೆದುಕೊಂಡು ಈ ಕಾನೂನು ಜಾರಿ ಮಾಡಲಾಗಿದೆ. ಇನ್ನು ಕೆಲವು ದೇಶಗಳಲ್ಲಿ ಸಲಿಂಗ ವಿವಾಹಕ್ಕೆ ಮಾನ್ಯತೆಯೂ ಇಲ್ಲ ಜೊತೆಗೆ ಅದನ್ನು ನಿಷೇಧಿಸಿಯೂ ಇಲ್ಲ. ಮೊಟ್ಟ ಮೊದಲ ಬಾರಿಗೆ ಸಲಿಂಗ ಮದುವೆಯನ್ನು ಕಾನೂನು ಮಾಡಿ ಅದನ್ನು ಒಪ್ಪಿಕೊಂಡಿದ್ದ ನೆದರ್ಲ್ಯಾಂಡ್ ದೇಶವಾಗಿದೆ. 2000ನೇ ಇಸವಿಯಲ್ಲಿಯೇ ಈ ಪುಟ್ಟ ದೇಶ ಈ ರೀತಿ ಕಾನೂನು ಜಾರಿ ಮಾಡಿತ್ತು.



Click it and Unblock the Notifications