Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಪತಿಯ ಕಿರುಕುಳಕ್ಕೆ ಬೇಸತ್ತು ಮದುವೆಯಾದ ಮಹಿಳೆಯರು! ಇನ್ಸ್ಸ್ಟಾಗ್ರಾಮ್ನಿಂದ ಹುಟ್ಟಿಕೊಂಡ ಪ್ರೀತಿಯಂತೆ..!
ಇತ್ತೀಚಿನ ದಿನಗಳಲ್ಲಿ ನಾವು ಚಿತ್ರ ವಿಚಿತ್ರ ಮದುವೆ ಘಟನೆಗಳ ನೋಡುತ್ತಿದ್ದೇವೆ. ಈಗ ಇದೇ ಸಾಲಿಗೆ ಇಬ್ಬರು ಮಹಿಳೆಯರು ಪರಸ್ಪರ ಒಪ್ಪಿ ಮದುವೆಯಾಗಿರುವ ಅಪರೂಪದ ಘಟನೆ ನಡೆದಿದೆ. ಪತಿ ಮದ್ಯ ಸೇವಿಸಿ ಹಿಂಸೆ ನೀಡುತ್ತಿದ್ದ ಎಂಬ ಕಾರಣದಿಂದ ಇಬ್ಬರು ಮಹಿಳೆಯರು ಮದುವೆಯಾಗಿದ್ದಾರೆ. ಉತ್ತರ ಪ್ರದೇಶದ ಗೋರಖ್ಪುರ್ನ ಗ್ರಾಮದಲ್ಲಿ ಈ ಘಟನೆ ವರದಿಯಾಗಿದೆ.
ಕವಿತಾ ಮತ್ತು ಗುಂಜಾ ಎಂಬ ಇಬ್ಬರು ಮನೆ ಬಿಟ್ಟು ಬಂದು ಮದುವೆಯಾಗಲು ನಿರ್ಧರಿಸಿ, ಬಳಿಕ ಶಿವನ ದೇವಾಲಯದಲ್ಲಿ ಹಾರ ಬದಲಾಯಿಸಿಕೊಂಡಿದ್ದಾರೆ. ಹಾಗೆ ಈ ವೇಳೆ ಹಿಂಸೆ ರಹಿತ, ಸುಖ ಜೀವನ ನಡೆಸುವುದಾಗಿ ಇಬ್ಬರೂ ಪ್ರತಿಜ್ಞೆ ಮಾಡಿದ್ದಾರೆ. ಸದ್ಯ ಇಬ್ಬರ ಮದುವೆ ಸುದ್ದಿ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಹಾಗೆ ಹಲವು ರೀತಿಯ ಅಭಿಪ್ರಾಯಗಳು ಕೂಡ ಕೇಳಿಬರುತ್ತಿವೆ.

ಇಬ್ಬರ ಮನೆಯಲ್ಲೂ ಪತಿ ಮದ್ಯವ್ಯಸನಿಯಾಗಿದ್ದು, ಯಾವಾಗಲು ಕುಡಿದು ಬಂದು ಗಲಾಟೆ ಮಾಡುವುದು ಮಾಡುತ್ತಿದ್ದನಂತೆ. ಆದರೆ ಈ ಇಬ್ಬರಿಗೂ ಇನ್ಸ್ಸ್ಟಾಗ್ರಾಮ್ ಮೂಲಕ ಪರಿಚಯವಾಗಿತ್ತು. ನಂತರ ಮಾತುಕತೆಯ ಹಂತ ತಲುಪಿತ್ತು. ಇದಾಗಿ ಹಲವು ತಿಂಗಳುಗಳ ಕಾಲ ಮನೆ ಬಿಟ್ಟು ಬರುವ ನಿರ್ಧಾರ ಕುರಿತು ಇಬ್ಬರು ಆಲೋಚಿಸಿದ್ದರು. ಹಾಗೆ ಕೊನೆಯಲ್ಲಿ ಪತಿಯ ಬಿಟ್ಟು ಬಂದು ಮದುವೆಯಾಗಿದ್ದಾರೆ.
ನಮ್ಮ ಗಂಡಂದಿರ ಮದ್ಯಪಾನ ಮತ್ತು ನಿಂದನೆಯಿಂದ ಮುಕ್ತಿ ಪಡೆಯಲು ನಾವು ಬಯಸಿದ್ದೆವು. ಶಾಂತಿ, ಪ್ರೀತಿಯ ಜೀವನದ ಕನಸು ಕಂಡಿದ್ದೆವು. ಹೀಗಾಗಿ ಗೋರಖ್ಪುರ್ನಲ್ಲಿ ನಾವು ದಂಪತಿಯಾಗಿ ಜೀವಿಸಲು ಮುಂದಾಗಿದ್ದೇವೆ ಎಂದು ಇಬ್ಬರು ಹೇಳಿಕೊಂಡಿದ್ದಾರೆ.
ಭಾರತದಲ್ಲಿ ಸಲಿಂಗ ವಿವಾಹ ಕಾನೂನು ಏನು ಹೇಳುತ್ತೆ?
ಭಾರತದಲ್ಲಿ ಸಲಿಂಗ ವಿವಾಹ ಎಂಬುದು ಇನ್ನೂ ಕಾನೂನು ಬದ್ದವಾಗಿಲ್ಲ. ಸದ್ಯಕ್ಕೆ ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಬೇಕೇ ಬೇಡವೇ ಎಂಬ ವಾದ ಇನ್ನೂ ಸುಪ್ರೀಂಕೋರ್ಟ್ ಅಂಗಳದಲ್ಲಿದೆ. ಆದರೆ ಸಲಿಂಗಕಾಮಕ್ಕೆ ಭಾರತದಲ್ಲಿ ಕಾನೂನಿನಿಂದ ಅಡ್ಡಿಯಿಲ್ಲ ಆದರೆ ವಿವಾಹಕ್ಕೆ ಇನ್ನು ಮಾನ್ಯತೆ ಸಿಕ್ಕಿಲ್ಲ. ಸಲಿಂಗ ವಿವಾಹಕ್ಕೆ ಅವಕಾಶ ಕಲ್ಪಿಸಲು ವಿಶೇಷ ವಿವಾಹ ಕಾಯ್ದೆ ಅಡಿಯಲ್ಲಿ ಬದಲಾವಣೆ ಕುರಿತು ಸಂಸತ್ತು ನಿರ್ಧರಿಸಬೇಕಿದೆ. ಆದ್ರೆ ಕೇಂದ್ರ ಸರ್ಕಾರ ಈ ಸಲಿಂಗ ವಿವಾಹದ ವಿರುದ್ಧ ವಾದ ಮಾಡುತ್ತಾ ಬಂದಿದೆ. ಹಾಗೆ ಸಂವಿಧಾನದಲ್ಲಿಯೂ ಕೂಡ ಈ ಕುರಿತ ಹಕ್ಕುಗಳ ಉಲ್ಲೇಖವಿಲ್ಲ. ಹೀಗಾಗಿ ಭಾರತದಲ್ಲಿ ಇಂದಿಗೂ ಸಲಿಂಗ ವಿವಾಹ ಕುರಿತು ಕಾನೂನು ಜಾರಿಯಾಗಿಲ್ಲ.
ಆದ್ರೆ ಸಲಿಂಗ ವಿವಾಹ ಆಗುವ ಮಂದಿಗೆ ಕಾನೂನಿನಿಂದ ಅಡ್ಡಿಯಾಗುತ್ತಿದ್ದರೂ ಭಾರತದಲ್ಲಿಯೂ ಕೂಡ ಸಲಿಂಗ ವಿವಾಹ ಸಂಖ್ಯೆ ಏರುಗತಿಯಲ್ಲಿದೆ. ಆದರೆ ಅವರಿಗೆ ಸಂವಿಧಾನಾತ್ಮಕವಾಗಿ ಸಿಗುವಂತಹ ಹಲವು ಹಕ್ಕುಗಳು ಮಾತ್ರ ಸಿಗುತ್ತಿಲ್ಲ. ಜೋಡಿಯು ಮಕ್ಕಳನ್ನು ದತ್ತು ಪಡೆಯುವ ಹಕ್ಕಿಲ್ಲ. ಹಾಗೆ ವಿಮೆ, ವಿವಾಹನಂತರದ ಹಕ್ಕುಗಳ ಪಡೆಯುವಲ್ಲಿ ಅವರು ವಿಫಲರಾಗುತ್ತಾರೆ.
ಭಾರತದ ಸೇರಿದಂತೆ ಕೆಲವೊಂದು ರಾಷ್ಟ್ರಗಳನ್ನು ಹೊರತುಪಡಿಸಿ ವಿಶ್ವದ ಸುಮಾರು 30ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಸಲಿಂಗ ವಿವಾಹ ಕಾನೂನು ಬದ್ಧವಾಗಿದೆ. ಅದರಲ್ಲೂ ಹಲವು ದೇಶಗಳಲ್ಲಿ ಜನರ ಅಭಿಪ್ರಾಯ ಪಡೆದುಕೊಂಡು ಈ ಕಾನೂನು ಜಾರಿ ಮಾಡಲಾಗಿದೆ. ಇನ್ನು ಕೆಲವು ದೇಶಗಳಲ್ಲಿ ಸಲಿಂಗ ವಿವಾಹಕ್ಕೆ ಮಾನ್ಯತೆಯೂ ಇಲ್ಲ ಜೊತೆಗೆ ಅದನ್ನು ನಿಷೇಧಿಸಿಯೂ ಇಲ್ಲ. ಮೊಟ್ಟ ಮೊದಲ ಬಾರಿಗೆ ಸಲಿಂಗ ಮದುವೆಯನ್ನು ಕಾನೂನು ಮಾಡಿ ಅದನ್ನು ಒಪ್ಪಿಕೊಂಡಿದ್ದ ನೆದರ್ಲ್ಯಾಂಡ್ ದೇಶವಾಗಿದೆ. 2000ನೇ ಇಸವಿಯಲ್ಲಿಯೇ ಈ ಪುಟ್ಟ ದೇಶ ಈ ರೀತಿ ಕಾನೂನು ಜಾರಿ ಮಾಡಿತ್ತು.



Click it and Unblock the Notifications
