Latest Updates
-
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ!
ಸೀಸನ್ 10ರ ಕಡೆಯ ಪಂಚಾಯಿತಿಯಲ್ಲಿ ಮಾತಿನ ಛಡಿಯೇಟು: ರಕ್ಷಕ್ ಅಲ್ಲ ಕಂಟೆಸ್ಟೆಂಟ್ ಹೆಸರು .... ಸೂಪರ್ ಕಿಚ್ಚ ಸೂಪರ್!
ಬಿಗ್ಬಾಸ್ ಸೀಸನ್ 10 ಕಟ್ಟಕಡೆಯ ಕಿಚ್ಚನ ಪಂಚಾಯಿತಿ ಬಗ್ಗೆ ವೀಕ್ಷಕರು ತುಂಬಾನೇ ನಿರೀಕ್ಷೆ ಇಟ್ಟುಕೊಂಡಿದ್ದಾರೆ, ಬಳೆ ವಿಚಾರ ಬಂದಾಗ ಕಿಚ್ಚನ ಪಂಚಾಯಿತಿಯನ್ನು ಹೇಗೆ ಎದುರು ನೋಡುತ್ತಿದ್ದರೋ ಅದೇ ರೀತಿ ಈ ವಾರದ ಪಂಚಾಯಿತಿಯನ್ನು ವೀಕ್ಷಕರು ಎದುರು ನೋಡುತ್ತಿದ್ದಾರೆ, ಅದಕ್ಕೆ ಕಾರಣ ಬಿಗ್ಬಾಸ್ 10 ಸೀಸನ್ನಿಂದ ಎಲಿಮಿನೇಟ್ ಆದ ಸ್ಪರ್ಧಿಗಳ ವರ್ತನೆ, ಅದರಲ್ಲೂ ಇಶಾನಿ ವರ್ತನೆ. ಒಬ್ಬ ವ್ಯಕ್ತಿ ಇಷ್ಟೊಂದು ಬಾಲಿಶವಾಗಿ ಇರಲು ಸಾಧ್ಯವೇ, ಸೆಲೆಬ್ರಿಟಿ ಸ್ಟೇಟಸ್ನಲ್ಲಿರುವ ಇರುವ ಇವರು ಇಷ್ಟು ಕೆಳಮಟ್ಟದಲ್ಲಿಯೂ ವರ್ತಿಸಬಹುದೇ ಎಂಬಂತೆ ಅವರು ವರ್ತಿಸಿದ್ದರು.

Everything Fair enough In Game ಎಂಬ ಮಾತಿದೆ, ಬಿಗ್ಬಾಸ್ ಆಟದಲ್ಲಿ ಆ ಮನೆಯೊಳಗಡೆ ಇದ್ದಾಗ ಉಂಟಾದ ದ್ವೇಷವಾಗಲಿ, ಅಸಮಧಾನವಾಗಲಿ ಅಲ್ಲೇ ಬಿಟ್ಟು ಹೊರಬರಬೇಕು, ಅದು ಸಾಧ್ಯವಿಲ್ಲದಿದ್ದರೆ ಒಳ್ಳೆಯ ಮಾತುಗಳಿಂದ ಟಾಂಗ್ ಕೊಡಬೇಕು, ಹೇಗೆ ಟಾಂಗ್ ಕೊಡಬೇಕು ಎಂಬುವುದನ್ನು ಸುದೀಪ್ ಅವರು ಹಲವಾರು ಬಾರಿ ಹೇಳಿರುವ ಮಾತುಗಳಿಂದಲೇ ಕಲಿಯಬಹುದು.
ಆದರೆ ಇಶಾನಿ ಕಾಗೆ ಕಕ್ಕ ಮಾಡಿ ಇಲ್ಲೆಲ್ಲ ಓಡಾಡಿ ಸಿಂಪತಿಯಿಂದ ಗೆದ್ದು ಬಂದಿದೆ, ಎಂಬ ಮಾತನಾಡುತ್ತಾರೆ, ಅದನ್ನು ಹೇಳಿದಾಗಲೇ ಮನೆಯಲ್ಲಿದ್ದ ಸಂಗೀತಾ ಹಾಗೂ ವಿನಯ್ಗೆ ಇರುಸು ಮುರುಸಾಗುತ್ತದೆ, ಇದನ್ನು ಎಪಿಸೋಡ್ನಲ್ಲಿ ವೀಕ್ಷಿಸಿದ ಜನರು ಇಶಾನಿಗೆ ಇಗ್ಗಾಮುಗ್ಗ ಜಡಿಯುತ್ತಿದ್ದಾರೆ. ಇನ್ನು ಸ್ನೇಹಿತ್ ನಮ್ರತಾ ಬಳಿ ಹೇಳಿದ ಮಾತುಗಳು, ರಕ್ಷಕ್ ತಾನೊಬ್ಬ ದೊಡ್ಡ ಮೇಧಾವಿ ಎಂಬಂತೆ ವರ್ತಿಸಿದ ರೀತಿಗೆ ಸುದೀಪ್ ಅವರು ಸರಿಯಾಗಿ ಜಾಡಿಸಿದ್ದಾರೆ.
ಇಶಾನ್ಗೆ ಸಕತ್ ಕ್ಲಾಸ್
ಹೊರಗಡೆ ಹೋದ ಮೇಲೂ ಇಶಾನಿಗೆ ಬುದ್ಧಿ ಬಂದಿಲ್ಲ ಎಂಬುವುದನ್ನು ತುಂಬಾನೇ ಚೆನ್ನಾಗಿ ಹೇಳಿದ್ದಾರೆ. ಇಶಾನಿ ಕುರಿತು ಸುದೀಪ್ ಅವರು ಹೇಳಿದ ಮಾತುಗಳು ತುಂಬಾನೇ ಚೆನ್ನಾಗಿದೆ, ಇಶಾನಿಯವರು ಈ ಮಾತುಗಳನ್ನು ಕೇಳಿದ ಮೇಲಾದರೂ ಇನ್ನೊಬ್ಬರಿಗೆ ಟಾಂಗ್ ಕೊಡುವುದನ್ನು ಸಭ್ಯ ಭಾಷೆಯಿಂದಲೂ ಹೇಳಬಹುದು ಎಂದು ಕಲಿತರೆ ಒಳ್ಳೆಯದು.
ಸ್ನೇಹಿತ್ಗೂ ಮಾತಿನೇಟು
ಸ್ನೇಹಿತ್ ಮನೆಯೊಳಗೆ ಬಂದು ನಮ್ರತಾ ಅವರ ಇಮೇಜ್ಗೆ ಡ್ಯಾಮೇಜ್ ಆಗಿದೆ ಎಂಬಂತೆ ಮಾತನಾಡಿದ್ದರು, ಅಲ್ಲದೆ ಪ್ರತಿದಿನ ನಿಮಗೋಸ್ಕರಾ ಫೈಟ್ ಮಾಡ್ತಾ ಇದ್ದೀನಿ ಎಂದು ಹೇಳಿ ಹೀರೋ ಆಗಲು ಹೋದರು. ಹೊರಗಡೆ ಏನಾಗುತ್ತಿದೆ ಎಂದು ಹೇಳುವ ಅವಶ್ಯಕತೆ ಸ್ನೇಹಿತ್ ಅವರಿಗೆ ಇರಲಿಲ್ಲ, ನಮ್ರತಾ ಅವರನ್ನು ಹುರಿದುಂಬಿಸುವ ಬದಲಿಗೆ ಕುಗ್ಗಿಸುವ ಪ್ರಯತ್ನ ಮಾಡಿದ್ದಾರೆ. ನಮ್ರತಾ ಅವರಿಗೆ ಹೊರಗಡೆ ಅಂಥದ್ದೇನು ನಡೆದಿಲ್ಲ ಎಂದು ತಿಳಿಸಿದ್ದಾರೆ.
ಎಲ್ಲದಕ್ಕಿಂತಲೂ ಸೂಪರ್ ಆ ಕಂಟೆಸ್ಟೆಂಟ್ ಹೆಸರೇನು ರಕ್ಷಕ್ ಅಲ್ವಾ?
ರಕ್ಷಕ್ ನೀನ್ಯಾರು ಎಂಬುವುದು ಗೊತ್ತೇ ಇಲ್ಲ ಎಂಬಂತೆ ಸುದೀಪ್ ಅವರು ಮಾತನಾಡಿದ ರೀತಿ ಸೂಪರ್ ಆಗಿತ್ತು, ಬಿಗ್ಬಾಸ್ನಿಂದ ಹೊರಗಡೆ ಬಂದ ಸುದೀಪ್ ಅವರ ವಿರುದ್ದವೇ ಬಾಯಿಹರಿಬಿಟ್ಟಿದ್ದರು, ನಂತರ ಕ್ಷಮೆ ಕೂಡ ಹೇಳಿದ್ದರು, ಆದರೆ ಕಿಚ್ಚನ ಪಂಚಾತಿಯಲ್ಲಿ ಆ ಕಂಟೆಸ್ಟೆಂಟ್ ಹೆಸರೇನು? ಎಂದು ಕೇಳುವ ಮೂಲಕ ನಿನ್ನಂಥವರು ನನ್ನ ನೆನಪಲ್ಲೂ ಉಳಿಯಲ್ಲ ಎಂಬಂತೆ ಸರಿಯಾಗಿಯೇ ಮಾತಿನೇಟು ಕೊಟ್ಟಿದ್ದಾರೆ.
ಭಾರತದ ಎಲ್ಲಾ ಬಿಗ್ಬಾಸ್ಗಳಿಗೆ ಹೋಲಿಸಿದರೆ ಸುದೀಪ್ನಷ್ಟೂ ಚೆನ್ನಾಗಿ ಕ್ಲಾಸ್ ತೆಗೆದುಕೊಳ್ಳುವ ಮತ್ತೊಬ್ಬರು ಇಲ್ಲ ಎಂಬುವುದನ್ನು ಇತರ ಭಾಷೆಗಳ ಬಿಗ್ಬಾಸ್ ಹಾಗೂ ಕನ್ನಡ ಬಿಗ್ಬಾಸ್ ನೋಡುತ್ತಿರುವವರು ಖಂಡಿತ ಒಪ್ಪಿಕೊಳ್ಳುತ್ತಾರೆ.
ಸೀಸನ್ 10ರ ಟ್ರೋಫಿ ಯಾರ ಪಾಲಾಗುತ್ತದೆ ಎಂದು ಹೇಳಲು ನಿಜಕ್ಕೂ ಕಷ್ಟವಾಗುತ್ತಿದೆ, ಅದರಲ್ಲೂ ಸಂಗೀತಾ, ವಿನಯ್, ಡ್ರೋನ್ ಪ್ರತಾಪ್, ಕಾರ್ತಿಕ್ ನಡುವೆ ಟಫ್ ಫೈಟ್ ಇದೆ. ಬಿಗ್ಬಾಸ್ ವಿನ್ನರ್ ನಿಮಗೆ ಯಾರಾಗಬೇಕು, ಕಮೆಂಟ್ ಮಾಡಿ..



Click it and Unblock the Notifications