Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಎಲಿಮಿನೇಷನ್ ಭಯದಲ್ಲಿ ಸಂಗೀತಾ, ಸ್ನೇಹಿತ್ ಹೀಗ್ಯಾಕೆ ವರ್ತಿಸಿದರು? ವೀಕ್ಷಕರಿಗಂತೂ ಫುಲ್ ಮಜಾ
ಕನ್ನಡ ಬಿಗ್ಬಾಸ್ ಸೀಸನ್ 10ರ ಈ ವಾರದ ಸೂಪರ್ ಸಂಡೇ ಸಕತ್ ಫನ್ ಜೊತೆಗೆ ಹಲವಾರು ವಿಷಯಗಳಿಂದ ತುಂಬಾನೇ ವಿಶೇಷವಾಗಿತ್ತು. ಎಲಿಮಿನೇಷನ್ ಕುಳಿತಿದ್ದ ಸ್ಪರ್ಧಿಗಳು ತಾವು ಹೋಗಬಹುದು ಎಂಬ ಭಯದಲ್ಲಿ ವರ್ತಿಸಿದ ರೀತಿ ವೀಕ್ಷಕರಿಗೆ ಸಕತ್ ಫನ್ ನೀಡಿತ್ತು, ಇಷ್ಟು ವಾರಗಳಲ್ಲಿ ಬಿಗ್ಬಾಸ್ ಸ್ಪರ್ಧಿಗಳಿಗೆ ಹಾಗೂ ವೀಕ್ಷಕರಿಗೆ ಸಕತ್ ಖುಷಿಯ ಸಂಡೇ ಆಗಿತ್ತು.

ಅದರಲ್ಲೂ ಎಲಿಮಿನೇಷನ್ ಎಂಬ ಹಾಟ್ ಸೀಟ್ನಲ್ಲಿ ಕುಳಿತಿದ್ದ ಸಂಗೀತಾ, ಸ್ನೇಹಿತ್ರ ವಿಚಿತ್ರ ವರ್ತನೆ
ಒಂದು ವೇಳೆ ಹೊರಗಡೆ ಹೋದರೆ ವಿಕ್ಟಿಮ್ ಕಾರ್ಡ್ ಹಿಡಿದು ಹೊರಡಲು ನಿಂತ ಸಂಗೀತಾ.
ಹೊರಗಡೆ ಹೋಗಿ ಕಾರ್ತಿಕ್ಗೆ ಸಪೋರ್ಟ್ ಮಾಡಲು ತನ್ನ ಅಭಿಮಾನಿಗಳಿಗೆ ಹೇಳುತ್ತೇನೆ ಈ ವಾರ ನಾನು ಹೊರಗಡೆ ಹೋಗುತ್ತೇನೆ ಎಂದು ಅಳಲಾರಂಭಿಸಿದರು, ಅಲ್ಲದೆ ಇಲ್ಲಿ ಇರಲು ನನಗೆ ಇಷ್ಟವಿಲ್ಲ ಎಂದು ಅನ್ನದ ವಿಷಯದಲ್ಲಿ ಆದ ಗಲಾಟೆ ಬಗ್ಗೆ ಹೇಳಿ ವಿಕ್ಟಿಮ್ ಕಾರ್ಡ್ ಪ್ಲೇ ಮಾಡಿದರು ಎಂದರೆ ತಪ್ಪಾಗಲಾರದು.
ಎಂತಂಥ ಜಗಳವನ್ನು ಎದುರಿಸಿದ ಸಂಗೀತಾ, ಕಾರ್ತಿಕ್ ಜೊತೆ ಮನಸ್ತಾಪ ಮಾಡಿಕೊಂಡು ಪಕ್ಷ ಬದಲಾಯಿಸಿ, ನಿನ್ನನ್ನು ಎತ್ತುಕೊಂಡು ಬಂದಿದ್ದಕ್ಕೆ ಕಾರ್ತಿಕ್ಗೆ ಹುರಿಯಾಗಿದೆ ಎಂದು ವಿನಯ್ ಹೇಳಿದಾಗ ಖುಷಿಯಿಂದ ಕುಣಿದಾಡಿದ ಸಂಗೀತಾ ತುಕಾಲಿ ಜೊತೆ ಜಗಳವಾಡಿದ್ದಕ್ಕೆ ಮನೆ ಬಿಟ್ಟು ಹೋಗುತ್ತಿದ್ದೇನೆ ಎಂದು ಹೇಳಿದರೆ ಅದನ್ನು ನಂಬಲು ವೀಕ್ಷಕರಿಗೆ ಸಾಧ್ಯವೇ?
ಈ ಬಾರಿ ಎಲಿಮಿನೇಷನ್ ಕೂತಿರುವವರು ಯಾರೂ ನನಗಿಂತ ಕಡಿಮೆಯಿಲ್ಲ, ಒಂದು ವೇಳೆ ತಾನು ಹೊರಗಡೆ ಹೋದರೆ ಅಲ್ಲಿಂದ ಬರಲು ನಾನೇ ಬಯಸಿದೆ ಎಂಬುವುದನ್ನು ಬಿಂಬಿಸಿಕೊಳ್ಳಲು ಸಂಗೀತಾ ಕಣ್ಣೀರು ಹಾಕಿರಬಹುದೇ? ಎಂಬ ಸಂಶಯ ಖಂಡಿತ ಕಾಡುತ್ತೆ.
ಮೈಕಲ್ ಹೋಗಬಹುದು ಎಂದು ಸ್ನೇಹಿತ್ ಕಣ್ಣೀರು
ಸ್ನೇಹಿತ್ ಅವರಿಗೆ ಮೈಕಲ್ ನನಗಿಂತ ಬೆಟರ್ ಆಗಿ ಆಟ ಆಡಿಕೊಂಡು ಬರುತ್ತಿದ್ದಾರೆ ಎಂಬುವುದು ಗೊತ್ತಿದೆ. ನಾನು ಈ ವಾರವಷ್ಟೇ ಚೆನ್ನಾಗಿ ಆಡಿದ್ದೇನೆ, ಇಬ್ಬರ ಗ್ರಾಫ್ ನೋಡಿದರೆ ಮೈಕಲ್ ನನಗಿಂತ ಬೆಟರ್ ಎಂಬುವುದು ಸ್ವತಃ ಸ್ನೇಹಿತ್ ಅವರಿಗೆ ಗೊತ್ತಿದೆ. ಆದರೂ ಮೈಕಲ್ ಹೊರಗಡೆ ಹೋಗುತ್ತಾನೆ ಎಂದು ಇವರು ಅತ್ತಿದ್ದು ನೋಡುತ್ತಿದ್ದರೆ ವೀಕ್ಷಕರಿಗೆ ಅಯ್ಯೋ ಹೀಗೂ ಇರ್ತಾರಾ ಅಂತ ಅನಿಸಿದ್ದು ಸುಳ್ಳಲ್ಲ.
ಸೂಪರ್ ಆಗಿತ್ತು ಕಿಚ್ಚನ ನಿರ್ಧಾರ
ಈ ಬಾರಿ ಕೊನೆಗೆ ಮೈಕಲ್ ಹಾಗೂ ಸ್ನೇಹಿತ್ ಎಲಿಮಿನೇಷನ್ ರೌಂಡ್ನಲ್ಲಿ ಉಳಿದುಕೊಂಡಾಗ ಇಬ್ಬರು ಈಗ ಹೋಗಲು ಸೂಕ್ತವಲ್ಲ... ಮೈಕಲ್ ಆಟದ ಜೊತೆಗೆ ಕನ್ನಡ ಮಾತನಾಡುತ್ತಾ ಕನ್ನಡಿಗರ ಮನರಂಜಿಸುತ್ತಿದ್ದಾರೆ, ಸ್ನೇಹಿತ್ ಈ ಬಾರಿ ಉತ್ತಮವಾಗಿ ಆಡಿದ್ದಾರೆ, ಅದ್ದರಿಂದ ಈ ಬಾರಿ ಹೊರ ಹೋಗಬಾರದು, ಒಂದು ವೇಳೆ ಎಲಿಮಿನೇಟ್ ಅಂದರೂ ಅವರನ್ನು ಸೀಕ್ರೆಟ್ ರೂಂನಲ್ಲಿಡಬೇಕು ಎಂದು ವೀಕ್ಷಕರಿಗೆ ಅನಿಸಿತ್ತು. ಆದರೆ ಕಿಚ್ಚ ಸುದೀಪ್ ಇದುವರೆಗೆ ಬಿಗ್ಬಾಸ್ನಲ್ಇ ಬಳಸದೇ ಇರುವ ತಮ್ಮ ವಿಶೇಷ ಅಧಿಕಾರ ಬಳಸಿ ಈ ವಾರ ಇಬ್ಬರನ್ನೂ ಉಳಿಸಿದ್ದಾರೆ.



Click it and Unblock the Notifications