Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮತ್ತೆ ಆಸ್ಪತ್ರೆ ಸೇರಿದ ಡ್ರೋನ್ ಪ್ರತಾಪ್, ಆರೋಗ್ಯಸ್ಥಿತಿ ಅಷ್ಟೊಂದು ಗಂಭೀರವಾಗಲು ಕಾರಣವೇನು?
ಡ್ರೋನ್ ಪ್ರತಾಪ್... ಬಿಗ್ಬಾಸ್ ಸ್ಪರ್ಧಿಗಳಲ್ಲಿ ತುಂಬಾನೇ ಸುದ್ದಿಯಲ್ಲಿರುವ ಸ್ಪರ್ಧಿ. ಡ್ರೋನ್ ಪ್ರತಾಪ್ ಅವರನ್ನು ಜನ ಎಷ್ಟು ದ್ವೇಷ ಮಾಡುತ್ತಿದ್ದರೋ ಬಿಗ್ಬಾಸ್ ಮನೆಗೆ ಬಂದ ಮೇಲೆ ಅವರ ಮೇಲಿನ ಅಭಿಪ್ರಾಯ ಫುಲ್ ಬದಲಾಗಿ ಫ್ಯಾನ್ ಸಂಖ್ಯೆ ಹೆಚ್ಚಿದೆ, ಇದೀಗ ಪ್ರತಾಪ್ ಅವರು ಹುಷಾರಿಲ್ಲದೆ ಆಸ್ಪತ್ರೆ ಸೇರಿಕೊಂಡರು ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಅವರ ಅಭಿಮಾನಿಗಳ ಆತಂಕ ಹೆಚ್ಚಿದೆ.

ಅವರು ಯಾವ ಕಾರಣಕ್ಕೆ ಆಸ್ಪತ್ರೆಗೆ ಸೇರಿದರು ಎಂಬುವುದು ಇಂದಿನ ಎಪಿಸೋಡ್ ನೋಡಿದರೆ ತಿಳಿಯುತ್ತದೆ, ಆದರೆ ಅವರು ಆಸ್ಪತ್ರೆಗೆ ಸೇರಲು ಕಾರಣವೇನು ಎಂಬುವುದರ ಬಗ್ಗೆ ಹಲವಾರು ಊಹಾಪೋಹಗಳು ಕೇಳಿಬರುತ್ತಿದೆ, ಕೆಲವರು ಡ್ರೋನ್ ಪ್ರತಾಪ್ ಆತ್ಮಹತ್ಯೆಗೆ ಪ್ರಯತ್ನಿಸಿದರು, ಹ್ಯಾಂಡ್ವಾಶ್ ಲಿಕ್ವಿಡ್ ಕುಡಿದರು ಎಂದು ಸುದ್ದಿ ಹಬ್ಬಿಸಿದ್ದಾರೆ.
ಆದರೆ ಖಾಸಗಿ ಚಾನಲ್ಗೆ ಕಲರ್ಸ್ ಕನ್ನಡ ಪಿಆರ್ ಡ್ರೋನ್ ಪ್ರತಾಪ್ಗೆ ಅವರಿಗೆ ಫುಡ್ ಪಾಯಿಸನ್ ಆಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ.ಈ ವಿಷಯ ಹೊರ ಬರುತ್ತಿದ್ದಂತೆ ಸಾಮಾಜಿಕ ತಾಣದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಯೇ ನಡೆಯುತ್ತಿದೆ.
ಬದಲಾದ ಡ್ರೋನ್ ಪ್ರತಾಪ್ ಲಕ್
ಡ್ರೋನ್ ಪ್ರತಾಪ್ ಬಿಗ್ಬಾಸ್ಗೆ ಬರುವಾಗ ಅವರನ್ನು ಒಬ್ಬ ಸುಳ್ಳುಗಾರ ಎಂದು ದ್ವೇಷಿಸುತ್ತಿದ್ದರು, ಈ ಮೊದಲು ಹೇಳಿದ ಕೆಲವು ಸುಳ್ಳುಗಳಿಂದ ನಂತರ ಅವರು ತನ್ನದೇ ಆಫೀಸ್ ಓಪನ್ ಮಾಡಿ ರೈತರ ಗದ್ದೆ, ತೋಟಗಳಿಗೆ ಔಷಧಿ ಸಿಂಪಡಿಸುವ ಡ್ರೋನ್ ತಯಾರಿಸಿ , ಆ ಡ್ರೋನ್ ರೈತರಿಗೆ ನೆರವಾಗುತ್ತಿದ್ದರೂ ಜನರಿಗೆ ಪ್ರತಾಪ್ ಮೇಲಿದ್ದ ಅಭಿಪ್ರಾಯ ಬದಲಾಗಿರಲಿಲ್ಲ, ಅವರು ಏನೇ ಹೇಳಲಿ ಅದು ಸುಳ್ಳು ಎಂದೇ ಹೇಳುತ್ತಿದ್ದರು. ಆದರೆ ಬಿಗ್ಬಾಸ್ಗೆ ಬಂದಾಗ ಅವರ ಲಕ್ ಬದಲಾಯ್ತು, ಪ್ರತಾಪ್ ಅವರನ್ನು ದ್ವೇಷ ಮಾಡುತ್ತಿದ್ದವರು ಅನೇಕರು ಇಷ್ಟಪಡಲಾರಂಭಿಸಿದರು, ಬಿಗ್ಬಾಸ್ ಮನೆಯಲ್ಲಿ ಕೂಲಾಗಿ, ಮೈಂಡ್ ಗೇಮ್ ಮೂಲಕ ಗಮನ ಸೆಳೆಯುತ್ತಿರುವುದರಿಂದ ಫಿನಾಲೆ ಟಾಪ್ ಸ್ಪರ್ಧಿಗಳಲ್ಲಿ ಪ್ರತಾಪ್ ಇರುತ್ತಾರೆ ಎಂದು ಬಿಗ್ಬಾಸ್ ವೀಕ್ಷಕರು ಹೇಳುತ್ತಿದ್ದಾರೆ.
ಅಪಹಾಸ್ಯ ಮಾಡಿದವರೇ ಭೇಷ್ ಎನ್ನುವಂಥ ಆಟದ ವೈಖರಿ
ಪ್ರಾರಂಭದಲ್ಲಿ ಪ್ರತಾಪ್ ಅವರನ್ನು ಅಪಹಾಸ್ಯ ಮಾಡಿದವರೇ ಹೆಚ್ಚು, ಇದರಿಂದ ಮನನೊಂದು ಬಾತ್ರೂಂನಲ್ಲಿ ಅತ್ತಾಗ ವೀಕ್ಷಕರಿಗೆ ಅವರ ಮೇಲೆ ಅನುಕಂಪ ಬಂತು. ಆದರೆ ಬರೀ ಅನುಕಂಪದಿಂದಲೇ ಇಷ್ಟುವಾರ ಇದ್ದಾರೆಯೇ? ಖಂಡಿತ ಇಲ್ಲ, ಬರೀ ಅನುಕಂಪದಿಂದ ಇಷ್ಟು ವಾರ ಬಿಗ್ಬಾಸ್ ಮನೆಯಲ್ಲಿ ಇರಲು ಸಾಧ್ಯವಿಲ್ಲ, ಪ್ರತಾಪ್ ಆಡುತ್ತಿರುವ ಆಟ ವೀಕ್ಷಕರಿಗೆ ಇಷ್ಟವಾಗಿದೆ.
ಒಂದಾದ ಕುಟುಂಬ'
ಕುಟುಂಬದೊಂದಿಗೆ ಮಾತುಬಿಟ್ಟು ದೂರ ಇದ್ದ ಪ್ರತಾಪ್ಗೆ ಬಿಗ್ಬಾಸ್ ಕಾರಣದಿಂದ ಮತ್ತೆ ಕುಟುಂಬದೊಂದಿಗೆ ಒಂದಾಗುವ ಒಳ್ಳೆಯ ಸಮಯ ಬಂತು, ಪ್ರತಾಪ್ ಅವರು ಆ ನಂತರ ತುಂಬಾನೇ ಖುಷಿಯಲ್ಲಿದ್ದರು.
ಖುಷಿಗೆ ಕಲ್ಲು ಬಿತ್ತು
ಬಿಗ್ಬಾಸ್ ಮನೆಗೆ ಬಂದ ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಪ್ರತಾಪ್ ಅವರಿಗೆ ಮನೆಯಿಂದ ದೂರವಿದ್ದು ಧೂಪವಾಗುತ್ತೀಯೋ, ಹತ್ತಿರವಾಗಿ ಹೇಸಿಗೆಯಾಗುತ್ತೀಯೋ ನಿನಗೆ ಬಿಟ್ಟದ್ದು ಎಂದು ಹೇಳಿದ ಮೇಲೆ ಪ್ರತಾಪ್ ತುಂಬಾನೇ ಡಲ್ ಆದರು, ಅಲ್ಲದೆ ಬಿಗ್ಬಾಸ್ ಮನೆಯ ಈ ವಾರದ ಚಟುವಟಿಕೆಗಳು ಅವರ ಮನಸ್ಸನ್ನು ಮತ್ತಷ್ಟು ಕುಗ್ಗಿಸಿದಂತೆ ಕಾಣುತ್ತಿತ್ತು. ಮನಸ್ಸು ಸರಿಯಿಲ್ಲ ಅಂದರೆ ಅದು ಆರೋಗ್ಯದ ಮೇಲೆ ಖಂಡಿತ ಪ್ರಭಾವ ಬೀರುತ್ತೆ. ಅಲ್ಲದೆ ಬಿಗ್ಬಾಸ್ ಮನೆಯಲಲ್ಇ ಊಟ ಕೂಡ ಕಡಿಮೆ ಇದೆ ಎಂದು ಸ್ಪರ್ಧಿಗಳು ಹೇಳುತ್ತಿರುತ್ತಾರೆ, ಅವರನ್ನು ಪರೀಕ್ಷೆ ಮಾಡಿದ ವೈದ್ಯರು ಗ್ಯಾಸ್ಟ್ರಿಕ್ ಆಗಿತ್ತು ಎಂದು ಮಾಧ್ಯಮದವರಿಗೆ ಹೇಳಿದ್ದಾರೆ, ಈವಾಗ ಸ್ಟೇಬಲ್ ಎಂದು ತಿಳಿಸಿದ್ದಾರೆ.
ಪೊಲೀಸ್ ಕಂಪ್ಲೇಂಟ್, ಆಸ್ಪತ್ರೆ ಎಂದು ಈ ಬಾರಿಯ ಬಿಗ್ಬಾಸ್ ಆಗಾಗ ಗಮನ ಸೆಳೆಯುತ್ತಿದೆ.



Click it and Unblock the Notifications