Latest Updates
-
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ! -
ಕರಾವಳಿ ರೆಡ್ ಅಲರ್ಟ್: ಮನೆಯಲ್ಲೇ ಸುರಕ್ಷಿತವಾಗಿ ಫಿಟ್ ಆಗಿರಲು ಈ 12 ನಿಮಿಷಗಳ ವರ್ಕೌಟ್ ಟ್ರೈ ಮಾಡಿ! -
ಪುಣೆಯಲ್ಲಿ ಮಳೆ ರಜೆ: ವರ್ಕ್ ಫ್ರಮ್ ಹೋಮ್ ಜೊತೆಗೆ ಮಕ್ಕಳನ್ನು ನಿಭಾಯಿಸಲು ಇಲ್ಲಿದೆ ಸ್ಮಾರ್ಟ್ ಟಿಪ್ಸ್ -
ಮುಂಬೈ ರೆಡ್ ಅಲರ್ಟ್: ಮಳೆಯಿಂದ ನಿಮ್ಮ ಬಾಡಿಗೆ ಮನೆ ಮತ್ತು ವಸ್ತುಗಳನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಮುಂಬೈ ರೆಡ್ ಅಲರ್ಟ್: ಮಳೆಗಾಲದ ಕಾಯಿಲೆಗಳಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ!
ಕರ್ನಾಟಕದಲ್ಲಿ ಭಾದ್ರಪದ ಮಾಸ ಯಾವಾಗಿನಿಂದ ಶುರು, ಈ ತಿಂಗಳ ಮಹತ್ವವೇನು?
ಹಿಂದೂ ಕ್ಯಾಲೆಂಡರ್ ಪ್ರಕಾರ 6 ನೇ ತಿಂಗಳು ಭಾದ್ರಪದಮಾಸ. ಭಾದ್ರಪದ ಮಾಸದಲ್ಲಿ ಗಣೇಶ ಚತುರ್ಥಿ ಮುಂತಾದ ಪ್ರಮುಖ ಹಬ್ಬಗಳನ್ನು ಆಚರಿಸಲಾಗುವುದು. ಈ ವರ್ಷ ಭಾದ್ರಪದ ಮಾಸ ಆಗಸ್ಟ್ 31ರಿಂದ ಸೆಪ್ಟೆಂಬರ್ 29ರವರೆಗೆ ಇರಲಿದೆ.
ಭಾದ್ರಪದ ಮಾಸ ಧಾರ್ಮಿಕ ಕಾರ್ಯಗಳಿಗೆ ತುಂಬಾ ಪ್ರಮುಖವಾಗಿದೆ. ಈ ಅವಧಿಯಲ್ಲಿ ಗಣೇಶೋತ್ಸವ, ಅನಂತ ಚತುರ್ದಶಿ ಹೀಗೆ ಪ್ರಮುಖ ಆಚರಣೆಗಳನ್ನು ಮಾಡಲಾಗುವುದು. ಭಾದ್ರಪದ ಮಾಸದ ಪ್ರಾಮುಖ್ಯತೆಯೇನು? ಈ ಅವಧಿಯಲ್ಲಿ ಪಾಲಿಸಬೇಕಾದ ನಿಯಮಗಳೇನು ಎಂದು ನೋಡೋಣ ಬನ್ನಿ:
ಭಾದ್ರಪದ ಮಾಸದ ಮಹತ್ವ
ಶ್ರಾವಣ ಮಾಸವೆಂದರೆ ಹಬ್ಬಗಳ ಸಡಗರದ ಪ್ರಾರಂಭ, ಶ್ರಾವಣ ಮುಗಿಯುತ್ತಿದ್ದಂತೆ ಭಾದ್ರಪದ ಮಾಸ ಪ್ರಾರಂಭ, ಭಾದ್ರಪದ ಮಾಸದಲ್ಲಿಯೂ ಅನೇಕ ಪ್ರಮುಖ ಆಚರಣೆಗಳಿವೆ, ಹಬ್ಬದ ಸಡಗರಗಳಿವೆ. ನಮ್ಮ ಕರ್ನಾಟಕದಲ್ಲಿ ಬಾದ್ರಪದ ಮಾಸ ಸೆಪ್ಟೆಂಬರ್ 16ರಿಂದ ಶುರುವಾಗುವುದು. ಈ ಮಾಸದಲ್ಲಿ ಶ್ರೀ ವಿಷ್ಣುವನ್ನು ಆರಾಧಿಸಲಾಗುವುದು, ಶ್ರೀ ಕೃಷ್ಣ ಆರಾಧನೆ ಮಾಡಲಾಗುವುದು. ಪ್ರತಿದಿನ ವಿಷ್ಣುವಿನ ಪೂಜೆ ಮಾಡುವಾಗ ತುಳಸಿಯನ್ನು ಅರ್ಪಿಸಿ ಪೂಜಿಸಿದರೆ ಒಳ್ಳೆಯದು.

ಭಾದ್ರಪದ ಮಾಸದಲ್ಲಿ ಇರುವ ಹಬ್ಬಗಳು
ಉತ್ತರ ಭಾರತದ ಕಡೆ ಭಾದ್ರಪದ ಮಾಸ ಆಗಸ್ಟ್ 31ರಿಂದ ಪ್ರಾರಂಭ
ಸೆಪ್ಟೆಂಬರ್ 3: ಬಹುಳ ಚತುರ್ಥಿ, ಸಂಕಷ್ಟಿ ಚತುರ್ಥಿ
ಸೆಪ್ಟೆಂಬರ್ 6: ಕೃಷ್ಣ ಜನ್ಮಾಷ್ಟಮಿ, ಕಾಲಾಷ್ಟಮಿ
ಸೆಪ್ಟೆಂಬರ್ 10: ಅಜ ಏಕಾದಶಿ ವ್ರತ
ಸೆಪ್ಟೆಂಬರ್ 12: ಪ್ರದೋಷ ವ್ರತ
ಸೆಪ್ಟೆಂಬರ್ 13: ಮಾಸಿಕ ಶಿವರಾತ್ರಿ
ಸೆಪ್ಟೆಂಬರ್ 14: ಭಾದ್ರಪದ ಅಮವಾಸ್ಯೆ
ದಕ್ಷಿಣ ಭಾರತದ ಕಡೆ ಭಾದ್ರಪದ ಮಾಸ ಸೆಪ್ಟೆಂಬರ್ 16ರಿಂದ ಅಕ್ಟೋಬರ್ 14ರವರೆಗೆ ಇರಲಿದೆ
ಸೆಪ್ಟೆಂಬರ್ 17: ವಿಶ್ವಕರ್ಮ ಪೂಜಾ, ಕನ್ಯಾ ಸಂಕ್ರಾಂತಿ, ಬಲರಾಮ ಜಯಂತಿ
ಧನ್ವಂತಿ ಜಯಂತಿ
ಸೆಪ್ಟೆಂಬರ್ 18: ಸ್ವರ್ಣ ಗೌರಿ ವ್ರತ
ಸೆಪ್ಟೆಂಬರ್ 19: ಗಣೇಶ ಚತುರ್ಥಿ
ಸೆಪ್ಟೆಂಬರ್ 20:ರಿಷಿ ಪಂಚಮಿ
ಸೆಪ್ಟೆಂಬರ್ 23: ರಾಧಾ ಅಷ್ಟಮಿ
ಸೆಪ್ಟೆಂಬರ್ 25: ಪರಿವರ್ತಿನಿ ಏಕಾದಶಿ
ಸೆಪ್ಟೆಂಬರ್ 26: ವಾಮನ ಜಯಂತಿ
ಸೆಪ್ಟೆಂಬರ್ 27: ಬುಧ ಪ್ರದೋಷ ವ್ರತ
ಸೆಪ್ಟೆಂಬರ್ 28: ಗಣೇಶ ವಿಸರ್ಜನೆ, ಅನಂತ ಚತುರ್ದಶಿ
ಸೆಪ್ಟೆಂಬರ್ 29: ಪಿತೃಪಕ್ಷ ಶ್ರಾದ್ಧ (ಸೆಪ್ಟೆಂಬರ್ 29ರಿಂದ ಅಕ್ಟೋಬರ್ 14)
ಅಕ್ಟೋಬರ್ 6: ಕಾಲಾಷ್ಟಮಿ
ಅಕ್ಟೋಬರ್ 14: ಮಹಾಲಯ ಶ್ರಾದ್ಧ
ಭಾದ್ರಪದ ಮಾಸದಲ್ಲಿ ಈ ನಿಯಮಗಳನ್ನು ಪಾಲಿಸಲಾಗುವುದು
* ಭಾದ್ರಪದ ಮಾಸದಲ್ಲಿ ಈ 2 ವಸ್ತುಗಳನ್ನು ದಾನವಾಗಿ ಪಡೆಯಬಾರದು
ಭಾದ್ರಪದ ಮಾಸದಲ್ಲಿ ನಿಮಗೆ ಯಾರಾದರೂ ಅಕ್ಕಿ, ತೆಂಗಿನೆಣ್ಣೆಯನ್ನು ದಾನ ನೀಡಿದರೆ ಪಡೆದು ಬಳಸಬೇಡಿ, ಇದರಿಂದ ಹಣಕಾಸಿನ ತೊಂದರೆ ಉಂಟಾಗುವುದು.
* ಈ ಬಗೆಯ ಆಹಾರಗಳನ್ನು ಸೇವಿಸಬಾರದು
ಆರೋಗ್ಯದ ದೃಷ್ಟಿಯಿಂದ ಭಾದ್ರಪದ ಮಾಸದಲ್ಲಿ ಬೆಲ್ಲ ಅಥವಾ ಮೊಸರಿನ ಪದಾರ್ಥಗಳನ್ನು ಸೇವಿಸಬಾರದು ಎಂದು ಹೇಳಲಾಗುವುದು. ಮೂಲಂಗಿ, ಬದನೆ, ಮಾಂಸಾಹಾರ, ಮೀನು, ಈರುಳ್ಳಿ, ಬೆಳ್ಳುಳ್ಳಿ, ಮದ್ಯ ಈ ಬಗೆಯ ಆಹಾರಗಳನ್ನು ಸೇವಿಸಬಾರದೆಂದು ಹೇಳಲಾಗುವುದು. ಆದರೆ ಹಾಲು ಮತ್ತಿತರ ಹಾಲಿನ ಉತ್ಪನ್ನಗಳನ್ನು ಬಳಸಬಹುದು.
* ಭಾದ್ರಪದ ಮಾಸದಲ್ಲಿ ಗಡ್ಡ ತೆಗಿಯಬಾರದು, ಉಗುರು, ಕೂದಲು ಕತ್ತರಿಸಬಾರದು ಎಂದು ಹೇಳಲಾಗುವುದು.



Click it and Unblock the Notifications