Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ ಫೋಟೋದಲ್ಲಿರುವ ವ್ಯಕ್ತಿ ಈಗ ಶ್ರೀಮಂತ ನಟ..! ಯಾರು ಗೊತ್ತಾ?
ಸಾಮಾಜಿಕ ಜಾಲತಾಣದಲ್ಲಿ ಕೆಲವೊಮ್ಮೆ ಅತ್ಯಂತ ಕುತೂಹಲಕಾರಿ ವಿಚಾರಗಳು ಹೊರಬರುತ್ತವೆ. ಕೆಲವೊಮ್ಮೆ ಅಚ್ಚರಿಯ ವಿಚಾರಗಳು ಕೂಡ ನಡೆಯುತ್ತವೆ. ಅದರಲ್ಲೂ ಇವರನ್ನು ಗುರುತಿಸಿ ಎಂದು ಹಳೆಯ ಫೋಟೋಗಳು, ನಟ, ನಟಿ, ರಾಜಕಾರಣಿ, ಉದ್ಯಮಿ ಹೀಗೆ ಹಲವರ ಫೋಟೋಗಳು ಹರಿದಾಡುತ್ತಿರುತ್ತವೆ. ಆದ್ರೆ ಕೆಲವೊಮ್ಮೆ ಬಾಲ್ಯದ ಫೋಟೋಗಳು ಹರಿದಾಡಿದರೆ ಮತ್ತೆ ಕೆಲವೊಮ್ಮೆ ಅಪರೂಪದ ಫೋಟೋಗಳು ಹರಿದಾಡುತ್ತವೆ.
ಈಗಲೂ ಕೂಡ ಇಲ್ಲೊಂದು ಅಚ್ಚರಿ ಹುಟ್ಟಿಸುವ ಫೋಟೋ ಹರಿದಾಡುತ್ತಿದ್ದು, ಈ ಫೋಟೋದಲ್ಲಿರುವವರು ಯಾರು ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಭಾರತ ಚಿತ್ರರಂಗದ ಶ್ರೀಮಂತ ನಟ ಹಾಗೂ ಬಹುಭಾಷೆಯಲ್ಲಿ ನಟಿಸಿ ಸೈಎನಿಸಿಕೊಂಡಿರುವ ಈ ನಟ ಯಾರು ಎಂಬ ಪ್ರಶ್ನೆಯೊಂದಿಗೆ ಹಲವರು ಈ ಫೋಟೋವನ್ನು ಹಂಚಿಕೊಂಡಿದ್ದಾರೆ.

ಈ ಮೇಲಿನ ಫೋಟೋದಲ್ಲಿರುವ ವ್ಯಕ್ತಿ ಈಗ ಭಾರತದ ಶ್ರೀಮಂತ ನಟ, ಆದ್ರೆ ಈ ಫೋಟೋ ಅವರ ಕಾಲೇಜು ದಿನದಲ್ಲಿ ತೆಗೆಯಲಾಗಿದೆಯಂತೆ, ಹೀಗಾಗಿ ಹಲವರು ಅವರು ಯಾರು ಎಂಬುದನ್ನು ಸರಿಯಾಗಿ ಗುರುತಿಸಿದ್ದಾರೆ. ಮತ್ತೆ ಕೆಲವರು ಈ ನಟ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಗದೆ ಪರದಾಡಿದ್ದಾರೆ. ಅಷ್ಟಕ್ಕೂ ಈ ಕಪ್ಪು ಬಿಳುಪಿನ ಫೋಟೋದಲ್ಲಿರುವ ನಟ ಮತ್ಯಾರು ಅಲ್ಲ ಅದು ಚಿರಂಜೀವಿ.
ತೆಲುಗು, ಕನ್ನಡ, ಮಲಯಾಳಂ ಸೇರಿ ಬಹುಭಾಷೆಯಲ್ಲಿ ನಟಿಸಿರುವ ಅದೇ ಚಿರಂಜೀವಿ ಅವರ ಕಾಲೇಜು ದಿನದ ಫೋಟೋ ಇದಾಗಿದೆ. ಚಿರಂಜೀವಿ ಚಿತ್ರರಂಗಕ್ಕೆ ಕಾಲಿಟ್ಟು ಬರೋಬ್ಬರಿ 46 ವರ್ಷಗಳೇ ಕಳೆದಿದೆ. ಈ ಸಂದರ್ಭದಲ್ಲಿ ಈ ಫೋಟೋ ಹರಿದಾಡುತ್ತಿದೆ. ಇನ್ನೂ ಅಚ್ಚರಿ ಎಂದರೆ ಮೊದಲ ಬಾರಿಗೆ ಅವರಿಗೆ ಅತ್ಯುತ್ತಮ ನಟ ಎಂಬ ಕೀರ್ತಿ ತಂದ ದಿನದಂದು ತೆಗೆದಿದ್ದ ಫೋಟೋ ಇದಾಗಿದೆಯಂತೆ.
ಅವರು ಕಾಲೇಜು ದಿನದಲ್ಲಿ ನಟಿಸಿದ್ದ ನಾಟಕದಲ್ಲಿ ಅವರ ನಟನೆ ಕಂಡು ಅತ್ಯುತ್ತಮ ನಟ ಎಂದು ಬಣ್ಣಿಸಿದ್ದರಂತೆ. ಈ ಘಟನೆಯನ್ನು ಸ್ವತಃ ನಟ ಚಿರಂಜೀವಿ ನೆನಪಿಸಿಕೊಂಡಿದ್ದಾರೆ. 1974 - 75 ರ ಅವಧಿಯಲ್ಲಿ..YNM ಕಾಲೇಜು ನರಸಾಪುರ ಮೊದಲ ನಾಟಕ ರಾಜೀನಾಮೆ. ಕೋನ ಗೋವಿಂದ ರಾವ್ ಅವರ ಕೆಲಸ ನನಗೆ ಮೊದಲ ಬಾರಿಗೆ ನಟನಾಗಿ ಮನ್ನಣೆ ನೀಡಿತು. ನನಗೂ ಉತ್ತಮ ನಟ ಪ್ರಶಸ್ತಿ ಸಿಕ್ಕಿದ್ದಕ್ಕೆ ಅವರು ನೀಡಿದ ಪ್ರೋತ್ಸಾಹವನ್ನು ಮರೆಯಲು ಸಾಧ್ಯವಿಲ್ಲ, ನಟನಾಗಿ 50 ವರ್ಷಗಳಾದದ್ದು ವರ್ಣಿಸಲಾಗದ ಸಂತೋಷವಾಗುತ್ತಿದೆ ಎಂದು ನಟ ಚಿರಂಜೀವಿ ಅವರು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಚಿರಂಜೀವಿ ಅವರ ರಾಜೀನಾಮೆ ನಾಟಕದಿಂದ ಅವರ ಜೀವನ ಬದಲಾಗಿತ್ತು, ನಂತರ ನಾಟಕಗಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದ ಚಿರಂಜೀವಿ ಮುಂದೆ ಬಹುದೊಡ್ಡ ನಟರಾಗಿ ಗುರುತಿಸಿಕೊಂಡರು. ಆಗಸ್ಟ್ 22, 1955 ರಂದು ಭಾರತದ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಮೊಗಲ್ತುರು ಪಟ್ಟಣದಲ್ಲಿ ಅವರು ಜನಿಸಿದ್ದರು. ಅವರ ತಂದೆ ಪೊಲೀಸ್ ಕಾನ್ಸ್ಟೇಬಲ್ ಆಗಿದ್ದರು.
ತಂದೆ ಮಗನನ್ನು ಕೂಡ ಪೊಲೀಸ್ ಆಗಿ ಕಾಣುವ ಕನಸು ಕಂಡಿದ್ದರಂತೆ. ಆದ್ರೆ ನಟನೆಯಲ್ಲಿ ಆಸಕ್ತಿ ಹೊಂದಿದ್ದ ಚಿರಂಜೀವಿ ಕಾಲೇಜು ಶಿಕ್ಷಣ ಮುಗಿಸಿ ಚೆನ್ನೈಗೆ ಆಗಮಿಸಿದರು. ಬಳಿಕ ನಟ ಅಲ್ಲು ರಾಮು ಲಿಂಗಯ್ಯ ಅವರ ಪುತ್ರಿ ಸುರೇಖಾ ಅವರನ್ನು ವಿವಾಹವಾದರು.



Click it and Unblock the Notifications