Latest Updates
-
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ!
ಥೈಲ್ಯಾಂಡ್ನ ಆಕಾಶದಲ್ಲೂ ಜೈ ಶ್ರೀರಾಮ್ ಘೋಷಣೆ..! 10 ಸಾವಿರ ಅಡಿಯಿಂದ ಧುಮುಕಿದ ಸೈನಿಕ..!
ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ಉದ್ಘಾಟನೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 22ರಂದು ಹಿಂದೂ ಧಾರ್ಮಿಕ ವಿಧಿ ವಿಧಾನಗಳ ಅನುಸರಿಸುವ ಮೂಲಕ ಮಂದಿರ ಉದ್ಘಾಟನೆ ಮಾಡಿದ್ದಾರೆ. ಕೋಟಿ ಕೋಟಿ ರಾಮ ಭಕ್ತರು ಅಯೋಧ್ಯೆ ರಾಮನ ಕಣ್ತುಂಬಿಕೊಂಡಿದ್ದಾರೆ.
ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೊಂಡ ರಾಮ ಲಲ್ಲಾ ಮೂರ್ತಿಗೆ ಸಾವಿರಾರು ಉಡುಗೊರೆಗಳು ಬಂದಿವೆ. ಸಾವಿರಾರು ಮಂದಿ ಚಿನ್ನ, ವಜ್ರ ಸೇರಿ ಹಲವು ಉಡುಗೊರೆಗಳ ಕಾಣಿಕೆಯಾಗಿ ಅರ್ಪಿಸಿದ್ದಾರೆ. ದೇಶ ವಿದೇಶದಿಂದಲೂ ಭಕ್ತರು ರಾಮನ ದರ್ಶನಕ್ಕೆ ಆಗಮಿಸಿದ್ದರು. ಇನ್ನು ಅಯೋಧ್ಯೆ ಭಾರತದ ಪ್ರಮುಖ ಯಾತ್ರಾ ಸ್ಥಳವಾಗಲಿದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದರು.

ಆಕಾಶದಲ್ಲಿ ಹರಡಿದ 'ಜೈ ಶ್ರೀರಾಮ್' ಘೋಷಣೆ
ಇತ್ತ ದೂರದ ಥೈಲ್ಯಾಂಡ್ನಲ್ಲೂ ರಾಮ ಮಂದಿರ ಉದ್ಘಾಟನೆಯ ಸಂಭ್ರಮ ಮುಗಿಲು ಮುಟ್ಟಿತ್ತು. ಮಾಜಿ ನೌಕಾಪಡೆಯ ಅಧಿಕಾರಿ ಲೆಫ್ಟಿನೆಂಟ್ ಸಿಡಿಆರ್ ರಾಜ್ಕುಮಾರ್ ಥಾಯ್ಲೆಂಡ್ನಲ್ಲಿ 'ಜೈ ಶ್ರೀ ರಾಮ್' ಧ್ವಜದೊಂದಿಗೆ ಸ್ಕೈಡೈವ್ ಮಾಡಿ ಗಮನ ಸೆಳೆದಿದ್ದಾರೆ.
ಸ್ಕೈಡೈವಿಂಗ್ ವಿಶ್ಲೇಷಕ ಮತ್ತು ಕ್ರೀಡಾ ಮತ್ತು ಮಿಲಿಟರಿ ಸಿಬ್ಬಂದಿಗೆ ಬೋಧಕರಾಗಿರುವ ಮಾಜಿ ಅಧಿಕಾರಿ, 10,000 ಅಡಿಗಳಿಂದ ಹಾರಿದ್ದಾರೆ. ಅವರ ಜೊತೆಗೆ ದೊಡ್ಡದಾದ ಜೈ ಶ್ರೀರಾಮ್ ಎಂಬ ಬಾವುಟವೂ ಇದೆ. ಲಘು ವಿಮಾನವು 10,000 ಅಡಿಗಳನ್ನು ತಲುಪಿದಾಗ, ಅವರು ಬಾವುಟದೊಂದಿಗೆ ಜಿಗಿದರು.
ಇದಕ್ಕೂ ಮುನ್ನ ಮತ್ತೊಬ್ಬರು ಬೆಂಕಿಕಡ್ಡಿಗಳನ್ನು ಬಳಸಿ ರಾಮಮಂದಿರದ ಪ್ರತಿಕೃತಿಯನ್ನು ರಚಿಸಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದರು. ಶಿಲ್ಪಿ ಶಾಶ್ವತ್ ರಂಜನ್ ಎಂಬ ಕಲಾವಿದ ಅಯೋಧ್ಯೆಯ ರಾಮಮಂದಿರದ ಈ ಪ್ರತಿಕೃತಿಯನ್ನು ಬೆಂಕಿ ಕಡ್ಡಿಗಳಲ್ಲಿ ಪೂರ್ಣಗೊಳಿಸಲು ಆರು ದಿನಗಳನ್ನು ತೆಗೆದುಕೊಂಡಿದ್ದರು. ಈ ಯೋಜನೆಯನ್ನು ಪೂರ್ಣಗೊಳಿಸಲು ಒಟ್ಟು 936 ಬೆಂಕಿಕಡ್ಡಿಗಳನ್ನು ಬಳಸಿದ್ದರು.
ಇದೀಗ ಮಾಜಿ ಕಮಾಂಡರ್ ಮಾಡಿರುವ ಈ ಸಾಹಸದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ದೂರದ ಥೈಲ್ಯಾಂಡ್ನಲ್ಲೂ ರಾಮನ ಭಕ್ತಿ ಹರಡಿರುವುದಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಅಯೋಧ್ಯೆಗೂ ಥಾಯ್ ದೇಶಕ್ಕೂ ಇದೆ ನಂಟು..!
ಈ ಥೈಲ್ಯಾಂಡ್ ಕಥೆಗೂ ಮೊದಲು ನಾವು ಥೈಲ್ಯಾಂಡ್ ಸರ್ಕಾರ ಅಯೋಧ್ಯೆ ರಾಮಮಂದಿರಕ್ಕೆ ಕಳುಹಿಸುತ್ತಿರುವ ಉಡುಗೊರೆ ಕುರಿತು ತಿಳಿಯೋಣ. ಇದೇ ಮೊದಲ ಬಾರಿಗೆ ಥೈಲ್ಯಾಂಡ್ ರಾಮಮಂದಿರಕ್ಕೆ ಉಡುಗೊರೆಯಾಗಿ ಮಣ್ಣನ್ನು ಕಳುಹಿಸುತ್ತಿದೆ. ಥೈಲ್ಯಾಂಡ್ನಲ್ಲಿರುವ ಪವಿತ್ರ ರಾಮನ ಸ್ಥಳದಿಂದ ಈ ಮಣ್ಣನ್ನು ಕಳುಹಿಸಲಾಗುತ್ತಿದೆ. ಇದಕ್ಕೂ ಮೊದಲು ಥೈಲ್ಯಾಂಡ್ನ ಎರಡು ಪವಿತ್ರ ನದಿಗಳಿಂದ ರಾಮನ ದೇವಾಲಯಕ್ಕೆ ನೀರನ್ನು ಕಳುಹಿಸಿತ್ತು.
ಥೈಲ್ಯಾಂಡ್ನಲ್ಲಿ ಅಯುಥೆಯಾ ಎಂಬ ನಗರವಿದೆ. ಅಲ್ಲಿನ ರಾಜರಿಗೆ 'ರಾಮತಿಬೋಧಿ' (ಲಾರ್ಡ್ ರಾಮ) ಎಂದು ಬಿರುದು ನೀಡಲಾಗುತ್ತದೆ ಮತ್ತು ರಾಮಾಯಣದಲ್ಲಿ ಅಯೋಧ್ಯೆಯನ್ನು ರಾಮನ ರಾಜಧಾನಿ ಎಂದು ಉಲ್ಲೇಖಿಸಿರುವ ಸಂದರ್ಭಕ್ಕೆ ಇದು ಸಂಬಂಧ ಹೊಂದಿದೆ. ಇದಲ್ಲದೆ, ರಾಮ್ಕೀನ್ ಎಂದು ಕರೆಯಲ್ಪಡುವ ಥಾಯ್ ಧಾರ್ಮಿಕ ಪಠ್ಯವು ಥಾಯ್ ರಾಮಾಯಣಕ್ಕೆ ಹೋಲಿಸಬಹುದಾದ ಸ್ಥಾನಮಾನವನ್ನು ಹೊಂದಿದೆ.
ರಾಮಾನುಜನ್ ಅವರ ಕೃತಿ '300 ರಾಮಾಯಣ'ದಲ್ಲಿ ಈ ಪಠ್ಯವನ್ನು ವಾಲ್ಮೀಕಿಯ ರಾಮಾಯಣಕ್ಕೆ ಹೋಲಿಸಲಾಗಿದೆ.
ಸಾಂಪ್ರದಾಯಿಕವಾಗಿ 18 ನೇ ಶತಮಾನದಲ್ಲಿ ಕಿಂಗ್ ರಾಮ I ಅವರು ಹೊಸದಾಗಿ ರಚಿಸಿದ್ದಾರೆ ಎಂದು ನಂಬಲಾಗಿದೆ, ರಾಮ್ಕೀನ್ ಹಿಂದೂ ಪಠ್ಯದಲ್ಲಿ ರಾವಣನನ್ನು ಪ್ರತಿಬಿಂಬಿಸುವಂತೆ ಅಲ್ಲಿ ಥೋಟ್ಸಕ್ನನ್ನು ಕಾಣಬಹುದಾಗಿದೆ. ಹಾಗಾಗಿ ಎರಡೂ ದೇಶಗಳಲ್ಲಿ ರಾಮ ಮತ್ತು ರಾಮಾಯಣದ ಉಲ್ಲೇಖಗಳಿವೆ.
ಥಾಯ್ನಲ್ಲಿರುವ ಅಯುಥೆಯಾ ನಗರವು ಯುನೆಸ್ಕೋ ಪಾರಂಪರಿಕ ತಾಣವಾಗಿ ರಕ್ಷಿಸಲ್ಪಟ್ಟಿದೆ. ಭಾರತ ಮತ್ತು ಥೈಲ್ಯಾಂಡ್ ನಡುವೆ ಬಲವಾದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಬಾಂಧವ್ಯವಿದೆ. ಥೈಲ್ಯಾಂಡ್ನ ರಾಜರು ಭಗವಾನ್ ರಾಮನ ವಂಶಸ್ಥರಿಗೆ ಸೇರಿದವರು, ಅವರ ಹೆಸರಿನಲ್ಲಿ ರಾಮನ ಬಿರುದನ್ನು ಹೊಂದಿದ್ದಾರೆ ಅವರದ್ದು ಸನಾತನ ಸಂಸ್ಕೃತಿ ಅಂತಲೂ ನಂಬಲಾಗಿದೆ.



Click it and Unblock the Notifications