Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಥೈಲ್ಯಾಂಡ್ನ ಆಕಾಶದಲ್ಲೂ ಜೈ ಶ್ರೀರಾಮ್ ಘೋಷಣೆ..! 10 ಸಾವಿರ ಅಡಿಯಿಂದ ಧುಮುಕಿದ ಸೈನಿಕ..!
ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ಉದ್ಘಾಟನೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 22ರಂದು ಹಿಂದೂ ಧಾರ್ಮಿಕ ವಿಧಿ ವಿಧಾನಗಳ ಅನುಸರಿಸುವ ಮೂಲಕ ಮಂದಿರ ಉದ್ಘಾಟನೆ ಮಾಡಿದ್ದಾರೆ. ಕೋಟಿ ಕೋಟಿ ರಾಮ ಭಕ್ತರು ಅಯೋಧ್ಯೆ ರಾಮನ ಕಣ್ತುಂಬಿಕೊಂಡಿದ್ದಾರೆ.
ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೊಂಡ ರಾಮ ಲಲ್ಲಾ ಮೂರ್ತಿಗೆ ಸಾವಿರಾರು ಉಡುಗೊರೆಗಳು ಬಂದಿವೆ. ಸಾವಿರಾರು ಮಂದಿ ಚಿನ್ನ, ವಜ್ರ ಸೇರಿ ಹಲವು ಉಡುಗೊರೆಗಳ ಕಾಣಿಕೆಯಾಗಿ ಅರ್ಪಿಸಿದ್ದಾರೆ. ದೇಶ ವಿದೇಶದಿಂದಲೂ ಭಕ್ತರು ರಾಮನ ದರ್ಶನಕ್ಕೆ ಆಗಮಿಸಿದ್ದರು. ಇನ್ನು ಅಯೋಧ್ಯೆ ಭಾರತದ ಪ್ರಮುಖ ಯಾತ್ರಾ ಸ್ಥಳವಾಗಲಿದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದರು.

ಆಕಾಶದಲ್ಲಿ ಹರಡಿದ 'ಜೈ ಶ್ರೀರಾಮ್' ಘೋಷಣೆ
ಇತ್ತ ದೂರದ ಥೈಲ್ಯಾಂಡ್ನಲ್ಲೂ ರಾಮ ಮಂದಿರ ಉದ್ಘಾಟನೆಯ ಸಂಭ್ರಮ ಮುಗಿಲು ಮುಟ್ಟಿತ್ತು. ಮಾಜಿ ನೌಕಾಪಡೆಯ ಅಧಿಕಾರಿ ಲೆಫ್ಟಿನೆಂಟ್ ಸಿಡಿಆರ್ ರಾಜ್ಕುಮಾರ್ ಥಾಯ್ಲೆಂಡ್ನಲ್ಲಿ 'ಜೈ ಶ್ರೀ ರಾಮ್' ಧ್ವಜದೊಂದಿಗೆ ಸ್ಕೈಡೈವ್ ಮಾಡಿ ಗಮನ ಸೆಳೆದಿದ್ದಾರೆ.
ಸ್ಕೈಡೈವಿಂಗ್ ವಿಶ್ಲೇಷಕ ಮತ್ತು ಕ್ರೀಡಾ ಮತ್ತು ಮಿಲಿಟರಿ ಸಿಬ್ಬಂದಿಗೆ ಬೋಧಕರಾಗಿರುವ ಮಾಜಿ ಅಧಿಕಾರಿ, 10,000 ಅಡಿಗಳಿಂದ ಹಾರಿದ್ದಾರೆ. ಅವರ ಜೊತೆಗೆ ದೊಡ್ಡದಾದ ಜೈ ಶ್ರೀರಾಮ್ ಎಂಬ ಬಾವುಟವೂ ಇದೆ. ಲಘು ವಿಮಾನವು 10,000 ಅಡಿಗಳನ್ನು ತಲುಪಿದಾಗ, ಅವರು ಬಾವುಟದೊಂದಿಗೆ ಜಿಗಿದರು.
ಇದಕ್ಕೂ ಮುನ್ನ ಮತ್ತೊಬ್ಬರು ಬೆಂಕಿಕಡ್ಡಿಗಳನ್ನು ಬಳಸಿ ರಾಮಮಂದಿರದ ಪ್ರತಿಕೃತಿಯನ್ನು ರಚಿಸಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದರು. ಶಿಲ್ಪಿ ಶಾಶ್ವತ್ ರಂಜನ್ ಎಂಬ ಕಲಾವಿದ ಅಯೋಧ್ಯೆಯ ರಾಮಮಂದಿರದ ಈ ಪ್ರತಿಕೃತಿಯನ್ನು ಬೆಂಕಿ ಕಡ್ಡಿಗಳಲ್ಲಿ ಪೂರ್ಣಗೊಳಿಸಲು ಆರು ದಿನಗಳನ್ನು ತೆಗೆದುಕೊಂಡಿದ್ದರು. ಈ ಯೋಜನೆಯನ್ನು ಪೂರ್ಣಗೊಳಿಸಲು ಒಟ್ಟು 936 ಬೆಂಕಿಕಡ್ಡಿಗಳನ್ನು ಬಳಸಿದ್ದರು.
ಇದೀಗ ಮಾಜಿ ಕಮಾಂಡರ್ ಮಾಡಿರುವ ಈ ಸಾಹಸದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ದೂರದ ಥೈಲ್ಯಾಂಡ್ನಲ್ಲೂ ರಾಮನ ಭಕ್ತಿ ಹರಡಿರುವುದಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಅಯೋಧ್ಯೆಗೂ ಥಾಯ್ ದೇಶಕ್ಕೂ ಇದೆ ನಂಟು..!
ಈ ಥೈಲ್ಯಾಂಡ್ ಕಥೆಗೂ ಮೊದಲು ನಾವು ಥೈಲ್ಯಾಂಡ್ ಸರ್ಕಾರ ಅಯೋಧ್ಯೆ ರಾಮಮಂದಿರಕ್ಕೆ ಕಳುಹಿಸುತ್ತಿರುವ ಉಡುಗೊರೆ ಕುರಿತು ತಿಳಿಯೋಣ. ಇದೇ ಮೊದಲ ಬಾರಿಗೆ ಥೈಲ್ಯಾಂಡ್ ರಾಮಮಂದಿರಕ್ಕೆ ಉಡುಗೊರೆಯಾಗಿ ಮಣ್ಣನ್ನು ಕಳುಹಿಸುತ್ತಿದೆ. ಥೈಲ್ಯಾಂಡ್ನಲ್ಲಿರುವ ಪವಿತ್ರ ರಾಮನ ಸ್ಥಳದಿಂದ ಈ ಮಣ್ಣನ್ನು ಕಳುಹಿಸಲಾಗುತ್ತಿದೆ. ಇದಕ್ಕೂ ಮೊದಲು ಥೈಲ್ಯಾಂಡ್ನ ಎರಡು ಪವಿತ್ರ ನದಿಗಳಿಂದ ರಾಮನ ದೇವಾಲಯಕ್ಕೆ ನೀರನ್ನು ಕಳುಹಿಸಿತ್ತು.
ಥೈಲ್ಯಾಂಡ್ನಲ್ಲಿ ಅಯುಥೆಯಾ ಎಂಬ ನಗರವಿದೆ. ಅಲ್ಲಿನ ರಾಜರಿಗೆ 'ರಾಮತಿಬೋಧಿ' (ಲಾರ್ಡ್ ರಾಮ) ಎಂದು ಬಿರುದು ನೀಡಲಾಗುತ್ತದೆ ಮತ್ತು ರಾಮಾಯಣದಲ್ಲಿ ಅಯೋಧ್ಯೆಯನ್ನು ರಾಮನ ರಾಜಧಾನಿ ಎಂದು ಉಲ್ಲೇಖಿಸಿರುವ ಸಂದರ್ಭಕ್ಕೆ ಇದು ಸಂಬಂಧ ಹೊಂದಿದೆ. ಇದಲ್ಲದೆ, ರಾಮ್ಕೀನ್ ಎಂದು ಕರೆಯಲ್ಪಡುವ ಥಾಯ್ ಧಾರ್ಮಿಕ ಪಠ್ಯವು ಥಾಯ್ ರಾಮಾಯಣಕ್ಕೆ ಹೋಲಿಸಬಹುದಾದ ಸ್ಥಾನಮಾನವನ್ನು ಹೊಂದಿದೆ.
ರಾಮಾನುಜನ್ ಅವರ ಕೃತಿ '300 ರಾಮಾಯಣ'ದಲ್ಲಿ ಈ ಪಠ್ಯವನ್ನು ವಾಲ್ಮೀಕಿಯ ರಾಮಾಯಣಕ್ಕೆ ಹೋಲಿಸಲಾಗಿದೆ.
ಸಾಂಪ್ರದಾಯಿಕವಾಗಿ 18 ನೇ ಶತಮಾನದಲ್ಲಿ ಕಿಂಗ್ ರಾಮ I ಅವರು ಹೊಸದಾಗಿ ರಚಿಸಿದ್ದಾರೆ ಎಂದು ನಂಬಲಾಗಿದೆ, ರಾಮ್ಕೀನ್ ಹಿಂದೂ ಪಠ್ಯದಲ್ಲಿ ರಾವಣನನ್ನು ಪ್ರತಿಬಿಂಬಿಸುವಂತೆ ಅಲ್ಲಿ ಥೋಟ್ಸಕ್ನನ್ನು ಕಾಣಬಹುದಾಗಿದೆ. ಹಾಗಾಗಿ ಎರಡೂ ದೇಶಗಳಲ್ಲಿ ರಾಮ ಮತ್ತು ರಾಮಾಯಣದ ಉಲ್ಲೇಖಗಳಿವೆ.
ಥಾಯ್ನಲ್ಲಿರುವ ಅಯುಥೆಯಾ ನಗರವು ಯುನೆಸ್ಕೋ ಪಾರಂಪರಿಕ ತಾಣವಾಗಿ ರಕ್ಷಿಸಲ್ಪಟ್ಟಿದೆ. ಭಾರತ ಮತ್ತು ಥೈಲ್ಯಾಂಡ್ ನಡುವೆ ಬಲವಾದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಬಾಂಧವ್ಯವಿದೆ. ಥೈಲ್ಯಾಂಡ್ನ ರಾಜರು ಭಗವಾನ್ ರಾಮನ ವಂಶಸ್ಥರಿಗೆ ಸೇರಿದವರು, ಅವರ ಹೆಸರಿನಲ್ಲಿ ರಾಮನ ಬಿರುದನ್ನು ಹೊಂದಿದ್ದಾರೆ ಅವರದ್ದು ಸನಾತನ ಸಂಸ್ಕೃತಿ ಅಂತಲೂ ನಂಬಲಾಗಿದೆ.



Click it and Unblock the Notifications









