Latest Updates
-
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ? -
ಬೇಕರಿ ಸ್ಟೈಲ್ ಕಚೋರಿ ರೆಸಿಪಿ.. ಮನೆಯಲ್ಲೇ ಈ 4 ಟೇಸ್ಟಿ ಕಚೋರಿ ಮಾಡಿ! ಹೊಸಬರಿಗೆ ಕೂಡ ಸುಲಭ -
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ!
ಆರ್ಥಿಕ ಸಮಸ್ಯೆ ನಿವಾರಣೆಗೆ ವಾಸ್ತು ಪರಿಹಾರವೇನು?
ಈಗೀನ ಕಾಲದಲ್ಲಿ ಹಣವಿಲ್ಲವೆಂದರೆ ಜೀವನದಲ್ಲಿ ನರಕ ನೋಡಿ ಬಿಡುತ್ತೇವೆ. ಎಲ್ಲದಕ್ಕೂ ಹಣಬೇಕು. ಕೆಲವೊಮ್ಮೆ ಎಷ್ಟೇ ಕಷ್ಟಪಟ್ಟು ದುಡಿದರೂ ಕೈಯಲ್ಲಿ ಹಣ ನಿಲ್ಲಲ್ಲ, ಒಂದಲ್ಲಾ ಒಂದು ಖರ್ಚು ಬಂದು ಆರ್ಥಿಕ ಸ ಸಂಕಷ್ಟ ತಂದೊಡ್ಡುತ್ತದೆ. ಕೆಲವೊಮ್ಮೆ ಸಂಪಾದಿಸಿದ ಹಣವನ್ನೂ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಉಂಟಾಗಬಹುದು.
ಒಳ್ಳೆಯದಾಗಬಹುದು ಎಂಬ ನಿರೀಕ್ಷೆಯಿಂದ ಮಾಡಿದ ವ್ಯವಹಾರ ಹಳ್ಳ ಹಿಡಿಯಬಹುದು. ಹಣದ ಮುಗ್ಗಟ್ಟು ಬಂದರೆ ಮನುಷ್ಯ ಹೈರಾಣಾಗುತ್ತಾನೆ.
ವಾಸ್ತು ಶಾಸ್ತ್ರದಲ್ಲಿ ನಿಮ್ಮ ಆರ್ಥಿಕ ತೊಂದರೆಗಳನ್ನು ನೀಗಿಸಲು ಕೆಲವೊಂದು ಪರಿಹಾರಗಳಿವೆ, ಅವುಗಳ ಕುರಿತ ಮಾಹಿತಿ ಇಲ್ಲಿದೆ ನೋಡಿ.

ಮನೆಯಲ್ಲಿ ಗಣೇಶನ ವಿಗ್ರಹ ಅಥವಾ ಫೋಟೋವಿರಲಿ
ಮನೆಯಲ್ಲಿ ಗಣೇಶನ ವಿಗ್ರಹ ಅಥವಾ ಫೋಟೋವನ್ನು ಇಟ್ಟು ಪೂಜಿಸಿದರೆ ಮಂಗಳಕರ ಫಲಿತಾಂಶ ದೊರೆಯಲಿದೆ. ಯಾವುದೇ ಪೂಜೆಗೆ ಮುನ್ನ ವಿಘ್ನ ನಿವಾರಕನ ಪೂಜೆ ಮಾಡಬೇಕು. ಹಣದ ತೊಂದರೆಯಿದ್ದರೆ ಬುಧವಾರ ಗಣೇಶನಿಗೆ ಗರಿಕೆಯನ್ನು ಅರ್ಪಿಸಿ ಪೂಜಿಸಿ. ಸಂತೋಷದ ಜೀವನಕ್ಕಾಗಿ, ನೃತ್ಯ ಭಂಗಿಯಲ್ಲಿರುವ ಗಣಪತಿಯ ಚಿತ್ರವನ್ನು ಮನೆಯಲ್ಲಿ ಇರಿಸಿ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.
ಮನೆಯ ಮುಂಭಾಗದಲ್ಲಿ ತೆಂಗಿನಕಾಯಿ ಕಟ್ಟಿ
ಒಂದೇ ಒಂದು ತೆಂಗಿನಕಾಯಿಯನ್ನು ಕೆಂಪು ಅಥವಾ ಬಿಳಿ ಬಟ್ಟೆಯನ್ನು ಸುತ್ತು ಪೂಜಿಸಿ ಮನೆಯ ಮುಂದುಗಡೆ ಕಟ್ಟಬೇಕು. ಇದರಿಂದ ಲಕ್ಷ್ಮಿ ಕೃಪೆ ಮನೆ ಮೇಲಿರುತ್ತದೆ. ಹೀಗಾಗಿ ಮನೆಯಲ್ಲಿರುವ ಆರ್ಥಿಕ ಸಂಕಷ್ಟಗಳು ದೂರಾಗಿ ಮನೆಯಲ್ಲಿ ಅಭಿವೃದ್ದಿ ಕಂಡು ಬರುವುದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.
ಪೂಜಾ ಸ್ಥಳದಲ್ಲಿ ಶಂಖ
ಮನೆಯ ದೇವರ ಕೋಣೆಯಲ್ಲಿ ಶಂಖ ಇಡಿ. ಇದರಿಂದ ಮನೆಯ ವಾಸ್ತು ದೋಷಗಳು ದೂರವಾಗುತ್ತವೆ. ಅಲ್ಲದೆ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರಾಗುವುದು. ಪುರಾಣಗಳು ಮತ್ತು ಶಾಸ್ತ್ರಗಳ ಪ್ರಕಾರ ಶಂಖವು ಶ್ರೀ ವಿಷ್ಣು ಮತ್ತು ತಾಯಿ ಲಕ್ಷ್ಮಿಗೆ ತುಂಬಾ ಪ್ರಿಯವಾಗಿದೆ. ಶಂಖ ಅಕಾರಾತ್ಮಕ ಶಕ್ತಿ, ಉತ್ಸಾಹ ಮತ್ತು ಆತ್ಮವಿಶ್ವಾಸದ ಸಂಕೇತವೆಂದು ಪರಿಗಣಿಸಲಾಗುತ್ತದೆ.
ಲಕ್ಷ್ಮಿ ದೇವತೆ ಮತ್ತು ಕುಬೇರನ ಚಿತ್ರ
ಹಣದ ಕೊರತೆಯನ್ನು ನೀಗಿಸಲು, ಮನೆಯಲ್ಲಿ ಲಕ್ಷ್ಮಿ ದೇವಿಯೊಂದಿಗಿನ ಕುಬೇರನ ಚಿತ್ರವನ್ನು ಇರಿಸಿ ಪೂಜಿಸಿ. ತಾಯಿ ಲಕ್ಷ್ಮಿ ಸಂಪತ್ತಿನ ದೇವತೆ ಮತ್ತು ಭಗವಂತ ಕುಬೇರನು ಆದಾಯದ ಮೂಲ. ಈ ಮೂಲಕ ಇಬ್ಬರ ಕೃಪೆಯಿಂದ ಹಣದ ಸಮಸ್ಯೆ ದೂರಾಗುವುದು.
ಕೊಳಲು ಮತ್ತು ನವಿಲು ಗರಿ
ಪೂಜಾ ಮನೆಯಲ್ಲಿ ಕೊಳಲು ಇರುವಂತೆ ನೋಡಿಕೊಳ್ಳಿ. ಮನೆಯಲ್ಲಿ ಬಿದಿರಿನ ಕೊಳಲನ್ನು ಇಡುವುದರಿಂದ ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಾಗುವುದು. ಮನೆಯಲ್ಲಿ ಕೊಳಲನ್ನು ಇಡುವುದರಿಂದ ವ್ಯಾಪಾರದಲ್ಲಿ ಬೆಳವಣಿಗೆ ಮತ್ತು ಉದ್ಯೋಗದಲ್ಲಿ ಪ್ರಗತಿ ಕಂಡು ಬರುವುದು ಎಂದು ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ.
ಇದಲ್ಲದೆ ವಾಸ್ತು ದೋಷ ನಿವಾರಣೆಗೆ ಮನೆಯಲ್ಲಿ ನವಿಲು ಗರಿಗಳನ್ನು ಇಡುವುದು ಒಳ್ಳೆಯದು. ಇದರಿಂದ ನಿಮ್ಮ ಆದಾಯದಲ್ಲಿ ಹೆಚ್ಚಳವಾಗುವುದು, ಖರ್ಚು ಕಡಿಮೆಯಾಗಿ ಉಳಿತಾಯ ಹೆಚ್ಚಾಗುವುದು.
ಮನೆಯಲ್ಲಿ ಸಮೃದ್ಧಿಗಾಗಿ ವಾಸ್ತು ಸಲಹೆಗಳು
ಹಣವನ್ನು ಸಂಗ್ರಹಿಸಲು ನಿಮಗೆ ತೊಂದರೆಯಾಗಿದ್ದರೆ ಈ ಕ್ರಮಗಳನ್ನು ಅನುಸರಿಸಿ.
* ಹಿಟ್ಟು ಹಾಗೂ ಬೆಲ್ಲವನ್ನು ಮಿಕ್ಸ್ ಮಾಡಿ ರೊಟ್ಟಿ ತಯಾರಿಸಿ ಆ ರೊಟ್ಟಿಯನ್ನು ಗುರುವಾರ ಸಂಜೆ ಹಸುವಿಗೆ ತಿನ್ನಿಸಿ. ಹೀಗೆ ಮಾಡುವುದರಿಂದ ಗ್ರಹಗಳ ದೋಷ ನಿವಾರಣೆಯಾಗುವುದು.
* ಸಾಸಿವೆ ಎಣ್ಣೆಯನ್ನು ರೊಟ್ಟಿಗೆ ಹಾಕಿ ಶನಿವಾರ ಕಪ್ಪು ನಾಯಿಗೆ ನೀಡಿ. ಇದರಿಂದ ಶನಿಕೃಪೆಗೆ ಪಾತ್ರರಾಗುವಿರಿ.
* ಲಕ್ಷ್ಮಿಯನ್ನು ಶುಕ್ರವಾರ ಕಮಲದ ಹೂಗಳನ್ನು ಅರ್ಪಿಸಿ ಪೂಜಿಸಿ.
ಮನೆಯ ಮುಖ್ಯ ಬಾಗಿಲಿಗೆ ಅಶೋಕ ಅಥವಾ ಮಾವಿನ ಎಲೆಗಳ ಹಾರದ ತೋರಣ ಹಾಕಿ. ಹೀಗೆ ಮಾಡುವುದರಿಂದ ತಾಯಿ ಲಕ್ಷ್ಮಿ ಪ್ರಸನ್ನಳಾಗುತ್ತಾಳೆ.
ಐದು ನಾಣ್ಯಗಳು, ಸ್ವಲ್ಪ ಕುಂಕುಮ ಮತ್ತು ಬೆಳ್ಳಿಯ ನಾಣ್ಯಗಳನ್ನು ಶುಕ್ರವಾರದಂದು ಬಟ್ಟೆಯಲ್ಲಿ ಕಟ್ಟಿ ನಿಮ್ಮ ಮನೆಯ ಕಬೋರ್ಡ್ನಲ್ಲಿ ಇಡಿ.
ಲಕ್ಷ್ಮಿಯ ಆರಾಧನೆ
* ಮನೆಯಲ್ಲಿ ಮಹಾಲಕ್ಷ್ಮಿಯ ಕುಳಿತಿರುವ ಮೂರ್ತಿ ಇಡಿ.
* ಪ್ರತಿದಿನ ಲಕ್ಷ್ಮಿಯನ್ನು ಆರಾಧಿಸಿ ಕುಂಕುಮ ಅರ್ಪಿಸಿ. ಹೀಗೆ ಮಾಡುವುದರಿಂದ ಹಣಕಾಸಿನ ಸಮಸ್ಯೆ ದೂರವಾಗುತ್ತದೆ.
* ಆರ್ಥಿಕ ಲಾಭಕ್ಕಾಗಿ ಪ್ರಾರ್ಥಿಸುವಾಗ ಶುದ್ಧವಾದ ಕೆಂಪು ಬಣ್ಣದ ಬಟ್ಟೆಯಲ್ಲಿ ಅರಿಶಿನ, ಸಿಂಧೂರ ಮತ್ತು ಕೆಲವು ನಾಣ್ಯಗಳನ್ನು ಇಟ್ಟು ಸುತ್ತಿ ಅದನ್ನು ನಿಮ್ಮ ಮನೆಯ ಕಬೋರ್ಡ್ನಲ್ಲಿ ಇಟ್ಟು ಪೂಜಿಸಿ.



Click it and Unblock the Notifications












