Latest Updates
-
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ
ವಾರದಲ್ಲಿ ಗುರುವಾರವನ್ನು ಅತ್ಯಂತ ಅದೃಷ್ಟದ ದಿನವೆಂದು ಹೇಳುತ್ತಾರೆ, ಏಕೆ?
ವಾರದ ಏಳೂ ದಿನಗಳಲ್ಲಿ ಅತ್ಯಂತ ಶುಭ ದಿನ ಗುರುವಾರ ಎಂದು ಹೇಳಲಾಗುವುದು. ಈ ಗುರುವಾರ ಏಕೆ ಇತರ 6 ದಿನಕ್ಕಿಂತ ವಿಶೇಷವಾದ ದಿನ ವೈದಿಕ ಶಾಸ್ತ್ರದಲ್ಲಿ ಏನು ಹೇಳಲಾಗಿದ ಎಂದು ನೋಡೋಣ ಬನ್ನಿ:

ವಾರದ ದಿನಗಳಲ್ಲಿ ಗ್ರಹಗಳ ಪ್ರಭಾವ
ಪ್ರತಿಯೊಂದು ದಿನವನ್ನು ಒಂದೊಂದು ಗ್ರಹ ಆಳುತ್ತದೆ, ಭಾನುವಾರರ ಅಧಿಪತಿ ಸೂರ್ಯ ದೇವ. ಸೋಮವಾರದ ಅಧಿಪತಿ ಚಂದ್ರ, ಮಂಗಳವಾರದ ಅಧಿಪತಿ ಮಂಗಳ ಗ್ರಹ, ಬುಧವಾರದ ಗ್ರಹ ಬುಧ, ಗುರುವಾರದ ಗ್ರಹ ಗುರು, ಶುಕ್ರವಾರದ ಅಧಿಪತಿ ಶುಕ್ರ, ಶನಿವಾರದ ಅದಿಪತಿ ಶನಿಯಾಗಿದೆ. ಗುರು ಅದೃಷ್ಟವನ್ನು ಬೆಂಬಲಿಸುವ ಗ್ರಹವಾಗಿದೆ.
ಗುರುವಾರ ಶ್ರೀವಿಷ್ಣುವಿನ ಪೂಜೆಗೆ ವಿಶೇಷವಾದ ದಿನ
ಗುರುವಾರ ಶ್ರೀ ವಿಷ್ಣುವಿನ ಪೂಜೆಗೆ ತುಂಬಾನೇ ವಿಶೇಷವಾದ ದಿನ, ಈ ದಿನ ಶ್ರೀ ವಿಷ್ಣುವಿಗೆ ತುಪ್ಪದ ದೀಪ ಹಚ್ಚಿ ಪೂಜಿಸಬೇಕು, ವಿಷ್ಣು ಸಹಸ್ರನಾಮ ಪಠಿಸಬೇಕು ಎಂದು ಹೇಳಲಾಗುವುದು. ಶ್ರೀ ವಿಷ್ಣುವನ್ನು ಭಕ್ತಿಯಿಂದ ಪೂಜಿಸಿದರೆ ಎಲ್ಲಾ ಕಷ್ಟಗಳು ದೂರಾಗುವುದು ಎಂದು ಹೇಳಲಾಗುವುದು.
ಗುರು ರಾಯರ ಪೂಜೆಯನ್ನು ಮಾಡಲಾಗುವುದು
ಗುರುವಾರದಂದು ಗುರು ರಾಯರ ಪೂಜೆಯನ್ನು ಮಾಡಲಾಗುವುದು. ಗುರುವಾರದ ದಿನ ಶ್ರೀ ರಾಯರ ಪೂಜೆಗೆ ಒಳ್ಳೆಯದು ಎಂದು ಹೇಳಲಾಗುವುದು. ಈ ದಿನ ಉಪವಾಸವಿದ್ದು ಗುರು ರಾಯರ ಪೂಜೆ ಮಾಡಲಾಗುವುದು. ಮಣೆಯನ್ನು ಸ್ವಚ್ಛ ಮಾಡಿ, ಅದರ ಮೇಲೆ ಶ್ರೀ ರಾಘವೇಂದ್ರ ಸ್ವಾಮಿಯ ಫೋಟೋ ಇಟ್ಟು ತುಳಸಿ ಮಾಲೆ, ಹೂವುಗಳನ್ನು ಅರ್ಪಿಸಿ, ದೀಪ ಹಚ್ಚಿ ಶ್ರೀ ರಾಘವೇಂದ್ರ ಸ್ವಾಮಿಯನ್ನು ಆರಾಧಿಸಿ.
ಪೂಜ್ಯಾಯಾ ರಾಘವೇಂದ್ರಾಯ
ಸತ್ಯಧರ್ಮ ರಧಾಯಚ
ಭಜತಾಂ ಕಲ್ಪವೃಕ್ಷಯಾ ನಮತಾಂ
ಶ್ರೀ ಕಾಮಧೇನುವೇ
ಈ ಮಂತ್ರ ಪಠಣೆ ಮಾಡಿ.
ಗುರುವಾರದಂದು ಈ ಕಾರ್ಯಗಳನ್ನು ಮಾಡಬಾರದು ಎಂದು ಹೇಳಲಾಗುವುದು?
ಗುರುವಾರದಂದು ಕೂದಲು ಕತ್ತರಿಸಬಾರದು, ಗಡ್ಡ-ಮೀಸೆ ಕತ್ತರಿಸಬಾರದು ಅಥವಾ ಶೇವ್ ಮಾಡಬಾರದು, ಬಟ್ಟೆ ಒಗೆಯಬಾರದು, ಕೂದಲು ತೊಳೆಯಬಾರದು ಎಂದು ಹೇಳಲಾಗುವುದು, ಇದನ್ನು ತುಂಬಾ ಜನರು ಆಚರಿಸುತ್ತಾರೆ.
ಗುರುವಾರ ವ್ರತದ ಮಹತ್ವವೇನು?
- ಗುರುವಾರ ಉಪವಾಸ ಮಾಡುವುದರಿಂದ ಈ ಪ್ರಯೋಜನಗಳಿವೆ
- ಗುರುವಾರ ಉಪವಾಸ ಮಾಡುವುದರಿಂದ ನಿಮ್ಮ ಸಂತೋಷ, ಸಮೃದ್ಧಿ ಹೆಚ್ಚಾಗಲಿದೆ
- ಶ್ರೀವಿಷ್ಣುವಿನ, ರಾಯರ ಕೃಪೆಗೆ ಪಾತ್ರರಾಗಬಹುದು.
- ಈ ದಿನ ಉಪವಾಸ ಮಾಡುವಾಗ ಹಾಲು, ಹಣ್ಣುಗಳನ್ನು ಸೇವಿಸಬಹುದು.
- ಗುರುವಾರ ಉಪವಾಸ ಮಾಡುವಾಗ ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ, ಮಡಿ ಬಟ್ಟೆ ಧರಿಸಿ ಉಪವಾಸ ಸಂಕಲ್ಪ ತೆಗೆದುಕೊಳ್ಳಬೇಕು.



Click it and Unblock the Notifications











