Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ವಾರದಲ್ಲಿ ಗುರುವಾರವನ್ನು ಅತ್ಯಂತ ಅದೃಷ್ಟದ ದಿನವೆಂದು ಹೇಳುತ್ತಾರೆ, ಏಕೆ?
ವಾರದ ಏಳೂ ದಿನಗಳಲ್ಲಿ ಅತ್ಯಂತ ಶುಭ ದಿನ ಗುರುವಾರ ಎಂದು ಹೇಳಲಾಗುವುದು. ಈ ಗುರುವಾರ ಏಕೆ ಇತರ 6 ದಿನಕ್ಕಿಂತ ವಿಶೇಷವಾದ ದಿನ ವೈದಿಕ ಶಾಸ್ತ್ರದಲ್ಲಿ ಏನು ಹೇಳಲಾಗಿದ ಎಂದು ನೋಡೋಣ ಬನ್ನಿ:

ವಾರದ ದಿನಗಳಲ್ಲಿ ಗ್ರಹಗಳ ಪ್ರಭಾವ
ಪ್ರತಿಯೊಂದು ದಿನವನ್ನು ಒಂದೊಂದು ಗ್ರಹ ಆಳುತ್ತದೆ, ಭಾನುವಾರರ ಅಧಿಪತಿ ಸೂರ್ಯ ದೇವ. ಸೋಮವಾರದ ಅಧಿಪತಿ ಚಂದ್ರ, ಮಂಗಳವಾರದ ಅಧಿಪತಿ ಮಂಗಳ ಗ್ರಹ, ಬುಧವಾರದ ಗ್ರಹ ಬುಧ, ಗುರುವಾರದ ಗ್ರಹ ಗುರು, ಶುಕ್ರವಾರದ ಅಧಿಪತಿ ಶುಕ್ರ, ಶನಿವಾರದ ಅದಿಪತಿ ಶನಿಯಾಗಿದೆ. ಗುರು ಅದೃಷ್ಟವನ್ನು ಬೆಂಬಲಿಸುವ ಗ್ರಹವಾಗಿದೆ.
ಗುರುವಾರ ಶ್ರೀವಿಷ್ಣುವಿನ ಪೂಜೆಗೆ ವಿಶೇಷವಾದ ದಿನ
ಗುರುವಾರ ಶ್ರೀ ವಿಷ್ಣುವಿನ ಪೂಜೆಗೆ ತುಂಬಾನೇ ವಿಶೇಷವಾದ ದಿನ, ಈ ದಿನ ಶ್ರೀ ವಿಷ್ಣುವಿಗೆ ತುಪ್ಪದ ದೀಪ ಹಚ್ಚಿ ಪೂಜಿಸಬೇಕು, ವಿಷ್ಣು ಸಹಸ್ರನಾಮ ಪಠಿಸಬೇಕು ಎಂದು ಹೇಳಲಾಗುವುದು. ಶ್ರೀ ವಿಷ್ಣುವನ್ನು ಭಕ್ತಿಯಿಂದ ಪೂಜಿಸಿದರೆ ಎಲ್ಲಾ ಕಷ್ಟಗಳು ದೂರಾಗುವುದು ಎಂದು ಹೇಳಲಾಗುವುದು.
ಗುರು ರಾಯರ ಪೂಜೆಯನ್ನು ಮಾಡಲಾಗುವುದು
ಗುರುವಾರದಂದು ಗುರು ರಾಯರ ಪೂಜೆಯನ್ನು ಮಾಡಲಾಗುವುದು. ಗುರುವಾರದ ದಿನ ಶ್ರೀ ರಾಯರ ಪೂಜೆಗೆ ಒಳ್ಳೆಯದು ಎಂದು ಹೇಳಲಾಗುವುದು. ಈ ದಿನ ಉಪವಾಸವಿದ್ದು ಗುರು ರಾಯರ ಪೂಜೆ ಮಾಡಲಾಗುವುದು. ಮಣೆಯನ್ನು ಸ್ವಚ್ಛ ಮಾಡಿ, ಅದರ ಮೇಲೆ ಶ್ರೀ ರಾಘವೇಂದ್ರ ಸ್ವಾಮಿಯ ಫೋಟೋ ಇಟ್ಟು ತುಳಸಿ ಮಾಲೆ, ಹೂವುಗಳನ್ನು ಅರ್ಪಿಸಿ, ದೀಪ ಹಚ್ಚಿ ಶ್ರೀ ರಾಘವೇಂದ್ರ ಸ್ವಾಮಿಯನ್ನು ಆರಾಧಿಸಿ.
ಪೂಜ್ಯಾಯಾ ರಾಘವೇಂದ್ರಾಯ
ಸತ್ಯಧರ್ಮ ರಧಾಯಚ
ಭಜತಾಂ ಕಲ್ಪವೃಕ್ಷಯಾ ನಮತಾಂ
ಶ್ರೀ ಕಾಮಧೇನುವೇ
ಈ ಮಂತ್ರ ಪಠಣೆ ಮಾಡಿ.
ಗುರುವಾರದಂದು ಈ ಕಾರ್ಯಗಳನ್ನು ಮಾಡಬಾರದು ಎಂದು ಹೇಳಲಾಗುವುದು?
ಗುರುವಾರದಂದು ಕೂದಲು ಕತ್ತರಿಸಬಾರದು, ಗಡ್ಡ-ಮೀಸೆ ಕತ್ತರಿಸಬಾರದು ಅಥವಾ ಶೇವ್ ಮಾಡಬಾರದು, ಬಟ್ಟೆ ಒಗೆಯಬಾರದು, ಕೂದಲು ತೊಳೆಯಬಾರದು ಎಂದು ಹೇಳಲಾಗುವುದು, ಇದನ್ನು ತುಂಬಾ ಜನರು ಆಚರಿಸುತ್ತಾರೆ.
ಗುರುವಾರ ವ್ರತದ ಮಹತ್ವವೇನು?
- ಗುರುವಾರ ಉಪವಾಸ ಮಾಡುವುದರಿಂದ ಈ ಪ್ರಯೋಜನಗಳಿವೆ
- ಗುರುವಾರ ಉಪವಾಸ ಮಾಡುವುದರಿಂದ ನಿಮ್ಮ ಸಂತೋಷ, ಸಮೃದ್ಧಿ ಹೆಚ್ಚಾಗಲಿದೆ
- ಶ್ರೀವಿಷ್ಣುವಿನ, ರಾಯರ ಕೃಪೆಗೆ ಪಾತ್ರರಾಗಬಹುದು.
- ಈ ದಿನ ಉಪವಾಸ ಮಾಡುವಾಗ ಹಾಲು, ಹಣ್ಣುಗಳನ್ನು ಸೇವಿಸಬಹುದು.
- ಗುರುವಾರ ಉಪವಾಸ ಮಾಡುವಾಗ ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ, ಮಡಿ ಬಟ್ಟೆ ಧರಿಸಿ ಉಪವಾಸ ಸಂಕಲ್ಪ ತೆಗೆದುಕೊಳ್ಳಬೇಕು.



Click it and Unblock the Notifications
