Latest Updates
-
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ!
ವಾರದಲ್ಲಿ ಗುರುವಾರವನ್ನು ಅತ್ಯಂತ ಅದೃಷ್ಟದ ದಿನವೆಂದು ಹೇಳುತ್ತಾರೆ, ಏಕೆ?
ವಾರದ ಏಳೂ ದಿನಗಳಲ್ಲಿ ಅತ್ಯಂತ ಶುಭ ದಿನ ಗುರುವಾರ ಎಂದು ಹೇಳಲಾಗುವುದು. ಈ ಗುರುವಾರ ಏಕೆ ಇತರ 6 ದಿನಕ್ಕಿಂತ ವಿಶೇಷವಾದ ದಿನ ವೈದಿಕ ಶಾಸ್ತ್ರದಲ್ಲಿ ಏನು ಹೇಳಲಾಗಿದ ಎಂದು ನೋಡೋಣ ಬನ್ನಿ:

ವಾರದ ದಿನಗಳಲ್ಲಿ ಗ್ರಹಗಳ ಪ್ರಭಾವ
ಪ್ರತಿಯೊಂದು ದಿನವನ್ನು ಒಂದೊಂದು ಗ್ರಹ ಆಳುತ್ತದೆ, ಭಾನುವಾರರ ಅಧಿಪತಿ ಸೂರ್ಯ ದೇವ. ಸೋಮವಾರದ ಅಧಿಪತಿ ಚಂದ್ರ, ಮಂಗಳವಾರದ ಅಧಿಪತಿ ಮಂಗಳ ಗ್ರಹ, ಬುಧವಾರದ ಗ್ರಹ ಬುಧ, ಗುರುವಾರದ ಗ್ರಹ ಗುರು, ಶುಕ್ರವಾರದ ಅಧಿಪತಿ ಶುಕ್ರ, ಶನಿವಾರದ ಅದಿಪತಿ ಶನಿಯಾಗಿದೆ. ಗುರು ಅದೃಷ್ಟವನ್ನು ಬೆಂಬಲಿಸುವ ಗ್ರಹವಾಗಿದೆ.
ಗುರುವಾರ ಶ್ರೀವಿಷ್ಣುವಿನ ಪೂಜೆಗೆ ವಿಶೇಷವಾದ ದಿನ
ಗುರುವಾರ ಶ್ರೀ ವಿಷ್ಣುವಿನ ಪೂಜೆಗೆ ತುಂಬಾನೇ ವಿಶೇಷವಾದ ದಿನ, ಈ ದಿನ ಶ್ರೀ ವಿಷ್ಣುವಿಗೆ ತುಪ್ಪದ ದೀಪ ಹಚ್ಚಿ ಪೂಜಿಸಬೇಕು, ವಿಷ್ಣು ಸಹಸ್ರನಾಮ ಪಠಿಸಬೇಕು ಎಂದು ಹೇಳಲಾಗುವುದು. ಶ್ರೀ ವಿಷ್ಣುವನ್ನು ಭಕ್ತಿಯಿಂದ ಪೂಜಿಸಿದರೆ ಎಲ್ಲಾ ಕಷ್ಟಗಳು ದೂರಾಗುವುದು ಎಂದು ಹೇಳಲಾಗುವುದು.
ಗುರು ರಾಯರ ಪೂಜೆಯನ್ನು ಮಾಡಲಾಗುವುದು
ಗುರುವಾರದಂದು ಗುರು ರಾಯರ ಪೂಜೆಯನ್ನು ಮಾಡಲಾಗುವುದು. ಗುರುವಾರದ ದಿನ ಶ್ರೀ ರಾಯರ ಪೂಜೆಗೆ ಒಳ್ಳೆಯದು ಎಂದು ಹೇಳಲಾಗುವುದು. ಈ ದಿನ ಉಪವಾಸವಿದ್ದು ಗುರು ರಾಯರ ಪೂಜೆ ಮಾಡಲಾಗುವುದು. ಮಣೆಯನ್ನು ಸ್ವಚ್ಛ ಮಾಡಿ, ಅದರ ಮೇಲೆ ಶ್ರೀ ರಾಘವೇಂದ್ರ ಸ್ವಾಮಿಯ ಫೋಟೋ ಇಟ್ಟು ತುಳಸಿ ಮಾಲೆ, ಹೂವುಗಳನ್ನು ಅರ್ಪಿಸಿ, ದೀಪ ಹಚ್ಚಿ ಶ್ರೀ ರಾಘವೇಂದ್ರ ಸ್ವಾಮಿಯನ್ನು ಆರಾಧಿಸಿ.
ಪೂಜ್ಯಾಯಾ ರಾಘವೇಂದ್ರಾಯ
ಸತ್ಯಧರ್ಮ ರಧಾಯಚ
ಭಜತಾಂ ಕಲ್ಪವೃಕ್ಷಯಾ ನಮತಾಂ
ಶ್ರೀ ಕಾಮಧೇನುವೇ
ಈ ಮಂತ್ರ ಪಠಣೆ ಮಾಡಿ.
ಗುರುವಾರದಂದು ಈ ಕಾರ್ಯಗಳನ್ನು ಮಾಡಬಾರದು ಎಂದು ಹೇಳಲಾಗುವುದು?
ಗುರುವಾರದಂದು ಕೂದಲು ಕತ್ತರಿಸಬಾರದು, ಗಡ್ಡ-ಮೀಸೆ ಕತ್ತರಿಸಬಾರದು ಅಥವಾ ಶೇವ್ ಮಾಡಬಾರದು, ಬಟ್ಟೆ ಒಗೆಯಬಾರದು, ಕೂದಲು ತೊಳೆಯಬಾರದು ಎಂದು ಹೇಳಲಾಗುವುದು, ಇದನ್ನು ತುಂಬಾ ಜನರು ಆಚರಿಸುತ್ತಾರೆ.
ಗುರುವಾರ ವ್ರತದ ಮಹತ್ವವೇನು?
- ಗುರುವಾರ ಉಪವಾಸ ಮಾಡುವುದರಿಂದ ಈ ಪ್ರಯೋಜನಗಳಿವೆ
- ಗುರುವಾರ ಉಪವಾಸ ಮಾಡುವುದರಿಂದ ನಿಮ್ಮ ಸಂತೋಷ, ಸಮೃದ್ಧಿ ಹೆಚ್ಚಾಗಲಿದೆ
- ಶ್ರೀವಿಷ್ಣುವಿನ, ರಾಯರ ಕೃಪೆಗೆ ಪಾತ್ರರಾಗಬಹುದು.
- ಈ ದಿನ ಉಪವಾಸ ಮಾಡುವಾಗ ಹಾಲು, ಹಣ್ಣುಗಳನ್ನು ಸೇವಿಸಬಹುದು.
- ಗುರುವಾರ ಉಪವಾಸ ಮಾಡುವಾಗ ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ, ಮಡಿ ಬಟ್ಟೆ ಧರಿಸಿ ಉಪವಾಸ ಸಂಕಲ್ಪ ತೆಗೆದುಕೊಳ್ಳಬೇಕು.



Click it and Unblock the Notifications