Latest Updates
-
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ!
ವಾರದಲ್ಲಿ ಗುರುವಾರವನ್ನು ಅತ್ಯಂತ ಅದೃಷ್ಟದ ದಿನವೆಂದು ಹೇಳುತ್ತಾರೆ, ಏಕೆ?
ವಾರದ ಏಳೂ ದಿನಗಳಲ್ಲಿ ಅತ್ಯಂತ ಶುಭ ದಿನ ಗುರುವಾರ ಎಂದು ಹೇಳಲಾಗುವುದು. ಈ ಗುರುವಾರ ಏಕೆ ಇತರ 6 ದಿನಕ್ಕಿಂತ ವಿಶೇಷವಾದ ದಿನ ವೈದಿಕ ಶಾಸ್ತ್ರದಲ್ಲಿ ಏನು ಹೇಳಲಾಗಿದ ಎಂದು ನೋಡೋಣ ಬನ್ನಿ:

ವಾರದ ದಿನಗಳಲ್ಲಿ ಗ್ರಹಗಳ ಪ್ರಭಾವ
ಪ್ರತಿಯೊಂದು ದಿನವನ್ನು ಒಂದೊಂದು ಗ್ರಹ ಆಳುತ್ತದೆ, ಭಾನುವಾರರ ಅಧಿಪತಿ ಸೂರ್ಯ ದೇವ. ಸೋಮವಾರದ ಅಧಿಪತಿ ಚಂದ್ರ, ಮಂಗಳವಾರದ ಅಧಿಪತಿ ಮಂಗಳ ಗ್ರಹ, ಬುಧವಾರದ ಗ್ರಹ ಬುಧ, ಗುರುವಾರದ ಗ್ರಹ ಗುರು, ಶುಕ್ರವಾರದ ಅಧಿಪತಿ ಶುಕ್ರ, ಶನಿವಾರದ ಅದಿಪತಿ ಶನಿಯಾಗಿದೆ. ಗುರು ಅದೃಷ್ಟವನ್ನು ಬೆಂಬಲಿಸುವ ಗ್ರಹವಾಗಿದೆ.
ಗುರುವಾರ ಶ್ರೀವಿಷ್ಣುವಿನ ಪೂಜೆಗೆ ವಿಶೇಷವಾದ ದಿನ
ಗುರುವಾರ ಶ್ರೀ ವಿಷ್ಣುವಿನ ಪೂಜೆಗೆ ತುಂಬಾನೇ ವಿಶೇಷವಾದ ದಿನ, ಈ ದಿನ ಶ್ರೀ ವಿಷ್ಣುವಿಗೆ ತುಪ್ಪದ ದೀಪ ಹಚ್ಚಿ ಪೂಜಿಸಬೇಕು, ವಿಷ್ಣು ಸಹಸ್ರನಾಮ ಪಠಿಸಬೇಕು ಎಂದು ಹೇಳಲಾಗುವುದು. ಶ್ರೀ ವಿಷ್ಣುವನ್ನು ಭಕ್ತಿಯಿಂದ ಪೂಜಿಸಿದರೆ ಎಲ್ಲಾ ಕಷ್ಟಗಳು ದೂರಾಗುವುದು ಎಂದು ಹೇಳಲಾಗುವುದು.
ಗುರು ರಾಯರ ಪೂಜೆಯನ್ನು ಮಾಡಲಾಗುವುದು
ಗುರುವಾರದಂದು ಗುರು ರಾಯರ ಪೂಜೆಯನ್ನು ಮಾಡಲಾಗುವುದು. ಗುರುವಾರದ ದಿನ ಶ್ರೀ ರಾಯರ ಪೂಜೆಗೆ ಒಳ್ಳೆಯದು ಎಂದು ಹೇಳಲಾಗುವುದು. ಈ ದಿನ ಉಪವಾಸವಿದ್ದು ಗುರು ರಾಯರ ಪೂಜೆ ಮಾಡಲಾಗುವುದು. ಮಣೆಯನ್ನು ಸ್ವಚ್ಛ ಮಾಡಿ, ಅದರ ಮೇಲೆ ಶ್ರೀ ರಾಘವೇಂದ್ರ ಸ್ವಾಮಿಯ ಫೋಟೋ ಇಟ್ಟು ತುಳಸಿ ಮಾಲೆ, ಹೂವುಗಳನ್ನು ಅರ್ಪಿಸಿ, ದೀಪ ಹಚ್ಚಿ ಶ್ರೀ ರಾಘವೇಂದ್ರ ಸ್ವಾಮಿಯನ್ನು ಆರಾಧಿಸಿ.
ಪೂಜ್ಯಾಯಾ ರಾಘವೇಂದ್ರಾಯ
ಸತ್ಯಧರ್ಮ ರಧಾಯಚ
ಭಜತಾಂ ಕಲ್ಪವೃಕ್ಷಯಾ ನಮತಾಂ
ಶ್ರೀ ಕಾಮಧೇನುವೇ
ಈ ಮಂತ್ರ ಪಠಣೆ ಮಾಡಿ.
ಗುರುವಾರದಂದು ಈ ಕಾರ್ಯಗಳನ್ನು ಮಾಡಬಾರದು ಎಂದು ಹೇಳಲಾಗುವುದು?
ಗುರುವಾರದಂದು ಕೂದಲು ಕತ್ತರಿಸಬಾರದು, ಗಡ್ಡ-ಮೀಸೆ ಕತ್ತರಿಸಬಾರದು ಅಥವಾ ಶೇವ್ ಮಾಡಬಾರದು, ಬಟ್ಟೆ ಒಗೆಯಬಾರದು, ಕೂದಲು ತೊಳೆಯಬಾರದು ಎಂದು ಹೇಳಲಾಗುವುದು, ಇದನ್ನು ತುಂಬಾ ಜನರು ಆಚರಿಸುತ್ತಾರೆ.
ಗುರುವಾರ ವ್ರತದ ಮಹತ್ವವೇನು?
- ಗುರುವಾರ ಉಪವಾಸ ಮಾಡುವುದರಿಂದ ಈ ಪ್ರಯೋಜನಗಳಿವೆ
- ಗುರುವಾರ ಉಪವಾಸ ಮಾಡುವುದರಿಂದ ನಿಮ್ಮ ಸಂತೋಷ, ಸಮೃದ್ಧಿ ಹೆಚ್ಚಾಗಲಿದೆ
- ಶ್ರೀವಿಷ್ಣುವಿನ, ರಾಯರ ಕೃಪೆಗೆ ಪಾತ್ರರಾಗಬಹುದು.
- ಈ ದಿನ ಉಪವಾಸ ಮಾಡುವಾಗ ಹಾಲು, ಹಣ್ಣುಗಳನ್ನು ಸೇವಿಸಬಹುದು.
- ಗುರುವಾರ ಉಪವಾಸ ಮಾಡುವಾಗ ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ, ಮಡಿ ಬಟ್ಟೆ ಧರಿಸಿ ಉಪವಾಸ ಸಂಕಲ್ಪ ತೆಗೆದುಕೊಳ್ಳಬೇಕು.



Click it and Unblock the Notifications