ಈ ವರ್ಷ ಅನಂತ ಚತುರ್ದಶಿ ಯಾವಾಗ? ಅನಂತ ಸೂತ್ರದ ಮಹತ್ವವೇನು?

ಭಾದ್ರಪದ ಮಾಸದ ಶುಕ್ಲ ಪಕ್ಷದಲ್ಲಿ ಬರುವ ಚತುರ್ದಶಿಯನ್ನು ಅನಂತ ಚತುರ್ದಶಿ ಎಂದು ಆಚರಿಸಲಾಗುವುದು. ಈ ದಿನ ಗಣೇಶ ವಿಸರ್ಜನೆಯ ದಿನವೂ ಹೌದು. ಅನಂತ ಚತುರ್ದಶಿಯಂದು ಶ್ರೀ ವಿಷ್ಣು ಅನಂತ ಪದ್ಮನಾಭನಾಗಿ ಅವತಾರ ತಾಳಿದ ದಿನ ಎಂದು ಹೇಳಲಾಗುವುದು. ಈ ದಿನ ಶ್ರೀ ವಿಷ್ಣುವಿನ ಆರಾಧನೆಗೆ ತುಂಬಾನೇ ಮಹತ್ವವಿದೆ. ಈ ವರ್ಷ ಅನಂತ ಚತುರ್ದಶಿ ಯಾವಾಗ? ಪೂಜಾ ಮುಹೂರ್ತ ಹಾಗೂ ಈ ದಿನದ ಪೂಜೆಯ ಮಹತ್ವವೇನು ಎಂದು ನೋಡೋಣ ಬನ್ನಿ:

Anant Chaturthi 2023,

2023ರಲ್ಲಿ ಅನಂತ ಚತುರ್ದಶಿ ಯಾವಾಗ?
ಈ ವರ್ಷ ಅನಂತ ಚತುರ್ದಶಿಯನ್ನು ಸೆಪ್ಟೆಂಬರ್ 28 ಗುರುವಾರದಂದು ಆಚರಿಸಲಾಗುವುದು.
ಅನಂತ ಚತುರ್ದಶಿ ತಿಥಿ ಪ್ರಾರಂಭ: ಸೆಪ್ಟೆಂಬರ್ 27 ರಾತ್ರಿ 10:18ಕ್ಕೆ
ಅನಂತ ಪೂಜಾ ಮುಹೂರ್ತ: ಸೆಪ್ಟೆಂಬರ್ 28 ಬೆಳಗ್ಗೆ 06:28ರಿಂದ ಸಂಜೆ 06:49ರವರೆಗೆ
ಅನಂತ ಚತುರ್ದಶಿ ತಿಥಿ ಮುಕ್ತಾಯ: ಸೆಪ್ಟೆಂಬರ್ 28 ಸಂಜೆ 06:49ಕ್ಕೆ

ಅನಂತ ಚತುರ್ದಶಿ ಏಕೆ ಆಚರಿಸಲಾಗುವುದು, ಇದರ ಮಹತ್ವವೇನು?
ಶ್ರೀವಿಷ್ಣು ಶೇಷನಾಗನ ಮೇಲೆ ಮಲಗಿರುತ್ತಾನೆ, ಸುಖ, ದುಃಖವನ್ನು ಸಮಾನಾಗಿ ಸ್ವೀಕರಿಸಿಕೊಂಡು ಹೋಗಬೇಕು ಎಂಬ ತತ್ತ್ವವನ್ನು ಸೂಚಿಸುತ್ತದೆ. ಗಣೇಶ ನಮ್ಮ ದೇಹವನ್ನು ಪ್ರತಿನಿಧಿಸುತ್ತದೆ. ಗಣೇಶನನ್ನು ನೀರಿನಲ್ಲಿ ವಿಸರ್ಜನೆ ಮಾಡಿದಾಗ ನೀರಿನಲ್ಲಿ ಕರಗಿದಂತೆ ನಮ್ಮ ದೇಹ ಪರಮಾತ್ಮನಲ್ಲಿ ಐಕ್ಯವಾಗಬೇಕು ಎಂದು ಹೇಳಲಾಗುವುದು.

ಅನಂತ ಚತುರ್ದಶಿ ಆಚರಣೆ ಹೇಗೆ?
* ಬೆಳಗ್ಗೆ ಎದ್ದು ಸ್ನಾನ ಮಾಡಿ ಮಡಿ ಬಟ್ಟೆ ಧರಿಸಿ ಕಲಶ ಪ್ರತಿಷ್ಠಾಪಿಸಿ, ಕಲಶ ಹಾಗೂ ಶ್ರೀ ವಿಷ್ಣುವಿನ ಮೂರ್ತಿ ಅಥವಾ ಫೋಟೋವನ್ನು ಕಮಲದ ಹೂವುಗಳಿಂದ ಅಲಂಕರಿಸಿ.
* ಒಂದು ತಟ್ಟೆಗೆ ಕುಂಕುಮ ಮಿಶ್ರ ಮಾಡಿದ ರೇಷ್ಮೆ ನೂಲಿಗೆ 14 ಗಂಟು ಹಾಕಿ ಶ್ರೀವಿಷ್ಣುವಿನ ಫೋಟೋದ ಬಳಿಯಿಟ್ಟು ಪೂಜೆ ಮಾಡ ಬೇಕು, ಇದನ್ನು ಅನಂತ ಸೂತ್ರ ಎಂದು ಕರೆಯಲಾಗುವುದು.

ಅನಂತ ಸೂತ್ರ ಏನನ್ನು ಸೂಚಿಸುತ್ತದೆ?
ಅನಂತ ಚತುರ್ದಶಿಯನ್ನು ಪಾಲಿಸುವವರು ಅನಂತ ಸೂತ್ರವನ್ನು ಕಟ್ಟಿಕೊಳ್ಳುತ್ತಾರೆ. ಸಾಕ್ಷಾತ್ ಭಗವಾನ್ ವಿಷ್ಣು ಅನಂತ ಸೂತ್ರದಲ್ಲಿ ನೆಲೆಸಿರುತ್ತಾನೆ ಎಂಬ ನಂಬಿಕೆಯಲ್ಲಿ ಅನಂತ ಸೂತ್ರ ಕಟ್ಟಲಾಗುವುದು. ಅನಂತರ ಸೂತ್ರ 14 ಗಂಟುಗಳಿರುವ ದಾರ. ಆ ದಾರದಲ್ಲಿರುವ 14 ಗಂಟು ಭೂಲೋಕ, ಭುವರ್ಲೋಕ, ಸ್ವರ್ಲೋಕ, ಮಹಾಲೋರ್ಕ, ಜನಲೋಕ, ತಪೋಲೋಕ, ಬ್ರಹ್ಮಲೋಕ, ಅತಳ ಲೋಕ, ವಿತಳ ಲೋಕ. ಸತಳ ಲೋಕ, ರಸಾತಳ ಲೋಕ, ಮಹಾತಳ ಲೋಕ, ತಳಾತಳ ಲೋಕ, ಪಾತಾಳ ಲೋಕ ಹೀಗೆ 14 ಲೋಕವನ್ನು ಪ್ರತಿನಿಧಿಸುತ್ತದೆ ಎಂದು ಹೇಳಲಾಗುವುದು.

ಅನಂತ ಸೂತ್ರವನ್ನು ಯಾರು ಹೇಗೆ ಬಳಸಬೇಕು?
ಈ ಅನಂತ ಸೂತ್ರವನ್ನು ಉಪವಾಸವಿದ್ದು ಶ್ರೀ ವಿಷ್ಣುವನ್ನು ಪೂಜೆ ಮಾಡಿದವರು ಮಾತ್ರ ಕಟ್ಟಬೇಕು. ಪುರುಷರು ಬಲಗೈಗೆ, ಮಹಿಳೆಯರು ಎಡಗೈಗೆ ಕಟ್ಟಬೇಕು.

ಅನಂತ ಚತುರ್ದಶಿ ಆಚರಣೆಯಪ್ರಯೋಜನವೇನು?
* ಈ ಉಪವಾಸ ವ್ರತವನ್ನು ಸತತ 14 ದಿನ ಆಚರಿಸಿದರೆ ಮೋಕ್ಷ ಸಿಗುವುದು, ಶ್ರೀ ವಿಷ್ಣುವಿನ ಲೋಕದಲ್ಲಿ ಸ್ಥಾನ ಸಿಗುವುದು ಎಂದು ಹೇಳಲಾಗುವುದು.
* ಈ ವ್ರತ ಮಾಡುವುದರಿಂದ ನಿಮ್ಮ ಮನೋಕಾಮನೆಗಳು ಈಡೇರುವುದು
* ಜೀವನದಲ್ಲಿನ ಕಷ್ಟಗಳು, ಅಡಚಣೆಗಳು ದೂರಾಗುವುದು
* ಸಂತೋಷ, ಸಮೃದ್ಧಿ ಹೆಚ್ಚಾಗುವುದು.

ಅನಂತ ಚತುರ್ದಶಿ ಪೌರಾಣಿಕ ಕತೆ
ಶ್ರೀ ಕೃಷ್ಣನು ಪಾಂಡವರಿಗೆ ಈ ಚತುರ್ದಶಿ ಮಹತ್ವದ ಬಗ್ಗೆ ಹೇಳುತ್ತಾನೆ. ಪಾಂಡವರು ಅಜ್ಞಾತವಾಸದಲ್ಲಿದ್ದಾಗ ಶ್ರೀಕೃಷ್ಣನ ಬಳಿ ತಾವು ಕಳೆದುಕೊಂಡ ರಾಜ್ಯ ಮರಳಿ ಪಡೆಯಲು ಏನು ಮಾಡಬೇಕು ಎಂದು ಕೇಳಿದಾಗ ಶ್ರೀ ಕೃಷ್ಣನು ಪಾಂಡವರಿಗೆ ಈ ವ್ರತದ ಮಹತ್ವದ ಬಗ್ಗೆ ಹೇಳುತ್ತಾನೆ. ಅದರಂತೆ ಪಾಂಡವರು ಈ ವ್ರತವನ್ನು ಭಕ್ತಿಯಿಂದ ಆಚರಿಸುತ್ತಾರೆ. ನಂತರ ಯುಧಿಷ್ಠರನಿಗೆ ತನ್ನ ರಾಜ್ಯ ಮರಳಿ ಪಡೆಯಲು ಸಾಧ್ಯವಾಯ್ತು.
ಆದ್ದರಿಂದ ಈ ವ್ರತವನ್ನು ಆಚರಿಸುತ್ತಾರೋ ಅವರ ಮನೋಕಾಮನೆಗಳು ನೆರವೇರುವುದು.

English summary

Ananth Chaturthi Or Chathurdarshi 2023 Date, Puja Time And Significance In Kannada

Anant Chaturthi 2023: Here are date, puja time, significance, read on...
X
Desktop Bottom Promotion