Latest Updates
-
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ? -
ಬೇಕರಿಯಲ್ಲಿ ಸಿಗುವ ಕೊಬ್ಬರಿ ತುರಿ ಬರ್ಫಿ ನಿಮಿಷದಲ್ಲಿ ಮಾಡಿ! ಇಲ್ಲಿದೆ ಸುಲಭದ ಸ್ವೀಟ್ ವಿಧಾನ -
ಮಧುರೈಗೆ ಹೋಗ್ತಿದ್ದೀರಾ? ಈ ಪವಿತ್ರ ದೇಗುಲಗಳಿಗೂ ಭೇಟಿ ನೀಡೋದನ್ನ ಮರೀಬೇಡಿ.. ಪಟ್ಟಿ ಇಲ್ಲಿದೆ
500 ವರ್ಷಗಳ ಬಳಿಕ ಅಕ್ಷಯ ತೃತೀಯದಂದು ಗುರು ಸಂಚಾರ: ಈ ರಾಶಿಗಳಿಗೆ ತುಂಬಾನೇ ಅದೃಷ್ಟ
ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿನದಂದು ಅಕ್ಷಯ ತೃತೀಯ ಆಚರಿಸಲಾಗುವುದು. ಈ ವರ್ಷ ಏಪ್ರಿಲ್ 22ರಂದು ಆಚರಿಸಲಾಗುವುದು. ಹಿಂದೂ ನಂಬಿಕೆ ಪ್ರಕಾರ ಈ ದಿನವನ್ನು ಅತ್ಯಂತ ಶುಭ ದಿನವೆಂದು ಪರಿಗಣಿಸಲಾಗಿದೆ. ಈ ವರ್ಷ ಅಕ್ಷಯ ತೃತೀಯದ ಮತ್ತೊಂದು ವಿಶೇಷವೆಂದರೆ 12 ವರ್ಷಗಳ ಬಳಿಕ ಮೇಷ ರಾಶಿಗೆ ಗುರು ಸಂಚಾರ ವಾಗುತ್ತಿದೆ.ಈ ಘಟನೆ 500 ವರ್ಷಗಳ ಬಳಿಕ ಸಂಭವಿಸಲಿದೆ. ಮೇಷ ರಾಶಿಗೆ ಗುರು ಸಂಚಾರದ ಅಕ್ಷಯ ತೃತೀಯದಂದು ಉಂಟಾಗುವುದರಿಂದ ತುಂಬಾನೇ ಶುಭ ಯೋಗ ಏರ್ಪಡಲಿದೆ.

ಈ ದಿನ ಮಾಲವ್ಯ ಯೋಗ ಏರ್ಪಡಲಿದೆ. ಅಕ್ಷಯ ತೃತೀಯವನ್ನು ಅತ್ಯಂತ ಶುಭ ದಿನವೆಂದು ಪರಿಗಣಿಸಲಾಗುವುದು, ದಿನವೇ ಗುರು ಸಂಚಾರವಾಗಿರುವುದಿಂದ ಈ ದಿನ ಮತ್ತಷ್ಟು ವಿಶೇಷವಾಗಿದೆ. ಈ ವಿಶೇಷ ದಿನದಂದು ಉಂಟಾಗಿರುವ ಶುಭ ಯೋಗ ಈ ರಾಶಿಗಳಿಗೆ ತುಂಬಾನೇ ಅನುಕೂಲಕರವಾಗಿದೆ. ಆ ಅದೃಷ್ಟದ ರಾಶಿಗಳಾವುವು ಎಂದು ನೋಡೋಣ.
ವೃಷಭ ರಾಶಿ
ವೃಷಭ ರಾಶಿಯವರ 12ನೇ ಮನೆಗೆ ಗುರು ಸಂಚಾರವಾಗುತ್ತುದೆ. ಅಕ್ಷಯ ತೃತೀಯದಂದು ಮಾಲವ್ಯ ಯೋಗ ಏರ್ಪಡುವುದರಿಂದ ನಿಮಗೆ ಈ ಅಕ್ಷಯ ತೃತೀಯ ಫಲಿತಾಂಶ ನೀಡಲಿದೆ. ಈ ಅಕ್ಷಯ ತೃತೀಯದಂದು ನೀವು ಬಟ್ಟೆ, ಆಭರಣಗಳಿಂದ ಪ್ರಯೋಜನ ಪಡೆಯುತ್ತೀರಿ. ಗುರುವಿನ ಕೃಪೆಯಿಂದಾಗಿ ಗುರು ಮೇಷ ರಾಶಿಯಲ್ಲಿರುವಾಗ ನಿಮ್ಮ ಎಲ್ಲಾ ಆಸೆಗಳು ಈಡೇರಲಿದೆ. ನೀವು ಕುಟುಂಬ ಮತ್ತು ಪ್ರಣಯ ಜೀವನದ ವಿಷಯದಲ್ಲಿ ನೆಮ್ಮದಿ ಇರಲಿದೆ. ಆದರೆ ಗುರು ಮೇಷ ರಾಶಿಯಲ್ಲಿರುವಾಗ ನೀವು ಅನಗ್ಯತವಾಗಿ ಹಣವನ್ನು ಖರ್ಚು ಇಡಲೇಬೇಡಿ. ನೀವು ಹಣವನ್ನು ಖರ್ಚು ಮಾಡುವಾಗ ಸ್ವಲ್ಪ ಜಾಗರೂಕರಾಗಿರಬೇಕು. ಗುರುವಿನ ಸಂಕ್ರಮಣದ ಸಮಯದಲ್ಲಿ ನಿಮ್ಮ ಎಲ್ಲಾ ಇಷ್ಟಾರ್ಥಗಳೂ ಈಡೇರುತ್ತವೆ.
ಗುರು ನಿಮ್ಮ ರಾಶಿಯ 12ನೇ ಮನೆಯಲ್ಲಿ ಇರುವುದರಿಂದ ಈ ಪರಿಹಾರ ಮಾಡಿ
* ನೀವು ಏನಾದರೂ ಮಹತ್ವದ ಕಾರ್ಯಕ್ಕೆ ಹೋಗುವಾಗ ಹಳದಿ ಬಟ್ಟೆ ಧರಿಸಿ
* ಹಳದಿ ಬಣ್ಣದ ಕಲ್ಲು ಇರುವ ಆಭರಣ ಧರಿಸಿ
* ಪ್ರತಿದಿನ ಗುರು ಬೀಜ ಮಂತ್ರ ಪಠಿಸಿ
* ಗುರುವಾರ ಉಪವಾಸವಿದ್ದು ವಿಷ್ಣುವನ್ನು ಆರಾಧಿಸಿ.
ಸಿಂಹ ರಾಶಿ
ಸಿಂಹ ರಾಶಿಯವರು ಗುರು ಸಂಕ್ರಮಣದ ಸಮಯದಲ್ಲಿ ಪ್ರಯೋಜವನ್ನು ಪಡೆಯಬಹುದು. ಸಿಂಹ ರಾಶಿಯವರಲ್ಲಿ 9ನೇ ಮನೆಯಲ್ಲಿ ಗುರು ಇರಲಿದೆ. ನೀವು ಏನಾದರೂ ಹೊಸ ವ್ಯವಹಾರ ಮಾಡಿದರೆ ನೀವು ಲಾಭಗಳಿಸುವಿರಿ. ನೀವು ವಿದೇಶಕ್ಕೆ ಹೋಗಲು ಬಯಸಿದರೆ ಈ ಅವಧಿಯಲ್ಲಿ ನಿಮ್ಮ ಬಯಕೆ ಕೂಡಿ ಬರಲಿದೆ. ಈ ಅವಧಿಯಲ್ಲಿ ಕುಟುಂಬದಲ್ಲಿ, ಸಮಾಜದಲ್ಲಿ ಖ್ಯಾತಿ ಹೆಚ್ಚಾಗುವುದು. ಅಲ್ಲದೆ ಈ ಸಂಚಾರವು ವಿದ್ಯಾರ್ಥಗಳಿಗೆ ತುಂಬಾ ಒಳ್ಳೆಯದಿದೆ.
ಗುರು 9ನೇ ಮನೆಯಲ್ಲಿ ಇರುವಾಗ ಈ ಪರಿಹಾರ ಮಾಡಿ
* ಪ್ರತಿ ಗುರುವಾರ ಉಪವಾಸವಿದ್ದು ವಿಷ್ಣುವನ್ನು ಆರಾಧಿಸಿ
* ಗುರು ಬೀಜ ಮಂತ್ರ ಪಠಿಸಿ
* ಹಳದಿ ಬಣ್ಣದ ವಸ್ತ್ರ ನಿಮಗೆ ಶುಭವಾಗಿದೆ.
ವೃಶ್ಚಿಕ ರಾಶಿ
ಏಪ್ರಿಲ್ 22 ರಂದು ಗುರು ಸಂಚಾರ ವೃಶ್ಚಿಕ ರಾಶಿಯವರಿಗೆ ತುಂಬಾ ಒಳ್ಳೆಯದಿದೆ. ವೃಶ್ಚಿಕ ರಾಶಿಯವರಲ್ಲಿ ಗುರು 6ನೇ ಮನೆಯಲ್ಲಿ ಇರಲಿದೆ. ಕೋರ್ಟ್ನಲ್ಲಿ ಏನಾದರೂ ಕೇಸ್ ನಡೆಯುತ್ತಿದ್ದರೆ ತೀರ್ಪು ನಿಮ್ಮ ಪರ ಬರಲಿದೆ. ಈ ಅವಧಿಯಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ವ್ಯಾಪಾರಸ್ಥರು ಹಾಗೂ ಸ್ವಂತ ಉದ್ಯೋಗ ಮಾಡುತ್ತಿರುವವರು ಈ ಅವಧಿಯಲ್ಲಿ ಲಾಭ ಗಳಿಸುವಿರಿ. ನೀವು ಆಸ್ತಿ ಅಥವಾ ಮನೆಗೆ ಹೂಡಿಕೆ ಮಾಡಲು ಬಯಸಿದರೆ ಈ ಅವಧಿಯಲ್ಲಿ ನಿಮ್ಮ ಕನಸು ನನಸಾಗಲಿದೆ.
ಗುರು 6ನೇ ಮನೆಯಲ್ಲಿ ಇರುವಾಗ ಈ ಪರಿಹಾರ ಮಾಡಿ
* ನಿರ್ಗತಿಕರಿಗೆ ಸಹಾಯ ಮಾಡಿ
* ಗುರು ಬೀಜ ಮಂತ್ರ ಪ್ರತಿದಿನ 108 ಬಾರಿ ಪಠಿಸಿದರೆ ಹೆಚ್ಚಿನ ಶುಭ ಸಿಗಲಿದೆ.
ಸೂಚನೆ: ಈ ಕುರಿತ ಹೆಚ್ಚಿನ ಮಾಹಿತಿಗೆ ನಿಮ್ಮ ಜ್ಯೋತಿಷಿಗಳ ಸಹಾಯ ಪಡೆಯಬಹುದು:



Click it and Unblock the Notifications












