Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Miracle: ಇಡೀ ವಿಮಾನ ಸುಟ್ಟು ಬೂದಿ ಆಯ್ತು.. ಆದರೆ, 'ಭಗವದ್ಗೀತೆ'ಗೆ ಏನೂ ಆಗಿಲ್ಲ! ವಿಡಿಯೋ ನೋಡಿ
ಮಿರಾಕಲ್! ಇಡೀ ವಿಮಾನ ಸುಟ್ಟು ಬೂದಿ ಆಯ್ತು.. ಆದರೆ, 'ಭಗವದ್ಗೀತೆ' ಪುಸ್ತಕಕ್ಕೆ ಏನೂ ಆಗಿಲ್ಲ! ಹೌದು, ಅಹಮದಾಬಾದ್ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ (Ahmedabad Plane Crash) ದುರಂತದಲ್ಲಿ 241 ಜನ ಪ್ರಯಾಣಿಕರು ಮತ್ತು ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಸೇರಿ 265 ಮಂದಿ ಸಾವನ್ನಪ್ಪಿದ್ದರು. ವಿಮಾನದಲ್ಲಿದ್ದ ಎಲ್ಲವೂ ಬೆಂಕಿಯಲ್ಲಿ ಸುಟ್ಟು ಭಸ್ಮವಾಯಿತು. ಅಪಘಾತ ಸಂಭವಿಸಿದ ಕಟ್ಟಡದ ಸುತ್ತಲಿನ ವಾಹನಗಳು, ವಸ್ತುಗಳು ಮತ್ತು ಮರಗಳು ಸಹ ಸುಟ್ಟುಹೋದವು. ಆದರೆ, ವಿಮಾನದ ಅವಶೇಷಗಳ ಅಡಿಯಲ್ಲಿ ಕಂಡುಬಂದ ಪವಿತ್ರ ಗ್ರಂಥ ಭಗವದ್ಗೀತೆ (Bhagavad Gita) ಮಾತ್ರ ಹಾಗೆಯೇ ಇದೆ. ಇದನ್ನು ಪತ್ತೆಹಚ್ಚಿದ ಸ್ಥಳೀಯರು ಮಾಧ್ಯಮಗಳಿಗೆ ತೋರಿಸಿದ್ದು, ಇದೀಗ ಆ ವಿಡಿಯೋ ವೈರಲ್ ಆಗುತ್ತಿದೆ.
ದೇಶದ ಇತಿಹಾಸದಲ್ಲಿಯೇ ಅತ್ಯಂತ ಭೀಕರವಾದ ವಿಮಾನ ದುರಂತ ಗುರುವಾರ (ಜೂನ್ 12, 2025) ಗುಜರಾತ್ನ ಅಹಮದಾಬಾದ್ನಲ್ಲಿ ಸಂಭವಿಸಿತು. ಒಟ್ಟು 242 ಪ್ರಯಾಣಿಕರು ಮತ್ತು ಸಿಬ್ಬಂದಿಯೊಂದಿಗೆ ಅಹಮದಾಬಾದ್ ವಿಮಾನ ನಿಲ್ದಾಣದಿಂದ ಲಂಡನ್ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ವಿಮಾನ ನಿಲ್ದಾಣದ ಬಳಿ ಟೇಕ್ ಆಫ್ ಆದ ಕೆಲವೇ ಸೆಕೆಂಡುಗಳಲ್ಲಿ ಪತನಗೊಂಡಿತು. ವಿಮಾನವು ವೈದ್ಯಕೀಯ ಕಾಲೇಜು ಹಾಸ್ಟೆಲ್ಗೆ ಅಪ್ಪಳಿಸಿತು. ಆ ಸಮಯದಲ್ಲಿ ಹಾಸ್ಟೆಲ್ ಮೆಸ್ನಲ್ಲಿ ಊಟ ಮಾಡುತ್ತಿದ್ದ 25ಕ್ಕೂ ಹೆಚ್ಚು ವೈದ್ಯಕೀಯ ವಿದ್ಯಾರ್ಥಿಗಳು ಸಾವನ್ನಪ್ಪಿದರು. ಅನೇಕರು ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸುರಕ್ಷಿತವಾಗಿ ಭಗವದ್ಗೀತೆ ಪುಸ್ತಕ ಪತ್ತೆ
ಈ ಅಪಘಾತದಲ್ಲಿ ವಿಮಾನದಲ್ಲಿದ್ದ ಒಬ್ಬ ಪ್ರಯಾಣಿಕ ಮಾತ್ರ ಸಣ್ಣಪುಟ್ಟ ಗಾಯಗಳೊಂದಿಗೆ ಬದುಕುಳಿದಿದ್ದಾನೆ. ಆದರೆ, ವಿಮಾನ ಅಪಘಾತ ಮತ್ತು ಘಟನೆಯ ಸ್ಥಳಕ್ಕೆ ಸಂಬಂಧಿಸಿದ ಹಲವಾರು ವಿಡಿಯೋಗಳು ಮತ್ತು ಫೋಟೋಗಳು ಒಂದೊಂದಾಗಿ ಹೊರಬರುತ್ತಿವೆ. ಈ ಘಟನೆಗೆ ಸಂಬಂಧಿಸಿದ ಕೆಲವು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ವಿಮಾನ ಅಪಘಾತಕ್ಕೀಡಾಗಿ ಬೆಂಕಿ ಹೊತ್ತಿಕೊಂಡು ಎಲ್ಲಾ ಪ್ರಯಾಣಿಕರು ಜೀವಂತವಾಗಿ ಸುಟ್ಟುಹೋದರೂ, ವಿಮಾನದಲ್ಲಿ ಪ್ರಯಾಣಿಕನೊಬ್ಬ ಹೊತ್ತೊಯ್ಯುತ್ತಿದ್ದ ಭಗವದ್ಗೀತೆ ಪುಸ್ತಕವು ಸುಟ್ಟುಹೋಗದೆ ಸುರಕ್ಷಿತವಾಗಿ ಪತ್ತೆಯಾಗಿದೆ.
ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ, ಸುಟ್ಟುಹೋಗದ ಭಗವದ್ಗೀತೆ ಅವಶೇಷಗಳ ಅಡಿಯಲ್ಲಿ ಕಂಡುಬಂದಿದೆ. ವಿಮಾನ ಅಪಘಾತದ ಸ್ಥಳದ ಸುತ್ತಮುತ್ತಲಿನ ಪ್ರದೇಶವು ಬೆಂಕಿಯಲ್ಲಿ ಆವೃತವಾಗಿದ್ದರೂ, ಭಗವದ್ಗೀತೆ ಪುಸ್ತಕವು ಸುಟ್ಟುಹೋಗದೆ ಉಳಿದಿದೆ. ಈ ಭೀಕರ ಅಪಘಾತದಲ್ಲೂ ಭಗವದ್ಗೀತೆ ಪುಸ್ತಕವು ಹಾಗೆಯೇ ಇರುವುದನ್ನು ನೋಡಿ ಎಲ್ಲರೂ ಆಶ್ಚರ್ಯಚಕಿತರಾದರು. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಮ್, ಟ್ವಿಟರ್ ಮತ್ತು ಫೇಸ್ಬುಕ್ನಲ್ಲಿ ನೆಟಿಜನ್ಗಳು ಹಂಚಿಕೊಂಡಿದ್ದಾರೆ. ವೈರಲ್ ಆಗಿರುವ ಈ ವಿಡಿಯೋದಲ್ಲಿ, ಒಬ್ಬ ವ್ಯಕ್ತಿ ಭಗವದ್ಗೀತೆ ಪುಸ್ತಕವನ್ನು ತೋರಿಸುತ್ತಾ ಪ್ರತಿ ಪುಟವನ್ನು ತಿರುಗಿಸುತ್ತಿದ್ದಾರೆ. ಪುಸ್ತಕ ಸುಟ್ಟುಹೋಗಿಲ್ಲ ಅಥವಾ ಹರಿದು ಹೋಗಿಲ್ಲ ಎಂದು ನೋಡಿ ಎಲ್ಲರೂ ಆಶ್ಚರ್ಯಚಕಿತರಾಗಿದ್ದಾರೆ.
ಡಿಜಿಟಲ್ ವಿಡಿಯೋ ರೆಕಾರ್ಡರ್ ಪತ್ತೆ
ಗುಜರಾತ್ನ ATS ಅಧಿಕಾರಿಗಳು ಅಹಮದಾಬಾದ್ನಲ್ಲಿ ಪತನಕ್ಕೀಡಾದ ವಿಮಾನದಿಂದ ಡಿಜಿಟಲ್ ವಿಡಿಯೋ ರೆಕಾರ್ಡರ್ (ಡಿವಿಆರ್) ವಶಪಡಿಸಿಕೊಂಡಿದ್ದಾರೆ. ರೆಕಾರ್ಡರ್ ಅವಶೇಷಗಳಲ್ಲಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಧಿವಿಜ್ಞಾನ ತಂಡಗಳು ಸ್ಥಳಕ್ಕೆ ತಲುಪಿವೆ ಎಂದು ಅವರು ಹೇಳಿದ್ದಾರೆ. ಡಿವಿಆರ್ಗಳು ವಿಮಾನದಲ್ಲಿ ನಿರಂತರವಾಗಿ ವೀಡಿಯೊಗಳನ್ನು ರೆಕಾರ್ಡ್ ಮಾಡುತ್ತವೆ. ಈ ಡೇಟಾವನ್ನು ಭದ್ರತಾ ಮೇಲ್ವಿಚಾರಣೆ ಮತ್ತು ಅಪಘಾತದ ತನಿಖೆಯಲ್ಲಿ ಬಳಸಬಹುದು. ಈ ವಿಮಾನ ಪತನಕ್ಕೆ ಕಾರಣದ ಬಗ್ಗೆ ಮಾಹಿತಿ ನೀಡುವಂತಹ ವಿಮಾನದಲ್ಲಿನ ಎಮರ್ಜೆನ್ಸಿ ಲೊಕೇಟರ್ ಟ್ರಾನ್ಸ್ ಮೀಟರ್ (ELT) ಸಹ ಪತ್ತೆಯಾಗಿದೆ. ಪ್ರತಿಯೊಂದು ವಿಮಾನದಲ್ಲಿ ನಿರ್ಣಾಯಕ ಸುರಕ್ಷತಾ ಸಾಧನವಾಗಿ ELT ಕಾರ್ಯ ನಿರ್ವಹಿಸುತ್ತದೆ.
ಮೃತರ ಸಂಖ್ಯೆ 270ಕ್ಕೆ ಏರಿಕೆ!
ಏರ್ ಇಂಡಿಯಾ ವಿಮಾನ ದುರಂತದಲ್ಲಿ 241 ಜನ ಪ್ರಯಾಣಿಕರು ಮತ್ತು ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಸೇರಿ 265 ಮಂದಿ ಸಾವನ್ನಪ್ಪಿದ್ದರು. ಇದೀಗ, ಈ ಭೀಕರ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 270ಕ್ಕೆ ಏರಿಕೆಯಾಗಿದೆ. ಬಿಜೆ ಮೆಡಿಕಲ್ ಕಾಲೇಜಿಗೆ ವಿಮಾನ ಅಪ್ಪಳಿಸಿದ್ದರಿಂದ 24 ವಿದ್ಯಾರ್ಥಿಗಳು ಮೃತಪಟ್ಟಿದ್ದರು. ಮತ್ತು 24 ಜನ ವಿದ್ಯಾರ್ಥಿಗಳು ಬಿಜೆಎಂಸಿ (BJMC) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರೆಸಿಡೆಂಟ್ ಡಾಕ್ಟರ್ಗಳ 6 ಮಂದಿ ಸಂಬಂಧಿಕರು ಈಗ ಮೃತಪಟ್ಟಿದ್ದಾರೆ.
ಅಪಘಾತ ಸಂಭವಿಸಿದ್ದು ಹೇಗೆ?
ಏರ್ ಇಂಡಿಯಾ ವಿಮಾನ ಲಂಡನ್ಗೆ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ. ಗುರುವಾರ ಮಧ್ಯಾಹ್ನ 1.30ರ ಸುಮಾರಿಗೆ ಅಹಮದಾಬಾದ್ ವಿಮಾನ ನಿಲ್ದಾಣದಿಂದ ವಿಮಾನ ಹೊರಟಿತು. ಆದರೆ, ಕೆಲವು ನಿಮಿಷಗಳ ಬಳಿಕ ವಿಮಾನವು ಇದ್ದಕ್ಕಿದ್ದಂತೆ ಸಮತೋಲನ ಕಳೆದುಕೊಂಡು ವೈದ್ಯಕೀಯ ಕಾಲೇಜಿನ ಹಾಸ್ಟೆಲ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆ ಎಷ್ಟಿತ್ತೆಂದರೆ ವಿಮಾನವು ತುಂಡು ತುಂಡಾಗಿ ಅದರಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿತು. ಅಪಘಾತದ ಸಮಯದಲ್ಲಿ ವಿಮಾನದಲ್ಲಿ ಒಟ್ಟು 242 ಪ್ರಯಾಣಿಕರಿದ್ದರು. ಅದರಲ್ಲಿ 241 ಜನರು ಸ್ಥಳದಲ್ಲೇ ಸಾವನ್ನಪ್ಪಿದರು. ಹಾಸ್ಟೆಲ್ ಬಳಿ ಇದ್ದ 24 ಜನರು ಸಹ ಪ್ರಾಣ ಕಳೆದುಕೊಂಡರು. ಆದರೆ, ಈ ಭೀಕರ ಅಪಘಾತದಲ್ಲಿ ಬದುಕುಳಿದ ಏಕೈಕ ವ್ಯಕ್ತಿ ರಮೇಶ್ ವಿಶ್ವಶ್ ಕುಮಾರ್. ಇವರು ಸೀಟ್ ಸಂಖ್ಯೆ 11A ನಲ್ಲಿ ಕುಳಿತಿದ್ದರು. ಸಮಯಕ್ಕೆ ಸರಿಯಾಗಿ ವಿಮಾನದಿಂದ ಹಾರಿ ಸಾವನ್ನು ಗೆದ್ದು ಬಂದಿದ್ದಾರೆ.



Click it and Unblock the Notifications