Latest Updates
-
ಪುಣೆಯಲ್ಲಿ ಮಳೆ ರಜೆ: ವರ್ಕ್ ಫ್ರಮ್ ಹೋಮ್ ಜೊತೆಗೆ ಮಕ್ಕಳನ್ನು ನಿಭಾಯಿಸಲು ಇಲ್ಲಿದೆ ಸ್ಮಾರ್ಟ್ ಟಿಪ್ಸ್ -
ಮುಂಬೈ ರೆಡ್ ಅಲರ್ಟ್: ಮಳೆಯಿಂದ ನಿಮ್ಮ ಬಾಡಿಗೆ ಮನೆ ಮತ್ತು ವಸ್ತುಗಳನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಮುಂಬೈ ರೆಡ್ ಅಲರ್ಟ್: ಮಳೆಗಾಲದ ಕಾಯಿಲೆಗಳಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಮುಂಬೈ ಮಳೆ ಅಬ್ಬರ: ವಿಮಾನ ನಿಲ್ದಾಣಕ್ಕೆ ಹೋಗುವ ಮುನ್ನ ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ಮುಂಬೈ ಮಳೆ ರಜೆ: ಮನೆಯಲ್ಲೇ ಕುಟುಂಬದೊಂದಿಗೆ ಫಿಟ್ ಆಗಿರಲು 12 ನಿಮಿಷದ ಸಿಂಪಲ್ ಯೋಗ! -
ಕ್ರಿಕೆಟ್ ಮ್ಯಾಚ್ ನೋಡುವಾಗ ದಂಪತಿಗಳ ನಡುವೆ ಜಗಳವೇ? ಶಾಂತಿ ಕಾಪಾಡಿಕೊಳ್ಳಲು ಇಲ್ಲಿದೆ ಸಮಾಧಾನದ ಸೂತ್ರ! -
ಕೇರಳದಲ್ಲಿ ಭಾರೀ ಮಳೆ: ನಿಮ್ಮ ಮನೆಯನ್ನು ತೇವಾಂಶ ಮತ್ತು ಬೂಸಿನಿಂದ ರಕ್ಷಿಸಲು ಇಲ್ಲಿವೆ ಸರಳ ಮನೆಮದ್ದುಗಳು! -
ಬೆಂಗಳೂರಿನಲ್ಲಿ ನೀರಿನ ಕಟ್ಟುನಿಟ್ಟಿನ ನಿಯಮ: ದಂಡ ತಪ್ಪಿಸಲು ನೀವು ಮಾಡಬೇಕಾದ ಬದಲಾವಣೆಗಳೇನು? -
ಪುಣೆ ರೈಲು ಪ್ರಯಾಣಿಕರೇ ಎಚ್ಚರ! 9 ಗಂಟೆಗಳ ಮೆಗಾ ಬ್ಲಾಕ್: ನಿಮ್ಮ ಪ್ರಯಾಣಕ್ಕೆ ಪರ್ಯಾಯ ಮಾರ್ಗಗಳಿವು -
ಕರಾವಳಿ ಮಳೆಯಲ್ಲಿ ಸಂಗಾತಿಯೊಂದಿಗೆ ಡೇಟ್ ನೈಟ್: ಕೇವಲ 500 ರೂಪಾಯಿಯಲ್ಲಿ ಮಳೆಗಾಲದ ಸಂಜೆಯನ್ನು ರೊಮ್ಯಾಂಟಿಕ್ ಆಗಿ ಕಳೆಯಿರಿ!
ಬಿಗ್ ಬಾಸ್ ವಿನ್ನರ್ಗೆ ಬಹುಮಾನ ಘೋಷಿಸಿದ್ದ ನಟ ಸುದೀಪ್; ಗಿಲ್ಲಿಗೆ ಸಿಕ್ಕ ಬಹುಮಾನದ ಮೊತ್ತ ಎಷ್ಟು?
ಬಿಗ್ ಬಾಸ್ ಸೀಸನ್ 12ರ ವಿನ್ನರ್ ಯಾರು ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ವೀಕ್ಷಕರ ನಿರೀಕ್ಷೆಯಂತೆ ಗಿಲ್ಲಿ ನಟ ವಿನ್ನರ್ ಆಗಿದ್ದಾರೆ. ಬಿಗ್ ಬಾಸ್ ಆರಂಭದಿಂದಲೂ ಗಿಲ್ಲಿ ನಟ ಈ ಬಾರಿಯ ಬಿಗ್ ಬಾಸ್ ವಿನ್ ಆಗಲಿದ್ದಾರೆ ಎಂಬ ಮಾತುಗಳು ಕೇಳುತ್ತಲೇ ಇದ್ದವು. ಅದರಂತೆ ಗಿಲ್ಲಿಗೆ ದಾಖಲೆ ಪ್ರಮಾಣದಲ್ಲಿ ಓಟ್ಗಳು ಬಂದಿದ್ದವು. ಬಳಿಕ ವೇದಿಕೆಯಲ್ಲಿ ಕಿಚ್ಚ ಸುದೀಪ್ ಗಿಲ್ಲಿ ಅವರನ್ನು ವಿಜೇತರೆಂದು ಘೋಷಿಸಿದರು. ಹಾಗೆ ರಕ್ಷಿತಾ ರನ್ನರ್ ಅಪ್ ಆಗಿದ್ದಾರೆ.
ಬಿಗ್ ಬಾಸ್ ಅಂದ್ರೆ ವ್ಯಕ್ತಿತ್ವದ ಆಟ. ಅಲ್ಲಿ ಪ್ರತಿಭೆಯೊಂದಿಗೆ ಮಾತು ಬಹಳ ಮುಖ್ಯ. ಗಿಲ್ಲಿ ನಟನ ಕಾಮಿಡಿ ಟೈಮಿಂಗ್, ಹಾಗೆ ಟಾಸ್ಕ್ ಸೇರಿ ಆತನ ಮಾತುಗಳಿಗೆ ವೀಕ್ಷಕರು ಮನಸೋತಿದ್ದರು. ಇಡೀ ಫ್ಯಾಮಿಲಿ ಕುಳಿತು ನೋಡುವಂತಹ ತಿಳಿ ಹಾಸ್ಯದ ಮೂಲಕ ಗಿಲ್ಲಿ ಹೆಸರು ಪಡೆದರು. ಹಾಗೆ ಎಲ್ಲರಿಗೂ ಆತನನ್ನೇ ಗೆಲ್ಲಿಸಬೇಕು ಎಂಬ ಹಠದ ಮೂಲಕ ಓಟ್ ಮಾಡಿರುವುದು ನೋಡಬಹುದು.

ಸದ್ಯ ಗಿಲ್ಲಿಗೆ 50 ಲಕ್ಷ ರೂಪಾಯಿ ನಗದು ರೂಪದ ಬಹುಮಾನ ಹಾಗೆ ಟ್ರೋಫಿ ಒಲಿದು ಬಂದಿದೆ. ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟನಿಗೆ ಪ್ರಾಯೋಜಕರ ಕಡೆಯಿಂದ 50 ಲಕ್ಷ ರೂಪಾಯಿ ಬಹುಮಾನ ಹಣ ಲಭಿಸಿದೆ. ಹಾಗೆ ಮಾರುತಿ ಸುಜುಕಿಯ ಹೊಸ ವಿಕ್ಟೋರಿಯಸ್ ಕಾರು ಸಹ ಬಹುಮಾನವಾಗಿ ನೀಡಲಾಗುತ್ತದೆ. ಇದರ ಜೊತೆಗೆ ಹಲವರು ಬಹುಮಾನ ಘೋಷಿಸಿದ್ದು ವಿಶೇಷವಾಗಿತ್ತು.
ಗಿಲ್ಲಿ ಪಡೆದ ಬಹುಮಾನದ ಮೊತ್ತ ಎಷ್ಟು?
ಗಿಲ್ಲಿಗೆ ಪ್ರಾಯೋಜಕರ ಕಡೆಯಿಂದ 50 ಲಕ್ಷ ರೂಪಾಯಿ ಸಿಕ್ಕಿದೆ. ಅದರಂತೆ ಗಿಲ್ಲಿ ಬಿಗ್ ಬಾಸ್ ವಿನ್ ಆದರೆ 20 ಲಕ್ಷ ರೂಪಾಯಿ ನೀಡುತ್ತೇನೆ ಎಂದು ಮೊದಲೇ ಜೆಡಿಎಸ್ ಎಂಎಲ್ಸಿ, ಸಾಯಿ ಗೋಲ್ಡ್ ಪ್ಯಾಲೆಸ್ನ ಮಾಲಿಕರಾದ ಶರವಣ ಅವರು ಘೋಷಿಸಿದ್ದರು. ಗಿಲ್ಲಿಗೆ ಪ್ರಾಯೋಜನಕರ ಬಹುಮಾನದ ಜೊತೆಗೆ ಈ ಹಣ ಕೂಡ ಸಿಗಲಿದೆ. ಹಾಗೆ ನಟ ಕಿಚ್ಚ ಸುದೀಪ್ ಕಡೆಯಿಂದಲೂ ಗಿಲ್ಲಿ ನಟನಿಗೆ ಬಹುಮಾನ ಹಣ ಲಭಿಸಿದೆ. ಕಿಚ್ಚ ಸುದೀಪ್ ಮನಗೆದ್ದಿರುವ ಗಿಲ್ಲಿಗೆ ತಮ್ಮ ವೈಯಕ್ತಿವಾಗಿ ಬಹುಮಾನ ನೀಡುವುದಾಗಿ ಘೋಷಿಸಿದರು. ನಾವು ಕೂಡ ಬಿಗ್ ಬಾಸ್ ವಿನ್ನರ್ ಗಿಲ್ಲಿಗೆ ಪ್ರೀತಿಯಿಂದ 10 ಲಕ್ಷ ರೂಪಾಯಿ ನೀಡುವುದಾಗಿ ಸುದೀಪ್ ವೇದಿಕೆಯಲ್ಲಿ ಘೋಷಿಸಿದರು.
ಹೀಗೆ ಒಟ್ಟಾರೆ ಗಿಲ್ಲಿ 80 ಲಕ್ಷ ರೂಪಾಯಿ ಬಹುಮಾನದ ರೂಪದಲ್ಲಿ ಕೈಸೇರಿದೆ. ಅದರ ಜೊತೆಗೆ ಹತ್ತು ಹಲವು ಕೂಪನ್ಗಳು, ಬಹುಮಾನಗಳು, ಸನ್ಮಾನಗಳು ಇನ್ನೂ ಬರುವ ನಿರೀಕ್ಷೆಗಳಿವೆ.
ಯಾರು ಈ ಗಿಲ್ಲಿ ನಟ?
ಗಿಲ್ಲಿ ನಟನ ನಿಜವಾದ ಹೆಸರು ನಟರಾಜ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಡದಪುರದ ರೈತ ಕುಟುಂಬದಿಂದ ಬಂದಿರುವ ವ್ಯಕ್ತಿ. ಐಟಿಐ ಕೋರ್ಸ್ ಮುಗಿಸಿ ಬೆಂಗಳೂರು ಕಡೆ ಪ್ರಯಾಣ ಮಾಡಿದ್ದ ಅವರು, ಆರಂಭದಲ್ಲಿ ಸಿನಿಮಾ ನಿರ್ದೇಶಕರ ಬಳಿ ಕೆಲಸಕ್ಕೆ ಅಲೆದಾಡಿದ್ದಾರೆ. ಇದಾದ ಬಳಿಕ ಅವರು ಜೀ ಕನ್ನಡದಲ್ಲಿ ರಿಯಾಲಿಟಿ ಶೋ ಒಂದರಲ್ಲಿ ಕಾಣಿಸಿಕೊಂಡ ಬಳಿಕ ಗಿಲ್ಲಿ ನಟ ಎಂಬುದಾಗಿ ಫೇಮಸ್ ಆದರು. ಹಾಗೆ ಇತ್ತೀಚಿಗೆ ನಟ ದರ್ಶನ್ ಅಭಿನಯದ ಡೆವಿಲ್ ಸಿನಿಮಾದಲ್ಲಿ ಚಿಕ್ಕ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ಇಷ್ಟೇ ಅಲ್ಲ ಗಿಲ್ಲಿ ಸುಮಾರು 5ಕ್ಕೂ ಹೆಚ್ಚು ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದಾರೆ. ಆದ್ರೆ ಯಾವುದೇ ಶೋನಲ್ಲಿ ವಿನ್ನರ್ ಆಗಿರಲಿಲ್ಲ. ನಂತರ ಬಿಗ್ ಬಾಸ್ ವೇದಿಕೆಯಲ್ಲೂ ಅವರು ಸೈ ಎನಿಸಿಕೊಂಡರು.



Click it and Unblock the Notifications