Latest Updates
-
ಬಿಸಿಲಿನ ಬೇಗೆಯಲ್ಲಿ ಮದುವೆ ಸಂಭ್ರಮ: ಅತಿಥಿಗಳ ಆರೋಗ್ಯ ಕಾಪಾಡಲು ಪ್ಲಾನ್ ಬದಲಾಯಿಸುವುದು ಅನಿವಾರ್ಯವೇ? -
ದೆಹಲಿ-ಎನ್ಸಿಆರ್ನಲ್ಲಿ ಧೂಳಿನ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಗಾರ್ಡನ್ ಮತ್ತು ಮನೆಯನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಹೀಟ್ವೇವ್ ಎಚ್ಚರಿಕೆ: ಬಿಸಿಲ ಬೇಗೆಯಿಂದ ಬಚಾವಾಗಲು ಈ ಸರಳ ಆಹಾರ ಕ್ರಮಗಳನ್ನು ಮರೆಯದಿರಿ -
ದೆಹಲಿ ಬಿಸಿಲು: ಸುಡುವ ತಾಪಮಾನದಲ್ಲೂ ಸ್ಟೈಲಿಶ್ ಆಗಿ ಕಾಣಲು ವೈರಲ್ ಆಗ್ತಿವೆ ಈ ಸಿಂಪಲ್ ಹ್ಯಾಕ್ಸ್! -
ಮಳೆಗಾಲದ ಬೆಳಗಿನ ವರ್ಕೌಟ್: ನಿಮ್ಮ ಪ್ಲಾನ್ ಉಲ್ಟಾಪಲ್ಟಾ ಆಗದಿರಲಿ, ಈ ಮುನ್ನೆಚ್ಚರಿಕೆ ಮರೆಯದಿರಿ! -
ಲಿವ್-ಇನ್ ಸಂಬಂಧ ಮುರಿದರೆ ಕ್ರಿಮಿನಲ್ ಕೇಸ್? ಸುಪ್ರೀಂ ಕೋರ್ಟ್ನಿಂದ ಬಂತು ಬಿಗ್ ಶಾಕ್! -
ಉರಿಬಿಸಿಲಿನ ತಾಪಕ್ಕೆ ಸುಸ್ತಾದ್ರಾ? ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಹೀಟ್ ವೇವ್ ಎಚ್ಚರಿಕೆ: ಬಿಸಿಲಿನ ಬೇಗೆಯಿಂದ ಬಚಾವಾಗಲು ಈ ಪಾನೀಯಗಳೇ ಮದ್ದು! -
ಅನುಷ್ಕಾ ಶರ್ಮಾ ಐಪಿಎಲ್ ಲುಕ್: ಸಿಂಪಲ್ ಡ್ರೆಸ್ನಲ್ಲೇ ಮ್ಯಾಜಿಕ್ ಮಾಡಿದ್ದು ಹೇಗೆ? -
ಬಿಸಿಗಾಳಿ ಎಚ್ಚರಿಕೆ: ಏಪ್ರಿಲ್ ಬಿಸಿಲಿನಿಂದ ಪಾರಾಗಲು ನಿಮ್ಮ ಫಿಟ್ನೆಸ್ ರೂಟೀನ್ ಬದಲಾಯಿಸುವುದು ಹೇಗೆ?
ಯಾರಲ್ಲಿ ಈ ಗುಣಗಳಲ್ಲಿರುತ್ತದೆಯೋ ಅವರು ಮಹಾಲಕ್ಷ್ಮೀಯ ಪ್ರತಿರೂಪವಂತೆ !
ನಮ್ಮ ಸನಾತನ ಹಿಂದೂ ಧರ್ಮದಲ್ಲಿ ಪುರುಷ ದೇವರಿಗೆ ಎಷ್ಟು ಪ್ರಾಧಾನ್ಯತೆ ನೀಡಲಾಗುತ್ತದೆಯೋ ಅದೇ ರೀತಿ ಶಕ್ತಿ ದೇವತೆ ಎಂದು ಕರೆಯಲ್ಪಡುವ ಮಹಿಳಾ ದೇವತೆಗಳಿಗೂ ಅಷ್ಟೇ ಪ್ರಾಮುಖ್ಯತೆ ನೀಡಲಾಗುತ್ತದೆ. ಸಾಧಾರಣವಾಗಿ ಎಲ್ಲಾ ಮಹಿಳೆಯರ ಗುಣ ಒಂದೇ ರೀತಿ ಇರೋದಿಲ್ಲ.
ಒಬ್ಬೊಬ್ಬರು ಒಂದೊಂದು ರೀತಿಯ ಗುಣಗಳನ್ನು ಹೊದಿರುತ್ತಾರೆ. ಆದರೆ ಯಾರಲ್ಲಿ ಈ ಗುಣಗಳಿರುತ್ತದೆಯೋ ಅವರನ್ನು ಮಹಾಲಕ್ಷ್ಮೀಯ ಪ್ರತಿರೂಪ ಎನ್ನಲಾಗುತ್ತದೆ. ಹಾಗಾದ್ರೆ ಮಹಿಳೆಯರಿಗೆ ಇರಬೇಕಾದ ಆ ಗುಣಗಳು ಯಾವುದು ಅನ್ನೋದನ್ನು ತಿಳಿಯೋಣ.

ಮಹಿಳೆಯರು ಇಲ್ಲದ ಈ ಪ್ರಪಂಚವನ್ನು ನಮ್ಮಿಂದ ಊಹಿಸಿಕೊಳ್ಳೋದಕ್ಕೂ ಸಾಧ್ಯವಿಲ್ಲ. ಹಿಂದೂ ಧರ್ಮದಲ್ಲಿ ಮಹಿಳೆಯರನ್ನೂ ಅತ್ಯಂತ ಪೂಜ್ಯ ಭಾವದಿಂದ ಕಾಣಲಾಗುತ್ತದೆ. ಅಷ್ಟೇ ಯಾಕೆ ಈ ಸಮಾಜದ ಅಭಿವೃದ್ಧಿಯಲ್ಲೂ ಮಹಿಳೆಯರ ಪಾತ್ರ ಬಹಳಷ್ಟಿದೆ. ಇಂದು ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲಿ ಮಹಾನ್ ಸಾಧನೆಗಳನ್ನು ಮಾಡಿ. ಪುರುಷರಿಗೂ ಸವಾಲ್ ಹಾಕುತ್ತಿದ್ದಾರೆ. ಇನ್ನೂ ಪುರುಷರಲ್ಲಿ ಇಲ್ಲದ ಕೆಲವೊಂದು ವಿಶೇಷ ಗುಣಗಳು ಮಹಿಳೆಯರಲ್ಲೂ ಇರುತ್ತದೆ. ಆ ಗುಣ ಮಾತೆ ಲಕ್ಷ್ಮೀಗಿದ್ದ ಗುಣವಾಗಿದೆ.
1. ಮಧುರವಾದ ಮಾತು
ಮಾತು ಮನೆ ಕೆಡಿಸಿತು ಅಂತಾರಲ್ಲ ಹಾಗೆ, ಮಹಿಳೆಯರ ಮಾತು ಯಾವಾಗಲೂ ಮೃದುವಾಗಿರಬೇಕು. ಪುರಾಣಗಳ ಪ್ರಕಾರ ಯಾವ ಮಹಿಳೆಯರು ಸುಮಧುರವಾಗಿ ಮಾತನಾಡುತ್ತಾರೋ ಅವರ ಆ ಮಾತು ಇಡೀ ಕುಟುಂಬಕ್ಕೆ ಶೋಭೆಯನ್ನುಂಟು ಮಾಡುತ್ತಂತೆ. ಮಹಿಳೆಯರು ಒಳ್ಳೆಯ ಮಾತುಗಳನ್ನು ಆಡಿದರೆ ಆಕೆಯ ಮಾತಿನಿಂದ ಇಡೀ ಕುಟುಂಬವನ್ನು ಒಟ್ಟು ಮಾಡುವ ಶಕ್ತಿಯಿದೆ. ಇಂತಹ ಮಹಿಳೆಯರು ತಾಯಿ ಹಾಗೂ ಆಕೆಯ ಗೌರವವನ್ನು ಹೆಚ್ಚಿಸುತ್ತಂತೆ. ಹೀಗಾಗಿ ಮಹಿಳೆಯರಿಗೆ ಮಾತು ಹಿಡಿತದಲ್ಲಿರಬೇಕು. ಯಾವಾಗ? ಏನು ಮಾತನಾಡುತ್ತಿದ್ದೀವಿ ಎಂಬ ಅರಿವಿರಬೇಕು.
2. ಶಿಕ್ಷಣ ಮತ್ತು ದೈರ್ಯ
ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರದಂತೆ ಅಂತಾರಲ್ಲ. ಅದೇ ರೀತಿ ಒರ್ವ ಮಹಿಳೆ ಶಿಕ್ಷಣವನ್ನು ಪಡೆದರೆ ಇಡೀ ಸಮಾಜವೇ ಶಿಕ್ಷಣ ಪಡೆದಂತೆ. ಇಂತಹ ಮಹಿಳೆ ಇಡೀ ಕುಟುಂಬಕ್ಕೆ ಪ್ರೇರಣದಾಯಕಳಾಗಿರುತ್ತಾಳೆ. ಇದಿಷ್ಟೇ ಅಲ್ಲದೇ, ಶಿಕ್ಷಣದಿಂದ ಆಕೆ ದೈರ್ಯವಂತಳಾಗುತ್ತಾಳೆ. ಮಹಿಳೆ ಯಾವಾಗ ದೈರ್ಯವಂತಳಾಗಿರುತ್ತಾಳೋ ಆಗ ಆಕೆ ಎಂತಹ ಸಮಸ್ಯೆಯನ್ನಾದರೂ ಎದುರಿಸುತ್ತಾಳೆ.
3. ಧರ್ಮದ ತತ್ವಗಳನ್ನು ಪಾಲಿಸುವವರು
ಪುರಾಣಗಳ ಪ್ರಕಾರ ಮಹಿಳೆ ಯಾವಾಗ ಮನೆಯಲ್ಲಿ ಪೂಜೆ-ಪುನಸ್ಕಾರಗಳನ್ನು ಭಕ್ತಿಯಿಂದ ಕೈಗೊಳ್ಳುತ್ತಾರೋ ಆ ಮನೆಯಲ್ಲಿ ಸಮೃದ್ಧಿ ತುಂಬಿರುತ್ತದೆ. ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಮನೆಯ ಗೃಹಿಣಿಯಾದವಳು ಪೂಜಾ-ಕೈಂಕರ್ಯಗಳನ್ನು ಕೈಗೊಳ್ಳಲೇಬೇಕು. ಸಂಪ್ರದಾಯಗಳನ್ನು ಸರಿಯಾಗಿ ಪಾಲಿಸಿದ ಮನೆಯಲ್ಲಿ ದುಷ್ಟ ಶಕ್ತಿಗಳು ಸುಳಿಯೋದಕ್ಕೆ ಅವಕಾಶವಿಲ್ಲ. ಯಾವ ಮಹಿಳೆಗೆ ಧರ್ಮದ ಬಗ್ಗೆ ಸಂಪೂರ್ಣ ಮಾಹಿತಿ ಇರುತ್ತದೆಯೋ ಆಗ ಆಕೆಗೆ ಒಳ್ಳೆಯದು ಹಾಗೂ ಕೆಟ್ಟದ್ದನ್ನು ಗುರುತಿಸುವ ಸಾಮರ್ಥ್ಯ ಹೊಂದಿರುತ್ತಾಳೆ. ಧರ್ಮದ ಬಗ್ಗೆ ತಿಳಿದಿರುವ ಮಹಿಳೆಯೊಬ್ಬಳು ತನ್ನ ಕುಟುಂಬವನ್ನು ಸನ್ಮಾರ್ಗದಲ್ಲೇ ನಡೆಸುತ್ತಾಳೆ. ಅವರನ್ನು ತಪ್ಪು ಹಾದಿ ತುಳಿಯೋದಕ್ಕೆ ಬಿಡೋದಿಲ್ಲ.
4. ಸಂಪತ್ತಿನ ಕ್ರೋಢೀಕರಣ
ಸಂಪತ್ತು ಕ್ರೋಢೀಕರಣವೆಂದರೆ ರಾಶಿ ರಾಶಿ ಹಣವನ್ನು ಕೂಡಿಡುವುದಲ್ಲ. ಕುಟುಂಬದ ಸಂಕಷ್ಟ ಕಾಲದಲ್ಲಿ ಇಂತಿಷ್ಟು ಹಣವನ್ನು ಮನೆಯ ಒಡತಿ ಗುಪ್ತವಾಗು ಕೂಡಿಡಬೇಕು. ಮಹಿಳೆಯಾದವಳಿಗೆ ಹಣವನ್ನು ಉಳಿತಾಯ ಮಾಡುವ ಕಲೆ ಗೊತ್ತಿರಲೇಬೇಕು. ನಿಮ್ಮ ಕೈಯಲ್ಲಿ ಎಷ್ಟೇ ಹಣವಿದ್ದರೂ ಕೂಡ ಅದನ್ನು ಯಾವ ರೀತಿ ಖರ್ಚು ಮಾಡಬೇಕು? ಅದ್ರಲ್ಲಿ ಎಷ್ಟು ಉಳಿತಾಯ ಮಾಡಬೇಕು ಅನ್ನೋದು ಮುಖ್ಯವಾಗಿ ಗೊತ್ತಿರಲೇಬೇಕು. ಅತಿಯಾಗಿ ಖರ್ಚು ಮಾಡುವ ಗುಣ ಮಹಿಳೆಯಲ್ಲಿದ್ದರೆ ಆ ಕುಟುಂಬಕ್ಕೆ ಒಳ್ಳೆಯದಲ್ಲ. ಇದು ಕುಟುಂಬಕ್ಕೆ ಶೋಭೆ ತರೋದಿಲ್ಲ.
ಮಹಿಳೆಯನ್ನು ಶಾಂತ ಸ್ವರೂಪಿ, ಕರುಣಾಮಯಿ ಎಂದು ಕರೆಯಲಾಗುತ್ತದೆ. ಈ ಗುಣಗಳ ಜೊತೆಗೆ ಮಹಿಳೆಯಲ್ಲಿ ಲಕ್ಷ್ಮೀಯಲ್ಲಿರುವ ಈ ನಾಲ್ಕು ಗುಣಗಳು ಇರಬೇಕು.



Click it and Unblock the Notifications