Latest Updates
-
ಮಧ್ಯಪ್ರದೇಶ UCC: ಲಿವ್-ಇನ್ ಜೋಡಿಗಳಿಗೆ ಕಡ್ಡಾಯ ನೋಂದಣಿ, ನಿಯಮ ಮೀರಿದರೆ ಕಾದಿದೆ ಸಂಕಷ್ಟ! -
ಹಾಲಿನಲ್ಲಿ ವಿಷಕಾರಿ ಕಲಬೆರಕೆ ಪತ್ತೆ: ನಿಮ್ಮ ಮನೆಯ ಹಾಲಿನ ಸುರಕ್ಷತೆ ಪರೀಕ್ಷಿಸುವುದು ಹೇಗೆ? -
ಬೆಂಗಳೂರಿನಲ್ಲಿ 12 ಗಂಟೆಗಳ ಕಾಲ ನೀರಿನ ಕಡಿತ: ನಾಳೆ ನೀರು ಉಳಿಸಲು ಈ ಟಿಪ್ಸ್ ಫಾಲೋ ಮಾಡಿ! -
ಮಳೆಗಾಲದಲ್ಲಿ ಜಿಮ್ಗೆ ಹೋಗಲು ಸಾಧ್ಯವಿಲ್ಲವೇ? ಮನೆಯಲ್ಲೇ ಫಿಟ್ ಆಗಿರಲು 8 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಮದುವೆಗೆ ಮುನ್ನ ಎಚ್ಚರ: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವರದಕ್ಷಿಣೆ ಮತ್ತು ಉಡುಗೊರೆಗಳ ನಡುವಿನ ವ್ಯತ್ಯಾಸವೇನು? -
ಬೆಂಗಳೂರಿನಲ್ಲಿ ಮಳೆ ಬಿಡುವು: ನಿಮ್ಮ ಬಾಲ್ಕನಿ ಗಾರ್ಡನ್ ಗಿಡಗಳನ್ನು ರಕ್ಷಿಸಲು ಈ ಸರಳ ಟಿಪ್ಸ್ ಪಾಲಿಸಿ -
ಟೊಮೆಟೊ, ಶುಂಠಿ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಉಳಿಸಲು ಇಲ್ಲಿದೆ ಸ್ಮಾರ್ಟ್ ಟಿಪ್ಸ್! -
2026ರಲ್ಲಿ ಚಿನ್ನದ ಆಭರಣ: ತೂಕದಲ್ಲಿ ಕಡಿಮೆ ಖರೀದಿ, ಖರ್ಚಿ ನಲ್ಲಿ ಹೆಚ್ಚು — ಕುಟುಂಬಗಳ ಖರೀ ದಿ ಹೇಗೆ ಬದಲಾಗುತ್ತಿದೆ? -
ನಥಿಂಗ್ ಫೋನ್ (4b) RCB ಎಡಿಷನ್ ಸೇಲ್ ಶುರು: ಫ್ಯಾನ್ಸ್ ಮಿಸ್ ಮಾಡ್ಬೇಡಿ, ಇಂದೇ ಖರೀದಿಸಿ! -
ಆಷಾಢ ಅಮಾವಾಸ್ಯೆ: ಉಪವಾಸದ ದಿನ ಸುಸ್ತಾಗದಂತೆ ಇರಲು ಈ 7 ನಿಮಿಷದ ವ್ಯಾಯಾಮ ಟ್ರೈ ಮಾಡಿ!
ಜೀವನದಲ್ಲಿ ಒಳ್ಳೆಯದಾಗಬೇಕೆಂದರೆ ಹೀಗೆ ಮಾಡಿ ಎನ್ನುತ್ತೆ ಗರುಡ ಪುರಾಣ
ವಿಷ್ಣುವು ಗರುಡನಿಗೆ ಹೇಳುವ ಕಥೆಯೇ ಗರುಡ ಪುರಾಣದಲ್ಲಿ ಉಲ್ಲೇಖವಾಗಿದೆ. ಒಬ್ಬ ಸಾಮಾನ್ಯ ಮನುಷ್ಯನ ಜೀವನಕ್ಕೆ ಬೇಕಾಗುವ ಎಲ್ಲಾ ಜೀವನ ಪಾಠಗಳು ಇದರಲ್ಲಿದೆ. ಅಷ್ಟೇ ಯಾಕೆ ಗರುಡ ಪುರಾಣದಲ್ಲಿ ಸ್ವರ್ಗವೊಂದನ್ನು ಬಿಟ್ಟು ನರಕ, ಪಿತೃಲೋಕ, ಆತ್ಮದ ಎರಡನೇ ದೇಹದ ಜೊತೆಗೆ ಮಾತಾನಾಡುವ ಸಂಭಾಷಣೆಯೂ ಇದರಲ್ಲಿದೆ. ಗರುಡ ಪುರಾಣದ ಉದ್ದೇಶ ಸಾಮಾನ್ಯ ಮನುಷ್ಯರನ್ನು ಖುಷಿಯಾಗಿರಿಸುವುದು ಅಷ್ಟೇ.
ಗರುಡ ಪುರಾಣವು ಪುರುಷ ಹಾಗೂ ಮಹಿಳೆಯರನ್ನು ಉದ್ದೇಶಿಸಿ ಅದೊಂದು ಮಾತನ್ನು ಹೇಳುತ್ತೆ. ಅಷ್ಟಕ್ಕು ಗರುಡ ಪುರಾಣದ ಪ್ರಕಾರ ಪುರುಷ ಅಥವಾ ಮಹಿಳೆಯರು ಮಾಡಬೇಕಾದ ಕೆಲಸಗಳು ಯಾವುದು ಅನ್ನೋದನ್ನ ನೋಡೋಣ.

1. ಪ್ರತಿಯೊಬ್ಬರಿಗೂ ಗೌರವ ನೀಡುವುದು
ಗರುಡ ಪುರಾಣದ ಪ್ರಕಾರ ಪುರುಷರಾಗಲಿ ಅಥವಾ ಮಹಿಳೆಯರಾಗಲಿ ಒಬ್ಬರಿಗೆ ಗೌರವ ಕೊಡುವ ಗುಣಗಳನ್ನು ಬೆಳೆಸಿಕೊಂಡಿರಬೇಕು. ಒಬ್ಬ ವ್ಯಕ್ತಿಗೆ ಗೌರವ ಕೊಡುವುದು ತುಂಬಾನೇ ಮುಖ್ಯ. ನಾವು ಆಡುವ ಮಾತು ನಮ್ಮ ತನವನ್ನು ತೋರಿಸುತ್ತದೆ. ಹೀಗಾಗಿ ಯಾರಿಗೂ ಅವಾಚ್ಯ ಶಬ್ಧಗಳಿಂದ ನಿಂದಿಸಬಾರದು. ಬೇರೆಯವರ ಮುಂದೆ ಅವರನ್ನು ಅವಮಾನಿಸಬಾರದು. ಒಂದು ವೇಳೆ ನಾವು ಹೀಗೆ ನಡೆದುಕೊಂಡರೆ ಒಂದಲ್ಲ ಒಂದು ದಿನ ನಾವು ಅಂತಹದ್ದೇ ಪರಿಸ್ಥಿತಿಯನ್ನು ಎದುರಿಸುತ್ತೇವೆ. ಕರ್ಮ ಅನ್ನೋದು ತಿರುಗಿಸಿ ಹೊಡೆಯದೇ ಬಿಡೋದಿಲ್ಲ ಎಂದು ಗರುಡ ಪುರಾಣದಲ್ಲಿ ಉಲ್ಲೇಖವಾಗಿದೆ.
2. ಬೇರೆಯವರ ಮನೆಯಲ್ಲಿ ಶಾಶ್ವತವಾಗಿ ವಾಸ ಮಾಡಬೇಡಿ
ಗರುಡ ಪುರಾಣದ ಪ್ರಕಾರ ಮಹಿಳೆಯರಾಗಲಿ-ಪುರುಷರಾಗಲಿ ತಮ್ಮ ತಮ್ಮ ಮನೆಯಲ್ಲಿ ವಾಸ್ತವ್ಯ ಹೂಡಬೇಕೇ ವಿನಹ ಬೇರೆಯವರ ಮನೆಯಲ್ಲಿ ನೆಲೆಸೋದು ಒಳ್ಳೆಯದಲ್ಲ. ಅದು ನಿಮ್ಮ ಗೌರವಕ್ಕೆ ಧಕ್ಕೆ ತರುತ್ತದೆ. ನೀವು ಬೇರೆಯವರಿಂದ ನಿಂದನೆಗೂ ಒಳಗಾಗಬೇಕಾಗುತ್ತದೆ. ಹೀಗಾಗಿ ಸಂಬಂಧಿಕರು, ಸ್ನೇಹಿತರ ಮನೆಗೆ ಹೋದರೂ ಕೂಡ ಅಲ್ಲಿ ಹೆಚ್ಚು ದಿನ ಉಳಿದುಕೊಳ್ಳಬೇಡಿ. ಇನ್ನೂ ಮಹಿಳೆಯರಿಗೆ ಬೇರೆಯವರ ಮನೆ ಸುರಕ್ಷಿತ ಸ್ಥಳವು ಅಲ್ಲ ಅನ್ನುತ್ತೆ ಗರುಡ ಪುರಾಣ.
3. ಗಂಡ-ಹೆಂಡತಿ ಜೊತೆಯಲ್ಲಿ ಬಾಳಬೇಕು
ಮೂರು ಗಂಟು ಬೆಸೆದು ಮದುವೆಯಾದ ಮೇಲೆ ಗಂಡ-ಗೆಂಡತಿ ಒಟ್ಟಾಗಿ ಬಾಳಬೇಕು. ಕೆಲವೊಂದು ಸಾರಿ ಕೆಲಸದ ವಿಚಾರಕ್ಕೆ ಗಂಡ ದೂರದ ಊರಿಗೆ ಹೋಗಬೇಕಾಗಿ ಬರುತ್ತದೆ. ಇಂತಹ ಸಂದರ್ಭದಲ್ಲಿ ಪರವಾಗಿಲ್ಲ. ಅದನ್ನು ಬಿಟ್ಟು ಬೇರೆ ಯಾವ ಕಾರಣಕ್ಕೂ ಗಂಡ-ಹೆಂಡತಿ ಬೇರೆ ಬೇರೆಯಾಗಿ ವಾಸಿಸಲೇ ಬಾರದು ಅಂತಾರೆ ಚಾಣಕ್ಯ. ದೂರ ದೂರ ಇದ್ದಾಗ ಮನಸ್ಥಾಪ ಹೆಚ್ಚಾಗುತ್ತದೆ. ಹೀಗಾಗಿ ದಂಪತಿಗಳು ಒಟ್ಟಾಗಿ ಇರಬೇಕು ಅನ್ನುತ್ತೆ ಗರುಡ ಪುರಾಣ.
4. ಚಾರಿತ್ರ್ಯ ಚೆನ್ನಾಗಿರಲಿ
ಗರುಡ ಪುರಾಣದ ಪ್ರಕಾರ ಗಂಡಾಗಲಿ-ಹೆಣ್ಣಾಗಲಿ ಇಬ್ಬರಿಗೂ ಚಾರಿತ್ರ್ಯ ತುಂಬಾನೇ ಮುಖ್ಯವಾಗುತ್ತದೆ. ಯಾವ ಕಾರಣಕ್ಕೂ ನಿಮ್ಮ ಚಾರಿತ್ರ್ಯ ಹಾಳು ಮಾಡಕೊಳ್ಳಬೇಡಿ. ಜೀವನದಲ್ಲಿ ಎಂತಹ ಪರಿಸ್ಥಿತಿ ಎದುರಾದ್ರು ಕೂಡ ರಾಜಿ ಮಾಡಿಕೊಳ್ಳಲೇಬೇಡಿ. ನಿಮ್ಮ ತನವನ್ನು ನೀವು ಕಾಪಾಡಿಕೊಂಡರೆ ಸಮಾಜದಲ್ಲಿ ತಲೆಎತ್ತಿ ನಡೆಯೋದಕ್ಕೆ ಸಾಧ್ಯವಾಗುತ್ತೆ.
ಗರುಡ ಪುರಾಣದ ಈ ತಪ್ಪುಗಳನ್ನು ಮಾಡಲೇಬೇಡಿ. ಒಂದು ವೇಳೆ ತಪ್ಪು ಮಾಡಿದ್ದೇ ಆದರೆ ನಿಮ್ಮ ಗೌರವ, ಮರ್ಯಾದೆಯನ್ನು ನಿಮ್ಮ ಕೈಯಾರೆ ನೀವೆ ಹಾಳು ಮಾಡಿಕೊಂಡಂತೆ.



Click it and Unblock the Notifications


