Latest Updates
-
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ! -
ಸಣ್ಣ ಬಾಲ್ಕನಿಯಲ್ಲಿ ಓಣಂ ಸಂಭ್ರಮ: ಬಜೆಟ್ನಲ್ಲಿ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್ -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ಕೊನೆಯ ದಿನದ ಸಂಭ್ರಮ ಮತ್ತು ಮನೆಯನ್ನು ಸಿಂಗರಿಸುವ ಸುಲಭ ಟಿಪ್ಸ್
ರಾಮನ ವಿರುದ್ಧ ಕಲಿಯುಗದಲ್ಲಿ ದಾಖಲಾಗಿತ್ತು ಕೇಸ್..! ಶಿಕ್ಷೆ ಆಗಿತ್ತಾ.? ಮುಂದೆನಾಯ್ತು..?
ಮರ್ಯಾದಾ ಪುರುಷ ಶ್ರೀರಾಮ ಅಯೋಧ್ಯೆಯನ್ನಾಳಿದ ಮಹಾಪುರುಷ. ಇದ್ದರೆ ರಾಮನಂತಹ ಆದರ್ಶ ಪುರುಷ ಇರಬೇಕು, ಬಾಳಿದರ ರಾಮನಂತೆ ಬಾಳಬೇಕು ಎಂಬ ಮಾತಿದೆ. ಏಕೆಂದರೆ ಆತ ಮಾತಿಗೆ ತಪ್ಪಿ ಎಂದು ನಡೆದುಕೊಂಡಿಲ್ಲವಂತೆ. ಅಲ್ಲದೆ ಮಹಿಳೆಯರು ಸಹ ಸಿಕ್ಕತೆ ರಾಮನಂತ ಪತಿ ಸಿಗಬೇಕು ಎಂದು ಆಶಿಸುತ್ತಾರೆ. ರಾಮನಂತ ಮಕ್ಕಳ ಪಡೆಯಲು ಪೋಷಕರು ಇಚ್ಛಿಸುತ್ತಾರೆ.
ಇಷ್ಟೆಲ್ಲಾ ಗುಣಗಳ ಹೊಂದಿದ್ದ ರಾಮ ತಾನು ಮಾಡದ ತಪ್ಪಿಗಾಗಿ ವನವಾಸ ಅನುಭವಿಸಿದ್ದು, ಸೀತೆ ಅಪಹರಣವಾಗಿದ್ದು ಈ ಎಲ್ಲಾ ರಾಮಾಯಣದ ಕಥೆಗಳು ನಿಮಗೆ ಗೊತ್ತಿದೆ. ಆದರೆ ಕಲಿಯುಗದಲ್ಲಿ ರಾಮನ ವಿರುದ್ಧ ದಾಖಲಾಗಿದ್ದ ಈ ಪ್ರಕರಣದ ಬಗ್ಗೆ ಗೊತ್ತಾ? ಹೌದು ನಿಮಗೆ ಅಚ್ಚರಿಯಾಗಬಹುದು, ರಾಮನ ವಿರುದ್ಧ ಕಲಿಯುಗದಲ್ಲಿ ಕೇಸ್ವೊಂದು ದಾಖಲಾಗಿತ್ತು.

ರಾಮನ ವಿರುದ್ಧವೇ ಕೇಸ್ ಹಾಕಿದ್ದು ಯಾರು?, ಪ್ರಕರಣ ದಾಖಲಿಸುವಂತಹ ತಪ್ಪು ಶ್ರೀರಾಮ ಏನು ಮಾಡಿದ್ದ?, ಕೇಸ್ ದಾಖಲಾದ ಬಳಿಕ ಮುಂದೇನಾಯಿತು? ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿ ಉತ್ತರವಿದೆ ನೋಡಿ.
ಶ್ರೀರಾಮ ಮಹಿಳೆಯನ್ನು ಆತ ಕ್ರೂರವಾಗಿ ನಡೆಸಿಕೊಂಡಿದ್ದ ಎಂದು ವಕೀಲರೊಬ್ಬರು ಕೋರ್ಟ್ ಮೆಟ್ಟಿಲೇರಿ ದೂರು ದಾಖಲಿಸಿದ್ದರು. 2016ರಲ್ಲಿ ಉತ್ತರ ಬಿಹಾರದ ಸೀತಾಮರ್ಹಿಯ ನ್ಯಾಯಾಲಯದಲ್ಲಿ ಮ್ಯಾಜಿಸ್ಟ್ರೇಟ್ ಎದುರು ಅವರು ದೂರು ದಾಖಲಿಸಿದ್ದರು.
ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ (ಸಿಜೆಎಂ) ನ್ಯಾಯಾಲಯದಲ್ಲಿ ದಾಖಲಾದ 'ಪ್ರಕರಣ'ವು ಭಗವಾನ್ ರಾಮನ ವಿರುದ್ಧ ಮಾಡಬೇಕೆಂದು ಕೋರಲಾಗಿದೆ, ಮಹಿಳೆಯರನ್ನು ನಡೆಸಿಕೊಳ್ಳುವಲ್ಲಿ ರಾಮ ಎಡುವಿದ್ದಾನೆ ಎಂದು ದೂರಲಾಗಿತ್ತು. ದೂರುದಾರ ಠಾಕೂರ್ ಚಂದನ್ ಕುಮಾರ್ ಸಿಂಗ್ ಅವರು ರಾಮ ಸೀತಾದೇವಿಯನ್ನು ಯಾವುದೇ ಸೂಕ್ತ ಸಮರ್ಥನೆ ಇಲ್ಲದೆ ಕಾಡಿನ ವನವಾಸ ಜೀವನಕ್ಕೆ ಕಳುಹಿಸಿದ್ದ ಎಂದು ಆರೋಪಿಸಿದ್ದರು
ಸೀತಾದೇವಿಯ ಯಾವುದೇ ತಪ್ಪಿಲ್ಲದಿದ್ದರೂ ಆಕೆಯ ವಿರುದ್ಧ ಆರೋಪ ಹೊರಿಸಿ ವನವಾಸಕ್ಕೆ ಕಳುಹಿಸಿದ್ದರು. ಇದು ರಾಜ ರಾಮನಿಂದ ಬಂದ ಕಪಟ ಆದೇಶವಾಗಿತ್ತು. ಒಬ್ಬ ಪುರುಷನು ತನ್ನ ಹೆಂಡತಿಯನ್ನು ಕಾಡಿನಲ್ಲಿ ವಾಸಿಸಲು ಕಳುಹಿಸುವಷ್ಟು ಕ್ರೂರನಾಗುವುದು ಹೇಗೆ? ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ಸಿಂಗ್ ಇದನ್ನು ರಾಮನು ತನ್ನ ಹೆಂಡತಿಯ ಮೇಲೆ ಎಸಗಿದ ನಾನ್-ಕಾಗ್ನಿಸೇಬಲ್ ಅಪರಾಧದ ನಿದರ್ಶನವೆಂದು ಉಲ್ಲೇಖಿಸಿದ್ದರು, ಸಾಯುವವರೆಗೂ ತನ್ನ ಪತಿಯೊಂದಿಗೆ ಬದುಕುವುದಾಗಿ ಸೀತೆ ಅಗ್ನಿ ಪ್ರವೇಶ ಮಾಡಿದ ನಡುವೆಯೂ ರಾಮ ಈ ರೀತಿ ಮಾಡಿದ್ದಾನೆ ಎಂದು ಆರೋಪಿಸಿದ್ದರು.
"ಕಾಡಿನಲ್ಲಿ ಸರೀಸೃಪಗಳು ಮತ್ತು ಸಸ್ತನಿಗಳು ಸೇರಿದಂತೆ ಕಾಡು ಪ್ರಾಣಿಗಳ ನಡುವೆ ಮಹಿಳೆ ಒಂಟಿಯಾಗಿ ಹೇಗೆ ಬದುಕಬಹುದು ಎಂದು ರಾಮನು ಒಂದು ಕ್ಷಣವೂ ಯೋಚಿಸಲಿಲ್ಲ" ಎಂದು ಸಿಂಗ್ ಹೇಳಿದರು. ಬಳಿಕ ಈ ಪ್ರಕರಣದ ವಿಚಾರಣೆ ನಡೆಸಿದ್ದ ಪೀಠ, ವಕೀಲರ ವಾದವನ್ನು ನಿರಾಕರಿಸಿದ್ದರು. ಅಲ್ಲದೆ ಅರ್ಜಿಯನ್ನು ತಿರಸ್ಕರಿಸಿ ಪ್ರಕರಣ ಇತ್ಯರ್ಥ ಮಾಡಿದ್ದರು.
ಕ್ಷಮೆ ಕೋರಿದ್ದ ವಕೀಲ
ರಾಮನ ವಿರುದ್ಧ ಪ್ರಕರಣ ದಾಖಲಿಸಿದ್ದಾಗಿನಿಂದ ಭಾರೀ ಚರ್ಚೆಗೆ ಒಳಗಾಗಿದ್ದ ವಕೀಲ ಬಳಿಕ ಇದು ಯಾರೊಬ್ಬರ ಧಾರ್ಮಿಕ ಭಾವನೆಗೆ ಧಕ್ಕೆ ತರುವುದು ಅವರ ಉದ್ದೇಶವಲ್ಲ ಎಂದಿದ್ದರು. ನಾನು ಪ್ರಾಮಾಣಿಕವಾಗಿ ರಾಮನ ನಡುವಳಿಕೆಯನ್ನು ಜನರಿಗೆ ತಲುಪಿಸಬೇಕು ಎಂಬ ಉದ್ದೇಶದಿಂದ ದೂರು ನೀಡಿದ್ದೆ, ನಾನು ಸಹ ರಾಮನ ಭಕ್ತನಾಗಿದ್ದೇನೆ ಎಂದಿದ್ದರು. ಅವರು ದೂರು ನೀಡಿದ ಬಳಿಕ ವಕೀಲರ ವಿರುದ್ಧ ಪ್ರತಿಭಟನೆ ನಡೆದಿದ್ದವು.



Click it and Unblock the Notifications