Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸಂಭಾವ್ಯ ರೈಲು ದುರಂತ ತಪ್ಪಿಸಿದ 12 ವರ್ಷದ ಬಾಲಕ..! ಹೇಗೆ ಗೊತ್ತಾ?
ರೈಲು ಅಪಘಾತಗಳು ಎಷ್ಟು ಭೀಕರವಾಗಿರುತ್ತವೆ ಎಂಬುದು ನಮಗೆಲ್ಲಾ ತಿಳಿದ ವಿಚಾರ. ಒಮ್ಮೆ ಈ ರೈಲು ಅಪಘಾತ ಸಂಭವಿಸಿದರೆ ನೂರಾರು ಮಂದಿ ಪ್ರಾಣ ಕಳೆದುಕೊಳ್ಳುತ್ತಾರೆ. ಇನ್ನು ಹಲವಾರು ಮಂದಿ ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾಗಬೇಕಾಗುತ್ತದೆ. ಇಂತಹ ಹಲವು ಅಪಘಾತಗಳು ನಡೆದಿವೆ ಕೂಡ.
ರೈಲು ಅಪಘಾತ ಸಂಭವಿಸಲು ಪ್ರಮುಖವಾಗಿ ರೈಲು ಹಳಿ ತಪ್ಪುವುದು, ಸಿಗ್ನಲಿಂಗ್ ಸಮಸ್ಯೆ, ತಾಂತ್ರಿಕ ಸಮಸ್ಯೆ ಹಾಗೂ ಕೆಲವು ಬಾರಿ ಮಾನವ ನಿರ್ಮಿತ ಸಮಸ್ಯೆಯೂ ಆಗಿರಲಿದೆ. ಹಳಿಯಲ್ಲಿ ಏನಾದರು ಸಮಸ್ಯೆ ಎದುರಾಗಿ ರೈಲು ಅಪಘಾತ ಸಂಭವಿಸುವುದೇ ಹೆಚ್ಚು. ಈಗ ಇಲ್ಲೊಂದು ಕಡೆ ಇದೇ ರೀತಿ ರೈಲ್ವೆ ಹಳಿ ಸಮಸ್ಯೆಯಿಂದ ಸಂಭವಿಸಬಹುದಾದ ಬಹುದೊಡ್ಡ ರೈಲು ಅಪಘಾತ ನಿಂತಿದೆ.

ಈ ರೈಲು ಅಪಘಾತವನ್ನು 12 ವರ್ಷದ ಬಾಲಕನೊಬ್ಬ ತಡೆದಿದ್ದಾನೆ. ಹೌದು ಬಿಹಾರದಲ್ಲಿ ಇತ್ತೀಚಿಗೆ 12 ವರ್ಷದ ಬಾಲಕ ಸಂಭಾವ್ಯ ರೈಲು ಅಪಘಾತ ತಡದು ಸುದ್ದಿಯಾಗಿದ್ದಾನೆ. ಮುಜಾಫರ್ಪುರ ರೈಲು ಮಾರ್ಗದ ಭೋಲಾ ಟಾಕೀಸ್ ಗುಮ್ಟಿ ಬಳಿ ರೈಲ್ವೆ ಹಳಿಯಲ್ಲಿ ಉಂಟಾದ ಸಮಸ್ಯೆ ಗುರುತಿಸಿದ 12 ವರ್ಷದ ಮೊಹಮ್ಮದ್ ಶಹಬಾಜ್ ರೈಲು ತಡೆದು ಮುಂದಾಗಬಹುದಾದ ಸಂಭಾವ್ಯ ದುರಂತ ತಡೆದಿದ್ದಾನೆ.
ಶಹಬಾಜ್ ಮನೆಯ ಬಳಿ ನಡೆದುಕೊಂಡು ಹೋಗುವಾಗ ಅಲ್ಲಿಯೇ ಹಾದು ಹೋಗುವ ರೈಲು ಕಂಬಿ ನೋಡಿ ಅದರಲ್ಲಿ ಬಿರುಕು ಬಂದಿರುವುದನ್ನು ಆತ ಗಮನಿಸಿದ್ದಾನೆ. ಅದೇ ಮಾರ್ಗದಲ್ಲಿ ಹೌರಾ-ಕೊತ್ಗೊಡಮ್ ಎಕ್ಸ್ಪ್ರೆಸ್ ಬರುತ್ತಿತ್ತು. ಈ ವೇಳೆ ಸಮಯ ಪ್ರಜ್ಞೆ ಮೆರೆದ ಆತ ತನ್ನ ಬಳಿ ಇದ್ದ ಕೆಂಪು ಟವೆಲ್ ಅನ್ನು ರೈಲಿನ ಮುಂದೆ ಪ್ರದರ್ಶಿಸಿದ್ದಾನೆ.
ಈ ಸೂಚನೆ ಗಮನಿಸಿದ ಲೋಕೋ ಪೈಲೆಟ್ ತುರ್ತು ಬ್ರೇಕ್ ಹಾಕಿ ರೈಲನ್ನು ನಿಲ್ಲುವಂತೆ ಮಾಡಿದ್ದಾನೆ. ಆದರೆ ಈ ವೇಳೆ ಚಾಲಕ ಹಾಗೂ ಒಳಗಿದ್ದ ಪ್ರಯಾಣಿಕರಿಗೆ ಏನು ನಡೆಯುತ್ತಿದೆ ಎಂದು ತಿಳಿಯಲಿಲ್ಲ. ಆದರೆ ಲೋಕೋ ಪೈಲಟ್ ಕೆಳಗಿಳಿದು ಬಂದು ಬಾಲಕನ ಪ್ರಶ್ನಿಸಿದಾಗ ಆತ ಕಂಬಿಗಳಲ್ಲಿ ಬಿರುಕು ಮೂಡಿರುವುದನ್ನು ತೋರಿಸಿದ್ದಾನೆ.
ಬಳಿಕ ಲೋಕೋ ಪೈಲಟ್ ರೈಲ್ವೆ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದಾನೆ. ಈ ವೇಳೆ ಆ ಮಾರ್ಗದಲ್ಲಿ ಬರುತ್ತಿದ್ದ ಎಲ್ಲಾ ರೈಲುಗಳ ತಡೆದು ಹಳಿಯಲ್ಲಿ ಉಂಟಾಗಿದ್ದ ಸಮಸ್ಯೆ ಬಗೆಹರಿಸಲು ಮುಂದಾಗಲಾಗಿದೆ. 12 ವರ್ಷದ ಈ ಬಾಲಕ ತೋರಿಸ ಜಾಣ್ಮೆ ಹಾಗೂ ಧೈರ್ಯದ ಕಾರಣದಿಂದ 1500ಕ್ಕೂ ಹೆಚ್ಚು ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಆತನ ಕಾರ್ಯಕ್ಕೆ ಭಾರೀ ಮೆಚ್ಚುಗೆ ಕೇಳಿಬಂದಿತ್ತು.
ಘಟನೆಯ ನಂತರ, ಶಹಬಾಜ್ ಅವರ ಧೈರ್ಯಕ್ಕಾಗಿ ಎಲ್ಲೆಡೆಯಿಂದ ಮೆಚ್ಚುಗೆ ಕೇಳಿಬಂದಿದೆ. ಅಲ್ಲದೆ ಬಾಲಕನ ಕಾರ್ಯ ಮೆಚ್ಚಿ ಡಿಆರ್ಎಂ ಅಭಿನಂದಿಸಿದ್ದಾರೆ. ಜೊತೆಗೆ ರಾಷ್ಟ್ರೀಯ ಬಾಲ ಪುರಸ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಇದರ ಜೊತೆ ಆತನ ಕಾರ್ಯಕ್ಕೆ ಭಾರೀ ಮೆಚ್ಚುಗೆ ಕೇಳಿಬಂದಿದ್ದು, ಇಂತಹ ಮಕ್ಕಳ ಅಗತ್ಯವಾಗಿ ಇಂದಿನ ದಿನಕ್ಕೆ ಪ್ರಸ್ತುತವಾಗಿ ಬೇಕಾಗಿದೆ. ಇಂತಹ ಕೆಲಸ ಮಾಡಿದಾಗ ಅವರನ್ನು ಹುರಿದುಂಬಿಸುವ ಕಾರ್ಯವಾಗಬೇಕಿದೆ ಎಂದು ಜನ ಅಭಿಪ್ರಾಯ ಹೊರಹಾಕಿದ್ದಾರೆ. ಸದ್ಯ ಆತನಿಗೆ ಹಲವು ಸಂಸ್ಥೆಗಳು, ಇಲಾಖೆಗಳ ವತಿಯಿಂದ ಸನ್ಮಾನ, ಗೌರವ ನೀಡಲಾಗಿದೆ.
ಇತ್ತ ಈ ರೈಲಿನಲ್ಲಿ ಸುಮಾರು 1500ಕ್ಕೂ ಅಧಿಕ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಅಲ್ಲದೆ ಈಗ ಈ ಮಾರ್ಗದ ರೈಲ್ವೆ ಹಳಿ ದುರಸ್ಥಿ ಕಾರ್ಯ ಸಂಪೂರ್ಣವಾಗಿದ್ದು, ರೈಲು ಸಂಚಾರ ಎಂದಿನಂತಾಗಿದೆ. ಬಾಲಕನ ಸಮಯ ಪ್ರಜ್ಞೆಯಿಂದಾಗಿ ಒಂದಿಷ್ಟು ಜೀವವಂತು ಉಳಿದಿದೆ. ಅದೇ ರೀತಿ ರೈಲ್ವೆ ಸಿಬ್ಬಂದಿ ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆಯೂ ಇದೆ



Click it and Unblock the Notifications