Latest Updates
-
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ
600 ಗಂಟೆಗಳ ಕಠಿಣ ಅಭ್ಯಾಸ, ಹಗಲು ರಾತ್ರಿ ತಯಾರಿ..! ಶಿಸ್ತಿನ ಸಿಪಾಯಿಗಳ ಕುರಿತ ಅಚ್ಚರಿ ವಿಚಾರಗಳಿವು
ಪ್ರತಿ ವರ್ಷ ಗಣರಾಜ್ಯೋತ್ಸವವನ್ನು ದೇಶದಾದ್ಯಂತ ವಿಜೃಂಭಣೆಯಿಂದ ಮತ್ತು ವೈಭವದಿಂದ ಆಚರಿಸಲಾಗುತ್ತದೆ. 1950ರಲ್ಲಿ ಈ ದಿನದಂದು ಭಾರತದ ಸಂವಿಧಾನವನ್ನು ಅಂಗೀಕರಿಸಲಾಗಿತ್ತು. ಭಾರತದ ಸಂವಿಧಾನವು ದೇಶದ ಪ್ರತಿಯೊಬ್ಬ ಪ್ರಜೆಯೂ ಅನುಸರಿಸುವ ಪವಿತ್ರ ಗ್ರಂಥವಾಗಿದೆ. ಡಾ ಬಿಆರ್ ಅಂಬೇಡ್ಕರ್ ನೇತೃತ್ವದ ಕರಡು ಸಮಿತಿಯು ಇದನ್ನು ರಚಿಸಿದೆ. ಭಾರತದ ಸಂವಿಧಾನವು ದೇಶವನ್ನು ಗಣರಾಜ್ಯ ಮತ್ತು ಪ್ರಜಾಪ್ರಭುತ್ವ ಎಂದು ಘೋಷಿಸಿತು.
ಪ್ರತಿ ವರ್ಷ, ಗಣರಾಜ್ಯೋತ್ಸವವು ಭಾರತದ ಸಂವಿಧಾನದಿಂದ ನಾವು ಅನುಸರಿಸಬೇಕಾದ ಮೌಲ್ಯಗಳು ಮತ್ತು ನೀತಿಗಳ ಜ್ಞಾಪನೆಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಈ ಸ್ವಾತಂತ್ರ್ಯಕ್ಕೆ ನಾವು ಋಣಿಯಾಗಿರುವ ದೇಶದ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುತ್ತೇವೆ. ಗಣರಾಜ್ಯೋತ್ಸವವನ್ನು ನವದೆಹಲಿಯ ಕರ್ತವ್ಯ ಪಥದಲ್ಲಿ ಮೆರವಣಿಗೆಯೊಂದಿಗೆ ಆಚರಿಸಲಾಗುತ್ತದೆ. ಹೀಗಾಗಿ ಈ ಪರೇಡ್ ಕುರಿತು ನಾವು ತಿಳಿದುಕೊಳ್ಳಬೇಕಾದ ಅಚ್ಚರಿಯ ವಿಚಾರಗಳು ಇಲ್ಲಿವೆ.

ಪ್ರತಿ ವರ್ಷ, ಗಣರಾಜ್ಯೋತ್ಸವದ ಪರೇಡ್ ಅನ್ನು ವೀಕ್ಷಿಸಲು ಪ್ರಧಾನ ಮಂತ್ರಿ ಅಥವಾ ರಾಷ್ಟ್ರಪತಿ ಅಥವಾ ರಾಷ್ಟ್ರದ ಆಡಳಿತಗಾರನನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗುತ್ತದೆ. ಈ ವರ್ಷ, ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸಿಸಿ ಅವರು ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿದ್ದಾರೆ.
ಆರ್-ಡೇ ಪರೇಡ್ನ ಸಿದ್ಧತೆಗಳು ಒಂದು ವರ್ಷದ ಮೊದಲು ಜುಲೈನಲ್ಲಿ ಪ್ರಾರಂಭವಾಗುತ್ತದೆ. ಭಾಗವಹಿಸುವವರು ತಮ್ಮ ಭಾಗವಹಿಸುವಿಕೆಯ ಬಗ್ಗೆ ಔಪಚಾರಿಕವಾಗಿ ತಿಳಿಸಿರುತ್ತಾರೆ.
ನಮಗೆಲ್ಲರಿಗೂ ತಿಳಿದಿರುವಂತೆ, ಪ್ರತಿ ವರ್ಷ ಜನವರಿ 26 ರಂದು ಪರೇಡ್ನ ಆಯೋಜನೆಯನ್ನು ನವದೆಹಲಿಯಲ್ಲಿರುವ ರಾಜ್ಪಥ್ನಲ್ಲಿ ಮಾಡಲಾಗುತ್ತದೆ, ಆದರೆ 1950 ರಿಂದ 1954 ರವರೆಗೆ ರಾಜ್ಪಥ್ ಮೆರವಣಿಗೆಗೆ ಬಳಕೆಯಾಗಿರಲಿಲ್ಲ. ಈ ವೇಳೆ ಮೆರವಣಿಗೆಗಳು ಕ್ರಮವಾಗಿ ಇರ್ವಿನ್ ಸ್ಟೇಡಿಯಂ (ಈಗ ರಾಷ್ಟ್ರೀಯ ಕ್ರೀಡಾಂಗಣ), ಕಿಂಗ್ಸ್ವೇ, ರೆಡ್ ಫೋರ್ಟ್ ಮತ್ತು ರಾಮಲೀಲಾ ಮೈದಾನದಲ್ಲಿ ನಡೆಸಲಾಗುತ್ತಿತ್ತು.
1955ರ ಜನವರಿ 26 ರಂದು ರಾಜ್ಪಥ್ ಮೆರವಣಿಗೆಗೆ ಶಾಶ್ವತ ಸ್ಥಳವಾಯಿತು. ಆ ಸಮಯದಲ್ಲಿ ರಾಜ್ಪಥ್ ಅನ್ನು 'ಕಿಂಗ್ಸ್ವೇ' ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು, ಇದನ್ನು ಈಗ ಕರ್ತವ್ಯಪಥ್ ಎಂದು ಕರೆಯಲಾಗುತ್ತದೆ.
ಪಾಕ್ನಿಂದಲೂ ಬಂದಿದ್ರು ಅತಿಥಿ
ಪ್ರತಿ ವರ್ಷ, ಪ್ರಧಾನಿ/ರಾಷ್ಟ್ರಪತಿ/ ಅಥವಾ ಯಾವುದೇ ರಾಷ್ಟ್ರದ ಆಡಳಿತಗಾರರನ್ನು ಪರೇಡ್ಗೆ ಅತಿಥಿಯಾಗಿ ಆಹ್ವಾನಿಸಲಾಗುತ್ತದೆ. ಮೊದಲ ಪರೇಡ್ ಅನ್ನು 26 ಜನವರಿ 1950 ರಂದು ನಡೆಸಲಾಯಿತು, ಇಂಡೋನೇಷ್ಯಾದ ಅಧ್ಯಕ್ಷ ಡಾ. ಸುಕರ್ನೊ ಅವರನ್ನು ಅತಿಥಿಯಾಗಿ ಆಹ್ವಾನಿಸಲಾಗಿತ್ತು. 1955 ರಲ್ಲಿ ರಾಜ್ಪಥ್ನಲ್ಲಿ ಮೊದಲ ಪರೇಡ್ ನಡೆದಾಗ, ಪಾಕಿಸ್ತಾನದ ಗವರ್ನರ್ ಜನರಲ್ ಮಲಿಕ್ ಗುಲಾಮ್ ಮೊಹಮ್ಮದ್ ಅವರನ್ನು ಆಹ್ವಾನಿಸಲಾಗಿತ್ತು.
ಜನವರಿ 26 ರಂದು ಪರೇಡ್ ಕಾರ್ಯಕ್ರಮವು ಅಧ್ಯಕ್ಷರ ಆಗಮನದೊಂದಿಗೆ ಪ್ರಾರಂಭವಾಗುತ್ತದೆ. ಮೊದಲನೆಯದಾಗಿ, ರಾಷ್ಟ್ರಪತಿಗಳ ಅಶ್ವದಳದ ಅಂಗರಕ್ಷಕರು ರಾಷ್ಟ್ರಧ್ವಜಕ್ಕೆ ವಂದನೆ ಸಲ್ಲಿಸುತ್ತಾರೆ ಮತ್ತು ಈ ಸಮಯದಲ್ಲಿ ರಾಷ್ಟ್ರಗೀತೆಯನ್ನು ನುಡಿಸಲಾಗುತ್ತದೆ ಮತ್ತು 21 ಗನ್ ಸೆಲ್ಯೂಟ್ ಅನ್ನು ಸಹ ನೀಡಲಾಗುತ್ತದೆ. ಈ ವೇಳೆ "25- ಪಾಂಡರ್ಸ್" ಎಂದು ಕರೆಯಲ್ಪಡುವ ಭಾರತೀಯ ಸೇನೆಯ 7- ಫಿರಂಗಿಗಳನ್ನು 3 ಸುತ್ತುಗಳಲ್ಲಿ ಗುಂಡು ಹಾರಿಸಲು ಬಳಸಲಾಗುತ್ತದೆ.
ಕುತೂಹಲಕಾರಿ ಸಂಗತಿಯೆಂದರೆ, ಗನ್ ಸೆಲ್ಯೂಟ್ ಫೈರಿಂಗ್ ಸಮಯವು ರಾಷ್ಟ್ರಗೀತೆಯನ್ನು ನುಡಿಸುವ ಸಮಯದೊಂದಿಗೆ ಹೊಂದಿಕೆಯಾಗುತ್ತದೆ. ಮೊದಲ ಫೈರಿಂಗ್ ರಾಷ್ಟ್ರಗೀತೆಯ ಪ್ರಾರಂಭದಲ್ಲಿ ಸಂಭವಿಸುತ್ತದೆ ಮತ್ತು ಕೊನೆಯ ಫೈರಿಂಗ್ 52 ಸೆಕೆಂಡುಗಳ ನಂತರ ಸಂಭವಿಸುತ್ತದೆ. ಈ ಫಿರಂಗಿಗಳನ್ನು 1941 ರಲ್ಲಿ ತಯಾರಿಸಲಾಯಿತು ಮತ್ತು ಸೈನ್ಯದ ಎಲ್ಲಾ ಔಪಚಾರಿಕ ಕಾರ್ಯಕ್ರಮಗಳಲ್ಲಿ ಈ ಗನ್ ಫೈರಿಂಗ್ ಸ್ಥಾನ ಪಡೆದಿರುತ್ತದೆ.
600 ಗಂಟೆಗಳ ಕಠಿಣ ಅಭ್ಯಾಸ
ಪರೇಡ್ನಲ್ಲಿ ಭಾಗಿಯಾಗುವ ತಂಡವು ಬರೋಬ್ಬರಿ 600 ಗಂಟೆಗಳ ತಯಾರಿ ನಡೆಸಿರುತ್ತಾರೆ. ಮೆರವಣಿಗೆ ಸಾಗುವ ಮೊದಲು ಅಂದರೆ ರಾತ್ರಿ 2 ಗಂಟೆಗೆ ಅವರು ಸ್ಥಳಕ್ಕೆ ಆಗಮಿಸಿರುತ್ತಾರೆ. ಕಳೆದ ವರ್ಷ ಜುಲೈನಿಂದಲೇ ಅವರ ಅಭ್ಯಾಸ ಆರಂಭವಾಗಿರುತ್ತದೆ. ಆಗಸ್ಟ್ವರೆಗೂ ತಮಗೆ ಸಂಬಂಧಿಸಿದ ರೆಜಿಮೆಂಟ್ಗಳಲ್ಲಿ ಅವರು ಅಭ್ಯಾಸ ನಡೆಸುತ್ತಾರೆ. ಡಿಸೆಂಬರ್ನಲ್ಲಿ ಎಲ್ಲಾ ರೆಜಿಮೆಂಟ್ಗಳು ದೆಹಲಿಗೆ ಆಗಮಿಸುತ್ತಾರೆ.
ಜನವರಿ 26ರ ಮೆರವಣಿಗೆಗೆ ಪೂರ್ವಾಭ್ಯಾಸಕ್ಕಾಗಿ, ಪ್ರತಿ ಗುಂಪು 12 ಕಿಲೋಮೀಟರ್ ದೂರವನ್ನು ಕ್ರಮಿಸುತ್ತದೆ ಆದರೆ ಜನವರಿ 26 ರಂದು ಅವರು ಕೇವಲ 9 ಕಿಲೋಮೀಟರ್ ದೂರವನ್ನು ಕ್ರಮಿಸುತ್ತಾರೆ. ತೀರ್ಪುಗಾರರು ಮೆರವಣಿಗೆಯ ಉದ್ದಕ್ಕೂ ಕುಳಿತಿರುತ್ತಾರೆ ಮತ್ತು 200 ನಿಯತಾಂಕಗಳನ್ನು ಆಧರಿಸಿ ಭಾಗವಹಿಸುವ ಪ್ರತಿ ಗುಂಪನ್ನು ಪರಿಶೀಲಿಸಿ "ಅತ್ಯುತ್ತಮ ಮೆರವಣಿಗೆಯ ಗುಂಪು" ಶೀರ್ಷಿಕೆಯನ್ನು ನೀಡಲಾಗುತ್ತದೆ.
ಪರೇಡ್ನಲ್ಲಿ ಭಾಗವಹಿಸುವ ಪ್ರತಿಯೊಬ್ಬ ಸೇನಾ ಸಿಬ್ಬಂದಿಯು 4 ಹಂತದ ತನಿಖೆಯ ಎದುರಿಸಬೇಕಾಗುತ್ತದೆ. ತನಿಖೆ ಅಂದರೆ ಇಲ್ಲಿ ಅವರನ್ನು ಪರೀಕ್ಷೆಗೊಳಪಡಿಸಲಾಗಿರುತ್ತದೆ. ನೀವು ನೋಡಿದಂತೆ ಪರೇಡ್ನಲ್ಲಿ ಅವರು ಬಳಸುವ ಬಂದೂಕುಗಳಲ್ಲಿ ಯಾವುದೇ ಗುಂಡುಗಳಿರುವುದಿಲ್ಲ. ಜೊತೆಗೆ ಯಾವುದೇ ಜೀವಂತ ಗುಂಡುಗಳನ್ನು ಅವರು ಪರೇಡ್ ವೇಳೆ ಬಳಸುವಂತಿಲ್ಲ.



Click it and Unblock the Notifications












