Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
3.8 ಅಡಿ ಎತ್ತರ ಛೋಟಾ ಬಾಬಾ ಕುಂಭ ಮೇಳದ ಆಕರ್ಷಣೆ..! ಆತನ ಕಥೆ ಏನು ಗೊತ್ತಾ?
ವಿಶ್ವದ ಅತ್ಯಂತ ದೊಡ್ಡ ಧಾರ್ಮಿಕ ಸಮ್ಮೇಳನ ಎಂಬ ಕೀರ್ತಿ ಪಡೆದಿರುವ ಮಹಾಕುಂಭಮೇಳಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದೆ. ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಇದೇ ಜನವರಿ 13ರಂದು ಕುಂಭ ಮೇಳ ಆರಂಭಗೊಂಡು ತಿಂಗಳ ಕಾಲ ನಡೆಯಲಿದೆ. ಹೀಗಾಗಿ ಇಡೀ ವಿಶ್ವದ ಗಮನ ಈಗ ಪ್ರಯಾಗ್ರಾಜ್ನತ್ತ ಇದೆ. ಇನ್ನು ಈ ಕುಂಭಮೇಳದಲ್ಲಿ ಭಾಗಿಯಾಗಲು ಈಗಾಗಲೇ ಸಾಧುಗಳು, ಸಂತರು, ಭಕ್ತರು ಆಗಮಸುತ್ತಿದ್ದಾರೆ.
ತಿಂಗಳಿಗೂ ಹೆಚ್ಚು ದಿನಗಳ ಕಾಲ ಪ್ರಯಾಗ್ರಾಜ್ನಲ್ಲಿ ಸಾಧುಗಳು ಕಂಡುಬರುತ್ತಾರೆ. ಹೀಗಾಗಿ ಅಲ್ಲಿಯೇ ಅವರು ತಾತ್ಕಾಲಿಕ ಟೆಂಟ್ಗಳ ರೂಪಿಸಿಕೊಂಡಿರುತ್ತಾರೆ. ಹಾಗೆ ಸರ್ಕಾರ ಅಲ್ಲಿ ಅತ್ಯಾಧುನಿಕ ಸೌಲಭ್ಯಗಳಿಂದ ಹಿಡಿದು ಎಲ್ಲಾ ಮೂಲಕ ಸೌಲಭ್ಯ ನೀಡುವ ಕಾರ್ಯ ಮಾಡುತ್ತದೆ. ಈಗಾಗಲೇ ಡೂಮ್ ಸಿಟಿಯ ಫೋಟೋಗಳು ವೈರಲ್ ಆಗಿದ್ದು ಎಲ್ಲರನ್ನು ಅಚ್ಚರಿಗೆ ತಳ್ಳುತ್ತಿದೆ.

ಇಂತಹ ಅಚ್ಚರಿಗಳ ನಡುವೆ ಇಲ್ಲೊಬ್ಬರು ಸಾಧುಗಳ ಎಲ್ಲರ ಗಮನ ಸೆಳೆದಿದ್ದಾರೆ. ಕುಂಭ ಮೇಳಕ್ಕೆ ಬರುವ ಲಕ್ಷಾಂತರ ಮಂದಿ ಸಾಧುಗಳ ಪೈಕಿ ಈ ಒಬ್ಬರು ಎಲ್ಲರ ಗಮನ ತಮ್ಮತ್ತ ಸೆಳೆಯುವಂತೆ ಮಾಡಿದ್ದಾರೆ. ಮಧ್ಯಪ್ರದೇಶದ ವಿದಿಶಾದ 57 ವರ್ಷದ ಸಾಧು ಗಂಗಾಪುರಿ ಮಹಾರಾಜ್ ಈಗ ಅಚ್ಚರಿಯ ಕೇಂದ್ರಬಿಂದು ಆಗಿದ್ದಾರೆ.
ಏಕೆಂದರೆ ಅವರ ಎತ್ತರ ಕೇವಲ 3.8 ಅಡಿ ಆಗಿದೆ. ಹೀಗಾಗಿ ಅವರ ಎತ್ತರದ ಕಾರಣದಿಂದ ಛೋಟು ಬಾಬಾ ಎಂಬುದಾಗಿ ಅವರು ಫೇಮಸ್ ಆಗಿದ್ದಾರೆ. ಅವರೀಗ ಪ್ರಯಾಗ್ರಾಜ್ನಲ್ಲಿ ತಮ್ಮ ಟೆಂಟ್ ಸ್ಥಾಪಿಸಿಕೊಂಡಿದ್ದು, ಒಂದಿಷ್ಟು ಜನ ಅವರನ್ನು ನೋಡಲು ಬರುತ್ತಿದ್ದಾರೆ. ಇಡೀ ಸಾಧುಗಳ ಗುಂಪಿನಲ್ಲಿ ಅವರು ವಿಶೇಷವಾಗಿ ಕಾಣಿಸುತ್ತಿದ್ದು, ಎಲ್ಲರ ಗಮನ ತಮ್ಮತ್ತ ಸೆಳೆದಿದ್ದಾರೆ.
ಇದೇ ಮೊದಲ ಬಾರಿಗೆ ಅವರು ಈ ಮಹಾ ಕುಂಭಮೇಳದಲ್ಲಿ ಭಾಗಿಯಾಗುತ್ತಿದ್ದಾರಂತೆ, ಕಳೆದ 32 ವರ್ಷದಿಂದ ಕುಂಭ ಮೇಳದಲ್ಲಿ ಭಾಗಿಯಾಗುವ ಆಸೆ ಹೊಂದಿದ್ದರಂತೆ. ಹಾಗಾಗಿ 32 ವರ್ಷದಿಂದಲೂ ಸ್ನಾನವನ್ನೇ ಮಾಡಿಲ್ಲವಂತೆ. 32 ವರ್ಷದಿಂದ ಅವರ ಬಯಕೆಯೊಂದು ಈಡೇರದ ಕಾರಣ ಸ್ನಾನ ಮಾಡುವುದನ್ನೇ ನಿಲ್ಲಿಸಿದ್ದಾರಂತೆ. ಆ ಬಯಕೆ ಈಡೇರದ ಹೊರತು ಗಂಗಾ ನದಿಯಲ್ಲಿ ಮುಳುಗುವುದಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ಅವರನ್ನು ಪ್ರಯಾಗ್ರಾಜ್ನಲ್ಲಿ ನೋಡಿದ ಮಂದಿ ಅವರ ಬಳಿ ಮಾತನಾಡಲು ಆಗಮಿಸುತ್ತಿದ್ದಾರಂತೆ. ಹೀಗಾಗಿ ಈ ವರ್ಷದ ಕುಂಭಮೇಳದಲ್ಲಿ ಇವರು ಪ್ರಮುಖ ಆಕರ್ಷಣೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಕುಂಭಮೇಳಕ್ಕೆ ಬಂತು ಡೂಮ್ ಸಿಟಿ ರೂಪ!
ಕುಂಭಮೇಳದಲ್ಲಿ ಭಾಗಿಯಾಗುವವರಿಗಾಗಿ ಭಾರತೀಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಅತ್ಯಂತ ಸೌಲಭ್ಯಯುಕ್ತ ಟೆಂಟ್ಗಳ ನಿರ್ಮಾಣಗೊಂಡಿದೆ. ಹಾಗೆ ಇಡೀ ಪಟ್ಟಣ ಈಗ ಸಿದ್ಧಗೊಂಡಿದೆ. ಯಾತ್ರಿಕರು ಉಳಿಯುವ ಉದ್ದೇಶದಿಂದ ಶಿಬಿರಗಳು ತಲೆ ಎತ್ತಿದೆ. ಪ್ರವಾಸೋದ್ಯಮ ಇಲಾಖೆ ನಿರ್ಮಿಸಿರುವ ಈ ಶಿಬಿರದಲ್ಲಿ ಸೈಟ್ ಸೂಪರ್ ಪ್ರೀಮಿಯಂ ಸೂಟ್ಗಳು, ಪ್ರೀಮಿಯಂ ಸೂಟ್ಗಳು, ಡೀಲಕ್ಸ್ ಸೂಟ್ಗಳು ಮತ್ತು ಸ್ಟ್ಯಾಂಡರ್ಡ್ ಕ್ಯಾಂಪ್ಗಳನ್ನು ಒಳಗೊಂಡಿರುತ್ತದೆ, ಪ್ರತಿಯೊಂದೂ ರೂಂಗಳನ್ನು ಶಾಂತಿಯುತ ಮತ್ತು ಆರಾಮದಾಯಕವಾಗಿರುವಂತೆ ವಿನ್ಯಾಸಗೊಳಿಸಲಾಗಿದೆ.
ಈ ಆಧುನಿಕ ವಸತಿ ಸಂಕೀರ್ಣವು ಕುಂಭಮೇಳದ ಸೌಕರ್ಯ, ಭದ್ರತೆ ಮತ್ತು ವಿಹಂಗಮ ನೋಟಗಳನ್ನು ನೀಡುತ್ತದೆ. ಡೋಮ್ ಸಿಟಿಯು 44 ಅತ್ಯಾಧುನಿಕ ಗುಮ್ಮಟಗಳನ್ನು ಹೊಂದಿರುತ್ತದೆ, ಪ್ರತಿಯೊಂದೂ 32x32 ಅಡಿಗಳಷ್ಟು ವ್ಯಾಪಿಸಿರಲಿದೆ. 15ರಿಂದ 18 ಅಡಿ ಎತ್ತರವಾಗಿರಲಿದೆ. ಹಾಗೆ 360 ಡಿಗ್ರಿಯ ನೋಟವನ್ನು ಅದರ ಒಳಗಿಂದ ಸವಿಯಬಹುದು. ಇದು ಅತ್ಯಾಧುನಿಕತೆಗೆ ಹಿಡಿದ ಕೈಗನ್ನಡಿಯಾಗಿದ್ದು, ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯ ಇರಲಿದೆ.



Click it and Unblock the Notifications