Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ಬೋಲ್ಡ್ ಸ್ಕೈ ಎಂಬ ವೈವಿಧ್ಯಮಯ ಲೋಕ!
ನೆನ್ನೆ ಜೋಗಿಯವರ 'ರವಿ ಕಾಣದ್ದು' ಪುಸ್ತಕ ಓದುತ್ತಿದ್ದೆ. ಅದರಲ್ಲಿ ಅವರು 'ಬದುಕಿದಷ್ಟು ಕಾಲ ನಮ್ಮ ಮನಸ್ಸಿಗೆ ತೃಪ್ತಿ ಕೊಡುವಂತೆ ಬದುಕಬೇಕು. ಒಂದು ಮನುಷ್ಯನ ಆಯಸ್ಸು 75 ವರ್ಷ ಎಂದಿಟ್ಟುಕೊಳ್ಳಿ, ಸಿಗರೇಟ್ ಎಳೆದರೆ ಬೇಗನೆ ಕಾಯಿಲೆ ಬಂದು ಸತ್ತು ಹೋಗುತ್ತೇವೆ ಎಂಬ ಭಯದಿಂದ ಸಿಗರೇಟ್ ಎಳೆಯದೆ 75 ವರ್ಷ ಬದುಕಿ, ಕೊನೆಯ 5 ವರ್ಷವೇನು ಸುಖವಾಗಿ ಕಳೆಯುವುದಿಲ್ಲ, ಆ ಜೀವನ ನರಕ ಮಯವಾಗಿರುತ್ತದೆ, ಜೀವನದಲ್ಲಿ ಯಾವ ಖುಷಿನೂ ಅನುಭವಿಸಿಲ್ಲ ಎಂಬ ಪಶ್ಚಾತಾಪವಿರುತ್ತದೆ, ಅದಕ್ಕಿಂತ ಇರುವಷ್ಟು ದಿನವನ್ನು ನಮ್ಮ ಇಷ್ಟಬಂದಂತೆ ಬದುಕಿ, 5 ವರ್ಷ ಬೇಗ ಸತ್ತರೂ ಚಂತೆಯಿಲ್ಲ' ಎಂಬ ನಿಟ್ಟಿನಲ್ಲಿ ಬರೆಯುತ್ತಾ ಹೋಗುತ್ತಾರೆ.
ಅವರು ಹೇಳಿದ್ದು ಒಂದು ಕ್ಷಣಕ್ಕೆ ಸರಿ ಅನಿಸುತ್ತದೆ. ನಾವು ಯಾವಾಗ ಸಾಯುತ್ತೇವೆ ಅಂತ ಯಾರಿಗೂ ಹೇಳಲಿಕ್ಕೆ ಸಾಧ್ಯವಿಲ್ಲ!

ನನ್ನ ಫ್ರೆಂಡ್ ಅಪ್ಪನಿಗೆ ಯಾವುದೇ ಕೆಟ್ಟ ಅಭ್ಯಾಸಗಳಿರಲಿಲ್ಲ, ವಯಸ್ಸು 55 ಆಸುಪಾಸಿನಲ್ಲಿದ್ದರು, ಆದರೂ ಅವರನ್ನು ಶ್ವಾಸಕೋಶದ ಕ್ಯಾನ್ಸರ್ ಬಲಿ ತೆಗೆದುಕೊಂಡಿತು! ನನ್ನ ಮನೆಯ ಹತ್ತಿರ ಕೆಂಚ ಅಂತ ಒಬ್ಬ ಇದ್ದಾನೆ. ಬಹುಶಃ 60 ವರ್ಷಕ್ಕಿಂತ ಅಧಿಕ ಪ್ರಾಯವಿರಬಹುದು, ಮದುವೆಯಾಗಿಲ್ಲ, ಕುಡಿತ, ಧೂಮಪಾನವೇ ಅವರ ಸಂಗಾತಿ. ದುಡಿದ್ದೆಲ್ಲಾವನ್ನು ಆಹಾರಕ್ಕೆ, ಬಟ್ಟೆಗೆ ಸ್ವಲ್ಪವೂ ಖರ್ಚು ಮಾಡದೆ(ಬೇರೆಯವರು ಕೊಟ್ಟ ಹರಕಲು ಬಟ್ಟೆಯನ್ನು ಅದು ಹರಿದು ಚಿಂದಿಯಾಗುವವರೆಗೆ ಧರಿಸುತ್ತಾನೆ) ಕುಡಿತಕ್ಕೆ ಸುರಿಯುತ್ತಾನೆ! ಅವನು ಕಾಯಿಲೆ ಬಂದು ಒಂದು ವಾರಕ್ಕಿಂತ ಹೆಚ್ಚು ಮಲಗಿದ್ದನ್ನು ನಾನು ಇದುವರೆಗೆ ನೋಡಿಲ್ಲ. ವಯಸ್ಸಾಗಿರುವುದರಿಂದ ದೇಹದ ಶಕ್ತಿ ಸ್ವಲ್ಪ ಕುಂದಿದೆ ಹೊರತು, ಕಲ್ಲು ಗುಂಡುನಂತೆ ಈಗಲೂ ಇದ್ದಾನೆ.
ಹಾಗಂತ ಆರೋಗ್ಯದ ಬಗ್ಗೆ ನಮ್ಮಲ್ಲಿರುವ ಕಾಳಜಿ ತಪ್ಪು ಅಂತ ಹೇಳಲು ಸಾಧ್ಯವೇ. ಹುಟ್ಟಿದ ಮೇಲೆ ಒಂದೆಲ್ಲಾ ಒಂದು ದಿನ ಸಾಯುತ್ತೇವೆ ಎಂದು ಎಲ್ಲರಿಗೂ ಗೊತ್ತು. ಆದರೂ ಜೀವನ ಬಗ್ಗೆ ಎಷ್ಟೆಲ್ಲಾ ಕನಸ್ಸು ಕಟ್ಟಿಕೊಳ್ಳುತ್ತೇವೆ, ಎಷ್ಟೆಲ್ಲಾ ಕಷ್ಟಪಡುತ್ತೇವೆ. ಮಗುವಾಗಿ ಹುಟ್ಟಿದಾಗಿನಿಂದ ನಮ್ಮ ಆಯಸ್ಸಿನ ಕೊನೆಯ ದಿನದವರೆಗೆ ಪ್ರತಿಯೊಂದು ದಿನವೂ ಹೋರಾಟವಾಗಿರುತ್ತದೆ. ಒಳ್ಳೆಯ ಹುದ್ದೆ ಸಿಗಬೇಕೆಂದರೆ ಚೆನ್ನಾಗಿ ಮಾರ್ಕ್ಸ್ ಬೇಕೆಂದು ನಮ್ಮ ಎಷ್ಟೆಲ್ಲಾ ಸುಖ ನಿದ್ದೆಯನ್ನು ತ್ಯಾಗ ಮಾಡುತ್ತೇವೆ? ಹುದ್ದೆ ಸಿಕ್ಕಿದ ಮೇಲೆ ನಮ್ಮ ಆಸೆ ಅಲ್ಲಿಗೆ ಕೊನೆ ಆಗುತ್ತದೆಯೇ....? ಮದುವೆ, ಮನೆ, ಕಾರು ಹೀಗೆ ಹನುಮಂತನ ಬಾಲ ಬೆಳೆದಂತೆ ನಮ್ಮ ಆಸೆಯ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ನಮಗೆ ನಾವು ಬಯಸಿದ ಎಲ್ಲಾ ಐಷಾರಾಮಿ ಬದುಕು ಸಿಕ್ಕಿ, ಆರೋಗ್ಯ ಇಲ್ಲವೆಂದರೆ ಏನು ಪ್ರಯೋಜನ? ಸಾಕಷ್ಟು ಕಾಯಿಲೆಗಳಿಗೆ ನಮ್ಮ ಜೀವನ ಶೈಲಿ ಪ್ರಮುಖ ಕಾರಣವಾಗಿರುವಾಗ ಆ ಜೀವನಶೈಲಿ ಬದಲಾಯಿಸುವುದರಲ್ಲಿ ತಪ್ಪೇನು?
ಲೈಫ್ ನಲ್ಲಿ ಫನ್ ಇರಬೇಕು, ಫನ್ ಮಾತ್ರ ಲೈಫ್ ಆಗಬಾರದಷ್ಟೇ. ಇದೇ ಉದ್ದೇಶದಿಂದ ಕನ್ನಡ ಬೋಲ್ಡ್ ಸ್ಕೈ ಉತ್ತಮ ಲೈಫ್ ಸ್ಟೈಲ್ ಗೆ ಅಗತ್ಯವಾದ ಉಪಯುಕ್ತವಾದ ಮಾಹಿತಿಗಳನ್ನು ನೀಡುತ್ತಾ ಬಂದಿದೆ. ಅದರಲ್ಲಿ ಆರೋಗ್ಯ, ಸೌಂದರ್ಯ, ಅಡುಗೆ, ಸಂಬಂಧ, ಮನೆ-ಕೈ ತೋಟ, ತಾಯಿ-ಮಗು , ಸಮ್ಮಿಲನ ಹೀಗೆ ಹಲವು ಸೆಕ್ಷನ್ ಇದ್ದು ತನ್ನದೇ ಆದ ವೈಶಿಷ್ಟತೆಯಿಂದ ಓದುಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಓದುಗರ ಸ್ಪಂದನೆಗೆ ಧನ್ಯವಾದಗಳು. ಆರೋಗ್ಯ, ಸೌಂದರ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರವನ್ನು ಅನೇಕರು ಇಲ್ಲಿ ಕಂಡುಕೊಂಡಿದ್ದಾರೆ. ನೀವು ಹೊಸ ರುಚಿಯ ಅಡುಗೆ ತಯಾರಿಸಿ, ನಿಮ್ಮ ಪಾಕ ಪ್ರಾವೀಣ್ಯತೆಯನ್ನು ಇತರರೊಂದಿಗೆ ಹಂಚಿಕೊಳ್ಳಬೇಕೆಂದು ಬಯಸುವವರಿಗೆ ತಮ್ಮನ್ನು ಗುರುತಿಸಿಕೊಳ್ಳಲು ಇದೊಂದು ಸೂಕ್ತ ತಾಣ. ನಮ್ಮ ಈ ವೈವಿಧ್ಯಮಯ ಲೋಕದಲ್ಲಿ ಪ್ರಯಾಣ ಮಾಡಲು ಇಷ್ಟ ಪಡುವುದಾರೆ visit - www.kannada.boldsky.com



Click it and Unblock the Notifications











