Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಮಿದುಳಿನ ಸಾಮರ್ಥ್ಯ ಹೆಚ್ಚಿಸುವ ಟ್ರಿಕ್ಸ್
ಜ್ಞಾಪಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು, ಉಳಿಸಿಕೊಳ್ಳುವುದು ಕೂಡ ಒಂದು ಕಲೆ. ಮಿದುಳು ಚುರುಕಾಗಿ ಕೆಲಸ ಮಾಡದಿದ್ದರೆ ತುಂಬಾ ನಷ್ಟವಾಗುವುದು. ಅಡುಗೆ ಮಾಡುವಾಗ ಮರೆತು ಸಕ್ಕರೆ ಹಾಕುವಲ್ಲಿ ಉಪ್ಪು ಹಾಕಿದರೆ ಹೇಗೆ? ಇತ್ತೀಚಿನ ದಿನಗಳಲ್ಲಿ ಮರೆವಿನ ಕಾಯಿಲೆ ನಮ್ಮಲ್ಲಿ ಹೆಚ್ಚಾಗುತ್ತಿದೆ. ಅದನ್ನು ಗಮನಿಸಿದ್ದೀರಾ ನೀವು?
ಏನೋ ವಸ್ತು ತೆಗೆಯಬೇಕೆಂದು ಹೋಗಿರುತ್ತೇವೆ, ಕೆಲವೊಮ್ಮೆ ಮರತ್ತೇ ಹೋಗುತ್ತದೆ. ನಮ್ಮ ಆಪ್ತರ ಹುಟ್ಟಿದ ದಿನ ಮರೆತು ಬಿಡುತ್ತೇವೆ. reminder ಬಡೆದುಕೊಂಡಾಗ ಅವರಿಗೆ ವಿಶ್ ಮಾಡುತ್ತೇವೆ. ಆದರೆ ನಮ್ಮ ಜ್ಞಾಪಕ ಶಕ್ತಿ ಏಕೆ ಹಾಳಾಗುತ್ತಿದೆ ಎಂದು ಯೋಚಿಸಿದ್ದೀರಾ? ಉತ್ತರ ವೆರಿ ಸಿಂಪಲ್, ನಾವು ಯೋಚಿಸದೇ ಇರುವುದು! ಹೌದು ತಲೆಗೆ ಕೆಲಸ ಕೊಡದಿದ್ದಾಅದರ ಸಾಮರ್ಥ್ಯ ಕೂಡ ಕಡಿಮೆಯಾಗುವುದು.
ಇಲ್ಲಿ ಕೆಲವು ಟಿಪ್ಸ್ ಇವೆ, ಇವುಗಳು ನೀವು ಜ್ಞಾಪಕಶಕ್ತಿ ಕಳೆದುಕೊಳ್ಳದಿರಲು ಸಹಾಯ ಮಾಡುವುದು:

ಕೆಲಸ ಮುಗಿದ ನಂತರ ಎಲ್ಲವೂ ಸರಿಯಾಗಿದೆಯೇ ಎಂದು ಪರೀಕ್ಷಿಸಿ
ನಮ್ಮ ಕೆಲಸ ಮುಗಿದ ನಂತರ ಎಲ್ಲಾ ಸರಿಯಾಗಿದೆಯೇ ಎಂದು ಪರೀಕ್ಷಿಸುವುದು ಒಳ್ಳೆಯದು. ಆಗ ಏನಾದರೂ ಮರೆತು ಬಿಟ್ಟಿದ್ದರೆ ನೆನಪಿಗೆ ಬರುವುದು. ಇಲ್ಲದಿದ್ದರೆ ಅಯ್ಯೋ ನನಗೆ ಮರುವಿನ ಕಾಯಿಲೆ ಬಂತು ಎಂದು ನೀವೇ ಕಾಯಿಲೆಯನ್ನು ಹುಟ್ಟು ಹಾಕಿ ಬಿಡುತ್ತೀರಿ.
ನಿಮ್ಮ ಮೆದುಳನ್ನು ಉಪಯೋಗಿಸಿ
ಎಲ್ಲದಕ್ಕೂ ಕಂಪ್ಯೂಟರ್, ಫೋನು ಅಂತ ಬಳಕೆ ಮಾಡದೆ ಸ್ವಲ್ಪ ಮೆದುಳಿಗೂ ಕೆಲಸ ಕೊಡಬೇಕು.
ಲೆಕ್ಕಾಚಾರ
ಲೆಕ್ಕಾಚಾರ ಮಾಡುವಾಗ ಕ್ಯಾಲ್ಕುಲೇಟರ್ ಬಳಸುವ ಮುನ್ನ ಬುದ್ಧಿಶಕ್ತಿ ಬಳಸಿ ಲೆಕ್ಕಚಾರ ಮಾಡಿ. ಮೊದಲು ಕಷ್ಟವಾಗಬಹುದು. ನಂತರ ನಿಮ್ಮ ಮಿದುಳು ತುಂಬಾ ವೇಗವಾಗಿ ಕೆಲಸ ಮಾಡುತ್ತದೆ.
ಹಾಡು ಹೇಳಿ
ಹಾಡಿನ ಸಾಲುಗಳನ್ನು ನೆನಪಿನಲ್ಲಿಟ್ಟು ಹಾಡುವುದು ಕೂಡ ಮೆದುಳನ್ನು ಚುರುಕುಗೊಳಿಸುವ ಕೆಲಸವೇ.
ಮುಖ್ಯವಾದ ವಿಷಯವನ್ನು ಆಗಾಗ ಜ್ಞಾಪಿಸಿಕೊಳ್ಳಿ.
ಈ ರೀತಿ ಮಾಡಿದರೆ ಮುಖ್ಯವಾದ ವಿಷಯವನ್ನು ಮರೆಯಲು ಸಾಧ್ಯವಿಲ್ಲ. ಕೆಲಸವನ್ನು ಮಾಡುವಾಗ ಏಕಾಗ್ರತೆಯಿಂದ ಮಾಡಬೇಕು. ಏಕಾಗ್ರತೆ ಮದುಳಿನ ಸಾಮರ್ಥ್ಯ ಹೆಚ್ಚಿಸುವ ಪ್ರಮುಖ ಅಸ್ತ್ರವಾಗಿದೆ.



Click it and Unblock the Notifications