Latest Updates
-
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ? -
ಬೇಕರಿ ಸ್ಟೈಲ್ ಕಚೋರಿ ರೆಸಿಪಿ.. ಮನೆಯಲ್ಲೇ ಈ 4 ಟೇಸ್ಟಿ ಕಚೋರಿ ಮಾಡಿ! ಹೊಸಬರಿಗೆ ಕೂಡ ಸುಲಭ -
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ!
ಮಿದುಳಿನ ಸಾಮರ್ಥ್ಯ ಹೆಚ್ಚಿಸುವ ಟ್ರಿಕ್ಸ್
ಜ್ಞಾಪಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು, ಉಳಿಸಿಕೊಳ್ಳುವುದು ಕೂಡ ಒಂದು ಕಲೆ. ಮಿದುಳು ಚುರುಕಾಗಿ ಕೆಲಸ ಮಾಡದಿದ್ದರೆ ತುಂಬಾ ನಷ್ಟವಾಗುವುದು. ಅಡುಗೆ ಮಾಡುವಾಗ ಮರೆತು ಸಕ್ಕರೆ ಹಾಕುವಲ್ಲಿ ಉಪ್ಪು ಹಾಕಿದರೆ ಹೇಗೆ? ಇತ್ತೀಚಿನ ದಿನಗಳಲ್ಲಿ ಮರೆವಿನ ಕಾಯಿಲೆ ನಮ್ಮಲ್ಲಿ ಹೆಚ್ಚಾಗುತ್ತಿದೆ. ಅದನ್ನು ಗಮನಿಸಿದ್ದೀರಾ ನೀವು?
ಏನೋ ವಸ್ತು ತೆಗೆಯಬೇಕೆಂದು ಹೋಗಿರುತ್ತೇವೆ, ಕೆಲವೊಮ್ಮೆ ಮರತ್ತೇ ಹೋಗುತ್ತದೆ. ನಮ್ಮ ಆಪ್ತರ ಹುಟ್ಟಿದ ದಿನ ಮರೆತು ಬಿಡುತ್ತೇವೆ. reminder ಬಡೆದುಕೊಂಡಾಗ ಅವರಿಗೆ ವಿಶ್ ಮಾಡುತ್ತೇವೆ. ಆದರೆ ನಮ್ಮ ಜ್ಞಾಪಕ ಶಕ್ತಿ ಏಕೆ ಹಾಳಾಗುತ್ತಿದೆ ಎಂದು ಯೋಚಿಸಿದ್ದೀರಾ? ಉತ್ತರ ವೆರಿ ಸಿಂಪಲ್, ನಾವು ಯೋಚಿಸದೇ ಇರುವುದು! ಹೌದು ತಲೆಗೆ ಕೆಲಸ ಕೊಡದಿದ್ದಾಅದರ ಸಾಮರ್ಥ್ಯ ಕೂಡ ಕಡಿಮೆಯಾಗುವುದು.
ಇಲ್ಲಿ ಕೆಲವು ಟಿಪ್ಸ್ ಇವೆ, ಇವುಗಳು ನೀವು ಜ್ಞಾಪಕಶಕ್ತಿ ಕಳೆದುಕೊಳ್ಳದಿರಲು ಸಹಾಯ ಮಾಡುವುದು:

ಕೆಲಸ ಮುಗಿದ ನಂತರ ಎಲ್ಲವೂ ಸರಿಯಾಗಿದೆಯೇ ಎಂದು ಪರೀಕ್ಷಿಸಿ
ನಮ್ಮ ಕೆಲಸ ಮುಗಿದ ನಂತರ ಎಲ್ಲಾ ಸರಿಯಾಗಿದೆಯೇ ಎಂದು ಪರೀಕ್ಷಿಸುವುದು ಒಳ್ಳೆಯದು. ಆಗ ಏನಾದರೂ ಮರೆತು ಬಿಟ್ಟಿದ್ದರೆ ನೆನಪಿಗೆ ಬರುವುದು. ಇಲ್ಲದಿದ್ದರೆ ಅಯ್ಯೋ ನನಗೆ ಮರುವಿನ ಕಾಯಿಲೆ ಬಂತು ಎಂದು ನೀವೇ ಕಾಯಿಲೆಯನ್ನು ಹುಟ್ಟು ಹಾಕಿ ಬಿಡುತ್ತೀರಿ.
ನಿಮ್ಮ ಮೆದುಳನ್ನು ಉಪಯೋಗಿಸಿ
ಎಲ್ಲದಕ್ಕೂ ಕಂಪ್ಯೂಟರ್, ಫೋನು ಅಂತ ಬಳಕೆ ಮಾಡದೆ ಸ್ವಲ್ಪ ಮೆದುಳಿಗೂ ಕೆಲಸ ಕೊಡಬೇಕು.
ಲೆಕ್ಕಾಚಾರ
ಲೆಕ್ಕಾಚಾರ ಮಾಡುವಾಗ ಕ್ಯಾಲ್ಕುಲೇಟರ್ ಬಳಸುವ ಮುನ್ನ ಬುದ್ಧಿಶಕ್ತಿ ಬಳಸಿ ಲೆಕ್ಕಚಾರ ಮಾಡಿ. ಮೊದಲು ಕಷ್ಟವಾಗಬಹುದು. ನಂತರ ನಿಮ್ಮ ಮಿದುಳು ತುಂಬಾ ವೇಗವಾಗಿ ಕೆಲಸ ಮಾಡುತ್ತದೆ.
ಹಾಡು ಹೇಳಿ
ಹಾಡಿನ ಸಾಲುಗಳನ್ನು ನೆನಪಿನಲ್ಲಿಟ್ಟು ಹಾಡುವುದು ಕೂಡ ಮೆದುಳನ್ನು ಚುರುಕುಗೊಳಿಸುವ ಕೆಲಸವೇ.
ಮುಖ್ಯವಾದ ವಿಷಯವನ್ನು ಆಗಾಗ ಜ್ಞಾಪಿಸಿಕೊಳ್ಳಿ.
ಈ ರೀತಿ ಮಾಡಿದರೆ ಮುಖ್ಯವಾದ ವಿಷಯವನ್ನು ಮರೆಯಲು ಸಾಧ್ಯವಿಲ್ಲ. ಕೆಲಸವನ್ನು ಮಾಡುವಾಗ ಏಕಾಗ್ರತೆಯಿಂದ ಮಾಡಬೇಕು. ಏಕಾಗ್ರತೆ ಮದುಳಿನ ಸಾಮರ್ಥ್ಯ ಹೆಚ್ಚಿಸುವ ಪ್ರಮುಖ ಅಸ್ತ್ರವಾಗಿದೆ.



Click it and Unblock the Notifications











