Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ಅಮೆರಿಕಾ ದಾಳಿ ಬಗ್ಗೆ ಕೇಳಿ ಬಂದ ವಾದ, ಪ್ರತಿವಾದ

ಒಸಮಾ ನಾಯಕತ್ವದಲ್ಲಿ ಭಯೋತ್ಪಾದಕರು ರಣಹದ್ದಿನಂತೆ ಎರಗಿ ನ್ಯೂಯಾರ್ಕಿನ ವಿಶ್ವ ವಾಣಿಜ್ಯ ಮಳಿಗೆಯನ್ನು 9/11ರದು ಧ್ವಂಸ ಮಾಡಿದರು. ಅನೇಕ ಜನರು ಪ್ರಾಣವನ್ನು ಕಳೆದುಕೊಂಡರು. ಆ ದಿನ ಅಮೇರಿಕಕ್ಕೆ ಮಾತ್ರವಲ್ಲ ಇಡೀ ವಿಶ್ವಕ್ಕೆ ಕರಾಳ ದಿನವಾಗಿತ್ತು.
ಆದರೆ ಘಟನೆ ನಡೆದು ಇಷ್ಟು ವರ್ಷ ಕಳೆದರೂ ಆ ಘಟನೆ ನಡೆದದ್ದು ಹೇಗೆ? ನಿಜವಾಗಿಯೂ ಅಲ್ಲಿ ನಡೆದದ್ದೇನು? ಕಟ್ಟಡ ಸ್ಪೋಟಿಸಿದ್ದು ಹೇಗೆ? ಒಳಗಿನ ಕುತಂತ್ರ ಸಹಕರಿಸಿರುವುದೇ? ಹೀಗೆ ಲೆಕ್ಕವಿಲ್ಲದಷ್ಟು ಪ್ರಶ್ನೆಗಳು ಇಂದಿಗೂ ಇವೆ.
ಈ ಘಟನೆಯ ಕುರಿತಾದ ಕೆಲವು ವಾದಗಳು ಮತ್ತು ಪ್ರತಿವಾದಗಳು ಈ ಕೆಳಗಿನಂತೆ ಇವೆ.
ಸ್ಪೋಟಕ್ಕೆ ಕಾರಣ ವಿಮಾನವಲ್ಲ, ಅಲ್ಲಿ ಬಾಂಬಿತ್ತು!
ಹೀಗಂತ ಒಂದು ವಾದವಿದೆ. ವಿಶ್ವ ವಾಣಿಜ್ಯ ಮಳಿಗೆಯಲ್ಲಿ ಬೆಂಕಿ ಜ್ವಾಲೆಯಲ್ಲಿ ಕುಸಿಯುತ್ತಿರುವ ಚಿತ್ರ ನೋಡಿ ಕೆಲವರು ಅಧ್ಯಯನ ಮಾಡಿ ಈ ರೀತಿ ವಾದಿಸುತ್ತಿದ್ದಾರೆ. ಆ ಘಟನೆ ವಿಡಿಯೋ ನೋಡಿದಾಗ ವಿಮಾನ ಡಿಕ್ಕಿ ಹೊಡೆದು ಈ ಕಟ್ಟಡ ಉರಿದ ಕುರಿತು ಸಂಶಯ ವ್ಯಕ್ತಪಡಿಸುತ್ತಾರೆ. ಏಕೆಂದರೆ ವಿಮಾನ ಬಂದು ಅಪ್ಪಳಿಸಿದ ಕೂಡಲೇ ಕಟ್ಟಡದ ಬೇರೆ-ಬೇರೆ ಭಾಗಗಳಲ್ಲಿ ಸ್ಟೋಟ ಕಂಡು ಬಂದಿತು. ಕಟ್ಟಡದಲ್ಲಿ ಬಾಂಬ್ ಇಟ್ಟು ನಂತರ ವಿಮಾನದಿಂದ ಅಪ್ಪಳಿಸಿದ್ದಾರೆ ಎಂಬ ಶಂಕೆ ಅನೇಕರಲ್ಲಿದೆ.
ಪ್ರತಿವಾದ: ವಿಶ್ವ ವಾಣಿಜ್ಯ ಕಟ್ಟಡಕ್ಕೆ ಬಿಗಿಭದ್ರತೆಯಿದೆ. ಅದರೊಳಗೆ ಬಾಂಬ್ ಬಚ್ಚಿಡಲು ಸಾಧ್ಯವಿರಲಿಲ್ಲ. ಹೀಗಾಗಿ ಮೇಲಿನ ವಾದಕ್ಕೆ ಹುರುಳಿಲ್ಲವೆಂದು ಕೆಲವರು ಪ್ರತಿವಾದಿಸುತ್ತಾರೆ.
ಜುವಿಸ್ ಗಳಿಗೆ ದಾಳಿ ಬಗ್ಗೆ ತಿಳಿದಿತ್ತೆ?
ಮತೀಯ ಗಲಭೆ ಹೆಚ್ಚಿಸಲು ಈ ರೀತಿಯ ಸುದ್ದಿ ಹಬ್ಬಿಸಲಾಗಿತ್ತು. ಅಲ್ಲಿ ಕೆಲಸ ಮಾಡುತ್ತಿದ್ದ ಜುವಿಸ್ ಜನಾಂಗದವರಿಗೆ ದಾಳಿ ಬಗ್ಗೆ ತಿಳಿದಿತ್ತು ಅದಕ್ಕೆ ರಜೆ ತೆಗೆದುಕೊಂಡಿದ್ದರು ಎಂಬ ಗಾಳಿ ಸುದ್ದಿ ಹಬ್ಬಿತ್ತು.
ಪ್ರತಿವಾದ: 50,000 ಜನರು ಕೆಲಸ ಮಾಡುವ ಜಾಗದಲ್ಲಿ 400 ಜನರು ರಜೆ ತೆಗೆದುಕೊಳ್ಳುವುದು ದೊಡ್ಡ ವಿಷಯವಲ್ಲ, ದಾಳಿ ಬಗ್ಗೆ ಜುವಿಸ್ ಗಳಿಗೆ ತಿಳಿದಿತ್ತು ಅನ್ನುವುದು ಸತ್ಯಕ್ಕೆ ದೂರ ಎಂಬ ಪ್ರತಿವಾದವಿದೆ.
ಪೆಂಟಗಾನ್ ದಾಳಿ ಅವೈಜ್ಞಾನಿಕ
ವಿಮಾನ ದಾಳಿಯಿಂದ ಉಂಟಾದ ತೂತು ಸಾಧಾರಣ ವಿಮಾನದ ಗಾತ್ರಕ್ಕಿಂತ ಚಿಕ್ಕದಾಗಿದೆ. ವಿಮಾನ ಕಟ್ಟಡಕ್ಕೆ ಅಪ್ಪಳಿಸುವುದರಿಂದ ಅಷ್ಟು ದೊಡ್ಡ ಕಟ್ಟಡ ದ್ವಂಸವಾಗುತ್ತದೆ ಎನ್ನುವುದು ನಂಬಲು ಕಷ್ಟ. ಇದು ಅವೈಜ್ಞಾನಿಕವೆಂದು ಕೆಲವರು ಅಭಿಪ್ರಾಯಪಡುತ್ತಾರೆ.
ದಾಳಿಗೆ ಕಾರಣ ಆಂತರಿಕ ಕುತಂತ್ರವೇ?
ವೈಟ್ ಹೌಸಿಗೂ ಈ ದಾಳಿಗೂ ಸಂಬಂಧವಿದೆ ಎಂದರ್ಥವಲ್ಲ. ಆದರೆ ಇದಕ್ಕೆ ಆಂತರಿಕ ರಾಜಕಾರಣವೂ ಕಾರಣವಿರಬಹುದು ಎಂಬ ಗುಮಾನಿಯಿದೆ. ಈ ಕುರಿತು ಭದ್ರತಾ ಪಡೆಯವರೂ ಬಾಯಿಬಿಟ್ಟಿಲ್ಲ. ಜನಪ್ರಿಯ ಪತ್ರಿಕೆಗಳೂ ಈ ಕುರಿತು ತುಟಿ ಪಿಟಕ್ ಎಂದಿಲ್ಲ.
ಗುಮಾನಿ ಏನೇ ಇರಲಿ. ಘಟನೆಗೆ ಕಾರಣನಾದ ಲಾಡೆನ್ ಹತ್ಯೆಯಾಗಿರುವುದು ಘಟನೆಯಿಂದ ಪ್ರಾಣ ಕಳೆದುಕೊಂಡವರ ಆತ್ಮಕ್ಕೆ ತುಸು ನೆಮ್ಮದಿ ತಂದಿರಬಹುದು.



Click it and Unblock the Notifications