Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ದೆಹಲಿಯಲ್ಲಿಯೂ ಇದೆ ಭೂತ ಸಂಚಾರದ 5 ಸ್ಥಳಗಳು!
ನಮ್ಮ ದೇಶದ ರಾಜಧಾನಿ ದೆಹಲಿ ಬಗ್ಗೆ ಹೇಳಬೇಕೆಂದರೆ ಅನೇಕ ಉತ್ತಮವಾದ ಹಾಗೂ ಅಚ್ಚರಿಯ ವಿಷಯಗಳಿವೆ. ದೇಶದಲ್ಲಿಯೇ ಅತ್ಯುತ್ತಮವಾದ ರಸ್ತೆ ದೆಹಲಿಯಲ್ಲಿದೆ. ಇದು ಆಹಾರ ಪ್ರಿಯರ ಸ್ವರ್ಗವಾಗಿದೆ. ಹೀಗೆ ಅನೇಕ ವಿಷಯಗಳಿವೆ. ಇಲ್ಲಿ ಸ್ವಲ್ಪ ಭಯಾನಕವಾದ ಅನೇಕ ಅಚ್ಚರಿಯ ವಿಷಯಗಳಿವೆ. ಈ ವಿಷಯಗಳು ತುಂಬಾ ಮಂದಿ ಡೆಲ್ಲಿ ನಿವಾಸಿಗಳಿಗೇ ಗೊತ್ತಿರುವುದಿಲ್ಲ!
ದೆಹಲಿ ಪುರಾತನ ನಗರವಾಗಿದೆ. ಮುಘಲ್ ರು, ಬ್ರಿಟಿಷರು ತಮ್ಮ ರಾಜಧಾನಿಯಾಗಿ ದೆಹಲಿಯನ್ನು ಮಾಡಿಕೊಂಡಿದ್ದರು. ದೆಹಲಿಯಲ್ಲಿರುವ ಪೌರಾಣಿಕ ಹೆರಿಟೇಜ್ (ಪಾರಂಪರಿಕ) ಕಟ್ಟಡವೇ ಒಂದು ಭಯಾನಕವಾದ ಸ್ಥಳ ಎಂದು ಹೇಳಲಾಗುತ್ತಿದೆ. ದೆಹಲಿಯ ಕೆಲವೊಂದು ಸ್ಥಳಗಳಲ್ಲಿ ಭೂತ ಇದೆ ಎಂಬ ವದಂತಿಗಳು ಕೂಡ ಕೇಳಿ ಬಂದಿದೆ. ದೆಹಲಿಯಲ್ಲಿ ಭೂತದ ಸಂಚಾರ ಇದೆ ಎಂದು ಜನರು ಅಲ್ಲಿಗೆ ಹೋಗಲು ಭಯಪಡುತ್ತಿರುವ ಆ ಸ್ಥಳಗಳಾವುವು ಎಂದು ನೋಡೋಣ ಬನ್ನಿ:

1. ಡೆಲ್ಲಿ ಕ್ಯಾಂಟ್
ಇದು ದೆಹಲಿಯಲ್ಲಿರುವ ತುಂಬಾ ಸುಂದರವಾದ ಸ್ಥಳವಾಗಿದೆ. ಈ ಸ್ಥಳ ಕುದುರೆ ಸವಾರಿಗೆ ತುಂಬಾ ಚೆನ್ನಾಗಿದೆ. ಅನೇಕ ಜನರು ಇಲ್ಲಿ ಬಿಳಿ ಡ್ರೆಸ್ ನಲ್ಲಿ ಒಂದು ಸ್ತ್ರೀ ದಾರಿ ಮೇಲೆ ನಿಂತು ಲಿಫ್ಟ್ ಕೇಳುತ್ತಾಳೆ. ನಾವು ಲಿಫ್ಟ್ ಕೊಟ್ಟರೆ ಅವಳು ಸ್ವಲ್ಪ ಸಮಯದಲ್ಲಿ ಮಾಯವಾಗುತ್ತಾಳೆ ಎಂದು ಹೇಳಿದ್ದಾರೆ. ಈ ಕತೆಯಿಂದಾಗಿ ಜನರು ಈ ಸ್ಥಳಕ್ಕೆ ಹೋಗಲು ಸ್ವಲ್ಪ ಭಯ ಪಡುತ್ತಾರೆ.

2.ಖೂನಿ ದರ್ವಾಜಾ
ಇದು ದೆಹಲಿಯಲ್ಲಿರುವ ಮೊಘಲ್ ಸ್ಮಾರಕವಾಗಿದೆ. ಬ್ರಿಟಿಷರು ಬಹದೂರ್ ಷಾ ಜಫರ್ ನ 3 ಗಂಡು ಮಕ್ಕಳನ್ನು ಕೊಂದರು. ಈ ಮಕ್ಕಳು ದೆವ್ವವಾಗಿ ಬ್ರಿಟಿಷರ ವಿರುದ್ಧ ಸೇಡು ತೀರಿಸಿಕೊಳ್ಳಲು ಬಾಗಿಲ ಬಳಿ ಕಾಯುತ್ತಿದೆ. ಇಲ್ಲಿಗೆ ಬ್ರಿಟಿಷರು ಹೋದಾರೆ ಏನಾದರೂ ಸಂಭವಿಸುತ್ತದೆ ಎಂಬ ಅಂತೆ-ಕಂತೆಗಳು ಈ ಸ್ಮಾರಕದ ಬಗ್ಗೆ ಕೇಳಿ ಬರುತ್ತದೆ.

3. ಜಮಾಲಿ-ಕಮಾಲಿ ಮಸ್ಜೀದ್
ಇದು ದೆವ್ವಗಳ ಹೆಸರಲ್ಲ. ಇಲ್ಲಿ ಹೆಸರಾಂತ ಇಬ್ಬರು ಸಂತರನ್ನು ಸಮಾಧಿ ಮಾಡಲಾಗಿದೆ. ಆದರೆ ಇಲ್ಲಿ ಭೂತದ ಓಡಾಟ ಇದೆ ಎಂದು ಹೇಳಲಾಗುತ್ತಿದೆ. ಈ ಸ್ಥಳಕ್ಕೆ ಭೇಟಿ ಕೊಟ್ಟರೆ ನಿಮ್ಮನ್ನು ಯಾರೋ ಹಿಡಿದು ಎಳೆದಂತೆ, ಕೆನ್ನೆಗೆ ಬಡೆದಂತೆ ಭಾಸವಾಗುವುದು ಎಂದು ಇಲ್ಲಿಗೆ ಹೋದವರು ತಮ್ಮ ಅನುಭವಗಳನ್ನು ಹೇಳಿಕೊಂಡಿದ್ದಾರೆ.

4. ಸಂಜಯ್ ವನ
ದೆಹಲಿಯಲ್ಲಿರುವ ಈ ಕಾಡು ಅರಳಿ ಮರಕ್ಕೆ ಪ್ರಸಿದ್ಧಿಯನ್ನು ಪಡೆದಿದೆ. ಈ ಕಾಡಿನಲ್ಲಿ ಬಿಳಿ ವಸ್ತ್ರ ಧರಿಸಿದ ಸ್ತ್ರೀ ಕಾಣ ಸಿಗುತ್ತಾಳೆ, ನೋಡುತ್ತಿದ್ದಂತೆಯೇ ತಕ್ಷಣ ಮಾಯವಾಗುತ್ತಾಳೆ ಎಂದು ಸಾಕಷ್ಟು ಜನರು ಹೇಳಿದ್ದಾರೆ. ಆದರೆ ಅದು ನಿಜವೇ? ಸುಳ್ಳೇ? ಅನ್ನುವುದನ್ನು ಸ್ವ ಅನುಭವದಿಂದ ತಿಳಿದುಬೇಕಷ್ಟೆ. ಯಾಕೆ ಎಲ್ಲಾ ಕಡೆ ಬರೀ ಹೆಣ್ಣು ದೆವ್ವವೇ ಕಾಣಸಿಗುತ್ತದೆ?

5. ಲೂದಿಯಾನ ಸಮಾಧಿ
ಇಲ್ಲಿ ಕ್ರಿಶ. 1700ರಲ್ಲಿ ಕ್ರೈಸ್ತ ಧರ್ಮ ಗುರುವನ್ನು ಸಮಾಧಿ ಮಾಡಲಾದ ಸ್ಥಳವಾಗಿದೆ. ಆದರೆ ಇಲ್ಲಿ ಮುಂಡವಿಲ್ಲದ ದೆವ್ವ ಓಡಾಡುತ್ತದೆ ಎಂದು ಹೇಳಾಗುತ್ತದೆ. ಈ ದೆವ್ವ ಹಿಂದೆ ಸೈನಿಕನಾಗಿದ್ದ, ತನ್ನ ಪ್ರೇಯಸಿಯಿಂದ ಮೋಸ ಹೋಗಿ ತನ್ನ ತಲೆಯನ್ನು ಕತ್ತರಿಸಿ ಸತ್ತ. ಅಮಾವಾಸ್ಯೆಯಲ್ಲಿ ಮುಂಡವಿಲ್ಲದ ರುಂಡವನ್ನು ಕಾಣಬಹುದು ಎಂಬ ಗಾಳಿ ಸುದ್ಧಿ ಇದೆ. ಇದು ಎಷ್ಟರ ಮಟ್ಟಿಗೆ ಸರಿ ಅನ್ನುವುದು ಆ ದೇವರಿಗೇ ಗೊತ್ತು?



Click it and Unblock the Notifications
