Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಅನಂತ ಚತುರ್ದಶಿಯಂದೇ ಗಣೇಶನ ವಿಸರ್ಜನೆ ಮಾಡುವುದೇಕೆ?
ಗಣೇಶ ಚತುರ್ಥಿಯೆಂದರೆ ತುಂಬಾ ದಿನಗಳ ಸಡಗರ-ಸಂಭ್ರಮ. ಕೆಲವು ಕಡೆ 3 ಅಥವಾ 7 ದಿನಗಳಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಲಾಗುವುದು, ಆದರೆ ಹೆಚ್ಚಿನ ಕಡೆ ಅನಂತ ಚತುರ್ದಶಿಯಂದು ಗಣೇಶನ ವಿಸರ್ಜನೆ ಮಾಡಲಾಗುವುದು. ಅನಂತ ಚತುರ್ದಶಿಯಂದೇ ಗಣೇಶನ ವಿಸರ್ಜನೆ ಏಕೆ ಮಾಡಲಾಗುವುದು ಎಂದು ನೋಡೋಣ ಬನ್ನಿ:

ಈ ವರ್ಷ ಸೆಪ್ಟೆಂಬರ್ 28ಕ್ಕೆ ಅನಂತ ಚತುರ್ದಶಿ, ಇದೇ ದಿನ ಗಣೇಶನನ್ನು ವಿಸರ್ಜನೆ ಮಾಡಲಾಗುವುದು. ಗಣೇಶ ವಿಸರ್ಜನೆ ಅನಂತ ಚತುರ್ದಶಿಯಂದು ಬರುತ್ತದೆ, ಭಾದ್ರಪದ ಮಾಸದ ಶುಕ್ಲ ಪಕ್ಷದ 14ನೇ ದಿನ ಚತುರ್ದಶಿ ತಿಥಿ ಬರುತ್ತದೆ, ಇದೇ ದಿನ ಅನಂತ ಚತುರ್ದಶಿ ಆಚರಿಸಲಾಗುವುದು. ಈ ದಿನ ಗಣೇಶೋತ್ಸವ ಮುಕ್ತಾಯವಾಗುವುದು.
ಅನಂತ ಚತುರ್ದಶಿ ತುಂಬಾ ಶುಭ ದಿನ
ಅನಂತ ಚತುರ್ದಶಿಯನ್ನು ತುಂಬಾ ಶುಭ ದಿನವೆಂದು ಪರಿಗಣಿಸಲಾಗಿದೆ. ಈ ದಿನ ಗಣೇಶನ ವಿಸರ್ಜನೆ ಮಾಡಲಾಗುವುದು, ಏಕೆಂದರೆ ಈ ದಿನ ತುಂಬಾ ಶುಭವಾಗಿರುವುದರಿಂದ ಯಾವುದೇ ವಿಶೇಷ ಪೂಜೆಯ ಅವಶ್ಯಕತೆ ಇರುವುದಿಲ್ಲ, ಆದ್ದರಿಂದ ಗಣೇಶನ ವಿಸರ್ಜನೆಗೆ ಈ ದಿನ ತುಂಬಾ ಶ್ರೇಷ್ಠವಾಗಿದೆ.
ಗಣೇಶ ವಿಸರ್ಜನೆಯ ಸಂಪ್ರದಾಯ
ಗಣೇಶ ವಿಸರ್ಜನೆ ಮಾಡಿದಾಗ ಗಣೇಶೋತ್ಸವ ಮುಕ್ತಾಯವಾಗುವುದು. ಈ ದಿನ ಗಣೇಶನನ್ನು ನೀರಿನಲ್ಲಿ ಮುಳುಗಿಸಿ ವಿಸರ್ಜನೆ ಮಾಡಲಾಗುವುದು. ಗಣೇಶನನ್ನು ವಿಸರ್ಜನೆ ಮಾಡುವಾಗ ತುಂಬಾ ಸಡಗರ -ಸಂಭ್ರಮದಿಂದ ಬಿಡಲಾಗುವುದು. ಗಣೇಶನನ್ನು ನೀರಿನಲ್ಲಿ ಮುಳುಗಿಸಿದಾಗ ಸ್ವರ್ಗ ಲೋಕಕ್ಕೆ ಗಣೇಶ ಪ್ರಯಾಣ ಶುರು ಮಾಡುತ್ತಾನೆ ಎಂದು ಹೇಳಲಾಗುವುದು. 10 ದಿನ ಆರಾಧಿಸಿದ ಗಣೇಶನನ್ನು ನೀರಿನಲ್ಲಿ ಮುಳುಗಿಸುವಾಗ ಬೇಸರವಾದರೂ ಗಣೇಶನ ಕೃಪೆ ಸದಾ ನಮ್ಮ ಮೇಲಿರುತ್ತದೆ ಎಂಬ ನಂಬಿಕೆಯಿಂದ ಗಣೇಶನನ್ನು ಕಳುಹಿಸಿ ಕೊಡಲಾಗುವುದು.
ಗಣೇಶ ವಿಸರ್ಜನೆಯ ಮಹತ್ವ
ಗಣೇಶ ಚತುರ್ಥಿ ಆಚರಣೆ ಮನುಷ್ಯನ ಬದುಕಿನ ಅರ್ಥವನ್ನು ತಿಳಿಸುತ್ತದೆ. ಗಣೇಶ ಪ್ರತಿಷ್ಠಾಪನೆ ಹುಟ್ಟು, ಪೂಜೆ ಜೀವನ, ವಿಸರ್ಜನೆ ಸಾವನ್ನು ಸೂಚಿಸುತ್ತದೆ.
ಅನಂತ ಚತುರ್ದಶಿ
ಅನಂತ ಚತುರ್ದಶಿಯಂದು ಶ್ರೀ ವಿಷ್ಣುವನ್ನು ಆರಾಧಿಸಲಾಗುವುದು. ಈ ದಿನ ಶ್ರೀ ವಿಷ್ಣುವಿನ ಪೂಜೆಗೆ ತುಂಬಾನೇ ಶುಭ ದಿನ ಎಂದು ಪರಿಗಣಿಸಲಾಗುವುದು. ಈ ದಿನ ಅನಂತ ಸೂತ್ರವನ್ನು ಕಟ್ಟುವುದಕ್ಕೆ ತುಂಬಾನೇ ಮಹತ್ವವಿದೆ. ಈ ಸೂತ್ರದಲ್ಲಿ ಸಾಕ್ಷಾತ್ ಶ್ರೀ ವಿಷ್ಣು ನೆಲೆಸಿರುತ್ತಾನೆ ಎಂದು ನಂಬಲಾಗಿದೆ. ಈ ಅನಂತ ಸೂತ್ರವನ್ನು ಶ್ರೀ ವಿಷ್ಣುವಿನ ಪೂಜೆ ಬಳಿಕವಷ್ಟೇ ಕಟ್ಟಬೇಕು. ಈ ಅನಂತ ಸೂತ್ರವನ್ನು ಪುರುಷರು ಬಲಗೈಗೆ, ಮಹಿಳೆಯರಿಗೆ ಎಡಗೈಗೆ ಕಟ್ಟಲಾಗುವುದು. ಯಾರು ಈ ವ್ರತವನ್ನು ಮಾಡುತ್ತಾರೋ ಅವರ ಇಷ್ಟಾರ್ಥಗಳು ನೆರವೇರುವುದು ಎಂದು ಹೇಳಲಾಗುವುದು.
ಗಣೇಶನ ಬೀಳ್ಕೊಟ್ಟು ಬರುವಾಗ ಮನಸ್ಸಿಗೆ ಬೇಸರವಾಗುವುದು ಆದರೆ ಮನೆಗೆ ಹಿಂತಿರುಗಿ ಬಂದಾಗ ಶ್ರೀ ವಿಷ್ಣುವಿನ ಆರಾಧನೆ ಮಾಡುವುದರಿಂದ ಮತ್ತೆ ಮನೆಯಲ್ಲಿ ಸಡಗರ -ಸಂಭ್ರಮ ತುಂಬುವುದು.



Click it and Unblock the Notifications