Latest Updates
-
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ!
ಅನಂತ ಚತುರ್ದಶಿಯಂದೇ ಗಣೇಶನ ವಿಸರ್ಜನೆ ಮಾಡುವುದೇಕೆ?
ಗಣೇಶ ಚತುರ್ಥಿಯೆಂದರೆ ತುಂಬಾ ದಿನಗಳ ಸಡಗರ-ಸಂಭ್ರಮ. ಕೆಲವು ಕಡೆ 3 ಅಥವಾ 7 ದಿನಗಳಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಲಾಗುವುದು, ಆದರೆ ಹೆಚ್ಚಿನ ಕಡೆ ಅನಂತ ಚತುರ್ದಶಿಯಂದು ಗಣೇಶನ ವಿಸರ್ಜನೆ ಮಾಡಲಾಗುವುದು. ಅನಂತ ಚತುರ್ದಶಿಯಂದೇ ಗಣೇಶನ ವಿಸರ್ಜನೆ ಏಕೆ ಮಾಡಲಾಗುವುದು ಎಂದು ನೋಡೋಣ ಬನ್ನಿ:

ಈ ವರ್ಷ ಸೆಪ್ಟೆಂಬರ್ 28ಕ್ಕೆ ಅನಂತ ಚತುರ್ದಶಿ, ಇದೇ ದಿನ ಗಣೇಶನನ್ನು ವಿಸರ್ಜನೆ ಮಾಡಲಾಗುವುದು. ಗಣೇಶ ವಿಸರ್ಜನೆ ಅನಂತ ಚತುರ್ದಶಿಯಂದು ಬರುತ್ತದೆ, ಭಾದ್ರಪದ ಮಾಸದ ಶುಕ್ಲ ಪಕ್ಷದ 14ನೇ ದಿನ ಚತುರ್ದಶಿ ತಿಥಿ ಬರುತ್ತದೆ, ಇದೇ ದಿನ ಅನಂತ ಚತುರ್ದಶಿ ಆಚರಿಸಲಾಗುವುದು. ಈ ದಿನ ಗಣೇಶೋತ್ಸವ ಮುಕ್ತಾಯವಾಗುವುದು.
ಅನಂತ ಚತುರ್ದಶಿ ತುಂಬಾ ಶುಭ ದಿನ
ಅನಂತ ಚತುರ್ದಶಿಯನ್ನು ತುಂಬಾ ಶುಭ ದಿನವೆಂದು ಪರಿಗಣಿಸಲಾಗಿದೆ. ಈ ದಿನ ಗಣೇಶನ ವಿಸರ್ಜನೆ ಮಾಡಲಾಗುವುದು, ಏಕೆಂದರೆ ಈ ದಿನ ತುಂಬಾ ಶುಭವಾಗಿರುವುದರಿಂದ ಯಾವುದೇ ವಿಶೇಷ ಪೂಜೆಯ ಅವಶ್ಯಕತೆ ಇರುವುದಿಲ್ಲ, ಆದ್ದರಿಂದ ಗಣೇಶನ ವಿಸರ್ಜನೆಗೆ ಈ ದಿನ ತುಂಬಾ ಶ್ರೇಷ್ಠವಾಗಿದೆ.
ಗಣೇಶ ವಿಸರ್ಜನೆಯ ಸಂಪ್ರದಾಯ
ಗಣೇಶ ವಿಸರ್ಜನೆ ಮಾಡಿದಾಗ ಗಣೇಶೋತ್ಸವ ಮುಕ್ತಾಯವಾಗುವುದು. ಈ ದಿನ ಗಣೇಶನನ್ನು ನೀರಿನಲ್ಲಿ ಮುಳುಗಿಸಿ ವಿಸರ್ಜನೆ ಮಾಡಲಾಗುವುದು. ಗಣೇಶನನ್ನು ವಿಸರ್ಜನೆ ಮಾಡುವಾಗ ತುಂಬಾ ಸಡಗರ -ಸಂಭ್ರಮದಿಂದ ಬಿಡಲಾಗುವುದು. ಗಣೇಶನನ್ನು ನೀರಿನಲ್ಲಿ ಮುಳುಗಿಸಿದಾಗ ಸ್ವರ್ಗ ಲೋಕಕ್ಕೆ ಗಣೇಶ ಪ್ರಯಾಣ ಶುರು ಮಾಡುತ್ತಾನೆ ಎಂದು ಹೇಳಲಾಗುವುದು. 10 ದಿನ ಆರಾಧಿಸಿದ ಗಣೇಶನನ್ನು ನೀರಿನಲ್ಲಿ ಮುಳುಗಿಸುವಾಗ ಬೇಸರವಾದರೂ ಗಣೇಶನ ಕೃಪೆ ಸದಾ ನಮ್ಮ ಮೇಲಿರುತ್ತದೆ ಎಂಬ ನಂಬಿಕೆಯಿಂದ ಗಣೇಶನನ್ನು ಕಳುಹಿಸಿ ಕೊಡಲಾಗುವುದು.
ಗಣೇಶ ವಿಸರ್ಜನೆಯ ಮಹತ್ವ
ಗಣೇಶ ಚತುರ್ಥಿ ಆಚರಣೆ ಮನುಷ್ಯನ ಬದುಕಿನ ಅರ್ಥವನ್ನು ತಿಳಿಸುತ್ತದೆ. ಗಣೇಶ ಪ್ರತಿಷ್ಠಾಪನೆ ಹುಟ್ಟು, ಪೂಜೆ ಜೀವನ, ವಿಸರ್ಜನೆ ಸಾವನ್ನು ಸೂಚಿಸುತ್ತದೆ.
ಅನಂತ ಚತುರ್ದಶಿ
ಅನಂತ ಚತುರ್ದಶಿಯಂದು ಶ್ರೀ ವಿಷ್ಣುವನ್ನು ಆರಾಧಿಸಲಾಗುವುದು. ಈ ದಿನ ಶ್ರೀ ವಿಷ್ಣುವಿನ ಪೂಜೆಗೆ ತುಂಬಾನೇ ಶುಭ ದಿನ ಎಂದು ಪರಿಗಣಿಸಲಾಗುವುದು. ಈ ದಿನ ಅನಂತ ಸೂತ್ರವನ್ನು ಕಟ್ಟುವುದಕ್ಕೆ ತುಂಬಾನೇ ಮಹತ್ವವಿದೆ. ಈ ಸೂತ್ರದಲ್ಲಿ ಸಾಕ್ಷಾತ್ ಶ್ರೀ ವಿಷ್ಣು ನೆಲೆಸಿರುತ್ತಾನೆ ಎಂದು ನಂಬಲಾಗಿದೆ. ಈ ಅನಂತ ಸೂತ್ರವನ್ನು ಶ್ರೀ ವಿಷ್ಣುವಿನ ಪೂಜೆ ಬಳಿಕವಷ್ಟೇ ಕಟ್ಟಬೇಕು. ಈ ಅನಂತ ಸೂತ್ರವನ್ನು ಪುರುಷರು ಬಲಗೈಗೆ, ಮಹಿಳೆಯರಿಗೆ ಎಡಗೈಗೆ ಕಟ್ಟಲಾಗುವುದು. ಯಾರು ಈ ವ್ರತವನ್ನು ಮಾಡುತ್ತಾರೋ ಅವರ ಇಷ್ಟಾರ್ಥಗಳು ನೆರವೇರುವುದು ಎಂದು ಹೇಳಲಾಗುವುದು.
ಗಣೇಶನ ಬೀಳ್ಕೊಟ್ಟು ಬರುವಾಗ ಮನಸ್ಸಿಗೆ ಬೇಸರವಾಗುವುದು ಆದರೆ ಮನೆಗೆ ಹಿಂತಿರುಗಿ ಬಂದಾಗ ಶ್ರೀ ವಿಷ್ಣುವಿನ ಆರಾಧನೆ ಮಾಡುವುದರಿಂದ ಮತ್ತೆ ಮನೆಯಲ್ಲಿ ಸಡಗರ -ಸಂಭ್ರಮ ತುಂಬುವುದು.



Click it and Unblock the Notifications