Latest Updates
-
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ! -
ಕರಾವಳಿ ರೆಡ್ ಅಲರ್ಟ್: ಮನೆಯಲ್ಲೇ ಸುರಕ್ಷಿತವಾಗಿ ಫಿಟ್ ಆಗಿರಲು ಈ 12 ನಿಮಿಷಗಳ ವರ್ಕೌಟ್ ಟ್ರೈ ಮಾಡಿ! -
ಪುಣೆಯಲ್ಲಿ ಮಳೆ ರಜೆ: ವರ್ಕ್ ಫ್ರಮ್ ಹೋಮ್ ಜೊತೆಗೆ ಮಕ್ಕಳನ್ನು ನಿಭಾಯಿಸಲು ಇಲ್ಲಿದೆ ಸ್ಮಾರ್ಟ್ ಟಿಪ್ಸ್ -
ಮುಂಬೈ ರೆಡ್ ಅಲರ್ಟ್: ಮಳೆಯಿಂದ ನಿಮ್ಮ ಬಾಡಿಗೆ ಮನೆ ಮತ್ತು ವಸ್ತುಗಳನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಮುಂಬೈ ರೆಡ್ ಅಲರ್ಟ್: ಮಳೆಗಾಲದ ಕಾಯಿಲೆಗಳಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಮುಂಬೈ ಮಳೆ ಅಬ್ಬರ: ವಿಮಾನ ನಿಲ್ದಾಣಕ್ಕೆ ಹೋಗುವ ಮುನ್ನ ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ
ಜೀವನದಲ್ಲಿ ಸಾಧನೆ ಮಾಡಬೇಕೆನ್ನುವವರು ಈ ಅಭ್ಯಾಸಗಳು ಬಿಟ್ಟು ಬಿಡಿ : ವಿಧುರ ನೀತಿ
ಕೆಲವೊಂದು ಸಲ ಜೀವನದಲ್ಲಿ ಸಂಕಷ್ಟಗಳು ಬಂದಾಗ ಏನು ಮಾಡಬೇಕು ಅನ್ನೋದೇ ತೋಚೋದಿಲ್ಲ. ಸಂಪೂರ್ಣವಾಗಿ ಕುಗ್ಗಿ ಹೋಗುತ್ತೇವೆ. ಇಂತಹ ಸಂದರ್ಭದಲ್ಲಿ ಮಹಾತ್ಮರು ಹೇಳಿಕೊಟ್ಟ ಕೆಲವೊಂದು ಕಿವಿ ಮಾತುಗಳನ್ನು ಕೇಳುವುದು ತುಂಬಾನೇ ಮುಖ್ಯವಾಗುತ್ತದೆ. ಅದ್ರಲ್ಲೂ ವಿಧುರ ನೀತಿ ಸಂಕಷ್ಟದ ಸಮಯದಲ್ಲಿ ನಮ್ಮ ಕೈ ಹಿಡಿದು ನಡೆಸುತ್ತದೆ.
ಮಹಾಭಾರತ ಕಾಲದಲ್ಲಿ ದೇಶ ಕಂಡ ಮಹಾನ್ ವಿಧ್ವಾಂಸರು ಹಾಗೂ ಅತೀ ಬುದ್ಧಿವಂತನಾಗಿದ್ದ ಇವರು ನ್ಯಾಯ ಹಾಗೂ ಧರ್ಮದ ಪರವಾಗಿ ರೂಪಿಸಿದ ನೀತಿಗಳು ಇಂದಿಗೂ ಪ್ರಚಲಿತದಲ್ಲಿದೆ. ಮನುಷ್ಯರು ಅರ್ಥಪೂರ್ಣ ಬದುಕನ್ನು ಕಟ್ಟಿಕೊಳ್ಳಲು ಈ ನೀತಿ ಸಹಾಯವಾಗಿದೆ ಅಂದ್ರೆ ತಪ್ಪಾಗೋದಿಲ್ಲ.

ವಿಧುರನ ಪ್ರಕಾರ ಜೀವನದಲ್ಲಿ ಯಶಸ್ಬಿಯಾಗಬೇಕಾದರೆ ಈ ಮೂರು ವಿಚಾರಗಳನ್ನು ಹತ್ತಿರ ಸುಳಿಯಲೇ ಬಿಡಬಾರದು ಅಷ್ಟಕ್ಕು ವಿಧುರ ನೀತಿಯಲ್ಲಿ ಉಲ್ಲೇಖವಾಗಿರುವ ಆ ಮೂರು ವಿಚಾರಗಳು ಯಾವುದು ಅನ್ನೋದನ್ನ ತಿಳಿಯೋಣ.
1. ಉದಾಸೀನ
ವಿಧುರ ನೀತಿಯಲ್ಲಿ ಮನುಷ್ಯ ಉದಾಸೀನ ಪಟ್ಟರೆ ಏನೆಲ್ಲಾ ತೊಂದರೆಗಳು ಆಗುತ್ತೆ ಅನ್ನೋದ್ರ ಬಗ್ಗೆ ಉಲ್ಲೇಖವಾಗಿದೆ. ನಮ್ಮ ಜೀವನದಲ್ಲಿ ಪ್ರಗತಿ ಸಾಧಿಸಬೇಕೆಂದರೆ ಅಲ್ಲಿ ಪರಿಶ್ರಮ ಇರಲೇಬೇಕು. ಆದರೆ ಯಾವ ವ್ಯಕ್ತಿ ಉದಾಸೀನವನ್ನೇ ಮೈಗೂಡಿಸಿಕೊಳ್ಳುತ್ತಾನೋ ಆತ ಪ್ರಗತಿಯಾಗೋದಕ್ಕೆ ಸಾಧ್ಯವೇ ಇಲ್ಲ. ಉದಾಸೀನ ಮಾಡೋ ವ್ಯಕ್ತಿ ಪ್ರತಿಯೊಂದು ಕೆಲಸವನ್ನು ಮುಂದೂಡುತ್ತಾನೆ. ಇದರಿಂದ ಆತ ಅನೇಕ ಅವಕಾಶಗಳನ್ನು ಕಳೆದುಕೊಳ್ಳುತ್ತಾನೆ. ಜೀವನದಲ್ಲಿ ಯಶಸ್ಸು ಸಾಧಿಸಬೇಕೆಂದವರು ಉದಾಸೀನ ಮಾಡಲೇಬೇಡಿ ಎಂದು ವಿಧುರ ನೀತಿಯಲ್ಲಿ ಉಲ್ಲೇಖವಾಗಿದೆ.
2. ದೇವರ ಮೇಲೆ ಎಲ್ಲಾ ಹೊರೆಯನ್ನು ಹಾಕಬೇಡಿ
ವಿಧುರನ ಪ್ರಕಾರ ಮನುಷ್ಯನು ದೇವರ ಮೇಲೆ ಎಲ್ಲಾ ಹೊರೆಯನ್ನು ಹಾಕಿ ಸುಮ್ಮನೆ ಕುಳಿತುಕೊಳ್ಳುವುದು ಸರಿಯಲ್ಲ. ಅನೇಕ ಜನ ಏನಾದರೂ ಕೆಲಸ ಆಗಬೇಕಾದರೆ ಅಥವಾ ಆತನ ಕಷ್ಟಗಳು ನಿವಾರಣೆ ಆಗಬೇಕಾದರೆ ದೇವರಲ್ಲಿ ಭಕ್ತಿಯಿಂದ ಬೇಡಿಕೊಂಡು ಸುಮ್ಮನೆ ಕುಳಿತು ಬಿಡುತ್ತಾರೆ. ಯಾವಾಗ ನಮ್ಮ ಪ್ರಯತ್ನ ಇರುತ್ತದೋ ಆಗ ಮಾತ್ರ ದೇವರು ನಮಗೆ ಫಲವನ್ನು ಕರುಣಿಸುತ್ತಾನೆ. ಅದನ್ನು ಬಿಟ್ಟು ಸುಮ್ಮನೆ ಕುಳಿತು ದೇವರೇ ಕಾಪಾಡಪ್ಪಾ ಎಂದು ಹೇಳಿದರೆ ಪ್ರಯೋಜನವಿಲ್ಲ ಎಂದು ವಿಧುರ ನೀತಿಯಲ್ಲಿ ಉಲ್ಲೇಖವಾಗಿದೆ.
3. ಅತಿಯಾಸೆ ಬಿಟ್ಟು ಬಿಡಿ
ಮನುಷ್ಯನಿಗೆ ಆಸೆ ಇರಬೇಕೇ ಹೊರತು ಅತಿಯಾಸೆ ಒಳ್ಳೆಯದಲ್ಲ ಎಂದು ವಿಧುರ ನೀತಿಯಲ್ಲಿ ಉಲ್ಲೇಖವಾಗಿದೆ. ಕೆಲವರು ಕಡಿಮೆ ಕೆಲಸ ಮಾಡಿ ದೊಡ್ಡ ಸಾಧನೆ ಮಾಡೋದಕ್ಕೆ ಬಯಸುತ್ತಾರೆ. ಇಂತವರು ಜೀವನದಲ್ಲಿ ಮುಂದೆ ಬರೋದಕ್ಕೆ ಸಾಧ್ಯವೇ ಇಲ್ಲ. ಯಾರು ಶಾರ್ಟ್ಕಟ್ನಲ್ಲಿ ಸಾಧನೆ ಮಾಡೋದಕ್ಕೆ ಹೋಗುತ್ತಾರೋ ಅವರು ಯಶಸ್ಸು ಪಡೆಯೋದಕ್ಕಿಂತ ಹೆಚ್ಚಾಗಿ ಸಮಸ್ಯೆಗಳನ್ನೇ ಎದುರಿಸುತ್ತಾರೆ ಎಂದು ವಿಧುರ ನೀತಿಯಲ್ಲಿ ಉಲ್ಲೇಖವಾಗಿದೆ.
ವಿಧುರ ನೀತಿಯಲ್ಲಿ ಉಲ್ಲೇಕವಾಗಿರುವಂತೆ ಕಷ್ಟ ಪಟ್ಟರೆ ಮಾತ್ರ ಸುಖ ಲಭಿಸೋದಕ್ಕೆ ಸಾಧ್ಯ. ಹೀಗಾಗಿ ಶ್ರಮ ಅನ್ನೋದು ಇರಲೇಬೇಕು ಆಗ ಮಾತ್ರ ಸಾಧನೆ ಮೆಟ್ಟಿಲ್ಲು ಹತ್ತೋದಕ್ಕೆ ಸಾಧ್ಯ.



Click it and Unblock the Notifications


