Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಜೀವನದಲ್ಲಿ ಸಾಧನೆ ಮಾಡಬೇಕೆನ್ನುವವರು ಈ ಅಭ್ಯಾಸಗಳು ಬಿಟ್ಟು ಬಿಡಿ : ವಿಧುರ ನೀತಿ
ಕೆಲವೊಂದು ಸಲ ಜೀವನದಲ್ಲಿ ಸಂಕಷ್ಟಗಳು ಬಂದಾಗ ಏನು ಮಾಡಬೇಕು ಅನ್ನೋದೇ ತೋಚೋದಿಲ್ಲ. ಸಂಪೂರ್ಣವಾಗಿ ಕುಗ್ಗಿ ಹೋಗುತ್ತೇವೆ. ಇಂತಹ ಸಂದರ್ಭದಲ್ಲಿ ಮಹಾತ್ಮರು ಹೇಳಿಕೊಟ್ಟ ಕೆಲವೊಂದು ಕಿವಿ ಮಾತುಗಳನ್ನು ಕೇಳುವುದು ತುಂಬಾನೇ ಮುಖ್ಯವಾಗುತ್ತದೆ. ಅದ್ರಲ್ಲೂ ವಿಧುರ ನೀತಿ ಸಂಕಷ್ಟದ ಸಮಯದಲ್ಲಿ ನಮ್ಮ ಕೈ ಹಿಡಿದು ನಡೆಸುತ್ತದೆ.
ಮಹಾಭಾರತ ಕಾಲದಲ್ಲಿ ದೇಶ ಕಂಡ ಮಹಾನ್ ವಿಧ್ವಾಂಸರು ಹಾಗೂ ಅತೀ ಬುದ್ಧಿವಂತನಾಗಿದ್ದ ಇವರು ನ್ಯಾಯ ಹಾಗೂ ಧರ್ಮದ ಪರವಾಗಿ ರೂಪಿಸಿದ ನೀತಿಗಳು ಇಂದಿಗೂ ಪ್ರಚಲಿತದಲ್ಲಿದೆ. ಮನುಷ್ಯರು ಅರ್ಥಪೂರ್ಣ ಬದುಕನ್ನು ಕಟ್ಟಿಕೊಳ್ಳಲು ಈ ನೀತಿ ಸಹಾಯವಾಗಿದೆ ಅಂದ್ರೆ ತಪ್ಪಾಗೋದಿಲ್ಲ.

ವಿಧುರನ ಪ್ರಕಾರ ಜೀವನದಲ್ಲಿ ಯಶಸ್ಬಿಯಾಗಬೇಕಾದರೆ ಈ ಮೂರು ವಿಚಾರಗಳನ್ನು ಹತ್ತಿರ ಸುಳಿಯಲೇ ಬಿಡಬಾರದು ಅಷ್ಟಕ್ಕು ವಿಧುರ ನೀತಿಯಲ್ಲಿ ಉಲ್ಲೇಖವಾಗಿರುವ ಆ ಮೂರು ವಿಚಾರಗಳು ಯಾವುದು ಅನ್ನೋದನ್ನ ತಿಳಿಯೋಣ.
1. ಉದಾಸೀನ
ವಿಧುರ ನೀತಿಯಲ್ಲಿ ಮನುಷ್ಯ ಉದಾಸೀನ ಪಟ್ಟರೆ ಏನೆಲ್ಲಾ ತೊಂದರೆಗಳು ಆಗುತ್ತೆ ಅನ್ನೋದ್ರ ಬಗ್ಗೆ ಉಲ್ಲೇಖವಾಗಿದೆ. ನಮ್ಮ ಜೀವನದಲ್ಲಿ ಪ್ರಗತಿ ಸಾಧಿಸಬೇಕೆಂದರೆ ಅಲ್ಲಿ ಪರಿಶ್ರಮ ಇರಲೇಬೇಕು. ಆದರೆ ಯಾವ ವ್ಯಕ್ತಿ ಉದಾಸೀನವನ್ನೇ ಮೈಗೂಡಿಸಿಕೊಳ್ಳುತ್ತಾನೋ ಆತ ಪ್ರಗತಿಯಾಗೋದಕ್ಕೆ ಸಾಧ್ಯವೇ ಇಲ್ಲ. ಉದಾಸೀನ ಮಾಡೋ ವ್ಯಕ್ತಿ ಪ್ರತಿಯೊಂದು ಕೆಲಸವನ್ನು ಮುಂದೂಡುತ್ತಾನೆ. ಇದರಿಂದ ಆತ ಅನೇಕ ಅವಕಾಶಗಳನ್ನು ಕಳೆದುಕೊಳ್ಳುತ್ತಾನೆ. ಜೀವನದಲ್ಲಿ ಯಶಸ್ಸು ಸಾಧಿಸಬೇಕೆಂದವರು ಉದಾಸೀನ ಮಾಡಲೇಬೇಡಿ ಎಂದು ವಿಧುರ ನೀತಿಯಲ್ಲಿ ಉಲ್ಲೇಖವಾಗಿದೆ.
2. ದೇವರ ಮೇಲೆ ಎಲ್ಲಾ ಹೊರೆಯನ್ನು ಹಾಕಬೇಡಿ
ವಿಧುರನ ಪ್ರಕಾರ ಮನುಷ್ಯನು ದೇವರ ಮೇಲೆ ಎಲ್ಲಾ ಹೊರೆಯನ್ನು ಹಾಕಿ ಸುಮ್ಮನೆ ಕುಳಿತುಕೊಳ್ಳುವುದು ಸರಿಯಲ್ಲ. ಅನೇಕ ಜನ ಏನಾದರೂ ಕೆಲಸ ಆಗಬೇಕಾದರೆ ಅಥವಾ ಆತನ ಕಷ್ಟಗಳು ನಿವಾರಣೆ ಆಗಬೇಕಾದರೆ ದೇವರಲ್ಲಿ ಭಕ್ತಿಯಿಂದ ಬೇಡಿಕೊಂಡು ಸುಮ್ಮನೆ ಕುಳಿತು ಬಿಡುತ್ತಾರೆ. ಯಾವಾಗ ನಮ್ಮ ಪ್ರಯತ್ನ ಇರುತ್ತದೋ ಆಗ ಮಾತ್ರ ದೇವರು ನಮಗೆ ಫಲವನ್ನು ಕರುಣಿಸುತ್ತಾನೆ. ಅದನ್ನು ಬಿಟ್ಟು ಸುಮ್ಮನೆ ಕುಳಿತು ದೇವರೇ ಕಾಪಾಡಪ್ಪಾ ಎಂದು ಹೇಳಿದರೆ ಪ್ರಯೋಜನವಿಲ್ಲ ಎಂದು ವಿಧುರ ನೀತಿಯಲ್ಲಿ ಉಲ್ಲೇಖವಾಗಿದೆ.
3. ಅತಿಯಾಸೆ ಬಿಟ್ಟು ಬಿಡಿ
ಮನುಷ್ಯನಿಗೆ ಆಸೆ ಇರಬೇಕೇ ಹೊರತು ಅತಿಯಾಸೆ ಒಳ್ಳೆಯದಲ್ಲ ಎಂದು ವಿಧುರ ನೀತಿಯಲ್ಲಿ ಉಲ್ಲೇಖವಾಗಿದೆ. ಕೆಲವರು ಕಡಿಮೆ ಕೆಲಸ ಮಾಡಿ ದೊಡ್ಡ ಸಾಧನೆ ಮಾಡೋದಕ್ಕೆ ಬಯಸುತ್ತಾರೆ. ಇಂತವರು ಜೀವನದಲ್ಲಿ ಮುಂದೆ ಬರೋದಕ್ಕೆ ಸಾಧ್ಯವೇ ಇಲ್ಲ. ಯಾರು ಶಾರ್ಟ್ಕಟ್ನಲ್ಲಿ ಸಾಧನೆ ಮಾಡೋದಕ್ಕೆ ಹೋಗುತ್ತಾರೋ ಅವರು ಯಶಸ್ಸು ಪಡೆಯೋದಕ್ಕಿಂತ ಹೆಚ್ಚಾಗಿ ಸಮಸ್ಯೆಗಳನ್ನೇ ಎದುರಿಸುತ್ತಾರೆ ಎಂದು ವಿಧುರ ನೀತಿಯಲ್ಲಿ ಉಲ್ಲೇಖವಾಗಿದೆ.
ವಿಧುರ ನೀತಿಯಲ್ಲಿ ಉಲ್ಲೇಕವಾಗಿರುವಂತೆ ಕಷ್ಟ ಪಟ್ಟರೆ ಮಾತ್ರ ಸುಖ ಲಭಿಸೋದಕ್ಕೆ ಸಾಧ್ಯ. ಹೀಗಾಗಿ ಶ್ರಮ ಅನ್ನೋದು ಇರಲೇಬೇಕು ಆಗ ಮಾತ್ರ ಸಾಧನೆ ಮೆಟ್ಟಿಲ್ಲು ಹತ್ತೋದಕ್ಕೆ ಸಾಧ್ಯ.



Click it and Unblock the Notifications



