Just In
- 2 hrs ago ಗುರು ಸಂಚಾರ 2024: ಕನ್ಯಾ ರಾಶಿಯಲ್ಲಿ 12 ತಿಂಗಳು ಗುರುವಿನ ಪ್ರಭಾವ ಹೇಗಿರಲಿದೆ?
- 11 hrs ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 11 hrs ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- 12 hrs ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
Don't Miss
- News ನೇಹಾ ಹಿರೇಮಠ್ ಹತ್ಯೆ; ಕಾಣದ ಕೈಗಳಿಂದ ಕೊಲೆ ಆರೋಪಿ ರಕ್ಷಣೆ ಎಂದ ಜೆಡಿಎಸ್
- Movies ಪಶ್ಚಾತಾಪದ ಅಗ್ನಿಕುಂಡದಲ್ಲಿ ಪರಿಣಿತಿ ಚೋಪ್ರಾ ; ನನ್ನೆಲ್ಲ ಸೋಲುಗಳಿಗೆ ಆ ವ್ಯಕ್ತಿಗಳೇ ಕಾರಣ ಎಂದ ನಟಿ..!
- Automobiles ಪೆಟ್ರೋಲ್ಗೆ ಹೆಚ್ಚು ಹಣ ಖರ್ಚು ಮಾಡುತ್ತಿದ್ದೀರಾ?.. ಇಲ್ಲಿವೆ ಉತ್ತಮ ಎಲೆಕ್ಟ್ರಿಕ್ ಸ್ಕೂಟರ್ಗಳು, ಜಾಸ್ತಿ ಓಡ
- Finance Bengaluru Traffic Police: ಬೆಂಗಳೂರಿನ ಈ ರಸ್ತೆ ಸಂಚಾರ ಮಾರ್ಗ ಬದಲಾವಣೆ, ವಿವರ
- Technology Samsung: ಭಾರತದಲ್ಲಿ ಹೊಸ ವೇರಿಯಂಟ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ F15 5G! ಬೆಲೆ ಎಷ್ಟು?
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ 'ದೇವಸ್ಥಾನದ' ಆವರಣದಲ್ಲಿ ಮಲಗಿದರೆ ಮಕ್ಕಳ ಭಾಗ್ಯ ಲಭಿಸುವುದು!
ಪ್ರತಿಯೊಬ್ಬ ಮಹಿಳೆಯೂ ತಾನು ತಾಯ್ತನವನ್ನು ಅನುಭವಿಸಬೇಕು, ಮಡಿಲಲ್ಲಿ ಪುಟ್ಟ ಕಂದನ್ನು ಆಡಿಸಬೇಕು ಎನ್ನುವ ಬಯಕೆಯನ್ನು ಹೊಂದಿರುತ್ತಾಳೆ. ಆದರೆ ಕೆಲವರು ನತದೃಷ್ಟದಿಂದ ಮಗುವಿನ ಭಾಗ್ಯ ಪಡೆಯದೇ ಸಂಕಷ್ಟದಲ್ಲಿ ಇರುತ್ತಾರೆ. ಇಂತಹ ದುಃಖಿಗಳಿಗಾಗಿ ಸಂತಸ ನೀಡುವ ಸ್ಥಳವೊಂದಿದೆ.
ಈ ಪುಣ್ಯ ಸ್ಥಳಕ್ಕೆ ಬಂದರೆ ಮಕ್ಕಳಿಲ್ಲದವರಿಗೆ ಮಕ್ಕಳ ಭಾಗ್ಯವನ್ನು ಕಲ್ಪಿಸಿ, ಬಾಳಿನ ಜ್ಯೋತಿಯನ್ನು ಬೆಳಗಿಸುವ ಶಕ್ತಿಯಿದೆ ಎಂದು ಹೇಳಲಾಗುತ್ತದೆ. ಇದು ಕೆಲವರಿಗೆ ಮೂಢನಂಬಿಕೆ ಎನಿಸಬಹುದು. ಆದರೆ ಇದು ಸತ್ಯ. ಈಗಾಗಲೇ ಎಲ್ಲಾ ಬಗೆಯ ಚಿಕಿತ್ಸೆ ಪಡೆದುಕೊಂಡಿದ್ದರೂ ಮಗುವಿನ ಭಾಗ್ಯ ಇಲ್ಲವೆಂದವರು ಇಲ್ಲಿಗೆ ಬರಬಹುದು. ಈ ಪವಿತ್ರ ದೇವಸ್ಥಾನದ ನೆಲದ ಮೇಲೆ ಮಲಗಿಕೊಂಡರೆ ಗರ್ಭಿಣಿಯಾಗುವ ಶಕ್ತಿಯು ದೇಹಕ್ಕೆ ಆವರಿಸುತ್ತದೆ ಎಂದು ಹೇಳಲಾಗುತ್ತದೆ. ಹಾಗಾದರೆ ಈ ಕ್ಷೇತ್ರ ಎಲ್ಲಿದೆ? ಎನ್ನುವ ಪ್ರಶ್ನೆ ಕಾಡುತ್ತಿದ್ದರೆ ಮುಂದಿರುವ ವಿವರಣೆ ಓದಿ....
ಎಲ್ಲಿದೆ ಈ ಪವಿತ್ರ ಕ್ಷೇತ್ರ?
ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಲಾಡ್ ಭರೋಲ್ ಸಮೀಪದ ಸಿಮಾಸ್ ಗ್ರಾಮದಲ್ಲಿದೆ. ಇಲ್ಲಿರುವ ಈ ದೇವಾಲಯಕ್ಕೆ ಸಿಮ್ಸಾ ದೇವಸ್ಥಾನ ಎಂದು ಕರೆಯುತ್ತಾರೆ. ಇಲ್ಲಿ ಸಿಮ್ಸಾ ದೇವಿಯನ್ನು ಆರಾಧಿಸಲಾಗುತ್ತದೆ. ಈ ದೇವಿಗೆ "ಸಂತಾನ್-ದಾತ್ರಿ'' ಎಂದೂ ಸಹ ಕರೆಯುತ್ತಾರೆ.
ಬಹಳ ಪ್ರಸಿದ್ಧಿ ಪಡೆದಿದೆ
ಹಿಮಾಚಲದ ಹತ್ತಿರದ ರಾಜ್ಯಗಳಾದ ಪಂಜಾಬ್, ಹರಿಯಾಣ, ಚಂಡೀಗಢಗಳಿಂದ ಭಕ್ತರ ಹರಿವು ಜೋರಾಗಿದೆ. ಇಲ್ಲಿ ಮಕ್ಕಳಿಲ್ಲದ ಮಹಿಳೆಯರು ಹರಕೆ, ಪೂಜೆಗಳ ಪ್ರಾರ್ಥನೆ ಮಾಡಿಕೊಂಡು ಇಲ್ಲಿಗೆ ಬರುತ್ತಾರೆ. ನವರಾತ್ರಿಯ ಸಂದರ್ಭದಲ್ಲಿ ಭಕ್ತರ ಸಂಖ್ಯೆ ಎಂದಿಗಿಂತ ಹೆಚ್ಚಿರುತ್ತದೆ.
ನವರಾತ್ರಿಯಲ್ಲಿ ಜನಜಂಗುಳಿ ಹೆಚ್ಚು
ನವರಾತ್ರಿಯ ಸಂದರ್ಭದಲ್ಲಿ ಸಾವಿರಾರು ಜೋಡಿಗಳು ಇಲ್ಲಿಗೆ ಬರುತ್ತಾರೆ. ದೇವಾಲಯದ ಆವರಣದಲ್ಲಿ ವಾಸಿಸುತ್ತಾರೆ. ರಾತ್ರಿ-ಹಗಲು ಎರಡು ಹೊತ್ತು ಇಲ್ಲಿ ನೆಲದ ಮೇಲೆ ಮಲಗುತ್ತಾರೆ.
ಕನಸಲ್ಲಿ ದೇವರ ದರ್ಶನ
ದೇವಸ್ಥಾನದ ಬಗ್ಗೆ ಭಕ್ತಿ ಹಾಗೂ ನಂಬಿಕೆ ಇರುವವರ ಕನಸಿನಲ್ಲಿ ಸಿಮ್ಸಾ ದೇವರು ಮನುಷ್ಯರ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಮಗುವನ್ನು ಹೊಂದಲು ಆಶೀರ್ವದಿಸುತ್ತಾಳೆ. ಕನಸಿನಲ್ಲಿ ಮಹಿಳೆ ಹಣ್ಣು ಅಥವಾ ಹೂವನ್ನು ಪಡೆದಂತೆ ಕಂಡರೆ ಆಕೆಗೆ ಮಗು ಆಗುವ ಫಲ ದೊರೆತಂತೆ ಎಂದು ಹೇಳಲಾಗುವುದು.
ನಂಬಿಕೆಯ ಪ್ರಕಾರ
ಈ ದೇವತೆಯು ಮಗುವಿನ ಲಿಂಗವನ್ನು ಬಹಿರಂಗ ಪಡಿಸುತ್ತದೆ ಎಂದು ನಂಬಲಾಗುತ್ತದೆ. ಕನಸಿನಲ್ಲಿ ಸೀಬೆಹಣ್ಣು ಪಡೆದಂತೆ ಕನಸುಕಂಡರೆ ಗಂಡು ಮಗು ಹುಟ್ಟುವುದು, ಮಹಿಳೆಯರ ಬೆರಳನ್ನು ಕನಸಲ್ಲಿ ಕಂಡರೆ ಅವಳಿ ಹೆಣ್ಣು ಮಗುವೆಂದು ತಿಳಿಸಿದಂತೆ ಎಂಬ ನಂಬಿಕೆ ಇದೆ.
ಹೀಗೂ ಆಗುವುದು
ಮಹಿಳೆಗೆ ಕಲ್ಲು, ಮರ, ಲೋಹದಂತಹ ವಸ್ತುಗಳು ಕನಸಲ್ಲಿ ಕಂಡರೆ ಅವಳಿಗೆ ಮಗುವಿನ ಭಾಗ್ಯವಿಲ್ಲ ಎಂದು ತಿಳಿಯಬಹುದು. ಮಗು ಪಡೆಯುವ ಭಾಗ್ಯ ಇಲ್ಲ ಎನ್ನುವ ಕನಸು ಬಿದ್ದಮೇಲೂ ಅಲ್ಲಿಯೇ ಇದ್ದರೆ ದೇಹದಲ್ಲಿ ನವೆ, ಕೆಂಪು ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ಆಗ ದೇವಸ್ಥಾನವನ್ನು ಬಿಡಬೇಕು ಎಂಬ ನಂಬಿಕೆಯಿದೆ.
ವಿಶೇಷವಾದ ಕಲ್ಲು
ಸಿಮ್ಸಾ ದೇವಸ್ಥಾನದ ಹತ್ತಿರ ಒಂದು ದೊಡ್ಡ ಕಲ್ಲಿದೆ. ಅದು ಅತ್ಯಂತ ಪವಿತ್ರವಾದದ್ದು ಎಂದು ಪರಿಗಣಿಸಲಾಗುತ್ತದೆ. ಈ ಕಲ್ಲುಗಳನ್ನು ಎರಡು ಕೈಗಳಿಂದ ಚಲಿಸಿದರೆ, ಅದು ಚಲಿಸದಂತೆ ಹೇಳುತ್ತದೆ. ನಿಮ್ಮ ಕೈಗಿಂತ ಕಲ್ಲು ಚಿಕ್ಕದಾಗಿದ್ದರೆ, ಆ ಸ್ಥಳದಿಂದ ಸುಲಭವಾಗಿ ಚಲಿಸುವಂತೆ ಹೇಳುತ್ತದೆ ಎನ್ನಲಾಗುವುದು.