Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಗಣೇಶ ಚತುರ್ಥಿ 2020: ಗಣಪನ ಜನ್ಮದಿನ ಚಂದ್ರನನ್ನು ನೋಡಲೇಬಾರದು ಯಾಕೆ ಗೊತ್ತೇ?
ಗಣೇಶನ ಆಗಮನಕ್ಕೆ ಇನ್ನೇನು ದಿನಗಣನೆ ಆರಂಭವಾಗಿದೆ. ಆಗಸ್ಟ್ 22ರಂದು ಶನಿವಾರ ವಿನಾಯಕ ಎಲ್ಲರ ಮನೆಗಳಲ್ಲಿ ಭೂರಿ ಭೋಜನ ಸವಿಯಲು ಬರುತ್ತಾನೆ. ಆದರೆ ವಕ್ರತುಂಡನ ಜನ್ಮದಿನವಾದ ಅಂದು ಅಪ್ಪಿತಪ್ಪಿಯೂ ಚಂದ್ರನನ್ನು ನೋಡಬಾರದು ಎನ್ನುತ್ತಾರೆ. ಆದರೆ ಇದಕ್ಕೆ ನಿಖರ ಕಾರಣ ಮಾತ್ರ ಗೊತ್ತಿಲ್ಲ.

ಬನ್ನಿ ಡೊಳ್ಳು ಹೊಟ್ಟೆ ಗಣಪನಿಗೆ ಚಂದ್ರನ ಮೇಲೆಕೆ ಸಿಟ್ಟು ತಿಳಿಯೋಣ.
ಒಮ್ಮೆ ಗಣಪ ಊಟದ ಬಳಿಕ ಇಲಿಯ ಮೇಲೆ ಹೋಗುತ್ತಿದ್ದಾಗ ದಾರಿಯಲ್ಲಿ ಹಾವನ್ನು ಕಂಡು ಇಲಿ ಬೆದರಿ ಗಣಪನನ್ನು ಬೀಳಿಸಿತಂತೆ. ಆಗ ದಂತ ಮುರಿದು ಊಟವೆಲ್ಲಾ ಚೆಲ್ಲಿತ್ತಂತೆ. ಹಾವನ್ನು ಹೊಟ್ಟೆಗೆ ಕಟ್ಟಿಕೊಂಡು ಆಹಾರವನ್ನು ಮತ್ತೆ ಸಂಗ್ರಹಿಸುತ್ತಿದ್ದುದನ್ನು ಕಂಡ ಚಂದ್ರ ಅವಹೇಳನ ಮಾಡಿದನಂತೆ.
ಚಂದ್ರನ ಅಹಂಕಾರವನ್ನು ಕೊನೆಗಾಣಿಸಿ ಅತನನ್ನು ಮತ್ತೊಮ್ಮೆ ವಿನಮ್ರನಾಗಿಸಲು ಗಣಪ ಚಂದ್ರನನ್ನು ಶಪಿಸಿದನಂತೆ. ಅಂದರೆ ಅಂದಿನ ದಿನದಿಂದ ಚಂದ್ರನನ್ನು ಯಾರೂ ನೋಡದಂತಾಗಲಿ ಎಂದು ಶಪಿಸಿದನಂತೆ. ತನಗೆ ದೊರೆತೆ ಈ ಭೀಕರ ಶಾಪವನ್ನು ಎಂದೂ ನಿರೀಕ್ಷಿಸದಿದ್ದ ಚಂದ್ರನ ಅಹಂಕಾರವೆಲ್ಲಾ ಥಟ್ಟನೇ ಇಳಿದು ಚಿಂತಾಕ್ರಾಂತನಾದ. ಇದುವರೆಗೂ ತನ್ನ ಸೌಂದರ್ಯದ ಬಗ್ಗೆ ಹೊಂದಿದ್ದ ಬಿಗುಮಾನವೆಲ್ಲಾ ಕಳೆದಿತ್ತು. ಹಠಮಾರಿತನ ಹಾಗೂ ಮೊಂಡಾಟವೂ ಕೊನೆಗೊಂಡಿತು.
ಈ ವಿದ್ಯಮಾನವನ್ನು ನೋಡುತ್ತಿದ್ದ ಇತರ ದೇವತೆಗಳು ಮುಂದೇನಾಗಬಹುದು ಎಂಬುದನ್ನು ಕಾತರದಿಂದ ನಿರೀಕ್ಷಿಸುತ್ತಿದ್ದರು. ಆದರೆ ಚಂದ್ರನಿಗೆ ಅಂಟಿದ ಶಾಪವನ್ನು ವಿಮೋಚನೆಗೊಳಿಸಲು ಗಣೇಶನನ್ನು ಮನವೊಲಿಸಲು ಯತ್ನಿಸತೊಡಗಿದರು. ಬಹಳ ಪ್ರಯತ್ನದ ಬಳಿಕ ಗಣೇಶ ಇವರ ಮನವಿಗೆ ಮನಕರಗಿ ಈ ಶಾಪವನ್ನು ಇಡಿಯ ವರ್ಷಕ್ಕೆ ಅನ್ವಯವಾಗುವ ಬದಲು ಗಣೇಶ ಚತುರ್ಥಿಯಂದು ಮಾತ್ರವೇ ಅನ್ವಯಿಸುವಂತೆ ಶಾಪವನ್ನು ಬದಲಿಸಿದನಂತೆ.
ಅಂದರೆ ಈ ತಪ್ಪು ಮಾಡಿದವರು ಗಣೇಶ ಚತುರ್ಥಿಯ ದಿನದಂದು ಇಡಿಯ ದಿನ ಗಣೇಶನನ್ನು ಸ್ತುತಿಸುತ್ತಾ ಹಾಗೂ ಇತರ ಧಾರ್ಮಿಕ ಕಾರ್ಯಗಳಲ್ಲಿ ಕಳೆದು ಗಣೇಶನನ್ನು ಪ್ರಾರ್ಥಿಸಬೇಕು ಆಗ ಈ ಶಾಪ ತಟ್ಟುವುದಿಲ್ಲ. ವಾಸ್ತವವಾಗಿ ಈ ಶಾಪ ಹಠಮಾರಿತನ, ಅಹಂಕಾರವನ್ನು ತ್ಯಜಿಸಲು ಹಾಗೂ ವಿನಮ್ರರಾಗಿರಲು ನೀಡಲಾಗಿದೆಯೇ ಹೊರತು ಗಣಪನ ನಿಜವಾದ ಭಕ್ತರಿಗಲ್ಲ.
ಗಣೇಶ ಸ್ವತಃ ಸುಂದರಾಂಗನಲ್ಲದಿದ್ದರೂ ತನ್ನ ಗುಣಗಳಿಂದ ಎಲ್ಲರ ಮನ ಗೆದ್ದಿರುವಂತೆ ಬಾಹ್ಯ ಸೌಂದರ್ಯದ ಥಳಕನ್ನು ಬಿಟ್ಟು ಆಂತರಿಕ ಸೌಂದರ್ಯ ಹಾಗೂ ಸದ್ಗುಣಗಳನ್ನೇ ಕಾಣುವುದೇ ಗಣೇಶನಿಗೆ ಪ್ರಿಯವಾಗಿದೆ. ಓರ್ವ ವ್ಯಕ್ತಿಯ ಬಾಹ್ಯ ಲಕ್ಷಣಗಳನ್ನು ಪರಿಗಣಿಸಿ ಟೀಕಿಸುವುದು ಅಥವಾ ಸೌಂದರ್ಯಕ್ಕೆ ಪ್ರಾದ್ಯಾನ್ಯತೆ ನೀಡದಿರುವಂತೆ ಗಣೇಶನ ಈ ಶಾಪ ಸದಾ ಎಚ್ಚರಿಸುತ್ತದೆ.
ಈ ವಿಶ್ವದ ಪ್ರತಿಯೊಂದೂ ದೇವರಿಗೆ ಸೇರಿದೆ ಹಾಗೂ ನಮ್ಮೊಳಗಿರುವ ಪ್ರತಿಯೊಂದೂ ದೇವರ ಕಣವಾಗಿದ್ದು ಇದನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ. ಅಂದರೆ ದೇಹದ ಪ್ರತಿಕಣವೂ ದೇವರ ಅಂಶವೇ ಆಗಿರುವಾಗ ಇದರಲ್ಲಿ ಸೌಂದರ್ಯ ಅಥವಾ ಕುರೂಪದ ಪ್ರಶ್ನೆಯೇ ಬರುವುದಿಲ್ಲ.
ಈ ಕಥೆಯ ಮೂಲಕ ಪ್ರತಿಯೊಬ್ಬರ ಹೃದಯದಲ್ಲಿಯೇ ದೇವರು ನೆಲೆಸಿರುವ ಕಾರಣ 'ಮನವೇ ಮಂತ್ರಾಲಯ' ಎಂಬ ನಾಣ್ಣುಡಿ ಜನಜನಿತವಾಗಿದೆ. ಈ ಕಥೆಯಿಂದ ನಾವು ಯಾರನ್ನೂ ಅವರ ಬಾಹ್ಯ ಸೌಂದರ್ಯದಿಂದ ಅಳೆಯಬಾರದು ಎಂದು ಕಲಿಯಬೇಕಾಗಿದೆ.



Click it and Unblock the Notifications




