Just In
- 3 hrs ago ಹೋಟೆಲ್ ರುಚಿಯ ಪನೀರ್ ಪೆಪ್ಪರ್ ಫ್ರೈ ಮನೆಯಲ್ಲೇ ಮಾಡಿ..! 10 ನಿಮಿಷದಲ್ಲಿ ರೆಡಿ..!
- 11 hrs ago ಮೀನ ರಾಶಿಯಲ್ಲಿ ರಾಹು-ಮಂಗಳ ಯುತಿಯಿಂದ ಅಂಗಾರಕ ಯೋಗ: 12 ರಾಶಿಗಳ ಮೇಲಿರಲಿದೆ ಈ ನಕರಾತ್ಮಕ ಪರಿಣಾ
- 12 hrs ago ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- 13 hrs ago ಪುರುಷರಲ್ಲಿ ಹೆಚ್ಚಾಗುತ್ತಿದೆ ಬಂಜೆತನ: ಪುರುಷರು ಈ ಆಹಾರ ಸೇವಿಸಿದರೆ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುವುದು
Don't Miss
- Movies 'ರಾಮಾಯಣ' ಚಿತ್ರದ ಬಗ್ಗೆ ಮೊದಲ ಬಾರಿ ಮೌನ ಮುರಿದ ಯಶ್
- News ಮೋದಿ ಯಾರ ಪರ; ಪ್ರಧಾನಿಯಾಗಿ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದು ಯಾರದ್ದು? ಸಿದ್ದರಾಮಯ್ಯ
- Finance ಬೆಂಗಳೂರಿನಲ್ಲಿ ಈ ಮೂರು ದಿನಗಳ ಕಾಲ ಮದ್ಯ ಮಾರಾಟ ನಿಷೇಧ, ದಿನಾಂಕ, ಸಮಯ ತಿಳಿಯಿರಿ
- Technology ಡೇಟಾ ಬಳಕೆಯಲ್ಲಿ ಚೀನಾ ಮೊಬೈಲ್ ಹಿಂದಿಕ್ಕಿದ ಜಿಯೋ, ಈಗ ವಿಶ್ವದಲ್ಲೇ ದೊಡ್ಡಣ್ಣ!
- Automobiles ಕ್ರ್ಯಾಶ್ಟೆಸ್ಟ್ನಲ್ಲಿ ಈ ಹೋಂಡಾ ಕಾರಿಗೆ ಕೇವಲ 2 ಸ್ಟಾರ್: ಆದರೂ ಭಾರತೀಯರಿಗೆ ಈ ಕಾರು ಅಚ್ಚುಮೆಚ್ಚು!
- Sports ಟಿ20 ವಿಶ್ವಕಪ್ಗಾಗಿ ಭಾರತದ ಟಾಪ್ 3 ಆಯ್ಕೆ ಮಾಡಿದ ಇರ್ಫಾನ್ ಪಠಾಣ್; ವಿರಾಟ್ ಕೊಹ್ಲಿ ಸ್ಥಾನವೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗಣೇಶ ಚತುರ್ಥಿ 2020: ಸಂಕಷ್ಟ ಚತುರ್ಥಿ ವ್ರತ ಮಾಡಿ-ಎಲ್ಲಾ ಸಂಕಷ್ಟ ದೂರವಾಗುತ್ತದೆ
ಪಂಚಾಂಗದ ಪ್ರಕಾರ ಹುಣ್ಣಿಮೆಯ ಅಥವಾ ಕೃಷ್ಣ ಪಕ್ಷದ ನಾಲ್ಕನೇ ದಿನದಂದು ಪ್ರತೀ ತಿಂಗಳು ಸಂಕಷ್ಟ ಚತುರ್ಥಿ ಆಚರಿಸಲಾಗುವುದು. ಇದು ಗಣಪತಿ ದೇವರಿಗೆ ತುಂಬಾ ಪವಿತ್ರವಾಗಿರುವ ದಿನ. ಸಂಕಷ್ಟಿ ಚತುರ್ಥಿಯಂದು ಹೆಚ್ಚಿನ ಮಹಿಳೆಯರು ತಮ್ಮ ಕುಟುಂಬದವರ ಸುಖ, ಸಮೃದ್ಧಿಗಾಗಿ ಉಪವಾಸ ವ್ರತ ಕೈಗೊಳ್ಳುವರು. ಸಂಕಷ್ಟಿಯೆಂದರೆ ಕಠಿಣ ಸಮಸ್ಯೆಯಿಂದ ಹೊರಬರುವುದು ಎಂದರ್ಥವಾಗಿದೆ.
ಉಪವಾಸ ವ್ರತ ಕೈಗೊಳ್ಳುವುದರಿಂದ ಜೀವನದಲ್ಲಿ ಬರುವಂತಹ ಎಲ್ಲಾ ರೀತಿಯ ಸಮಸ್ಯೆಗಳು ಹಾಗೂ ವಿಘ್ನಗಳನ್ನು ಗಣಪತಿ ದೇವರು ನಿವಾರಣೆ ಮಾಡುತ್ತಾರೆ ಎಂದು ನಂಬಲಾಗಿದೆ. ಈ ದಿನ ಜನರು ತುಂಬಾ ಕಠಿಣ ವ್ರತ ಕೈಗೊಳ್ಳುವರು ಮತ್ತು ರಾತ್ರಿ ಚಂದ್ರನ ನೋಡಿದ ಬಳಿಕ ಉಪವಾಸ ಕೈಬಿಡುವರು. ಈ ಸಾಲಿನಲ್ಲಿ ಆಗಸ್ಟ್ 22ರಂದು ಸಂಕಷ್ಟಿ ಚತುರ್ಥಿ ಇೆದೆ
ಪ್ರತೀ ತಿಂಗಳು ಸಂಕಷ್ಟಿ ಚತುರ್ಥಿ ಆಚರಿಸಲಾಗುತ್ತದೆ ಮತ್ತು ಈ ವೇಳೆ ಗಣಪತಿಯನ್ನು ವಿವಿಧ ಹೆಸರು ಮತ್ತು ಪೀಠ(ಕಮಲದ ದಳಗಳು) ಗಳಿಂದ ಪೂಜಿಸಲಾಗುವುದು. ಸಂಕಷ್ಟ ಚತುರ್ಥಿಯಂದು ಗಣೇಶನನ್ನು ಪೂಜಿಸುವ ವೇಳೆ ಪ್ರತಿಯೊಂದು ತಿಂಗಳಿಗೂ ಅದರದ್ದೇ ಆಗಿರುವ ಕಥೆಯಿದೆ. ಗಣೇಶನನ್ನು ಹೊರತುಪಡಿಸಿ, ಶಿವನನ್ನು ಕೂಡ ಪೂಜಿಸಲಾಗುವುದು. ಸಂಕಷ್ಟಿ ಚತುದರ್ಶಿಯ ಪುರಾಣದ ಬಗ್ಗೆ ತಿಳಿಯುವ....
ಹಿಂದೂ ಸಂಕಷ್ಟ ಚತುದರ್ಶಿಯ ಪುರಾಣ
ಗಣೇಶನ ಕಥೆಯು ಹೆಚ್ಚಿನವರಿಗೆ ತಿಳಿದೇ ಇದೆ. ಪಾರ್ವತಿ ಮಾತೆಯು ತನ್ನ ಮೇಲೆ ಹಚ್ಚಿಕೊಂಡಿರುವ ದಪ್ಪಗಿನ ಪದರವನ್ನು ತೆಗೆದು ಗಣಪತಿಯನ್ನು ರಚಿಸಿ, ಆತನನ್ನು ತನ್ನ ಮಗನೆಂದು ಸ್ವೀಕರಿಸುವಳು. ಒಂದು ದಿನ ಸ್ನಾನ ಗೃಹದ ಹೊರಗಡೆ ಕಾವಲು ಕಾಯುವಂತೆ ಗಣೇಶನಿಗೆ ಪಾರ್ವತಿಯು ಆಜ್ಞೆ ಮಾಡುವಳು. ಶಿವನು ತನ್ನ ಗಣಗಳೊಂದಿಗೆ ಇಲ್ಲಿಗೆ ಬಂದಾಗ ಶಿವನ ಬಗ್ಗೆ ತಿಳಿಯದೆ ಗಣೇಶನು ಪ್ರವೇಶ ನೀಡುವುದಿಲ್ಲ.
ಬ್ರಹ್ಮಾಂಡವನ್ನೇ ನಾಶ ಮಾಡಲು ಪಾರ್ವತಿ ಮುಂದಾದಳು!
ಗಣೇಶನು ತನ್ನ ಮಗನೆಂದು ತಿಳಿಯದೆ ಆತ ಬಾಲಕನ ತಲೆ ಕಡಿಯಲು ತನ್ನ ಗಣಗಳಿಗೆ ಆದೇಶ ನೀಡುವನು. ಗಣೇಶನ ತಲೆ ಕಡಿದಿರುವುದನ್ನು ಕೇಳಿದ ಆದಿಶಕ್ತಿಯ ರೂಪ, ಪಾರ್ವತಿ ದೇವಿಯು ತುಂಬಾ ದುಃಖಿತಳಾಗುವಳು ಮತ್ತು ಕ್ರೋಧಗೊಂಡು ಇಡೀ ಬ್ರಹ್ಮಾಂಡವನ್ನೇ ನಾಶ ಮಾಡಿ ಬಿಡುವುದಾಗಿ ಹೇಳುವಳು. ಆಕೆಯನ್ನು ಒಲಿಸಿಕೊಳ್ಳಲು ಶಿವ ದೇವರು ಗಣೇಶನಿಗೆ ಮರು ಜೀವ ನೀಡುವುದಾಗಿ ಹೇಳುವರು. ಇದರಿಂದಾಗಿ ಗಣೇಶನ ತಲೆಯು ಆನೆಯ ತಲೆಯಾಯಿತು. ಇದರ ಬಳಿಕ ಗಣೇಶನಿಗೆ ಮೊದಲ ಪೂಜೆ ಸಲ್ಲಬೇಕು. ಆತನನ್ನು ಜ್ಞಾನ, ಸುಖ ಹಾಗೂ ಸಮೃದ್ಧಿಯ ದೇವರು ಎಂದು ಪೂಜಿಸಬೇಕೆಂದು ಮಹಾದೇವನು ಆದೇಶ ನೀಡುವನು.
ಎಲ್ಲಾ ದೇವರಿಗಿಂತ ಮೊದಲು ಗಣೇಶನ ಪೂಜೆ ಮಾಡಲಾಗುತ್ತದೆ
ಇದರಿಂದ ಯಾವುದೇ ಕಾರ್ಯ ಮಾಡಬೇಕಾದರೂ ಮೊದಲು ಗಣೇಶನನ್ನು ಪೂಜೆ ಮಾಡಿ ವಿಘ್ನ ನಿವಾರಣೆ ಮಾಡಲಾಗುತ್ತದೆ. ಎಲ್ಲಾ ದೇವರಿಗಿಂತ ಮೊದಲು ಗಣೇಶನ ಪೂಜೆ ಮಾಡಲಾಗುತ್ತದೆ. ಸಂಕಷ್ಟಿ ಚತುರ್ಥಿಯಂದು ಶಿವ ದೇವರು ಹೆಚ್ಚಿನ ಶಕ್ತಿ ನೀಡುವರು. ಇದರಿಂದ ಸಂಕಷ್ಟಿಯಂದು ಸಂಕಷ್ಟಹರ ಅಥವಾ ವಿಘ್ನವಿನಾಶಕನನ್ನು ಪೂಜಿಸಲಾಗುವುದು.
ಸಂಕಷ್ಟ ಚತುದರ್ಶಿಯು ತುಂಬಾ ಪವಿತ್ರ ಪೂಜೆ
ಸಂಕಷ್ಟ ಚತುದರ್ಶಿಯು ತುಂಬಾ ಪವಿತ್ರ ಪೂಜೆಯಾಗಿದೆ. ಈ ಪೂಜೆಯನ್ನು ಕುಟುಂಬದ ಸುಖ, ಸಮೃದ್ಧಿಗಾಗಿ ಮಾಡಲಾಗುತ್ತದೆ. ಸಂಕಷ್ಟಿ ಚತುದರ್ಶಿಯಮದು ಸೂರ್ಯಾಸ್ತದ ಬಳಿಕ ಪೂಜೆ ಮಾಡಲಾಗುವುದು. ಶುದ್ಧೀಕರಿಸಿದ ಬಳಿಕ ಗಣೀಶನ ಮೂರ್ತಿಯನ್ನು ಇಟ್ಟು, ಅದಕ್ಕೆ ಹೂಗಳು ಮತ್ತು ಕದಿಕೆ ಹುಲ್ಲನ್ನು ಇಟ್ಟು ಪೂಜಿಸಲಾಗುತ್ತದೆ. ಈ ವೇಳೆ ಗಣೇಶನಿಗೆ ಮೋದಕ ಮತ್ತು ಲಾಡು ಕೂಡ ಅರ್ಪಿಸಲಾಗುವುದು. ಸೂರ್ಯಾಸ್ತದ ಬಳಿಕ ವ್ರತಕಥೆ ಅಥವಾ ಆ ತಿಂಗಳಿನ ಕಥೆಯ ಮೂಲಕ ಪೂಜೆ ಆರಂಭವಾಗುವುದು. ಕುಟುಂಬವು ಸುಖಸಮೃದ್ಧಿಯಿಂದ ಇರಲಿ ಎಂದು ದಂಪತಿಯು ಈ ಪೂಜೆ ಮಾಡುವರು.