For Quick Alerts
ALLOW NOTIFICATIONS  
For Daily Alerts

ವಿಧುರನ ಪ್ರಕಾರ ಈ 5 ಸಂಗತಿಗಳನ್ನು ಹೊಂದಿರುವವರು ಸದಾ ಸಂತೋಷವಾಗಿ ಇರುತ್ತಾರಂತೆ

|

ಮಹಾಭಾರತವನ್ನು ತುಂಬಾ ಸೂಕ್ಷ್ಮವಾಗಿ ಓದುತ್ತಾ ಹೋದರೆ ಅದರಲ್ಲಿ ನಿಮಗೆ ಸಾವಿರಾರು ಅಡ್ಡ ಕಥೆಗಳು ಹಾಗೂ ಉಪಕಥೆಗಳು ಸಿಗುತ್ತಾ ಹೋಗುತ್ತದೆ. ಒಬ್ಬೊಬ್ಬ ವ್ಯಕ್ತಿಯು ಮಹಾಭಾರತದಲ್ಲಿ ಹೇಗೆ ಒಬ್ಬ ಪಾತ್ರಧಾರಿಯಾಗುತ್ತಾನೆ ಎಂದು ಈ ಎಲ್ಲಾ ಕಥೆಗಳು ನಮಗೆ ತಿಳಿಸಿಕೊಡುತ್ತದೆ. ಅರ್ಜುನ, ಕರ್ಣ, ಭೀಷ್ಮ, ದ್ರೋಣಾಚಾರ್ಯ, ದುರ್ಯೋಧನನಂತೆ ಮಹಾಭಾರತದಲ್ಲಿ ವಿಧುರ ಕೂಡ ಪ್ರಮುಖವಾದ ಪಾತ್ರ. ಈತ ಕೌರವ ಹಾಗೂ ಪಾಂಡವರ ಮಾವ. ವಿಧುರನ ನ್ಯಾಯನೀತಿಯಿಂದಾಗಿ ಕೃಷ್ಣ ದೇವರು ಕೂಡ ಆತನನ್ನು ಪ್ರೀತಿಸುತ್ತಿದ್ದರು.

Vidur Niti

ವಿಧುರನು ತನ್ನದೇ ಆಗಿರುವ ವಿಧುರ ನೀತಿ ಎನ್ನುವ ಪುಸ್ತಕ ಬರೆದಿದ್ದಾರೆ. ಇದರಲ್ಲಿ ಆತ ನ್ಯಾಯ ಯಾವುದು ಅನ್ಯಾಯ ಯಾವುದು? ಹೇಗೆ ಜೀವನದಲ್ಲಿ ಒಳ್ಳೆಯ ಮಾರ್ಗದಲ್ಲಿ ಸಾಗಬೇಕು ಎಂದು ಎಲ್ಲವನ್ನೂ ಹೇಳಿರುವರು. ಈ ಪುಸ್ತಕವು ಜೀವನದ ನೀತಿ ಮೌಲ್ಯಗಳನ್ನು ಹೇಳಿಕೊಡುವುದು ಮತ್ತು ಜೀವನದಲ್ಲಿ ಸದ್ಗುಣಗಳ ಮಹತ್ವವನ್ನು ಸಾರುವುದು. ಈ ಪುಸ್ತಕದಿಂದಲೇ ಆಯ್ದುಕೊಂಡಿರುವ, ಮನುಷ್ಯನು ಸಂತೋಷವಾಗಿರಲು ಏನು ಮಾಡಬೇಕು ಎಂದು ಈ ಲೇಖನದಲ್ಲಿ ಹೇಳಲಾಗಿದೆ. ನೀವು ಸಂತೋಷವಾಗಿರಬೇಕಾದರೆ ವಿಧುರನ ಐದು ನೀತಿಗಳನ್ನು ಪಾಲಿಸಿಕೊಂಡು ಹೋಗಬೇಕು. ಅದು ಯಾವುದು ಎಂದು ನೀವು ಮುಂದೆ ಓದುತ್ತಾ ಸಾಗಿ...

ಆದಾಯಕ್ಕೆ ವಿವಿಧ ಮೂಲಗಳು

ಆದಾಯಕ್ಕೆ ವಿವಿಧ ಮೂಲಗಳು

ನಾವು ಇರುವಂತಹ ಭೂಮಿಯಲ್ಲಿ ಆರ್ಥಿಕತೆಯು ತುಂಬಾ ವೇಗವಾಗಿ ಸಾಗುವುದು ಮತ್ತು ಸ್ಪರ್ಧೆಯು ತೀವ್ರ ಗತಿಯಲ್ಲಿರುವುದು. ಇಂತಹ ಸಮಯದಲ್ಲಿ ಆದಾಯಕ್ಕಾಗಿ ವಿವಿಧ ಮೂಲಗಳನ್ನು ಕಂಡುಹಿಡಿದರೆ ಅದರಿಂದ ಜೀವನ ಸುಗಮವಾಗುವುದು. ಕೇವಲ ಒಂದು ಮೂಲದಿಂದ ನೀವು ಆದಾಯವನ್ನು ಪಡೆಯುತ್ತಲಿದ್ದರೆ ಆಗ ಇಂದಿನ ದಿನಗಳಲ್ಲಿ ಜೀವನ ಸಾಗಿಸುವುದು ತುಂಬಾ ಕಷ್ಟವಾಗುವುದು.

Most Read: ಶನಿ ದೇವರಿಗೆ ತನ್ನ ಪತ್ನಿಯೇ ಶಾಪ ನೀಡಿದಳು! ಇಲ್ಲಿದೆ ನೋಡಿ ಕಂಪ್ಲೀಟ್ ಸ್ಟೋರಿ

ಒಳ್ಳೆಯ ಆರೋಗ್ಯ

ಒಳ್ಳೆಯ ಆರೋಗ್ಯ

ದೈಹಿಕ ಸಮಸ್ಯೆಗಳು ಮತ್ತು ಕೆಲವೊಂದು ಅನಾರೋಗ್ಯಗಳು ಮನುಷ್ಯನನ್ನು ದೈಹಿಕ ಹಾಗೂ ಮಾನಸಿಕವಾಗಿ ದುರ್ಬಲನನ್ನಾಗಿ ಮಾಡುವುದು. ಇದು ದೀರ್ಘಾವಧಿಗೆ ತುಂಬಾ ಹಾನಿ ಉಂಟು ಮಾಡುವುದು. ಒಳ್ಳೆಯ ಆರೋಗ್ಯ, ಒಳ್ಳೆಯ ಮನಸ್ಥಿತಿ ಮತ್ತು ಕೆಲಸ ಮಾಡಲು ಪ್ರೇರಣೆ, ಈ ಎಲ್ಲಾ ಅಂಶಗಳು ಒಂದಕ್ಕೊಂದು ಬೆಸೆದುಕೊಂಡಿದೆ. ಒಳ್ಳೆಯ ಆರೋಗ್ಯ ಹೊಂದಿರುವ ವ್ಯಕ್ತಿಯು ತುಂಬಾ ಬಲಿಷ್ಠ ಹಾಗೂ ಸಂತೋಷವಾಗಿರುವನು.

ಮೆಲುದನಿಯಲ್ಲಿ ಮಾತನಾಡುವ ಜನರು

ಮೆಲುದನಿಯಲ್ಲಿ ಮಾತನಾಡುವ ಜನರು

ತುಂಬಾ ಸಿಹಿ ಹಾಗೂ ಸೌಮ್ಯವಾಗಿ ಮಾತನಾಡುವಂತಹ ವ್ಯಕ್ತಿಗಳು ಬೇರೆಯವರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗುವರು. ಇನ್ನೊಂದು ಕಡೆಯಲ್ಲಿ ಯಾವಾಗಲೂ ಬೇರೆಯವರ ಕಾಲೆಳೆಯುವುದು ಮತ್ತು ಟೀಕಿಸುವವರು ಯಾವತ್ತಿಗೂ ಶಾಂತಿಯಿಂದ ಇರಲ್ಲ. ನಾವು ಹೇಗೆ ಜನರನ್ನು ಉಪಚರಿಸುತ್ತೇವೆಯೋ ಅದೇ ರೀತಿಯಾಗಿ ಜನರು ಕೂಡ ನಮ್ಮನ್ನು ಉಪಚರಿಸುವರು. ಬೇರೆಯವರ ಕಡೆ ನಮ್ಮ ನಡವಳಿಕೆಯು ಹೇಗಿರುತ್ತದೆಯಾ ಅದೇ ರೀತಿ ಅವರ ನಡವಳಿಕೆಯು ಇರುವುದು.

Most Read: ಮಹಾಭಾರತ: ನಿಮ್ಮನ್ನು ದ್ವೇಷಿಸುವವರ ಮನೆಯಲ್ಲಿ ಯಾವತ್ತೂ ಊಟ ಮಾಡಬೇಡಿ!

ಜ್ಞಾನ

ಜ್ಞಾನ

ಜ್ಞಾನವುಳ್ಳ ವ್ಯಕ್ತಿಯು ಜೀವನದ ಎಲ್ಲಾ ಸಮಸ್ಯೆಗಳನ್ನು ನಿವಾರಿಸಬಲ್ಲ. ದೈಹಿಕ ಅಥವಾ ಆರ್ಥಿಕ ಸಂಪತ್ತಿಗಿಂತ ಜ್ಞಾನವು ತುಂಬಾ ಶ್ರೇಷ್ಠವಾಗಿರುವುದು. ಹಣ ಹಾಗೂ ದೈಹಿಕ ಶಕ್ತಿಯು ವಿಫಲವಾಗುವಂತಹ ಜಾಗದಲ್ಲಿ ಜ್ಞಾನ ಹಾಗೂ ಬುದ್ಧಿವಂತಿಕೆಯು ಕೆಲಸ ಮಾಡುವುದು.

ವಿಧೇಯ ಮಕ್ಕಳು

ವಿಧೇಯ ಮಕ್ಕಳು

ಕುಟುಂಬವನ್ನು ಹೊಂದಿರುವ ವ್ಯಕ್ತಿಗೆ ತನ್ನ ಮಕ್ಕಳ ನೆಮ್ಮದಿಯು ತುಂಬಾ ಮುಖ್ಯವಾಗಿರುವುದು. ಮಕ್ಕಳು ತುಂಬಾ ವಿಧೇಯರಾಗಿದ್ದರೆ ಆಗ ಪೋಷಕರು ತುಂಬಾ ಸಂತೋಷ ಹಾಗೂ ಆರಾಮವಾಗಿರುವರು. ಇಂತಹ ಮಕ್ಕಳು ಮುಂದೆ ಜೀವನದಲ್ಲಿ ಯಶಸ್ಸನ್ನು ಪಡೆಯುವರು ಮತ್ತು ವಯಸ್ಸಾದಾಗ ತಮ್ಮ ತಂದೆತಾಯಿಯ ಬಗ್ಗೆ ಸರಿಯಾಗಿ ಕಾಳಜಿ ವಹಿಸುವರು. ತುಂಬಾ ವಿಧೇಯ ಮಕ್ಕಳು ಇರುವಂತಹ ವ್ಯಕ್ತಿಗಳು ತುಂಬಾ ಅದೃಷ್ಟ, ಸಂತೋಷ ಹಾಗೂ ಅಧಿಕಾರ ಹೊಂದಿರುವವರು ಎಂದು ಹೇಳಲಾಗುತ್ತದೆ.

English summary

Vidur Niti: Who Has These 5 Things Is Always Happy

Vidur was the uncle of the Kauravas and the Pandavas. He was a virtuous man whose righteousness gained him a boon from Lord Krishna. A preacher of Dharma, he even authored a book which is known as Vidur Niti. The book consists all the secrets to happiness. One of the chapters in the book tells that there are five things vital for happiness.
X
Desktop Bottom Promotion