Latest Updates
-
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ!
ದೀಪಾವಳಿಗೆ ಈ ವಾಸ್ತು ಟಿಪ್ಸ್ ಪಾಲಿಸಿದರೆ ಹಣ-ಸಂಪತ್ತು ವೃದ್ಧಿಸುವುದು
ದೀಪಾವಳಿ ಹಬ್ಬ ಸಮೀಸುತ್ತಿದ್ದಂತೆ ನಮ್ಮ ಮನ್ಸಿನಲ್ಲಿ ಅದೇನೋ ಸಡಗರ-ಸಂಭ್ರಮ. ಆ ಬೆಳೆಕಿನ ಪ್ರಭೆಯನ್ನು ಕಣ್ತುಂಬಿಕೊಳ್ಳುವುದೇ ಕಣ್ಣಿಗೆ ಹಬ್ಬ. ದೀಪಾವಳಿಗೆ ಹತ್ತು-15 ದಿನಕ್ಕೆ ಮೊದಲೇ ಶಾಪಿಂಗ್ ಶುರುವಾಗುತ್ತೆ, ಇನ್ನು ಮನೆಯನ್ನು ದೀಪಾವಳಿಗೆ ಹೇಗೆ ಅಲಂಕರಿಸಬೇಕೆಂಬುವುದು ಒಂದು ವಾರಕ್ಕೆ ಮೊದಲೇ ಪ್ಲ್ಯಾನ್ ರೆಡಿಯಾಗಿರುತ್ತೆ, ಈಗಾಗಲೇ ಶುರುಕೂಡ ಮಾಡಿರುತ್ತೀರಿ.
ದೀಪಾವಳಿ ಅಂದರೆ ಬದುಕಿನಲ್ಲಿ ನೆಮ್ಮದಿ, ಸಮೃದ್ಧಿಯ ಸಂಕೇತ. ಹಾಗಾಗಿ ದೀಪಾವಳಿಯಲ್ಲಿ ಮನೆಯಲ್ಲಿ ಏನು ಮಾಡಬೇಕು, ಏನು ಮಾಡಬಾರದು ಎಂದು ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ. ವಾಸ್ತು ಪ್ರಕಾರ ನೀವು ಹೀಗೆಲ್ಲಾ ಮಾಡಿದರೆ ಮನೆಯಲ್ಲಿ ಸಂಪತ್ತು-ಸಮೃದ್ಧಿ ಹೆಚ್ಚುವುದು:

ದೀಪಾವಳಿಗೆ ಮನೆ ಸ್ವಚ್ಛ ಮಾಡಬೇಕು
ದೀಪಾವಳಿಯಲ್ಲಿ ಮನೆಯನ್ನು ಸಂಪೂರ್ಣವಾಗಿ ಸ್ವಚ್ಛ ಮಾಡಬೇಕು. ಮೂಲೆ-ಮೂಲೆಯಲ್ಲೂ ಕ್ಲೀನ್ ಮಾಡಬೇಕು, ಜೇಡರ ಬಲೆ, ಕೀಟಗಳು ಎಲ್ಲವನ್ನು ಹೋಗಲಾಡಿಸಬೇಕು. ಒಟ್ಟಿನಲ್ಲಿ ಲಕ್ಷ್ಮಿ ಪೂಜೆ ಮಾಡುವಾಗ ಮನೆ ತುಂಬಾನೇ ಸ್ವಚ್ಛವಾಗಿರಬೇಕು.

ಬೇಡದ ವಸ್ತುಗಳನ್ನು ಹೊರಹಾಕಿ
ಮನೆಯಲ್ಲಿ ಮುರಿದ ಚೇರ್, ತುಂಬಾ ಹಳೆಯದಾದ ಪಾತ್ರೆಗಳು, ಡಬ್ಬಗಳು ಇವೆಲ್ಲಾ ಇದ್ದರೆ ಅವುಗಳನ್ನ ಹೊರ ಹಾಕಿ. ಮುರಿದು ಹೋದ ವಸ್ತುಗಳನ್ನು ಮನೆಯಲ್ಲಿ ಇಡುವುದು ಮನೆಗೆ ಒಳ್ಳೆಯದಲ್ಲ. ಅವಗಳೆನ್ನೆಲ್ಲಾ ಬಿಸಾಡಿ, ಇದರಿಂದ ಮನೆಯೊಳಗಡೆ ಧನಾತ್ಮಕ ಶಕ್ತಿ ನಾವೇನು ಪಾಸಿಟಿವ್ ವೈಬ್ಸ್ ಎಂದು ಕರೆಯುತ್ತೇವೆ ಅಲ್ವಾ ಅದು ಹೆಚ್ಚಾಗುವುದು.

ಮನೆಯ ಮುಂಭಾಗದಲ್ಲಿ ಏನೂ ಇಡಬೇಡಿ
ಮನೆಯ ಒಳಗಡೆ ಬರುವ ಜಾಗದಲ್ಲಿ ವಸ್ತುಗಳನ್ನು ಇಡಬೇಡಿ. ಮನೆಯ ಹೊಸ್ತಿಲು ಹಾಗೂ ಹಾಲ್ ತುಂಬಾ ಸುಂದರವಾಗಿ ಕಾಣಬೇಕು. ಮನೆಯ ಹೊಸ್ತಿಲು ಅಲಂಕರಿಸಿ. ಮನೆಯ ಮುಂದುಗಡೆ ರಂಗೋಲಿ ಬಿಡಿ. ಮನೆಯ ಹಾಲ್ ಕ್ಲೀನ್ ಹಾಗೂ ಆಕರ್ಷಕವಾಗಿ ಕಾಣುವಂತೆ ಇರಲಿ. ಮನೆ ಚಿಕ್ಕದು-ದೊಡ್ಡದು ಎಂಬುವುದಲ್ಲ, ನಾವು ಮನೆಯನ್ನು ಹೇಗೆ ಇಡುತ್ತೇವೆ ಅನ್ನುವುದು ಮುಖ್ಯವಾಗುತ್ತೆ.

ಮನೆಯ ವಸ್ತುಗಳನ್ನು ಸರಿಯಾದ ಜಾಗದಲ್ಲಿ ಇಡಿ
ಮನೆಯ ಉತ್ತರ ಹಾಗೂ ಈಶಾನ್ಯ ದಕ್ಕಿನಲ್ಲಿ ಯಾವುದೇ ವಸ್ತುಗಳನ್ನು ಇಡಬೇಡಿ, ಅಲ್ಲಿ ಕಸ, ಮುರಿದ ವಸ್ತುಗಳು, ಬೇಡದ ವಸ್ತುಗಳು ಏನೂ ಇಡಬಾರದು. ಹಸಿರು ಗಿಡಗಳಿರಲಿ, ಮನೆಯ ಒಳಗಡೆ ಚಿಕ್ಕ-ಚಿಕ್ಕ ಗಿಡಗಳನ್ನು ಇಡಿ. ಹೀಗೆ ಮಾಡುವುದರಿಂದ ಲಕ್ಷ್ಮಿ ಬೇಗನೆ ಆಕರ್ಷಿತಳಾಗುತ್ತಾಳೆ ಎಂದು ನಂಬಲಾಗಿದೆ.

ಉಪ್ಪು ನೀರು ಚಿಮುಕಿಸಿ
ನೆಯನ್ನು ಸ್ವಚ್ಛ ಮಾಡಿದ ಬಳಿಕ ಒಂದು ಲೋಟ ನೀರಿಗೆ ಕಲ್ಲುಪ್ಪು ಹಾಕಿ ಆ ನೀರನ್ನು ಮನೆಯ ಎಲ್ಲಾ ಕಡೆ ಚಿಮುಕಿಸಿ. ಉಪ್ಪ ಋಣಾತ್ಮಕ ಶಕ್ತಿ ಹೀರಿಕೊಳ್ಳುತ್ತದೆ ಎಂದು ನಂಬಲಾಗಿದೆ.

ಮನೆಯ ನಾಲ್ಕೂ ದಿಕ್ಕಿಗೂ ದೀಪ ಹಚ್ಚಿ
ದೀಪಾವಳಿಗೆ ನೀವು ದೀಪಗಳನ್ನು ಹಚ್ಚುವಾಗ ಮನೆಯ ನಾಲ್ಕು ದಿಕ್ಕಿಗೆ ಹಚ್ಚಿ.
ದೀಪಾವಳಿಗೆ ದೀಪ ಹಚ್ಚುವಾಗ ಈ ನಿಯಮ ಪಾಲಿಸಿ:
* ದೀಪಾವಳಿಯಂದು ಮೊದಲಿಗೆ ದಕ್ಷಿಣ ದಿಕ್ಕಿನಲ್ಲಿ ದೀಪ ಹಚ್ಚಬಾರದು.
* ದೀಪಾವಳಿಯಂದು ತುಪ್ಪದ ದೀಪ ಹಚ್ಚಿ
* ದೀಪಕ್ಕೆ ಸೂರ್ಯಕಾಂತಿ ಎಣ್ಣೆ ಬಳಸಲೇಬೇಡಿ, ಎಳ್ಳೆಣ್ಣೆ ಬಳಸಬಹುದು.
* ಮೊದಲಿಗೆ ನೀವು ದೇವರ ಕೋಣೆಯಲ್ಲಿ ದೀಪವನ್ನು ಹಚ್ಚಬೇಕು.
* ನಂತರ ಹೊಸ್ತಿಲಿನಲ್ಲಿ ಹಣತೆ ಹಚ್ಚಿ, ನಂತರ ಮನೆಯಲ್ಲಿ ನಿಮಗೆ ಬೇಕಾದ ಕಡೆ ಇಡಿ.
ದೀಪಾವಳಿಗೆ ಏನು ಮಾಡಬೇಕು, ಏನು ಮಾಡಬಾರದು?
ಏನು ಮಾಡಬೇಕು?
* ಮನೆಯ ಹೊಸ್ತಿಲು ಹೊಸದಾಗಿರಬೇಕು ಅಥವಾ ಸರಿಪಡಿಸಿರಬೇಕು
* ಲಕ್ಷ್ಮಿ ಪಾದುಕೆಗಳು ಮನೆಯೊಳಗಡೆ ಬರುವಂತೆ ರಂಗೋಲಿ ಹಾಕಬೇಕು
* ದೇವರ ಮೂರ್ತಿ ಸ್ವಚ್ಛಗೊಳಿಸಲು ಸ್ವಚ್ಛವಾದ ಬಟ್ಟೆ ಬಳಸಿ.
ಏನು ಮಾಡಬಾರದು
* ಮನೆಯ ಮುಂಬಾಗಿಲು ಮುಚ್ಚಬೇಡಿ, ಅಲ್ಲದೆ ಮನೆಯ ಬಾಗಿಲು ತೆರೆಯುವಾಗ ಕಿರ್-ಕಿರ್ ಅಂತ ಶಬ್ದ ಮಾಡಬಾರದು
* ಸ್ವಸ್ತಿಕ್, ಓಂ ಹಾಗೂ ರಂಗೋಲಿಯನ್ನು ದಕ್ಷಿಣ, ಪಶ್ಚಿಮ ಭಾಗಕ್ಕೆ ಹಾಕಬಾರದು.
* ಕುಟಂಬಸ್ಥರು ಅಥವಾ ಸ್ನೇಹಿತರಿಗೆ ಆ್ಯಂಟಿಕ್ ವಸ್ತುಗಳನ್ನು ನೀಡಬೇಡಿ.
* ಮನೆಯ ಮುಂದುಗಡೆ ಲಕ್ಷ್ಮಿ ಅಥವಾ ಶ್ರೀ ಗಣಪನ ರಂಗೋಲಿ ಹಾಕಬೇಡಿ.



Click it and Unblock the Notifications