Just In
Don't Miss
- News ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಪ್ರಮುಖ ಆರೋಪಿಯನ್ನು ಬಂಧಿಸಿದ ಎನ್ಐಎ
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Movies Puttakkana Makkalu:ಈ ಬಾರಿ ಸಹನಾ ಹೊಗಳಿದ ಅಭಿಮಾನಿಗಳು: ಪುಟ್ಟಕ್ಕನ ನಡವಳಿಕೆಗೆ ಫ್ಯಾನ್ಸ್ ಬೇಸರ
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹದಿನೆಂಟು ಬೆಟ್ಟಗಳ ಮಧ್ಯೆ ನೆಲೆನಿಂತ ಶಬರಿಮಲೆಯ ಮಹಾತ್ಮೆ
ಹದಿನೆಂಟು ಮೆಟ್ಟಿಲುಗಳನ್ನು ಏರಿ ಮಲೆಯಲ್ಲಿ ನೆಲೆಯಾಗಿರುವ ಅಯ್ಯಪ್ಪ ಸ್ವಾಮಿಯನ್ನು ಕಂಡೊಡನೆ ಭಕ್ತರ ಮನದಲ್ಲಿ ಭಕ್ತಿಯ ಪ್ರವಾಹವೇ ಹರಿದು ಹೋಗುತ್ತಿರುತ್ತದೆ. ಸ್ವಾಮಿಯೇ ಶರಣಂ ಅಯ್ಯಪ್ಪಾ ಎಂದು ದೀನವಾಗಿ ಕೂಗುವ ಭಕ್ತರ ಕರೆಗೆ ಅಯ್ಯಪ್ಪ ಸ್ವಾಮಿ ಕಿವಿಗೊಡದೇ ಇರಲಾರರು ಎಂಬಂತಹ ಭಕ್ತಿಯ ಸೆಲೆ ಅಲ್ಲಿ ಉದ್ಭವವಾಗಿರುತ್ತದೆ. ತಿಂಗಳುಗಳ ಕಾಲ ವೃತಾಧಾರಿಗಳಾಗಿ ಸ್ವಾಮಿಯ ಸೇವೆಯನ್ನು ಮಾಡಿದ್ದಕ್ಕೆ ಸಾರ್ಥಕವಾಯಿತು ಎಂಬ ತೃಪ್ತಿ ಮನದಲ್ಲಿ ಮೂಡುತ್ತದೆ.
ಶಬರಿಮಲೆ ಎಂದ ಒಡನೆ ಎಲ್ಲರಿಗೂ ಅಯ್ಯಪ್ಪ ಸ್ವಾಮಿಯ ಹೆಸರು ತಟ್ಟನೆ ಮನಸ್ಸಿನಲ್ಲಿ ಹಾದು ಹೋಗುವುದು ಖಂಡಿತ. ಹೌದು ಪಶ್ಚಿಮ ಘಟ್ಟ ಪರ್ವತ ಶ್ರೇಣಿಗಳಲ್ಲಿ ನೆಲೆಗೊಂಡಿರುವ ಈ ಪವಿತ್ರ ಯಾತ್ರಾ ಸ್ಥಳವು ಕೇರಳ ರಾಜ್ಯದ ಪತನಂತಿಟ್ಟ ಜಿಲ್ಲೆಯ ಪೆರುನಾಡ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿದೆ.
ಈ
ಯಾತ್ರ
ಸ್ಥಳವು
ವರ್ಷದ
ಅಂದರೆ
ಮಲಯಾಳಂ
ಕ್ಯಾಲೆಂಡರ್
ಪ್ರಕಾರ
ನವೆಂಬರ್
ತಿಂಗಳಿಂದ
ಹಿಡಿದು
ಡಿಸೆಂಬರ್,
ಜನವರಿಯ
ನಾಲ್ಕನೇ
ವಾರದವರೆಗೆ
(ಕಾರ್ತಿಕ
ಮಾಸದ
ಸಮಯದಿಂದ
ಹಿಡಿದು
ಮಕರ
ಸಂಕ್ರಾಂತಿಯವರೆಗೆ)
ಅತ್ಯಂತ
ಚಟುವಟಿಕೆಗಳಿಂದ
ಕೂಡಿರುವ
ಸ್ಥಳವಾಗಿರುತ್ತದೆ.
ಭಕ್ತಾಧಿಗಳು
ಮಾಲಾಧಾರಿಗಳಾಗಿ,
41
ದಿನಗಳ
ವ್ರತವನ್ನು
ಆಚರಿಸುತ್ತ
ಅಯ್ಯಪ್ಪನ
ಆರಾಧನೆ
ಮಾಡುವುದು
ಇಲ್ಲಿನ
ವಿಶೇಷ.
ಈ
ಬೆಟ್ಟವು
ರಾಮಾಯಣದಲ್ಲಿ
ಬರುವ
ಶಬರಿಗೆ
ಸೇರಿದ
ಬೆಟ್ಟವೆಂಬ
ಕಾರಣಕ್ಕಾಗಿ
ಇದನ್ನು
ಶಬರಿಮಲೆ
ಎಂದು
ಕರೆಯಲಾಗುತ್ತದೆ.
ಬನ್ನಿ
ಶಬರಿಮಲೆಯ
ಇನ್ನಷ್ಟು
ರೋಚಕ
ಸಂಗತಿಗಳನ್ನು
ಸ್ಲೈಡ್
ಶೋ
ಮೂಲಕ
ಓದಿ...
ಮಹಿಷಿ ಎಂಬ ರಾಕ್ಷಸಿಯ ಸಂಹಾರ
ಅಯ್ಯಪ್ಪ ದೇವರು ಶಿವ ಮತ್ತು ಮೋಹಿನಿ(ವಿಷ್ಣುವಿನ ನಾರಿ ರೂಪ)ಯ ಕೂಡುವಿಕೆಯಿಂದ ಹುಟ್ಟಿದವ. ಬ್ರಹ್ಮ ದೇವರಿಂದ ವರವನ್ನು ಪಡೆದು ಭೂಲೋಕಕ್ಕೆ ಕಂಠಕವಾಗಿದ್ದ ಮಹಿಷಿಯ ವಧೆಗಾಗಿ ಅಯ್ಯಪ್ಪ ಹುಟ್ಟಿದ್ದ ನಂತರ ಇದೇ ಸ್ಥಳದಲ್ಲಿ ಧ್ಯಾನಸ್ಥನಾಗುತ್ತಾನೆ. ತಪ್ಪದೇ ಓದಿಅಯ್ಯಪ್ಪ ಸ್ವಾಮಿ ದೇವರ ಜನ್ಮದ ಹಿಂದಿರುವ ರಹಸ್ಯವೇನು?
ಏಕತೆಯ ನೆಲೆ
ಶಬರಿಮಲೆ ದೇವಸ್ಥಾನವೆಂದರೆ ಏಕತೆ, ಸಮಾನತೆ ಮತ್ತು ಪ್ರಪಂಚದ ಎಲ್ಲ ಒಳ್ಳಯತನಗಳ ಸಂಕೇತ. ವಾಸ್ತವದಲ್ಲಿ ಇದು ಸೂಚಿಸುವುದೆಂದರೆ ದುಷ್ಟ ಶಕ್ತಿಗಳ ವಿರುದ್ಧ ಧರ್ಮಕ್ಕೆ ವಿಜಯ ಮತ್ತು ಪ್ರತಿಯೊಬ್ಬರಿಗೂ ನ್ಯಾಯ ದೊರೆಯುತ್ತದೆ ಎಂಬುದು.
5 ಕೋಟಿ ಜನರನ್ನು ಆಕರ್ಷಿಸುವ ಯಾತ್ರಾಸ್ಥಳ
ಶಬರಿಮಲೆಯು ಸರ್ಕಾರಿ ಸ್ವಾಮ್ಯದ ತಿರುವಾಂಕೂರ್ ದೇವಸ್ಥಾನ ಮಂಡಳಿಯ ಆಡಳಿತದಲ್ಲಿದ್ದು, ವಾರ್ಷಿಕ 5 ಕೋಟಿ ಜನರನ್ನು ಆಕರ್ಷಿಸುವ ವಿಶ್ವದ ಅತ್ಯಂತ ದೊಡ್ಡ ಯಾತ್ರಾಸ್ಥಳವಾಗಿದೆ.
ಇದು 18 ಬೆಟ್ಟಗಳ ನಡುವೆ ನೆಲೆಗೊಂಡಿದೆ
ಶಬರಿಮಲೆ 18 ಬೆಟ್ಟಗಳ ಮಧ್ಯೆ ನೆಲೆ ನಿಂತಿದ್ದು, ಯಾವೊಬ್ಬ ಭಕ್ತನೂ ಈ ಚಿತ್ರಣವನ್ನು ನೋಡುವುದನ್ನು ತಪ್ಪಿಸಿಕೊಳ್ಳಲು ಇಷ್ಟಪಡುವುದಿಲ್ಲ. ಶಬರಿಮಲೆಯ ಮೇಲೆ ನೆಲೆಸಿರುವ ದೇವಸ್ಥಾನವು ಸಮುದ್ರಮಟ್ಟದಿಂದ 468 ಮೀಟರ್ (1535 ಅಡಿ) ಎತ್ತರದಲ್ಲಿ ನೆಲೆಗೊಂಡಿದೆ. ಜೊತೆಗೆ ಸುತ್ತಲೂ ಇರುವ ಪರ್ವತಗಳು ಮತ್ತು ದಟ್ಟ ಕಾಡು ಈ ದೇವಾಲಯದ ಗಾಂಭೀರ್ಯವನ್ನು ಹೆಚ್ಚಿಸಿದೆ.
ಸಮಾನ ಭಾವನೆ
ಇಲ್ಲಿ ಭಕ್ತರ ಜನಾಂಗ, ಸಂತತಿ, ಧರ್ಮಗಳನ್ನು ಲೆಕ್ಕಿಸದೇ ಎಲ್ಲ ಭಕ್ತರನ್ನೂ ಸಮಾನ ಭಾವನೆಯಿಂದ ಒಪ್ಪಿಕೊಳ್ಳುವ ಅಪರೂಪದ ದೇವಸ್ಥಾನಗಳಲ್ಲಿ ಶಬರಿಮಲೆಯ ಅಯ್ಯಪ್ಪ ದೇವಸ್ಥಾನವೂ ಒಂದು.
10-50 ವರ್ಷ ವಯಸ್ಸಿನ ಮಹಿಳೆಯರಿಗೆ ಪ್ರವೇಶವಿಲ್ಲ
ಅಯ್ಯಪ್ಪ ದೇವರು ಬ್ರಹ್ಮಚಾರಿಯಾಗಿರುವ ಕಾರಣದಿಂದ 10-50 ವರ್ಷ ವಯಸ್ಸಿನ ಮಹಿಳೆಯರಿಗೆ ಮಂದಿರಕ್ಕೆ ಪ್ರವೇಶಿಸಲು ಅವಕಾಶವಿಲ್ಲ. ಅಲ್ಲದೆ ಹಿಂದೂ ಧರ್ಮದ ಪ್ರಕಾರ ಋತುಮತಿಯಾಗುವ ವಯಸ್ಸಿನ ಹೆಣ್ಣು ಮಕ್ಕಳನ್ನು ದೇವಾಲಯದ ಒಳಗೆ ಬರಲು ಅವಕಾಶವಿಲ್ಲ ಎಂಬ ದಂತಕತೆಯ ಸಲುವಾಗಿ ಈ ವಯಸ್ಸಿನ ಒಳಗಿನ ಹೆಂಗಸರನ್ನು ದೇವಾಲಯದೊಳಗೆ ಬಿಡುವುದಿಲ್ಲ. ಅಲ್ಲದೆ ಅಯ್ಯಪ್ಪ ಸ್ವತಃ ಬ್ರಹ್ಮಚಾರಿಯಾಗಿರುವುದರಿಂದಾಗಿ ಸಹ ಈ ಪದ್ಧತಿಯನ್ನು ಅನುಸರಿಸಲಾಗುತ್ತದೆ ಎಂದು ಹೇಳಲಾಗುತ್ತದೆ.
ಪುರಾತನ ಕಾಲದ ದೇವಾಲಯ
ಶಬರಿಮಲೆಯ ಸುತ್ತಲೂ ಇರುವ ಬೆಟ್ಟಗಳ ಮೇಲೆ ಪ್ರತಿಯೊಂದರ ಮೇಲೆಯೂ ದೇವಾಲಯಗಳು ಇವೆ. ನಿಲಕ್ಕಲ್, ಕಲಕೆಟಿ ಮತ್ತು ಕರಿಮಲ ಎಂದು ಕರೆಯಲ್ಪಡುವ ಸ್ಥಳಗಳಲ್ಲಿ ಪುರಾತನ ಕಾಲದ ದೇವಾಲಯಗಳು ಇಂದಿಗೂ ಉಳಿದುಕೊಂಡು ಬಂದಿವೆ.
ಕಪ್ಪು ಅಥವಾ ನೀಲಿ ಬಣ್ಣದ ವಸ್ತ್ರ
ಶಬರಿಮಲೆಯು ಎಲ್ಲಾ ರೀತಿಯ ಜನರನ್ನು ಆಕರ್ಷಿಸುವ ಹಿಂದೂ ದೇವಾಲಯವಾಗಿದೆ. ವಿಶೇಷವಾಗಿ ಎಲ್ಲ ವಯಸ್ಸಿನ ಗಂಡಸರು ಈ ಶಬರಿಮಲೆಗೆ ಭೇಟಿ ನೀಡಬಹುದು. ಕಪ್ಪು ಅಥವಾ ನೀಲಿ ಬಣ್ಣದ ವಸ್ತ್ರಗಳನ್ನು ಧರಿಸಿರುವ ಮಾಲಾಧಾರಿಗಳಾದ ಅಯ್ಯಪ್ಪ ಸ್ವಾಮಿಯ ಭಕ್ತರನ್ನು ನಾವು ಈ ಕಾಲದಲ್ಲಿ ಹೆಚ್ಚಾಗಿ ಕಾಣಬಹುದು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ
ಕಪ್ಪು ಅಥವಾ ನೀಲಿ ಬಣ್ಣದ ವಸ್ತ್ರ
ತಮ್ಮ ಹಣೆಗೆ ವಿಭೂತಿ ಅಥವಾ ಚಂದನವನ್ನು ಹಚ್ಚಿಕೊಂಡು, ಮುಖ ಕ್ಷೌರವನ್ನು ಮಾಡಿಸದೆ, ಬೆಳಗ್ಗೆ ಮತ್ತು ಸಂಜೆ ತಣ್ಣೀರಿನಲ್ಲಿ ಸ್ನಾನ ಮಾಡುತ್ತ ಅಯ್ಯಪ್ಪನ ಆರಾಧನೆ ಮಾಡುವ ಭಕ್ತರು ಸಂಕ್ರಾಂತಿ ಸಮಯದಲ್ಲಿ ಎಲ್ಲರೂ ತಂಡ ತಂಡವಾಗಿ ಗುರುಸ್ವಾಮಿ ಎಂದು ಕರೆಯುವ ನಾಯಕನ ನೇತೃತ್ವದಲ್ಲಿ ಶಬರಿಮಲೆಗೆ ಬಂದು ತಲುಪುತ್ತಾರೆ.
ಮಂಡಲ ಪೂಜೆ
ದೇವಾಲಯವು ಮಂಡಲ ಪೂಜೆ (ಅಂದಾಜು 15 ನವೆಂಬರ್ನಿಂದ ಡಿಸೆಂಬರ್ 26 ರ ಒಳಗೆ ), ಮಕರ ವಿಲಕ್ಕು ಅಥವಾ ಮಕರ ಜ್ಯೋತಿ (14 ಜನವರಿ- ಮಕರ ಸಂಕ್ರಾಂತಿ) ಮತ್ತು ಮಹಾ ವಿಶುವ ಸಂಕ್ರಾಂತಿ(ಏಪ್ರಿಲ್ 14), ಹಾಗೂ ಮಲಯಾಳಂ ತಿಂಗಳ ಮೊದಲ ಐದು ದಿನಗಳ ಕಾಲದಲ್ಲಿ ತೆರೆದಿರುತ್ತದೆ.
41 -ದಿನಗಳ ಉಪವಾಸ
ಇಲ್ಲಿಗೆ ಆಗಮಿಸುವ ಭಕ್ತಾಧಿಗಳು ಬರುವ ಮುನ್ನ ವ್ರತವನ್ನು ಆಚರಿಸಬೇಕಾಗುತ್ತದೆ (41 -ದಿನಗಳ ಉಪವಾಸ), ಈ ವ್ರತವು ಇದಕ್ಕಾಗಿಯೇ ತಯಾರಿಸಲಾಗಿರುವ ವಿಶೇಷ ಮಾಲೆಯನ್ನು ಧರಿಸುವ ಮೂಲಕ ಆರಂಭಗೊಳ್ಳುತ್ತದೆ ( ಈ ಮಾಲೆಯು ರುದ್ರಾಕ್ಷ ಅಥವಾ ತುಳಸಿ ಬೀಜಗಳಿಂದ ಮಾಡಲಾಗಿರುತ್ತದೆ).
ಕಲ್ಲುಮುಲ್ಲುಗಳಿಂದ ಕೂಡಿರುವ ಕಾಡುದಾರಿ
ಸಾವಿರಾರು ಭಕ್ತರು ಅಂದಾಜು 61 ಕಿ.ಮೀ ಗಳ ದೂರದ ಕಾಲ್ನಡಿಗೆಯ ಯಾತ್ರೆಯನ್ನು ಮಾಡುತ್ತಾರೆ. ಇದು ಕಾಡುಮೇಡುಗಳಿಂದ ಕೂಡಿದ ದುರ್ಗಮ ದಾರಿಯಾಗಿದ್ದು, ಇಂದಿಗೂ ಮಾಲಾಧಾರಿಗಳು ಇದೇ ಹಾದಿಯಲ್ಲಿ ಕಾಲ್ನಡಿಗೆಯಲ್ಲಿ ಪ್ರಯಾಣಿಸುವುದು ವಾಡಿಕೆಯಾಗಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ
ಕಲ್ಲುಮುಲ್ಲುಗಳಿಂದ ಕೂಡಿರುವ ಕಾಡುದಾರಿ
ಈ ಹಾದಿಯು ಎರುಮಲೆನಿಂದ ವಂಡಿಪೆರಿಯಾರ್ಗೆ 12.8 ಕಿ.ಮೀ ಮತ್ತು ಚಾಲಕ್ಯಂನಿಂದ 8 ಕಿ.ಮೀ ಆಗುತ್ತದೆ. ನಂಬಿಕೆಗಳ ಪ್ರಕಾರ ಅಯ್ಯಪ್ಪ ಶಬರಿಮಲೆಗೆ ಬಂದು ನೆಲೆಸುವ ಮುನ್ನ ಇದೇ ಹಾದಿಯಲ್ಲಿ ಬಂದನೆಂದು ಹೇಳಲಾಗುತ್ತದೆ.
"ತಳಮೊನ್ ಮಡೊಮ್"
"ತಳಮೊನ್ ಮಡೊಮ್" ಎಂಬ ಸಾಂಪ್ರದಾಯಿಕ ಆರ್ಚಕ ಕುಟುಂಬವು ಈ ದೇವಾಲಯದ ಹಾಗು-ಹೋಗುಗಳನ್ನು ನೋಡಿಕೊಳ್ಳುತ್ತದೆ. ಈ ದೇವಾಲಯದಲ್ಲಿ ನಡೆಯುವ ಎಲ್ಲ ಕಾರ್ಯಗಳ ಕುರಿತಾಗಿ ನಿರ್ಧಾರವನ್ನು ಈ ಕುಟುಂಬದವರು ತೆಗೆದುಕೊಳ್ಳುತ್ತಾರೆ. ತಂತ್ರಿ ಎನ್ನುವವರು ಈ ದೇವಾಲಯದ ಪ್ರಧಾನ ಅರ್ಚಕರಾಗಿರುತ್ತಾರೆ.
"ತಳಮೊನ್ ಮಡೊಮ್"
ಅಲ್ಲದೆಶಬರಿ ಮಲೆ ಯಾತ್ರ ಸ್ಥಳದ ರೀತಿ ರಿವಾಜುಗಳು ಮತ್ತು ಕಾರ್ಯಗಳನ್ನು ನಡೆಸುವ ಸಮಸ್ತ ಹೊಣೆಯನ್ನು ಈ ಕುಟುಂಬಕ್ಕೆ ನೀಡಿರುವುದು ನಿಜಕ್ಕೂ ಹೆಚ್ಚುಗಾರಿಕೆಯೆ, ಇದು ತಲೆ ತಲಾಂತರದಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ.
ದೇವರ ಪ್ರಸಾದ
ಶಬರಿಮಲೆ ದೇವಾಲಯದಲ್ಲಿ ನೀಡಲಾಗುವ ಪ್ರಸಾದವು ಅರವನ ಪಾಯಸಂ ಮತ್ತು ಅಪ್ಪಂ ಆಗಿರುತ್ತದೆ. ಇದನ್ನು ಅಕ್ಕಿ, ತುಪ್ಪ, ಸಕ್ಕರೆ, ಬೆಲ್ಲ ಇತ್ಯಾದಿಗಳನ್ನು ಹಾಕಿ ತಯಾರಿಸಲಾಗುತ್ತದೆ.
ಹರಿವರಾಸನಂ ಹಾಡು
ಹರಿವರಾಸನಂ ಎಂಬ ಹಾಡನ್ನು ಪ್ರತಿದಿನ ದೇವಾಲಯದ ಬಾಗಿಲು ಮುಚ್ಚುವಾಗ ಹಾಡಲಾಗುತ್ತದೆ. ಹರಿವರಾಸನಂ ಹಾಡನ್ನು ಶಬರಿ ಮಲೆಯ ಜೋಗುಳ (ಉರಕ್ಕುಪಾಟ್ಟು) ಎಂದು ಪರಿಗಣಿಸಲಾಗಿದೆ. ಇದನ್ನು ರಚಿಸಿದವರು ಶ್ರೀ ಕಂಬಂಗುಡಿ ಕುಲತುರ್ ಶ್ರೀನಿವಾಸ ಐಯ್ಯರ್.
ನೆಯ್ಯಭಿಷೇಕಂ
ಅಯ್ಯಪ್ಪ ಮೂರ್ತಿಯ ಮೇಲೆ ತುಪ್ಪದ ಅಭಿಷೇಕ ಮಾಡುವುದು ಇಲ್ಲಿನ ಆಚರಣೆಗಳಲ್ಲಿ ಒಂದಾಗಿದೆ. ಭಕ್ತಾಧಿಗಳು ತಮ್ಮ ಪಲ್ಲಿಕೆಟ್ಟು ಅಥವಾ ಇರುಮುಡಿಯಲ್ಲಿ ( ಎರಡು ಭಾಗವಿರುವ ಹತ್ತಿ ಬಟ್ಟೆಯ ಜೋಳಿಗೆ, ಇದರಲ್ಲಿ ಸ್ವಾಮಿಗೆ ಅರ್ಪಿಸಲು ತೆಂಗಿನಕಾಯಿಯಲ್ಲಿ ತುಪ್ಪ, ಅಕ್ಕಿ ಇತರೆ ಪೂಜೆ ಸಾಮಾನುಗಳನ್ನು ತರಲಾಗುತ್ತದೆ) ತರುವ ತುಪ್ಪವನ್ನು ಸ್ವಾಮಿಗೆ ಅರ್ಪಿಸಲಾಗುತ್ತದೆ. ಇದರಿಂದ ಮಾಡುವ ಅಭಿಷೇಕವೇ ನೆಯ್ಯಭಿಷೇಕಂ ಸೇವೆ.
ತತ್ ತ್ವಂ ಅಸಿ
ಈ ದೇವಾಲಯವು ನೀಡುವ ಪ್ರಮುಖ ಸಂದೇಶವೆಂದರೆ ತಮ್ಮತನವನ್ನು ಗುರುತಿಸಿಕೊಳ್ಳುವಿಕೆಯಾಗಿರುತ್ತದೆ. ಹೌದು ಸಂಸ್ಕೃತದಲ್ಲಿ ತತ್ ತ್ವಂ ಅಸಿ ಎಂಬ ಉಲ್ಲೇಖವಿದೆ. ಅದರರ್ಥ "ಅದು ನೀನು" ಎಂದಾಗುತ್ತದೆ. ಈ ದೇವಾಲಯಕ್ಕೆ ಭಕ್ತಿಯಿಂದ ನಡೆದುಕೊಳ್ಳುವ ಮತ್ತು ವ್ರತವನ್ನು ಆಚರಿಸುವವರು 'ತಮ್ಮಲ್ಲಿರುವ ದಿವ್ಯತೆಯ ಕುರಿತು ಅರಿತುಕೊಳ್ಳುತ್ತಾರೆ', ಹಾಗಾಗಿ ಈ ಶಬರಿಮಲೆಗೆ ಹೋಗುವ ಮಾಲಾಧಾರಿಗಳನ್ನು ಅಥವಾ ವ್ರತಾಧಾರಿಗಳನ್ನು ಸ್ವಾಮಿ ಎಂದು ಸಂಭೋದಿಸಲಾಗುತ್ತದೆ.