Latest Updates
-
Ugadi Wishes 2026: ಯುಗಾದಿ 2026ರ ಶುಭಾಶಯಗಳು! ಸ್ನೇಹಿತರು, ಕುಟುಂಬದವರಿಗೆ ಕಳುಹಿಸಲು ಇಲ್ಲಿವೆ 50+ ಸಂದೇಶಗಳು -
ಹಬ್ಬಕ್ಕೆ ಮಾಡಿ ಗೋಧಿ ಪಾಯಸ: ಚೂರು ಉಳಿಯದಂತೆ ಖಾಲಿ ಮಾಡೋಡು ಖಚಿತ! -
ಈರುಳ್ಳಿ ಬೇಡ.. ಬೆಳ್ಳುಳ್ಳಿ ಬೇಡ..!! ಬ್ರಾಹ್ಮಣ ಶೈಲಿಯ ವೆಜ್ ಕುರ್ಮಾ ಮಾಡೋದು ಹೇಗೆ? ಇಲ್ಲಿದೆ ಸೀಕ್ರೆಟ್ -
ಯುಗಾದಿ ಹಬ್ಬದಲ್ಲಿ ಮಾಡಿ ಬದನೆಕಾಯಿ ಗೊಜ್ಜು! ಅದ್ಭುತ ರುಚಿ ರೆಸಿಪಿ -
Happy Ugadi 2026: ಯುಗಾದಿ ಶುಭಾಶಯಗಳು! ನಿಮ್ಮ ಪ್ರೀತಿಪಾತ್ರರಿಗೆ ಕಳುಹಿಸಿ ಈ ಹಾರ್ಟ್ ಟಚಿಂಗ್ ಶುಭಾಶಯ, ಮೆಸೇಜ್ಗಳು -
ಮಾರ್ಚ್ 21ಕ್ಕೆ ಶನಿ ನಕ್ಷತ್ರ ಬದಲಾವಣೆ: ಈ 4 ರಾಶಿಯವರ ಜೀವನದಲ್ಲಿ ಬರಲಿದೆ ಬಯಸಿದ ಭಾಗ್ಯ! -
ಯುಗಾದಿಗೆ ಸ್ಪೆಷಲ್.. ತೆಲಂಗಾಣ ಶೈಲಿಯ ಸಾಫ್ಟ್ ನೇತಿ ಒಬ್ಬಟ್ಟು ಮಾಡಿ! ಬಾಯಲ್ಲಿ ಇಟ್ಟರೆ ಕರಗುವ ರುಚಿ -
ಮಾಮೂಲಿ ಅಲ್ಲ ಆಂಧ್ರ ಶೈಲಿಯ ಬೇವು-ಬೆಲ್ಲ ಮಾಡಿ: ಯುಗಾದಿ ಸಂಭ್ರಮ ದುಪ್ಪಟ್ಟಾಗಿಸಿ! -
ಸಮ್ಮರ್ ಸ್ಪೆಷಲ್.. ಈ ಹೊಸ ರುಚಿಯ ಕಪ್ಪು ದ್ರಾಕ್ಷಿ ಲೆಮನೇಡ್ ಮಾಡಿ! ಬೇಸಿಗೆಯಲ್ಲಿ ಕೂಲ್ ಕೂಲ್ ಆಗಿ -
Ugadi 2026: ಯುಗಾದಿ ಹಬ್ಬದಂದು ಬೇವು-ಬೆಲ್ಲ ಸವಿಯುವುದರ ವೈಜ್ಞಾನಿಕ ಕಾರಣ ಏನು ಗೊತ್ತಾ?
ಕಷ್ಟ ನಷ್ಟಗಳಿಂದ ಮುಕ್ತಿಪಡೆಯಲು ಸಂಧ್ಯಾಕಾಲದ ನಾಲ್ಕು ಸೂತ್ರ
ಸಂಜೆಯ ಹೊತ್ತು ಕೆಲವೊಂದು ಮಾಡಬಾರದ ಕೆಲಸಗಳನ್ನು ಮಾಡಲು ಹೋಗಲೇಬಾರದು ಎಂದು ಶಾಸ್ತ್ರಗಳು ಹೇಳುತ್ತವೆ. ಇದರಿಂದ ನಿಮಗೆ ದೈಹಿಕ ಸಮಸ್ಯೆಗಳು ಆಗುವುದರ ಜೊತೆಗೆ, ಸಂಪತ್ತಿನ ನಷ್ಟವು ಸಹ ಆಗುತ್ತದೆಯಂತೆ. ಶಾಸ್ತ್ರಗಳ ಪ್ರಕಾರ ಸಂತೋಷಕರ ಮತ್ತು ಶಾಂತಿಯುತವಾದ ಜೀವನಕ್ಕಾಗಿ ಕೆಲವೊಂದು ನೀತಿ ನಿಯಮಗಳನ್ನು ಅನುಸರಿಸಬೇಕಾಗುತ್ತದೆ.
ಜೀವನದಲ್ಲಿ ಹಲವಾರು ಕಷ್ಟ ನಷ್ಟಗಳನ್ನು ಎದುರಿಸುವವರು, "ಮನು ಸಂಹಿತಾ"ದಲ್ಲಿರುವ ಈ ನೀತಿ ನಿಯಮಗಳನ್ನು ತಪ್ಪದೆ ಪಾಲಿಸಬೇಕಾಗುತ್ತದೆ. ಬನ್ನಿ ಮನು ಸಂಹಿತೆಯಲ್ಲಿ ಬರೆದಿರುವ ಆ ನಿಷಿದ್ಧ ಸಂಗತಿಗಳ ಕುರಿತು ತಿಳಿದುಕೊಂಡು ಬರೋಣ.
ವರಿ ಖಾಲು ಕಾರ್ಯಾನಿ ಸಂಧ್ಯಾಕಾಲೆ ವಿವರ್ಜಯೆತ್
ಆಹಾರಂ ಮೈಥುನಂ ನಿದ್ರಾಂ ಸ್ವದ್ಯಾಚ್ ಚತುರ್ಥಕಂ.

ಮೊದಲ ಕೆಲಸ
ಮನು ಸಂಹಿತೆಯ ಪ್ರಕಾರ ಸಂಜೆ ಆಹಾರವನ್ನು ಸೇವಿಸಬಾರದು. ಇದರಿಂದ ಗ್ಯಾಸ್, ಅಜೀರ್ಣತೆ, ಎದೆ ಉರಿ, ಹೊಟ್ಟೆ ಉರಿ, ಹೊಟ್ಟೆ ನೋವು ಮುಂತಾದ ಸಮಸ್ಯೆಗಳು ಬರುತ್ತವೆ. ರಾತ್ರಿಯಾಗುವವರೆಗು ಕಾದು ನಂತರ ಆಹಾರ ಸೇವಿಸಿ. ಒಂದು ವೇಳೆ ತುಂಬಾ ಹಸಿವಾಗಿದ್ದಲ್ಲಿ, ಹಣ್ಣು ಅಥವಾ ಹಣ್ಣಿನ ರಸವನ್ನು ಸೇವಿಸಿ.
ಎರಡನೇಯ ಕೆಲಸ
ಸಂಜೆ ಸಮಯದಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಬೇಡಿ. ಇದಕ್ಕೆ ರಾತ್ರಿಯ ಸಮಯ ಸೂಕ್ತವಾದ ಸಮಯ. ಸಂಜೆ ಮಿಲನದಲ್ಲಿ ತೊಡಗಿಕೊಂಡರೆ, ಗಂಡು ಮತ್ತು ಹೆಣ್ಣು ಇಬ್ಬರ ಆರೋಗ್ಯಕ್ಕೆ ತೊಂದರೆಯಾಗುವ ಸಾಧ್ಯತೆ ಇರುತ್ತದೆಯಂತೆ.
ಜನರ ನಂಬಿಕೆಯ ಪ್ರಕಾರ ಲಕ್ಷ್ಮೀದೇವಿಯು ಸಂಜೆಯ ಸಮಯದಲ್ಲಿ ಭೂಲೋಕವನ್ನು ಸುತ್ತುತ್ತಿರುತ್ತಾಳಂತೆ ಮತ್ತು ನೀವು ಈ ಕಾರ್ಯದಲ್ಲಿ ತೊಡಗಿಕೊಂಡಿರುವುದನ್ನು ನೋಡಿದರೆ ಆಕೆ ಅಲ್ಲಿಂದ ತನ್ನ ನೋಟವನ್ನು ಪಕ್ಕಕ್ಕೆ ಸರಿಸುತ್ತಾಳಂತೆ. ಇದರಿಂದ ನಿಮಗೆ ಆರ್ಥಿಕ ಸಮಸ್ಯೆಗಳು ತಲೆದೋರುತ್ತವೆ.
ಮೂರನೇಯ ಕೆಲಸ
ಸಂಜೆ ಹೊತ್ತು ಯಾರು ನಿದ್ದೆ ಮಾಡುತ್ತಾರೋ, ಅವರಿಗೆ ಇನ್ಸೋಮ್ನಿಯಾ ಬರುತ್ತದೆಯಂತೆ, ಜೊತೆಗೆ ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳು ಅವರನ್ನು ಕಾಡುತ್ತವೆ. ರಾತ್ರಿಯಲ್ಲಿ ಅವರಿಗೆ ನಿದ್ದೆ ಬರುವುದಿಲ್ಲವಂತೆ. ಜೊತೆಗೆ ಮರುದಿನ ಅವರಿಗೆ ಲವಲವಿಕೆ ಕಾಡುತ್ತದೆಯಂತೆ.
ನಾಲ್ಕನೇಯ ಕೆಲಸ
ಸಂಜೆಯ ಸಮಯದಲ್ಲಿ ಯಾರೂ ವೇದಗಳನ್ನು ಓದಬಾರದಂತೆ. ವೇದಗಳನ್ನು ಓದಲು ಬೆಳಗಿನ ಸಮಯ ಪ್ರಶಸ್ತವಾಗಿರುತ್ತದೆಯಂತೆ. ಅದರಲ್ಲೂ ಸೂರ್ಯೋದಯಕ್ಕೆ ಮೊದಲು ಇದನ್ನು ಓದಬೇಕಂತೆ.



Click it and Unblock the Notifications











