Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ಕಷ್ಟ ನಷ್ಟಗಳಿಂದ ಮುಕ್ತಿಪಡೆಯಲು ಸಂಧ್ಯಾಕಾಲದ ನಾಲ್ಕು ಸೂತ್ರ
ಸಂಜೆಯ ಹೊತ್ತು ಕೆಲವೊಂದು ಮಾಡಬಾರದ ಕೆಲಸಗಳನ್ನು ಮಾಡಲು ಹೋಗಲೇಬಾರದು ಎಂದು ಶಾಸ್ತ್ರಗಳು ಹೇಳುತ್ತವೆ. ಇದರಿಂದ ನಿಮಗೆ ದೈಹಿಕ ಸಮಸ್ಯೆಗಳು ಆಗುವುದರ ಜೊತೆಗೆ, ಸಂಪತ್ತಿನ ನಷ್ಟವು ಸಹ ಆಗುತ್ತದೆಯಂತೆ. ಶಾಸ್ತ್ರಗಳ ಪ್ರಕಾರ ಸಂತೋಷಕರ ಮತ್ತು ಶಾಂತಿಯುತವಾದ ಜೀವನಕ್ಕಾಗಿ ಕೆಲವೊಂದು ನೀತಿ ನಿಯಮಗಳನ್ನು ಅನುಸರಿಸಬೇಕಾಗುತ್ತದೆ.
ಜೀವನದಲ್ಲಿ ಹಲವಾರು ಕಷ್ಟ ನಷ್ಟಗಳನ್ನು ಎದುರಿಸುವವರು, "ಮನು ಸಂಹಿತಾ"ದಲ್ಲಿರುವ ಈ ನೀತಿ ನಿಯಮಗಳನ್ನು ತಪ್ಪದೆ ಪಾಲಿಸಬೇಕಾಗುತ್ತದೆ. ಬನ್ನಿ ಮನು ಸಂಹಿತೆಯಲ್ಲಿ ಬರೆದಿರುವ ಆ ನಿಷಿದ್ಧ ಸಂಗತಿಗಳ ಕುರಿತು ತಿಳಿದುಕೊಂಡು ಬರೋಣ.
ವರಿ ಖಾಲು ಕಾರ್ಯಾನಿ ಸಂಧ್ಯಾಕಾಲೆ ವಿವರ್ಜಯೆತ್
ಆಹಾರಂ ಮೈಥುನಂ ನಿದ್ರಾಂ ಸ್ವದ್ಯಾಚ್ ಚತುರ್ಥಕಂ.

ಮೊದಲ ಕೆಲಸ
ಮನು ಸಂಹಿತೆಯ ಪ್ರಕಾರ ಸಂಜೆ ಆಹಾರವನ್ನು ಸೇವಿಸಬಾರದು. ಇದರಿಂದ ಗ್ಯಾಸ್, ಅಜೀರ್ಣತೆ, ಎದೆ ಉರಿ, ಹೊಟ್ಟೆ ಉರಿ, ಹೊಟ್ಟೆ ನೋವು ಮುಂತಾದ ಸಮಸ್ಯೆಗಳು ಬರುತ್ತವೆ. ರಾತ್ರಿಯಾಗುವವರೆಗು ಕಾದು ನಂತರ ಆಹಾರ ಸೇವಿಸಿ. ಒಂದು ವೇಳೆ ತುಂಬಾ ಹಸಿವಾಗಿದ್ದಲ್ಲಿ, ಹಣ್ಣು ಅಥವಾ ಹಣ್ಣಿನ ರಸವನ್ನು ಸೇವಿಸಿ.
ಎರಡನೇಯ ಕೆಲಸ
ಸಂಜೆ ಸಮಯದಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಬೇಡಿ. ಇದಕ್ಕೆ ರಾತ್ರಿಯ ಸಮಯ ಸೂಕ್ತವಾದ ಸಮಯ. ಸಂಜೆ ಮಿಲನದಲ್ಲಿ ತೊಡಗಿಕೊಂಡರೆ, ಗಂಡು ಮತ್ತು ಹೆಣ್ಣು ಇಬ್ಬರ ಆರೋಗ್ಯಕ್ಕೆ ತೊಂದರೆಯಾಗುವ ಸಾಧ್ಯತೆ ಇರುತ್ತದೆಯಂತೆ.
ಜನರ ನಂಬಿಕೆಯ ಪ್ರಕಾರ ಲಕ್ಷ್ಮೀದೇವಿಯು ಸಂಜೆಯ ಸಮಯದಲ್ಲಿ ಭೂಲೋಕವನ್ನು ಸುತ್ತುತ್ತಿರುತ್ತಾಳಂತೆ ಮತ್ತು ನೀವು ಈ ಕಾರ್ಯದಲ್ಲಿ ತೊಡಗಿಕೊಂಡಿರುವುದನ್ನು ನೋಡಿದರೆ ಆಕೆ ಅಲ್ಲಿಂದ ತನ್ನ ನೋಟವನ್ನು ಪಕ್ಕಕ್ಕೆ ಸರಿಸುತ್ತಾಳಂತೆ. ಇದರಿಂದ ನಿಮಗೆ ಆರ್ಥಿಕ ಸಮಸ್ಯೆಗಳು ತಲೆದೋರುತ್ತವೆ.
ಮೂರನೇಯ ಕೆಲಸ
ಸಂಜೆ ಹೊತ್ತು ಯಾರು ನಿದ್ದೆ ಮಾಡುತ್ತಾರೋ, ಅವರಿಗೆ ಇನ್ಸೋಮ್ನಿಯಾ ಬರುತ್ತದೆಯಂತೆ, ಜೊತೆಗೆ ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳು ಅವರನ್ನು ಕಾಡುತ್ತವೆ. ರಾತ್ರಿಯಲ್ಲಿ ಅವರಿಗೆ ನಿದ್ದೆ ಬರುವುದಿಲ್ಲವಂತೆ. ಜೊತೆಗೆ ಮರುದಿನ ಅವರಿಗೆ ಲವಲವಿಕೆ ಕಾಡುತ್ತದೆಯಂತೆ.
ನಾಲ್ಕನೇಯ ಕೆಲಸ
ಸಂಜೆಯ ಸಮಯದಲ್ಲಿ ಯಾರೂ ವೇದಗಳನ್ನು ಓದಬಾರದಂತೆ. ವೇದಗಳನ್ನು ಓದಲು ಬೆಳಗಿನ ಸಮಯ ಪ್ರಶಸ್ತವಾಗಿರುತ್ತದೆಯಂತೆ. ಅದರಲ್ಲೂ ಸೂರ್ಯೋದಯಕ್ಕೆ ಮೊದಲು ಇದನ್ನು ಓದಬೇಕಂತೆ.



Click it and Unblock the Notifications
