Latest Updates
-
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ!
ಭಗವಾನ್ ಕೃಷ್ಣ ಕಾಶಿಯನ್ನು ಸಂಪೂರ್ಣವಾಗಿ ಧ್ವಂಸ ಮಾಡಿದ ಹಿಂದಿನ ಕಥೆ
ದ್ವಾಪರಯುಗದಲ್ಲಿ ಕೃಷ್ಣನು ಕಂಸನನ್ನು ಮತ್ತು ಜರಾಸಂದನನ್ನು ಕೊಂದು ಭೂಲೋಕದಲ್ಲಿ ಧರ್ಮ ಸ್ಥಾಪನೆ ಮಾಡಿದಂತಹ ಕಥೆಯಿದು. ದ್ವಾಪರಯುಗದಲ್ಲಿ ಮಗದ ರಾಜ ಜರಾಸಂಧನು ಜನರ ಮೇಲೆ ದಬ್ಬಾಳಿಕೆ ಮಾಡಿ ರಾಜ್ಯವನ್ನು ಆಳುತ್ತಿದ್ದ. ಆತನಿಗೆ ಅಸ್ತಿ ಮತ್ತು ಪ್ರಾಸ್ತಿ ಎನ್ನುವ ಇಬ್ಬರು ಹೆಣ್ಣು ಮಕ್ಕಳಿದ್ದರು. ತನ್ನಿಬ್ಬರು ಹೆಣ್ಣು ಮಕ್ಕಳನ್ನು ಆತ ಮಥುರಾದ ರಾಜನಾಗಿರುವ ಕಂಸನಿಗೆ ಕೊಟ್ಟು ಮದುವೆ ಮಾಡಿದ.

ಕಂಸನು ಕೃಷ್ಣ ದೇವರ ಸೋದರ ಮಾವನಾಗಿದ್ದ. ಕಂಸ ಕೂಡ ಒಬ್ಬ ಸರ್ವಾಧಿಕಾರಿಯಾಗಿದ್ದು, ಅನ್ಯಾಯಗಳನ್ನು ಮಾಡುತ್ತಲಿದ್ದ. ದೇವರನ್ನು ಬಿಟ್ಟು ತನ್ನನ್ನೇ ಪೂಜಿಸಬೇಕು ಮತ್ತು ರಾಜ್ಯದ ಜನರು ತನ್ನ ಹೆಸರಿನಲ್ಲೇ ಜಪ ಮಾಡಬೇಕು ಎಂದು ಆದೇಶ ಹೊರಡಿಸಿದ್ದ. ಕೃಷ್ಣನು ಕಂಸನನ್ನು ಕೊಂದು ಜೈಲಿನಲ್ಲಿದ್ದ ತನ್ನ ತಂದೆತಾಯಿ ಹಾಗೂ ಸಾವಿರಾರು ಮಂದಿಯನ್ನು ಬಿಡುಗಡೆಗೊಳಿಸಿದ್ದ.

ಕಂಸನ ಸಾವಿಗೆ ಜರಾಸಂಧ ಸೇಡು ತೀರಿಸಲು ಬಯಸಿದ
ಭೂಲೋಕದಲ್ಲಿ ನೆಲೆಸಿರುವಂತಹ ಅಧರ್ಮವನ್ನು ಹೋಗಲಾಡಿಸಿ, ಧರ್ಮ ನೆಲೆಗೊಳ್ಳುವಂತೆ ಮಾಡಲು ವಿಷ್ಣು ದೇವರು ಕೃಷ್ಣನ ಅವತಾರದಲ್ಲಿ ಭೂಮಿಗೆ ಇಳಿದರು ಎಂದು ನಮಗೆಲ್ಲರಿಗೂ ತಿಳಿದಿರುವಂತಹ ವಿಚಾರ. ಇದರಿಂದಾಗಿ ಕೃಷ್ಣ ದೇವರು ಭೂ ಲೋಕದಲ್ಲಿ ಅನ್ಯಾಯ ಮಾಡುತ್ತಿದ್ದ ಸರ್ವಾಧಿಕಾರಿ ರಾಜರನ್ನು ಕೊಲ್ಲಬೇಕಾಗಿತ್ತು. ಕಂಸನನ್ನು ಕೃಷ್ಣನು ಕೊಂದಿದ್ದಾನೆ ಎನ್ನುವ ಸುದ್ದಿ ಕೇಳಿದ ಜರಾಸಂಧನು ತೀವ್ರ ಕೋಪಗೊಂಡ ಮತ್ತು ಕಂಸನ ಸಾವಿಗೆ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ.

ಕಾಳಿಂಗರಾಜ ಮತ್ತು ಕಾಶಿರಾಜನೊಂದಿಗೆ ಕೈಜೋಡಿಸಿದ ಜರಾಸಂಧ
ಜರಾಸಂಧನು ಕೃಷ್ಣನ ವಿರುದ್ಧ ಯುದ್ಧ ಮಾಡಲು ಕಾಳಿಂಗ ಮತ್ತು ಕಾಶಿ ರಾಜ್ಯಗಳ ದೊರೆಗಳಾಗಿದ್ದ ಕಾಳಿಂಗರಾಜ ಮತ್ತು ಕಾಶಿರಾಜರ ನೆರವು ಪಡೆದ ಮತ್ತು ಕೃಷ್ಣನ ವಿರುದ್ಧ ಯುದ್ಧ ಸಾರಿದ. ಅದಾಗ್ಯೂ, ಈ ಇಬ್ಬರು ರಾಜರನ್ನು ಕೃಷ್ಣನು ಸೋಲಿಸಿದ ಮತ್ತು ಜರಾಸಂಧನು ತನ್ನ ಪ್ರಾಣ ಉಳಿಸಿಕೊಳ್ಳಲು ಪರಾರಿಯಾದ. ಕಾಶಿರಾಜನಿಗೆ ಒಬ್ಬ ಮಗನಿದ್ದ. ಅವನು ತನ್ನ ತಂದೆ ಕಾಶಿರಾಜನ ಸಾವಿಗೆ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ. ಕೃಷ್ಣನನ್ನು ಸೋಲಿಸಲು ದೊಡ್ಡ ಶಕ್ತಿಯು ಬೇಕಿದೆ ಎಂದು ಆತ ತಿಳಿದುಕೊಂಡ ಮತ್ತು ಇದಕ್ಕಾಗಿ ಆತ ಈಶ್ವರ ದೇವರಿಂದ ವರ ಪಡೆಯಲು ದೊಡ್ಡ ತಪಸ್ಸನ್ನು ಆಚರಿಸಿದ.

ಈಶ್ವರ ದೇವರು ಒಲಿದರು
ಕೆಲವು ವರ್ಷಗಳ ತಪಸ್ಸಿನ ಬಳಿಕ ಶಿವ ದೇವರು ಕಾಶಿರಾಜನ ಮಗನ ತಪಸ್ಸಿಗೆ ಒಲಿದರು ಮತ್ತು ಆತನ ಮುಂದೆ ಬಂದು ಪ್ರತ್ಯಕ್ಷರಾದರು. ತನಗೆ ಕೃಷ್ಣನನ್ನು ಕೊಲ್ಲುವ ಅಸ್ತ್ರ ನೀಡಬೇಕೆಂದು ಕಾಶಿರಾಜನ ಮಗನು ವರ ಕೇಳಿದ. ಇದಕ್ಕಾಗಿ ಶಿವದೇವರು ಆಯುಧವೊಂದನ್ನು ನೀಡುವರು. ಅದಾಗ್ಯೂ, ಪುರೋಹಿತರನ್ನು ಗೌರವಿಸುವವರ ಮೇಲೆ ಈ ಅಸ್ತ್ರ ಪ್ರಯೋಗ ಮಾಡಬಾರದು ಎಂದು ಶಿವ ದೇವರು ಎಚ್ಚರಿಸುವರು.

ಕೃಷ್ಣ ದೇವರು ಕಾಶಿ ಮೇಲೆ ದಾಳಿ ಮಾಡಿದರು
ಕೃಷ್ಣ ದೇವರು ಪುರೋಹಿತರನ್ನು ತುಂಬಾ ಗೌರವಿಸುತ್ತಾರೆಂದು ಕಾಶಿರಾಜನ ಮಗನಿಗೆ ತಿಳಿದಿರಲಿಲ್ಲ. ಸತ್ಯ ತಿಳಿಯದೆ ಆತ ಕೃಷ್ಣನ ಮೇಲೆ ಯುದ್ಧ ಸಾರುತ್ತಾನೆ. ಅದಾಗ್ಯೂ, ಶಿವ ದೇವರು ನೀಡಿರುವಂತಹ ಅಸ್ತ್ರವು ಕೃಷ್ಣ ದೇವರ ಮೇಲೆ ಪರಿಣಾಮ ಬೀರದೆ ಮರಳಿ ಕಾಶಿರಾಜನ ಮಗನಲ್ಲಿಗೆ ಬರುತ್ತದೆ. ಇದೇ ವೇಳೆ ಕೃಷ್ಣ ದೇವರು ಸುದರ್ಶನ ಚಕ್ರ ಬಿಡುವರು. ಸುದರ್ಶನ ಚಕ್ರವು ಕಾಶಿಯನ್ನು ಸಂಪೂರ್ಣವಾಗಿ ಧ್ವಂಸ ಮಾಡಿಬಿಡುವುದು. ಆದರೆ ಈ ಪ್ರದೇಶವು ಮತ್ತೆ ನದಿಗಳಾಗಿರುವ ವಾರ ಮತ್ತು ಅಸಿಯಿಂದಾಗಿ ಪುನರ್ ನಿರ್ಮಾಣವಾಗುವುದು. ಇದರಿಂದಾಗಿ ಇದನ್ನು ವಾರಣಾಸಿ ಎಂದು ಕರೆಯಲಾಗುತ್ತದೆ.



Click it and Unblock the Notifications