Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಮೈಮೇಲೆ ಬಂದು ಆವರಿಸುವ ಭೂತ-ಪ್ರೇತಾತ್ಮ ಓಡಿಸುವ ದೇವಾಲಯಗಳು!
ಕೆಲವೊಂದು ಮೂಢನಂಬಿಕೆಗಳು ಈಗಲೂ ಭಾರತದಲ್ಲಿ ಹಾಗೆಯೇ ಉಳಿದುಕೊಂಡಿದೆ. ಕಾನೂನು ಎಷ್ಟೇ ಕಟ್ಟುನಿಟ್ಟಾಗಿದ್ದರೂ ಸಹಿತ ಮೂಢನಂಬಿಕೆಗಳು ಮಾತ್ರ ಹಾಗೆಯೇ ಉಳಿದುಕೊಂಡಿದೆ. ಕೆಲವೊಂದು ದೇವಾಲಯಗಳಲ್ಲೂ ಭೂತೋಚ್ಛಾಟನೆಯಂತಹ ಕಾರ್ಯಗಳು ಈಗಲೂ ನಡೆಯುತ್ತದೆ. ಕೆಲವು ದೇಶಗಳಲ್ಲಿ ಭೂತೋಚ್ಛಾಟನೆ ಎನ್ನುವುದು ಒಂದು ಸಂಪ್ರದಾಯವಾಗಿಬಿಟ್ಟಿದೆ. ಕೇವಲ ಹಿಂದೂ ಧರ್ಮದಲ್ಲಿ ಮಾತ್ರವಲ್ಲದೆ ಕ್ರೈಸ್ತ, ಬೌದ್ಧ ಹಾಗೂ ಮುಸ್ಲಿಮರಲ್ಲಿಯೂ ಈ ಪದ್ಧತಿಯಿದೆ.
ಭಾರತದಲ್ಲಿ ಹಲವಾರು ಶತಮಾನಗಳಿಂದಲೂ ಈ ಭೂತೋಚ್ಛಾಟನೆಯು ನಡೆಯುತ್ತಲೇ ಇದೆ. ಭಾರತದಲ್ಲಿ ಕೆಲವೊಂದು ದೇವಾಲಯಗಳಿಗೆ ಈಗಲೂ ಭೂತೋಚ್ಚಾಟನೆಗಾಗಿ ಜನರು ಬರುತ್ತಾರೆ. ತಮ್ಮ ಸಂಬಂಧಿಕರನ್ನು ಕರೆದುಕೊಂಡು ಬಂದು ಭೂತೋಚ್ಚಾಟನೆ ಮಾಡಿಸಿಕೊಳ್ಳುವರು. ಭಾರತದಲ್ಲಿ ಯಾವ್ಯಾವ ಜಾಗಗಳಲ್ಲಿ ಭೂತೋಚ್ಚಾಟನೆ ನಡೆಯುತ್ತದೆ ಎನ್ನುವ ಬಗ್ಗೆ ತಿಳಿಯಲು ಉಸಿರುಬಿಗಿಹಿಡಿದುಕೊಂಡು ಮುಂದಕ್ಕೆ ಓದುತ್ತಾ ಸಾಗಿ...

ಹರ್ಜತ್ ಸೈಯದ್ ಅಲಿ ಮಿರಾ ದಾತರ್ ದರ್ಗಾ, ಗುಜರಾತ್
ದರ್ಗಾದ ಸಮೀಪದಿಂದ ಪ್ರಯಾಣಿಸುತ್ತಿದ್ದರೆ ಅಥವಾ ಇದರ ಆಸುಪಾಸಿನಲ್ಲಿ ವಾಸವಾಗಿದ್ದರೆ ಬೊಬ್ಬೆಯ ಸದ್ದು ಕೇಳಿಬರುವುದು. ಪೀಡಿತನ ಕುಟುಂಬದವರು ಒಂದು ತಿಂಗಳಿಗೆ 800 ರೂಪಾಯಿ ಕೊಟ್ಟು ಒಂದು ಕೋಣೆ ಪಡೆಯಬೇಕು. ಇದರ ಬಳಿಕ ಭೂತೋಚ್ಛಾಟನೆ ಕಾರ್ಯ ಆರಂಭವಾಗುತ್ತದೆ. ಹಿಂಸಾತ್ಮಕ ಶಕ್ತಿಗಳನ್ನು ಗೋಡೆಗೆ ಬಡಿಯಲಾಗುತ್ತದೆ. ತಮ್ಮನ್ನು ತಾವೇ ಸರಿಪಡಿಸಿಕೊಳ್ಳಲು ಕೆಲವು ಪೀಡಿತರು ಇಲ್ಲಿನ ನೆಲದ ಮೇಲೆ ಹೊರಳಾಡುವುದನ್ನು ಕಾಣಬಹುದು. ಯಾವುದೇ ಧರ್ಮದವರು ಇಲ್ಲಿಗೆ ಹೋಗಬಹುದು.

ದತ್ತಾತ್ರೇಯ ಮಂದಿರ, ಗಂಗಾಪುರ, ಮಧ್ಯಪ್ರದೇಶ
ಪ್ರತೀ ಹುಣ್ಣಿಮೆಯ ದಿನದಂದು ಭೂತ ಪೀಡಿತರು ಇಲ್ಲಿಗೆ ಬಂದು ಭೂತೋಚ್ಛಾಟನೆಯಲ್ಲಿ ತೊಡಗುವರು. ಪೀಡಿತರು ಇಲ್ಲಿ ಬೊಬ್ಬೆ ಹಾಕುತ್ತಾ ಇರುವುದನ್ನು ಕಾಣಬಹುದು. ಭೂತಭಾದೆ ಇರುವವರು ಇಲ್ಲಿ ಕಂಬಗಳಿಗೆ ಹತ್ತುವುದು ಸಾಮಾನ್ಯವಾಗಿದೆ.

ಮೆಹಂದಿಪುರ ಬಾಲಾಜಿ ಮಂದಿರ, ರಾಜಸ್ಥಾನ
ಇದು ರಾಜಸ್ಥಾನದ ದೌಸ ಜಿಲ್ಲೆಯಲ್ಲಿದೆ. ಭೂತಭಾದೆ ಇರುವವರು ಬಿಸಿ ನೀರನ್ನು ತಮ್ಮ ಮೇಲೆ ಸುರಿದುಕೊಂಡು ಅಥವಾ ಗೋಡೆಗಳಿಗೆ ತಲೆ ಬಡಿದುಕೊಳ್ಳುತ್ತಾ ದುಷ್ಟಶಕ್ತಿಗಳಿಂದ ದೂರವಾಗಲು ಪ್ರಯತ್ನಿಸುವರು. ಭೂತೋಚ್ಛಾಟನೆಯನ್ನು ಇಲ್ಲಿ ನೇರವಾಗಿ ನೋಡಬಹುದು. ಈ ಸ್ಥಳದ ಸುತ್ತ ಅನೇಕ ಆತ್ಮಗಳಿವೆ ಎಂದು ನಂಬಲಾಗಿದೆ.

ನಿಜಾಮುದ್ದೀನ್ ದರ್ಗಾ, ದೆಹಲಿ
ನಿಜಾಮುದ್ದೀನ್ ದರ್ಗಾವು ಪ್ರವಾಸಿ ತಾಣ ಮಾತ್ರವಲ್ಲದೆ, ಇಲ್ಲಿ ಭೂತೋಚ್ಚಾಟನೆ ಕೂಡ ಮಾಡಲಾಗುತ್ತದೆ. ಪಿಶಾಚಿಗಳಿಂದ ಮುಕ್ತಿ ಪಡೆಯಲು ಹೆಚ್ಚಿನ ಮುಸ್ಲಿಮರು ಇಲ್ಲಿಗೆ ಭೇಟಿ ನೀಡುತ್ತಾರೆ. ಸೂಫಿ ದೇವರುಗಳಿಗೆ ಪ್ರಾರ್ಥನೆ ಸಲ್ಲಿಸಲು ಇಲ್ಲಿಗೆ ಜನರು ಆಗಮಿಸುವರು. ಆದರೆ ಇಲ್ಲಿ ಮೂಲೆಯಲ್ಲಿ ಇರುವ ಒಂದು ಕೋಣೆಯಿಂದ ಭೂತೋಚ್ಛಾಟನೆ ವೇಳೆ ಬೊಬ್ಬೆ ಕೇಳಿಬರುತ್ತದೆ.

ದೇವ್ಜಿ ಮಹಾರಾಜ್ ಮಂದಿರ್, ಮಲಪುರ್, ಮಧ್ಯಪ್ರದೇಶ
ಎಲ್ಲ ಕಡೆಗಳಲ್ಲಿ ಜಾನುವಾರು ಮೇಳ, ಕೃಷಿ ಮೇಳ ನಡೆಯುವಂತೆ ಈ ದೇವಾಲಯದಲ್ಲಿ ಪ್ರತೀ ವರ್ಷ ಭೂತ ಮೇಳ ನಡೆಯುತ್ತದೆ. ಈ ವೇಳೆ ತುಂಬಾ ದೂರದ ಊರುಗಳಿಂದ ಜನರು ಇಲ್ಲಿಗೆ ಆಗಮಿಸುವರು. ಭೂತ ಪೀಡಿತರಿಗೆ ಪೊರಕೆಯಿಂದ ಹೊಡೆಯಲಾಗುತ್ತದೆ. ಪಾದ ಮತ್ತು ಅಂಗೈಯಲ್ಲಿ ಕರ್ಪೂರ ಉರಿಸಲಾಗುತ್ತದೆ.

ಹನುಮಾನ್ ಮಂದಿರ, ಸಾಲಂಗಪುರ, ಗುಜರಾತ್
ಶ್ರೀ ಕಷ್ಟ ಭಂಜನ ದೇವ ಹನುಮಾನ್ ಜಿ ಮಂದಿರ ಎಂದು ಕರೆಯಲ್ಪಡುವ ಇಲ್ಲಿಗೆ ಜನರು ಹನುಮಂತ ದೇವರಿಗೆ ಪೂಜೆ ಮಾಡಲು ಮತ್ತು ಭೂತ ಭಾದೆ ದೂರ ಮಾಡಲು ಬರುವರು.



Click it and Unblock the Notifications











