Just In
- 1 hr ago ವೀಲ್ಚೇರ್ನಲ್ಲಿ ಮಾವನ ಹೆಣವಿಟ್ಟು ಬ್ಯಾಂಕ್ಗೆ ತಂದ ಸೊಸೆ..! ಲೋನ್ ಮಾಡಿಸುವಾಗ ಸಿಕ್ಕಿಬಿದ್ಲು..!
- 2 hrs ago ಆಕಾಶದಲ್ಲಿ ಮತ್ತೆ ಕಾಣಿಸಿಕೊಂಡ ವಿಚಿತ್ರ ವಸ್ತು.! ಸ್ಪಷ್ಟನೆ ಬೇಕೆಂದ ನಿವಾಸಿಗಳು..!
- 3 hrs ago ದುಬೈ ಪ್ರವಾಹದ ವೈರಲ್ ವೀಡಿಯೋಗಳು: ಒಂದೊಂದು ದೃಶ್ಯವೂ ಬದುಕಿನ ಪಾಠ ಹೇಳುತ್ತೆ
- 6 hrs ago ಎಳ ನೀರು ಹಾಕಿ ಮಾಡುವ 2 ದೋಸೆ ರೆಸಿಪಿ: ರುಚಿ ಸೂಪರ್, ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
Don't Miss
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- News ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಕೋಟಿ ಒಡೆಯ: ಒಟ್ಟು ಆಸ್ತಿ ಎಷ್ಟು ಗೊತ್ತಾ?
- Automobiles ಜನ ಕ್ಯೂ ನಿಂತು ಖರೀದಿಸುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ಮಾರಾಟದಲ್ಲಿ ಕುಸಿತ: ಕಾರಣವೇನು?
- Finance ಅಂಬುಜಾ ಸಿಮೆಂಟ್ ಮೇಲೆ ಅದಾನಿ ಗ್ರೂಪ್ನಿಂದ 8,339 ಕೋಟಿ ರೂ. ಹೂಡಿಕೆ
- Movies ಸುಶಾಂತ್ ಸಿಂಗ್ ರಜಪೂತ್ ಸತ್ತಾಗ ಯಾರು ದು:ಖಿಸಲಿಲ್ಲ ; ಜನರಿಗೆ ಬೇಕಿದ್ದಿದ್ದು 'ಮಸಾಲೆಯುಕ್ತ ಗಾಸಿಪ್' ಅಷ್ಟೇ..!
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮೈಮೇಲೆ ಬಂದು ಆವರಿಸುವ ಭೂತ-ಪ್ರೇತಾತ್ಮ ಓಡಿಸುವ ದೇವಾಲಯಗಳು!
ಕೆಲವೊಂದು ಮೂಢನಂಬಿಕೆಗಳು ಈಗಲೂ ಭಾರತದಲ್ಲಿ ಹಾಗೆಯೇ ಉಳಿದುಕೊಂಡಿದೆ. ಕಾನೂನು ಎಷ್ಟೇ ಕಟ್ಟುನಿಟ್ಟಾಗಿದ್ದರೂ ಸಹಿತ ಮೂಢನಂಬಿಕೆಗಳು ಮಾತ್ರ ಹಾಗೆಯೇ ಉಳಿದುಕೊಂಡಿದೆ. ಕೆಲವೊಂದು ದೇವಾಲಯಗಳಲ್ಲೂ ಭೂತೋಚ್ಛಾಟನೆಯಂತಹ ಕಾರ್ಯಗಳು ಈಗಲೂ ನಡೆಯುತ್ತದೆ. ಕೆಲವು ದೇಶಗಳಲ್ಲಿ ಭೂತೋಚ್ಛಾಟನೆ ಎನ್ನುವುದು ಒಂದು ಸಂಪ್ರದಾಯವಾಗಿಬಿಟ್ಟಿದೆ. ಕೇವಲ ಹಿಂದೂ ಧರ್ಮದಲ್ಲಿ ಮಾತ್ರವಲ್ಲದೆ ಕ್ರೈಸ್ತ, ಬೌದ್ಧ ಹಾಗೂ ಮುಸ್ಲಿಮರಲ್ಲಿಯೂ ಈ ಪದ್ಧತಿಯಿದೆ.
ಭಾರತದಲ್ಲಿ ಹಲವಾರು ಶತಮಾನಗಳಿಂದಲೂ ಈ ಭೂತೋಚ್ಛಾಟನೆಯು ನಡೆಯುತ್ತಲೇ ಇದೆ. ಭಾರತದಲ್ಲಿ ಕೆಲವೊಂದು ದೇವಾಲಯಗಳಿಗೆ ಈಗಲೂ ಭೂತೋಚ್ಚಾಟನೆಗಾಗಿ ಜನರು ಬರುತ್ತಾರೆ. ತಮ್ಮ ಸಂಬಂಧಿಕರನ್ನು ಕರೆದುಕೊಂಡು ಬಂದು ಭೂತೋಚ್ಚಾಟನೆ ಮಾಡಿಸಿಕೊಳ್ಳುವರು. ಭಾರತದಲ್ಲಿ ಯಾವ್ಯಾವ ಜಾಗಗಳಲ್ಲಿ ಭೂತೋಚ್ಚಾಟನೆ ನಡೆಯುತ್ತದೆ ಎನ್ನುವ ಬಗ್ಗೆ ತಿಳಿಯಲು ಉಸಿರುಬಿಗಿಹಿಡಿದುಕೊಂಡು ಮುಂದಕ್ಕೆ ಓದುತ್ತಾ ಸಾಗಿ...
ಹರ್ಜತ್ ಸೈಯದ್ ಅಲಿ ಮಿರಾ ದಾತರ್ ದರ್ಗಾ, ಗುಜರಾತ್
ದರ್ಗಾದ ಸಮೀಪದಿಂದ ಪ್ರಯಾಣಿಸುತ್ತಿದ್ದರೆ ಅಥವಾ ಇದರ ಆಸುಪಾಸಿನಲ್ಲಿ ವಾಸವಾಗಿದ್ದರೆ ಬೊಬ್ಬೆಯ ಸದ್ದು ಕೇಳಿಬರುವುದು. ಪೀಡಿತನ ಕುಟುಂಬದವರು ಒಂದು ತಿಂಗಳಿಗೆ 800 ರೂಪಾಯಿ ಕೊಟ್ಟು ಒಂದು ಕೋಣೆ ಪಡೆಯಬೇಕು. ಇದರ ಬಳಿಕ ಭೂತೋಚ್ಛಾಟನೆ ಕಾರ್ಯ ಆರಂಭವಾಗುತ್ತದೆ. ಹಿಂಸಾತ್ಮಕ ಶಕ್ತಿಗಳನ್ನು ಗೋಡೆಗೆ ಬಡಿಯಲಾಗುತ್ತದೆ. ತಮ್ಮನ್ನು ತಾವೇ ಸರಿಪಡಿಸಿಕೊಳ್ಳಲು ಕೆಲವು ಪೀಡಿತರು ಇಲ್ಲಿನ ನೆಲದ ಮೇಲೆ ಹೊರಳಾಡುವುದನ್ನು ಕಾಣಬಹುದು. ಯಾವುದೇ ಧರ್ಮದವರು ಇಲ್ಲಿಗೆ ಹೋಗಬಹುದು.
ದತ್ತಾತ್ರೇಯ ಮಂದಿರ, ಗಂಗಾಪುರ, ಮಧ್ಯಪ್ರದೇಶ
ಪ್ರತೀ ಹುಣ್ಣಿಮೆಯ ದಿನದಂದು ಭೂತ ಪೀಡಿತರು ಇಲ್ಲಿಗೆ ಬಂದು ಭೂತೋಚ್ಛಾಟನೆಯಲ್ಲಿ ತೊಡಗುವರು. ಪೀಡಿತರು ಇಲ್ಲಿ ಬೊಬ್ಬೆ ಹಾಕುತ್ತಾ ಇರುವುದನ್ನು ಕಾಣಬಹುದು. ಭೂತಭಾದೆ ಇರುವವರು ಇಲ್ಲಿ ಕಂಬಗಳಿಗೆ ಹತ್ತುವುದು ಸಾಮಾನ್ಯವಾಗಿದೆ.
ಮೆಹಂದಿಪುರ ಬಾಲಾಜಿ ಮಂದಿರ, ರಾಜಸ್ಥಾನ
ಇದು ರಾಜಸ್ಥಾನದ ದೌಸ ಜಿಲ್ಲೆಯಲ್ಲಿದೆ. ಭೂತಭಾದೆ ಇರುವವರು ಬಿಸಿ ನೀರನ್ನು ತಮ್ಮ ಮೇಲೆ ಸುರಿದುಕೊಂಡು ಅಥವಾ ಗೋಡೆಗಳಿಗೆ ತಲೆ ಬಡಿದುಕೊಳ್ಳುತ್ತಾ ದುಷ್ಟಶಕ್ತಿಗಳಿಂದ ದೂರವಾಗಲು ಪ್ರಯತ್ನಿಸುವರು. ಭೂತೋಚ್ಛಾಟನೆಯನ್ನು ಇಲ್ಲಿ ನೇರವಾಗಿ ನೋಡಬಹುದು. ಈ ಸ್ಥಳದ ಸುತ್ತ ಅನೇಕ ಆತ್ಮಗಳಿವೆ ಎಂದು ನಂಬಲಾಗಿದೆ.
ನಿಜಾಮುದ್ದೀನ್ ದರ್ಗಾ, ದೆಹಲಿ
ನಿಜಾಮುದ್ದೀನ್ ದರ್ಗಾವು ಪ್ರವಾಸಿ ತಾಣ ಮಾತ್ರವಲ್ಲದೆ, ಇಲ್ಲಿ ಭೂತೋಚ್ಚಾಟನೆ ಕೂಡ ಮಾಡಲಾಗುತ್ತದೆ. ಪಿಶಾಚಿಗಳಿಂದ ಮುಕ್ತಿ ಪಡೆಯಲು ಹೆಚ್ಚಿನ ಮುಸ್ಲಿಮರು ಇಲ್ಲಿಗೆ ಭೇಟಿ ನೀಡುತ್ತಾರೆ. ಸೂಫಿ ದೇವರುಗಳಿಗೆ ಪ್ರಾರ್ಥನೆ ಸಲ್ಲಿಸಲು ಇಲ್ಲಿಗೆ ಜನರು ಆಗಮಿಸುವರು. ಆದರೆ ಇಲ್ಲಿ ಮೂಲೆಯಲ್ಲಿ ಇರುವ ಒಂದು ಕೋಣೆಯಿಂದ ಭೂತೋಚ್ಛಾಟನೆ ವೇಳೆ ಬೊಬ್ಬೆ ಕೇಳಿಬರುತ್ತದೆ.
ದೇವ್ಜಿ ಮಹಾರಾಜ್ ಮಂದಿರ್, ಮಲಪುರ್, ಮಧ್ಯಪ್ರದೇಶ
ಎಲ್ಲ ಕಡೆಗಳಲ್ಲಿ ಜಾನುವಾರು ಮೇಳ, ಕೃಷಿ ಮೇಳ ನಡೆಯುವಂತೆ ಈ ದೇವಾಲಯದಲ್ಲಿ ಪ್ರತೀ ವರ್ಷ ಭೂತ ಮೇಳ ನಡೆಯುತ್ತದೆ. ಈ ವೇಳೆ ತುಂಬಾ ದೂರದ ಊರುಗಳಿಂದ ಜನರು ಇಲ್ಲಿಗೆ ಆಗಮಿಸುವರು. ಭೂತ ಪೀಡಿತರಿಗೆ ಪೊರಕೆಯಿಂದ ಹೊಡೆಯಲಾಗುತ್ತದೆ. ಪಾದ ಮತ್ತು ಅಂಗೈಯಲ್ಲಿ ಕರ್ಪೂರ ಉರಿಸಲಾಗುತ್ತದೆ.
ಹನುಮಾನ್ ಮಂದಿರ, ಸಾಲಂಗಪುರ, ಗುಜರಾತ್
ಶ್ರೀ ಕಷ್ಟ ಭಂಜನ ದೇವ ಹನುಮಾನ್ ಜಿ ಮಂದಿರ ಎಂದು ಕರೆಯಲ್ಪಡುವ ಇಲ್ಲಿಗೆ ಜನರು ಹನುಮಂತ ದೇವರಿಗೆ ಪೂಜೆ ಮಾಡಲು ಮತ್ತು ಭೂತ ಭಾದೆ ದೂರ ಮಾಡಲು ಬರುವರು.