Latest Updates
-
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ
ದೇವಶಯಣಿ ಏಕಾದಶಿ ಯಾವಾಗ? ಇದರ ಪ್ರಾಮುಖ್ಯತೆಗಳೇನು
ಹಿಂದೂ ಧರ್ಮದಲ್ಲಿ ಪ್ರತಿ ಘಳಿಗೆಯು ತುಂಬಾ ಪ್ರಾಮುಖ್ಯ ಹಾಗೂ ವಿಶೇಷತೆಯನ್ನು ಹೊಂದಿರುವುದು. ಘಳಿಗೆ, ದಿನ ಹಾಗೂ ತಿಂಗಳುಗಳು ಹಿಂದೂ ಕ್ಯಾಲೆಂಡರ್ ಪ್ರಕಾರ ಹಲವಾರು ಮುಖ್ಯ ವಿಚಾರಗಳನ್ನು ತಿಳಿಸುವುದು. ಅದರಲ್ಲಿ ಒಂದು ಏಕಾದಶಿ. ಏಕಾದಶಿಯೆಂದರೆ ಮಾಸಾರ್ಧದ ಹನ್ನೊಂದನೇ ದಿನ. ಪ್ರತೀ ತಿಂಗಳು ಎರಡು ಸಲ ಏಕಾದಶಿ ಬರುವುದು. ಒಂದು ಸಲ ಚಂದ್ರ ಕ್ಷೀಣಿಸುವಾಗ ಮತ್ತೊಂದು ಚಂದ್ರನು ಪ್ರಬಲನಾಗುವಾಗ. ಇದನ್ನು ಕೃಷ್ಣ ಪಕ್ಷ ಹಾಗೂ ಶುಕ್ಲ ಪಕ್ಷ ಎಂದು ಕರೆಯಲಾಗುತ್ತದೆ. ಇದರಿಂದ ವರ್ಷದಲ್ಲಿ ಸುಮಾರು 24 ಏಕಾದಶಿ ಬರುವುದು...

ದೇವಶಯಣಿ ಏಕಾದಶಿ 2018
ಹಿಂದೂ ಕ್ಯಾಲೆಂಡರ್ ಪ್ರಕಾರ ಹೆಚ್ಚುವರಿ ತಿಂಗಳಿನಿಂದಾಗಿ ಏಕಾದಶಿಯು 26 ಆಗಬಹುದು. ಹೆಚ್ಚುವರಿ ತಿಂಗಳನ್ನು ಅಧಿಕ ಮಾಸ ಎಂದು ಕರೆಯಲಾಗುತ್ತದೆ. ಧಾರ್ಮಿಕ ಪ್ರಾಮುಖ್ಯತೆಗೆ ಅನುಗುಣವಾಗಿ ಏಕಾದಶಿಗಳಿಗೆ ಬೇರೆ ಬೇರೆ ಹೆಸರುಗಳನ್ನು ನೀಡಲಾಗಿದೆ. ಈ ತಿಂಗಳು ದೇವಶಯಣಿ ಏಕಾದಶಿಯು ಜುಲೈ 23, 2018ರಂದು ಬರಲಿದೆ.

ದೇವಶಯಣಿ ಏಕಾದಶಿಯ ಮಹತ್ವ
ಪ್ರತಿಯೊಂದು ಏಕಾದಶಿಯನ್ನು ವಿಷ್ಣು ದೇವರಿಗೆ ಮೀಸಲಿಡಲಾಗುತ್ತದೆ. ದೇವಶಯಣಿ ಏಕಾದಶಿಯು ಆಷಾಢ ಮಾಸದ ಹನ್ನೊಂದನೆ ದಿನದಂದು ಬರುವುದು. ಇದರ ಬಳಿಕ ವಿಷ್ಣು ನಾಲ್ಕು ತಿಂಗಳ ಕಾಲ ನಿದ್ರಿಸಲು ತೆರಳುವನು. ಈ ನಾಲ್ಕು ತಿಂಗಳ ಅವಧಿಯನ್ನು ಚತುರ್ಮಾಸವೆಂದು ಕರೆಯಲಾಗುತ್ತದೆ. ಸಂಸ್ಕೃತದಲ್ಲಿ `ಏಕಾದಶಿ'ಎಂದರೆ `ದೇವರು ನಿದ್ರಿಸುವುದು'ಎಂದರ್ಥ. ದೇವಶಯಣಿ ಏಕಾದಶಿಯನ್ನು ಭಕ್ತರು ಉಪವಾಸದ ಮೂಲಕ ಆಚರಿಸಿಕೊಳ್ಳುವರು. ಈ ಏಕಾದಶಿಯನ್ನು ನಿಜವಾಗಿಯೂ ಯಾವ ರೀತಿ ಆಚರಿಸಿಕೊಳ್ಳಲಾಗುವುದು ಎಂದು ತಿಳಿಯುವ.

ದೇವಶಯಣಿ ಏಕಾದಶಿಯ ಪೂಜಾ ವಿಧಿ
ಪೂಜೆಗಳನ್ನು ಕೈಗೊಳ್ಳುವಾಗ ಭಕ್ತರು ಆ ದಿನ ಬೇಗನೆ ಎದ್ದು ಬ್ರಹ್ಮ ಮುಹೂರ್ತದಲ್ಲಿ ಸ್ನಾನ ಮಾಡಿಕೊಳ್ಳಬೇಕು ಎನ್ನುವುದು ಆಚರಣೆ. ಅದು ಏಕಾದಶಿಗೂ ಪಾಲನೆಯಾಗುವುದು. ಈ ದಿನ ಎಲ್ಲಾ ಒಳ್ಳೆಯ ಕಾರ್ಯಗಳು ಸಫಲವಾಗುವುದು. ಪೂಜೆ ಮಾಡುವಂತಹ ಜಾಗಕ್ಕೆ ಗಂಗಾಜಲ ಸಿಂಪಡಿಸಿ. ಇದರ ಬಳಿಕ ವಿಷ್ಣುವಿನ ಮೂರ್ತಿಯನ್ನು ಅಲ್ಲಿಡಬೇಕು. ಬೇರೆ ಏಕಾದಶಿಯಂದು ಮಾಡುವ ರೀತಿಯಲ್ಲೇ ಈ ಏಕಾದಶಿಯಂದು ಕೂಡ ಪೂಜೆ ಮಾಡಬೇಕು. ಸ್ಥಳವನ್ನು ಶುದ್ಧೀಕರಿಸಿದ ಬಳಿಕ ನೀವು ನೇರವಾಗಿ ಪೂಜೆ ಮಾಡಲು ಆರಂಭಿಸಬೇಕು. ವಿಷ್ಣುವಿಗೆ ಪ್ರಿಯವಾಗಿರುವ ಹಳದಿ ಬಟ್ಟೆ ಮತ್ತು ಇತರ ಸಾಮಗ್ರಿಗಳನ್ನು ಇಡಲು ಮರೆಯಬೇಡಿ. ವ್ರತ ಕಥಾ ಪಠಣ ಮಾಡಿ ಮತ್ತು ಆರತಿ ಬೆಳಗಿ, ಬಳಿಕ ಪ್ರಸಾದ ಹಂಚುವುದರೊಂದಿಗೆ ಪೂಜೆ ಸಮಾಪ್ತಿಗೊಳಿಸಿ.

ನೋಡಿ ಇದೆಲ್ಲಾ ನೆನಪಿನಲ್ಲಿಟ್ಟು ಮಾಡಿ
ಪೂಜೆ ಕೊನೆಗೊಂಡ ಬಳಿಕ ನೀವು ಬಿಳಿ ಬಟ್ಟೆಯಿಂದ ವಿಷ್ಣುವಿನ ಮೂರ್ತಿಯನ್ನು ಮುಚ್ಚಿರಿ ಮತ್ತು ಆತನಿಗೆ ಮಲಗಲು ಒಂದು ತಲೆದಿಂಬು ಇಡಿ. ಅದರ ಮೇಲೆ ಮೂರ್ತಿಯನ್ನು ಇಟ್ಟುಬಿಡಿ. ಈ ಮೂಲಕ ವಿಷ್ಣು ಮಲಗುವನು. ದೇವಶಯಣಿ ಏಕಾದಶಿಯಂದು ಹೀಗೆ ಮಾಡಲಾಗುತ್ತದೆ. ದೇವಶಯಣಿ ಏಕಾದಶಿಯ ಪೂಜೆಯು ಈಗ ಮುಕ್ತಾಯಗೊಂಡಿದೆ. ನೀವು ದಾನ ಮಾಡಿದರೆ ಆಗ ನಿಮ್ಮ ಉಪವಾಸ ಸತ್ಯಾಗ್ರಹವು ತುಂಬಾ ಫಲಪ್ರದವಾಗುವುದು ಮತ್ತು ದೇವರಿಗೆ ಮೆಚ್ಚುಗೆಯಾಗುವುದು. ಇದರಿಂದ ಬಡವರಿಗೆ ದಾನ ಮಾಡಿ.

ಏಕಾದಶಿಯಂದು ಪಾಲಿಸುವ ಬೇರೆ ನಿಯಮಗಳು
ಏಕಾದಶಿಯಂದು ಉಪವಾಸ ಮಾಡುವಾಗ ನೀವು ಧಾನ್ಯಗಳನ್ನು ಸೇವನೆ ಮಾಡಬಾರದು ಮತ್ತು ಅನ್ನದಿಂದ ದೂರವಿರಬೇಕು. ಈ ದಿನ ಉಗುರು ಹಾಗೂ ಕೂದಲು ಕತ್ತರಿಸಿಕೊಳ್ಳಬಾರದು. ಮಹಿಳೆಯರು ಈ ದಿನ ಕೂದಲು ಕೂಡ ತೊಳೆಯಬಾರದು. ಈ ದಿನ ಮಾಂಸಾಹಾರ ಸೇವನೆ ಮಾಡಬಾರದು. ಏಕಾದಶಿಯಂದು ಉಪವಾಸ ಮಾಡುವವರಿಗೆ ಮೋಕ್ಷ ಪ್ರಾಪ್ತಿಯಾಗುವುದು. ವಿಷ್ಣುವನ್ನು ಭಕ್ತಿಯಿಂದ ಪೂಜಿಸಿದರೆ ಆಗ ಜನರ ಎಲ್ಲಾ ಪಾಪಗಳು ಮತ್ತು ಮಾಡಿರುವಂತಹ ತಪ್ಪುಗಳು ಪರಿಹಾರವಾಗುವುದು. ಪವಿತ್ರ ನದಿಯಲ್ಲಿ ಸ್ನಾನ ಮಾಡುವುದು ಕೂಡ ತುಮಬಾ ಒಳ್ಳೆಯದು ಮತ್ತು ಇದರಿಂದ ವಿಷ್ಣುವಿನ ಆಶೀರ್ವಾದ ಸಿಗುತ್ತದೆ ಎಂದು ನಂಬಲಾಗಿದೆ.



Click it and Unblock the Notifications