Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಶ್ರಾವಣ ಸೋಮವಾರ ಉಪವಾಸದ ವೇಳೆ ಸೇವಿಸಬಹುದಾದ ಮತ್ತು ಸೇವಿಸಲೇಬಾರದ ಆಹಾರಗಳು
ಹಿಂದೂಗಳ ಪವಿತ್ರ ಮಾಸಗಳಲ್ಲಿ ಒಂದಾದ ಶ್ರಾವಣಮಾಸದ ಸೋಮವಾರದಂದು ಉಪವಾಸ ಮಾಡುವುದು ಸರ್ವಶ್ರೇಷ್ಠ ಎನ್ನಲಾಗುತ್ತದೆ. ಇಷ್ಟಾರ್ಥ ಸಿದ್ಧಿಗಾಗಿ, ಶಿವ ಮತ್ತು ಪಾರ್ವತಿಯನ್ನು ಹೆಚ್ಚು ಆರಾಧಿಸುವ ಈ ಮಾಸದಲ್ಲಿ ಇವರ ಕೃಪೆಗೆ ಪಾತ್ರರಾಗಲು ಉಪವಾಸ ಮಾಡುವುದು ವಾಡಿಕೆ.
2021ನೇ ಸಾಲಿನಲ್ಲಿ ಆಗಸ್ಟ್ 9ರಿಂದ ಸೆಪ್ಟೆಂಬರ್ 7ರವರೆಗೆ ಶ್ರಾವಣ ಮಾಸ ಇರಲಿದೆ. ಶ್ರಾವಣ ಮಾಸದಲ್ಲಿ ಉಪವಾದ ಮಾಡುವಾಗ ಯಾವ ಆಹಾರಗಳನ್ನು ಸೇವಿಸಬಹುದು, ಯಾವ ಆಹಾರಗಳನ್ನು ಸೇವಿಸಲೇಬಾರದು ಎಂಬ ಗೊಂದಲ ಕೆಲವರಿಗೆ ಇರುವುದು ಸಹಜ.
ನಾವಿಂದು ಈ ಲೇಖನದಲ್ಲಿ ಶ್ರಾವಣ ಉಪವಾಸದ ಸಮಯದಲ್ಲಿ ಸೇವಿಸಬಹುದಾದ ಹಾಗೂ ಸೇವಿಸಲೇಬಾರದ ಆಹಾರಗಳ ಪಟ್ಟಿಯನ್ನು ನಿಮಗೆ ನೀಡಲಿದ್ದೇವೆ:

ಶ್ರಾವಣ ಸೋಮವಾರ ಸೇವಿಸಬಹುದಾದ ಆಹಾರಗಳು
ಹಣ್ಣು-ಹಾಲಿನ ಪದಾರ್ಥ
* ಉಪವಾಸದ ಸಮಯದಲ್ಲಿ ಫಲಹಾರ, ಅಂದರೆ ಅಕ್ಷರಶಃ ಹಣ್ಣುಗಳ ಸೇವನೆ ಎಂದರ್ಥ. ಹಣ್ಣಿನ ಜ್ಯೂಸ್, ಎಳನೀರು, ನೀರಿನ ಸೇವನೆ ಹೆಚ್ಚು ಮಾಡುವುದು ಉತ್ತಮ.
* ಹಾಲು ಮತ್ತು ಅದರ ಸಂಬಂಧಿತ ಉತ್ಪನ್ನಗಳಾದ ಮಜ್ಜಿಗೆ, ಮೊಸರು, ಕಾಟೇಜ್ ಚೀಸ್ ಅಥವಾ ಪನೀರ್, ಮನೆಯಲ್ಲಿ ತಯಾರಿಸಿದ ಬೆಣ್ಣೆ (ಯಾವುದೇ ಉಪ್ಪು ಇಲ್ಲದೆ) ಮತ್ತು ತುಪ್ಪ ಸೇವಿಸಬಹುದು.

ತರಕಾರಿ-ಕಾಳುಗಳು
* ಉಪವಾಸ ಮಾಡುವ ವ್ಯಕ್ತಿಯು ಸಿಹಿಗೆಣಸು, ಕೊಲೊಕೇಶಿಯ, ಸೋರೆಕಾಯಿ, ಆಲೂಗಡ್ಡೆಗಳಂತಹ ಕೆಲವು ತರಕಾರಿಗಳನ್ನು ಕೂಡ ತಿನ್ನಬಹುದು.
* ಸಬುದಾನಿ ಅಥವಾ ಸಬ್ಬಕ್ಕಿಯಿಂದ ತಯಾರಿಸಿದ ಎಲ್ಲಾ ಖಾದ್ಯಗಳು, ರಾಜಗೀರ, ಗೆಣಸು, ಕಮಲದ ಹೂವಿನ ಬೀಜ (ಮಕಾನ್), ಮತ್ತು ಹುರುಳಿ ಸೇವಿಸಬಹುದು

ಈ ಮಸಾಲೆ ಪದಾರ್ಥ ಮಾತ್ರ ಸೇವನೆಗೆ ಅರ್ಹ
* ಈ ಸಮಯದಲ್ಲಿ ಎಲ್ಲಾ ರೀತಿಯ ಮಸಾಲೆಗಳನ್ನು ತಪ್ಪಿಸಬೇಕು; ಆದಾಗ್ಯೂ ನೀವು ಕರಿಮೆಣಸು, ಕೊತ್ತಂಬರಿ, ಹಸಿರು ಮೆಣಸಿನಕಾಯಿ, ಒಣಗಿದ ಶುಂಠಿ, ಲವಂಗ, ಏಲಕ್ಕಿ ಮತ್ತು ಜೀರಿಗೆಯನ್ನು ಸೇವಿಸಬಹುದು.
* ನಿಂಬೆಹಣ್ಣು, ಒಣ ಹಣ್ಣುಗಳು (ಡ್ರೈ ಫ್ರೂಟ್ಸ್) ಮತ್ತು ಸಕ್ಕರೆ, ಕಲ್ಲು ಸಕ್ಕರೆ, ತೆಂಗಿನಕಾಯಿ ಮತ್ತು ಕಡಲೆಕಾಯಿಯನ್ನು ಸಹ ಸೇವಿಸಬಹುದು.

ಶ್ರಾವಣ ಸೋಮವಾರ ಸೇವಿಸಬಾರದ ಆಹಾರಗಳು
ಅಕ್ಕಿ-ತಾಮಸಿ ಪದಾರ್ಥ
* ಉಪವಾಸದ ಸಮಯದಲ್ಲಿ, ಯಾವುದೇ ರೀತಿಯ ಧಾನ್ಯಗಳು, ಅಕ್ಕಿ ಮತ್ತು ಬೇಳೆಗಳನ್ನು ಸೇವಿಸಬಾರದು, ಏಕೆಂದರೆ ಅವುಗಳನ್ನು 'ಅನ್ನ' ಎಂದು ಪರಿಗಣಿಸಲಾಗುತ್ತದೆ.
* ಈರುಳ್ಳಿ, ಬೆಳ್ಳುಳ್ಳಿ, ಮೂಲಂಗಿಯಂತಹ ಕೆಲವು ತರಕಾರಿಗಳನ್ನು ಬಿಸಿ ಅಥವಾ ತಾಮಸಿ ಆಹಾರ ಎಂದು ತಿಳಿದಿರುವುದರಿಂದ ಅವುಗಳನ್ನು ತಪ್ಪಿಸಬೇಕು.
* ಇಂಗು ಮುಂತಾದ ಮಸಾಲೆಗಳು, ಕಲ್ಲಿನ ಉಪ್ಪು, ಕೆಂಪು ಮೆಣಸಿನಕಾಯಿ, ಮೆಂತ್ಯ, ಅರಿಶಿನ ಮತ್ತು ಎಲ್ಲಾ ರೀತಿಯ ಉಪ್ಪನ್ನು ತಪ್ಪಿಸಬೇಕು.
* ಕೆಲವರು ಉಪವಾಸ ಮಾಡುವಾಗ ಬೆಲ್ಲವನ್ನು ಸಹ ತಪ್ಪಿಸಬಹುದು ಎನ್ನುತ್ತಾರೆ.

ಮಾಂಸಾಹಾರಿ ಸೇವನೆ
* ಶಾಖಾಹಾರಿ ಅಂದರೆ, ಚಿಕನ್, ಮಟನ್, ಮೀನು, ಮೊಟ್ಟೆಯಂಥ ಆಹಾರಗಳನ್ನು ಉಪವಾಸದ ವೇಳೇ ಸೇವಿಸಬಾರದು.
* ಯಾವುದೇ ರೀತಿಯ ಬದನೆಕಾಯಿಯನ್ನು ಸೇವಿಸಬಾರದು.
* ಹಸಿರು ಸೊಪ್ಪಿನ ಪದಾರ್ಥಗಳನ್ನು ಸೇವಿಸಬಾರದು.
* ಧೂಮಪಾನ, ಮಧ್ಯಾಪಾನ ಶ್ರಾವಣ ಉಪವಾಸದ ಸಮಯದಲ್ಲಿ ಕಟ್ಟಾಯ ನಿಷಿದ್ಧ.



Click it and Unblock the Notifications











