Just In
- 1 hr ago ವೃಷಭ ರಾಶಿಗೆ ಗುರು ಸಂಚಾರ: 11ನೇ ಮನೆಯಲ್ಲಿ ಗುರು ಕರ್ಕ ರಾಶಿಯವರಿಗೆ ಅದೃಷ್ಟವೋ ಅದೃಷ್ಟ
- 3 hrs ago ವೃಷಭ ರಾಶಿಗೆ ಗುರು ಸಂಚಾರ: 12ನೇ ಮನೆಯಲ್ಲಿ ಗುರು ಮಿಥುನ ರಾಶಿಯ ಮೇಲೆ ಬೀರುವ ಪ್ರಭಾವ ಹೇಗಿರಲಿದೆ?
- 3 hrs ago ಶಾಲೆಯನ್ನೇ ಬ್ಯೂಟಿ ಪಾರ್ಲರ್ ಮಾಡಿಕೊಂಡ ಪ್ರಿನ್ಸಿಪಾಲ್..! ಕೇಳಿದ ಶಿಕ್ಷಕಿ ಕೈ ಕಚ್ಚಿ ಹಲ್ಲೆ..!
- 17 hrs ago ವೃಷಭ ರಾಶಿಗೆ ಗುರು ಸಂಚಾರ: ಗುರು ನಿಮ್ಮ ಲಗ್ನ ಮನೆಯಲ್ಲಿ ಇರುವುದರಿಂದ ಇದರ ಪ್ರಭಾವ ಹೇಗಿರಲಿದೆ?
Don't Miss
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- News ಚಾಮರಾಜನಗರ: ಚೊಂಬುಗಳ ಪಾರ್ಟಿ ಕಾಂಗ್ರೆಸ್
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Automobiles ರಾಜ್ಯದ ಕೈಜಾರಿ ತಮಿಳುನಾಡು ಸೇರಿದ 9000 ಕೋಟಿಯ ಪ್ರಾಜೆಕ್ಟ್: JLR ಇವಿ ಹಬ್ಗೆ ಸಿದ್ದವಾದ ನೆರೆ-ರಾಜ್ಯ!
- Movies 'ಅವತಾರ ಪುರುಷ 2'ದಿಂದ ನಿರ್ಮಾಪಕ ಜೇಬು ತುಂಬಿತೇ? ಪುಷ್ಕರ್ಗೆ ಹಕ್ಕುಗಳಿಂದ ಬಂದ ಹಣವೆಷ್ಟು?
- Technology ವಿವೋ V30e ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ ವರ್ಷದ ನವರಾತ್ರಿ ಯಾಕೆ ಇಷ್ಟೊಂದು ಮಂಗಳಕರ ಗೊತ್ತೇ? ಇಲ್ಲಿದೆ ಕಾರಣಗಳು
ನವರಾತ್ರಿಯು ಒಂದು ವರ್ಷದಲ್ಲಿ ನಾಲ್ಕು ಬಾರಿ ಬರುತ್ತದೆ. ಆಷಾಢ, ಚೈತ್ರ, ವಸಂತ ಹಾಗೂ ಶರಧಿ ನವರಾತ್ರಿಯಂದು ಆಚರಿಸಲಾಗುತ್ತದೆ. ಆಷಾಢ ಮತ್ತು ವಸಂತದ ಸಮಯದಲ್ಲಿ ಬರುವ ನವರಾತ್ರಿಯು ಅಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿಲ್ಲ. ಅದನ್ನು ಗುಪ್ತ ನವರಾತ್ರಿ ಎಂದು ಸಹ ಕರೆಯಲಾಗುವುದು. ಇನ್ನೆರಡು ನವರಾತ್ರಿಯನ್ನು ಹೆಚ್ಚು ಸಡಗರ ಹಾಗೂ ಧಾರ್ಮಿಕ ಚಟುವಟಿಕೆಯ ಮೂಲಕ ಆಚರಿಸಲಾಗುತ್ತದೆ. ಅವು ಭಾರತದ ಅತ್ಯಂತ ಜನಪ್ರಿಯ ಉತ್ಸವದಲ್ಲಿ ಒಂದು ಎಂದು ಹೇಳಲಾಗುವುದು. ಮಹಾ ನವರಾತ್ರಿ ಎಂದು ಕರೆಯಲ್ಪಡುವ ಶರಧಿ ನವರಾತ್ರಿಯು ಈ ವರ್ಷ ಅಂದರೆ 2018ರಲ್ಲಿ ಅಕ್ಟೋಬರ್ 10 ರಿಂದ ಅಕ್ಟೋಬರ್ 18ರ ವರೆಗೆ ಆಚರಿಸಲಾಗುವುದು. ನಂತರ ಅಕ್ಟೋಬರ್ 19ರಂದು ದಸರಾ ಎಂದು ಆಚರಿಸಲಾಗುತ್ತದೆ.
ಭಕ್ತರ ಬದುಕಲ್ಲಿ ಹೊಸ ಚೈತನ್ಯ ಹಾಗೂ ಬೆಳಕನ್ನು ನೀಡುವ ದೇವಿಯ ಈ ವ್ರತಾಚರಣೆಯು ಅತ್ಯಂತ ಮಂಗಳಕರವಾದದ್ದು. ಜ್ಯೋತಿಷ್ಯ ಶಾಸ್ತ್ರಜ್ಞರ ಪ್ರಕಾರ ಈ ವರ್ಷ ಅಂದರೆ 2018ರ ನವರಾತ್ರಿಯು ಅತ್ಯಂತ ಮಂಗಳಕರ ಘಟನೆಯೊಂದಿಗೆ ಕೂಡಿದೆ ಎನ್ನಲಾಗುವುದು. ಈ ವಿಷಯಗಳ ಕುರಿತು ಇನ್ನಷ್ಟು ಮಾಹಿತಿಯನ್ನು ತಿಳಿಯಲು ಲೇಖನದ ಮುಂದಿನ ಭಾಗವನ್ನು ಪರಿಶೀಲಿಸಿ.
ದುರ್ಗಾ ದೇವಿಯ ನವರಾತ್ರಿಯ ವಾಹನ
ಪ್ರತಿವರ್ಷದ ನವರಾತ್ರಿಯಂದು ದುರ್ಗಾ ದೇವಿ ತನ್ನ ವಾಹನದ ಮೇಲೆ ಬರುತ್ತಾಳೆ. ಅಂತೆಯೇ ನವರಾತ್ರಿ ಮುಗಿದ ತಕ್ಷಣ ಪುನಃ ತನ್ನ ವಾಹನವನ್ನು ಬದಲಿಸುತ್ತಾಳೆ ಎನ್ನುವ ನಂಬಿಕೆಯಿದೆ. ದೇವಿ ಆಗಮಿಸುವ ವಾಹನಗಳು ವಿವಿಧ ಬಗೆಯಾಗಿದ್ದು, ಅವು ಒಂದೊಂದು ಸೂಚನೆ ಅಥವಾ ಮಾಹಿತಿಯನ್ನು ನೀಡುತ್ತವೆ ಎಂದು ಹೇಳುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದೇವಿಯು ಈ ವರ್ಷ ದೋಣಿಯ ಮೇಲೆ ಸವಾರಿಯನ್ನು ಕೈಗೊಂಡಿದ್ದಾಳೆ. ಇದು ಅತ್ಯಂತ ಮಂಗಳಕರವಾದ ಸಂಗತಿ ಎಂದು ಹೇಳಲಾಗುವುದು. ಜ್ಯೋತಿಷ್ಯದ ಪ್ರಕಾರ ದೇವಿ ಸಿಂಹ, ಕುದುರೆ, ಆನೆ, ದೋಣಿಯನ್ನು ಆಯ್ಕೆ ಮಾಡಿಕೊಂಡರೆ ಅದು ಶುಭ ಸಂಕೇತ ಎನ್ನುವರು. ದೋಣಿಯು ಒಂದು ಸುಗ್ಗಿಯನ್ನು ಪ್ರತಿಬಿಂಬಿಸುತ್ತದೆ. ಆನೆಯು ಸಮೃದ್ಧಿ ಹಾಗೂ ಶ್ರಮದ ಕೆಲಸವನ್ನು ಪ್ರತಿಬಿಂಬಿಸುವ ಸಂಕೇತವಾಗಿರುತ್ತದೆ.
Most Read: ನವರಾತ್ರಿ 2018: ಪೂಜಾ ಸಮಯ, ವಿಧಿ ವಿಧಾನಗಳು ಮತ್ತು ಪ್ರಾಮುಖ್ಯತೆ
ಒಂಬತ್ತು ದಿನದ ನವರಾತ್ರಿ
ಹಿಂದೂ ಪಂಚಾಂಗದ ಪ್ರಕಾರ ತಿಥಿಯನ್ನು ಆಧರಿಸಿ ನವರಾತ್ರಿಯನ್ನು ಆಚರಿಸಲಾಗುವುದು. ಹಾಗಾಗಿ ನವರಾತ್ರಿ ಆಚರಿಸುವ ದಿನಗಳ ಸಂಖ್ಯೆಯಲ್ಲಿ ಬದಲಾವಣೆ ಇರುತ್ತದೆ. ದೇವಿಯ ಎಲ್ಲಾ ಒಂಬತ್ತು ರೂಪಗಳು ಆರಾಧಿಸಲ್ಪಟ್ಟಿವೆಯಾದರೂ ದಿನಗಳ ಸಂಖ್ಯೆಯಲ್ಲಿ ಎಂಟು, ಒಂಬತ್ತು ಅಥವಾ ಹತ್ತು ದಿನಗಳು ಬರಬಹುದು. ಈ ವರ್ಷ ನವರಾತ್ರಿಯನ್ನು 9 ದಿನಗಳ ಕಾಲ ಆಚರಿಸಲಾಗುವುದು. ಇದನ್ನು ಮಂಗಳಕರ ಎಂದು ಪರಿಗಣಿಸಲಾಗುವುದು.
ಮೂರು ಮಂಗಳಕರ ಘಟನೆಗಳು
ಈ ವರ್ಷದ ನವರಾತ್ರಿಯಲ್ಲಿ ಮೂರು ಮಂಗಳಕರವಾದ ಯೋಗಗಳು ಸಮಭವಿಸುತ್ತವೆ. ರಾಜಯೋಗ, ಸರ್ವತ್ ಸಿದ್ಧಿಯೋಗ ಮತ್ತು ಅಮೃತ್ ಯೋಗವು ಈ ವರ್ಷ ಸಂಭವಿಸುತ್ತದೆ. ಈ ಯೋಗದಿಂದ ವರ್ಷದಲ್ಲಿ ಹೊಸ ಮನೆ, ಯೋಜನೆ, ಹೊಸ ಮನೆ ಪ್ರವೇಶ ಸೇರಿದಂತೆ ವಿವಿಧ ಬಗೆಯ ಮಂಗಳಕರವಾದ ಸಂಗತಿ ಸಂಭವಿಸುವುದು ಎನ್ನಲಾಗುತ್ತದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವು ದಿನಾಂಕಗಳ ಪಟ್ಟಿಯನ್ನು ಈ ಕೆಳಗೆ ನೀಡಲಾಗಿದೆ.
- ಅಕ್ಟೋಬರ್ 10- ಪ್ರತಿಪಾದ ರವಿ ಯೋಗ
- ಅಕ್ಟೋಬರ್ 12- ಚತುರ್ಥಿ ರವಿ ಯೋಗ.
- ಅಕ್ಟೋಬರ್ 13- ಪಂಚಮಿ ರವಿ ಯೋಗ.
- ಅಕ್ಟೋಬರ್ 14 - ಶಶಿ ರವಿಯೋಗ, ಸರ್ವತ್ ಸಿದ್ಧಿಯೋಗ.
- ಅಕ್ಟೋಬರ್ 15- ಸಪ್ತಮಿ ರವಿಯೋಗ.
Most Read: ಶರಧಿಯ ನವರಾತ್ರಿ: ದಿನಾಂಕ, ಮುಹೂರ್ತ ಮತ್ತು ಮಹತ್ವ
ಜ್ಯೋತಿಷ್ಯ ಮನೆಯಲ್ಲಿ ಶುಕ್ರ ಗ್ರಹ
ನವರಾತ್ರಿಯ ಸಮಯದಲ್ಲಿ ಶುಕ್ರನು ತನ್ನದೇ ಆದ ಜ್ಯೋತಿಷ್ಯ ಮನೆಯಲ್ಲಿ ನೆಲೆಸಿದ್ದಾನೆ. ಇದನ್ನು ಮಂಗಳಕರವಾದ ಯೋಗ ಎಂದು ಪರಿಗಣಿಸಲಾಗುತ್ತದೆ. ಇದರ ಪರಿಣಾಮದಿಂದ ಜನರು ಎಲ್ಲಾ ಬಗೆಯ ಸಾಹಸಗಳಲ್ಲಿ ಯಶಸ್ಸನ್ನು ಹೊಂದಲು ಸಹಾಯ ಮಾಡುವುದು. ವಿಶೇಷವಾಗಿ ವಿವಾಹದ ಜೀವನದಲ್ಲಿ ಶುಕ್ರನು ಸಂತೋಷ ಹಾಗೂ ನೆಮ್ಮದಿಯನ್ನು ನೀಡುವನು. ಶುಕ್ರನು ತನ್ನ ಸ್ವಂತ ಮನೆಯಲ್ಲಿಯೇ ಇರುವುದರಿಂದ ಅತ್ಯಂತ ಮಂಗಳಕರ ಎಂದು ಪರಿಗಣಿಸಲಾಗುವುದು.
Most
Read:
ಮೊಬೈಲ್
ನಂಬರ್ನ್ನು
'ಸಂಖ್ಯಾಶಾಸ್ತ್ರದ
ಪ್ರಕಾರ'
ಆಯ್ಕೆ
ಮಾಡಿ-ಅದೃಷ್ಟವಂತರಾಗಿ!
ನವರಾತ್ರಿಯ ಗುರುವಾರದ ಪೂಜೆಯ ಪ್ರಾಮುಖ್ಯತೆ
ನವರಾತ್ರಿಯ ಗುರುವಾರದ ಪೂಜೆಯು ಹೆಚ್ಚು ಉತ್ತಮವಾದದ್ದು. ಈ ವರ್ಷದ ನವರಾತ್ರಿಯ ಪೂಜೆಯು ಎರಡು ಗುರುವಾರವನ್ನು ಒಳಗೊಂಡಿದೆ. ಹಾಗಾಗಿ ಈ ಗುರುವಾರದ ನವರಾತ್ರಿ ಪೂಜೆ ಹಾಗೂ ಉಪವಾಸ ವ್ರತವು ಹೆಚ್ಚು ಮಂಗಳಕರವಾದದ್ದು ಎಂದು ಹೇಳಲಾಗುತ್ತದೆ.