Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ ವರ್ಷದ ನವರಾತ್ರಿ ಯಾಕೆ ಇಷ್ಟೊಂದು ಮಂಗಳಕರ ಗೊತ್ತೇ? ಇಲ್ಲಿದೆ ಕಾರಣಗಳು

ನವರಾತ್ರಿಯು ಒಂದು ವರ್ಷದಲ್ಲಿ ನಾಲ್ಕು ಬಾರಿ ಬರುತ್ತದೆ. ಆಷಾಢ, ಚೈತ್ರ, ವಸಂತ ಹಾಗೂ ಶರಧಿ ನವರಾತ್ರಿಯಂದು ಆಚರಿಸಲಾಗುತ್ತದೆ. ಆಷಾಢ ಮತ್ತು ವಸಂತದ ಸಮಯದಲ್ಲಿ ಬರುವ ನವರಾತ್ರಿಯು ಅಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿಲ್ಲ. ಅದನ್ನು ಗುಪ್ತ ನವರಾತ್ರಿ ಎಂದು ಸಹ ಕರೆಯಲಾಗುವುದು. ಇನ್ನೆರಡು ನವರಾತ್ರಿಯನ್ನು ಹೆಚ್ಚು ಸಡಗರ ಹಾಗೂ ಧಾರ್ಮಿಕ ಚಟುವಟಿಕೆಯ ಮೂಲಕ ಆಚರಿಸಲಾಗುತ್ತದೆ. ಅವು ಭಾರತದ ಅತ್ಯಂತ ಜನಪ್ರಿಯ ಉತ್ಸವದಲ್ಲಿ ಒಂದು ಎಂದು ಹೇಳಲಾಗುವುದು. ಮಹಾ ನವರಾತ್ರಿ ಎಂದು ಕರೆಯಲ್ಪಡುವ ಶರಧಿ ನವರಾತ್ರಿಯು ಈ ವರ್ಷ ಅಂದರೆ 2018ರಲ್ಲಿ ಅಕ್ಟೋಬರ್ 10 ರಿಂದ ಅಕ್ಟೋಬರ್ 18ರ ವರೆಗೆ ಆಚರಿಸಲಾಗುವುದು. ನಂತರ ಅಕ್ಟೋಬರ್ 19ರಂದು ದಸರಾ ಎಂದು ಆಚರಿಸಲಾಗುತ್ತದೆ.

ಭಕ್ತರ ಬದುಕಲ್ಲಿ ಹೊಸ ಚೈತನ್ಯ ಹಾಗೂ ಬೆಳಕನ್ನು ನೀಡುವ ದೇವಿಯ ಈ ವ್ರತಾಚರಣೆಯು ಅತ್ಯಂತ ಮಂಗಳಕರವಾದದ್ದು. ಜ್ಯೋತಿಷ್ಯ ಶಾಸ್ತ್ರಜ್ಞರ ಪ್ರಕಾರ ಈ ವರ್ಷ ಅಂದರೆ 2018ರ ನವರಾತ್ರಿಯು ಅತ್ಯಂತ ಮಂಗಳಕರ ಘಟನೆಯೊಂದಿಗೆ ಕೂಡಿದೆ ಎನ್ನಲಾಗುವುದು. ಈ ವಿಷಯಗಳ ಕುರಿತು ಇನ್ನಷ್ಟು ಮಾಹಿತಿಯನ್ನು ತಿಳಿಯಲು ಲೇಖನದ ಮುಂದಿನ ಭಾಗವನ್ನು ಪರಿಶೀಲಿಸಿ.

ದುರ್ಗಾ ದೇವಿಯ ನವರಾತ್ರಿಯ ವಾಹನ
ಪ್ರತಿವರ್ಷದ ನವರಾತ್ರಿಯಂದು ದುರ್ಗಾ ದೇವಿ ತನ್ನ ವಾಹನದ ಮೇಲೆ ಬರುತ್ತಾಳೆ. ಅಂತೆಯೇ ನವರಾತ್ರಿ ಮುಗಿದ ತಕ್ಷಣ ಪುನಃ ತನ್ನ ವಾಹನವನ್ನು ಬದಲಿಸುತ್ತಾಳೆ ಎನ್ನುವ ನಂಬಿಕೆಯಿದೆ. ದೇವಿ ಆಗಮಿಸುವ ವಾಹನಗಳು ವಿವಿಧ ಬಗೆಯಾಗಿದ್ದು, ಅವು ಒಂದೊಂದು ಸೂಚನೆ ಅಥವಾ ಮಾಹಿತಿಯನ್ನು ನೀಡುತ್ತವೆ ಎಂದು ಹೇಳುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದೇವಿಯು ಈ ವರ್ಷ ದೋಣಿಯ ಮೇಲೆ ಸವಾರಿಯನ್ನು ಕೈಗೊಂಡಿದ್ದಾಳೆ. ಇದು ಅತ್ಯಂತ ಮಂಗಳಕರವಾದ ಸಂಗತಿ ಎಂದು ಹೇಳಲಾಗುವುದು. ಜ್ಯೋತಿಷ್ಯದ ಪ್ರಕಾರ ದೇವಿ ಸಿಂಹ, ಕುದುರೆ, ಆನೆ, ದೋಣಿಯನ್ನು ಆಯ್ಕೆ ಮಾಡಿಕೊಂಡರೆ ಅದು ಶುಭ ಸಂಕೇತ ಎನ್ನುವರು. ದೋಣಿಯು ಒಂದು ಸುಗ್ಗಿಯನ್ನು ಪ್ರತಿಬಿಂಬಿಸುತ್ತದೆ. ಆನೆಯು ಸಮೃದ್ಧಿ ಹಾಗೂ ಶ್ರಮದ ಕೆಲಸವನ್ನು ಪ್ರತಿಬಿಂಬಿಸುವ ಸಂಕೇತವಾಗಿರುತ್ತದೆ.

ಒಂಬತ್ತು ದಿನದ ನವರಾತ್ರಿ
ಹಿಂದೂ ಪಂಚಾಂಗದ ಪ್ರಕಾರ ತಿಥಿಯನ್ನು ಆಧರಿಸಿ ನವರಾತ್ರಿಯನ್ನು ಆಚರಿಸಲಾಗುವುದು. ಹಾಗಾಗಿ ನವರಾತ್ರಿ ಆಚರಿಸುವ ದಿನಗಳ ಸಂಖ್ಯೆಯಲ್ಲಿ ಬದಲಾವಣೆ ಇರುತ್ತದೆ. ದೇವಿಯ ಎಲ್ಲಾ ಒಂಬತ್ತು ರೂಪಗಳು ಆರಾಧಿಸಲ್ಪಟ್ಟಿವೆಯಾದರೂ ದಿನಗಳ ಸಂಖ್ಯೆಯಲ್ಲಿ ಎಂಟು, ಒಂಬತ್ತು ಅಥವಾ ಹತ್ತು ದಿನಗಳು ಬರಬಹುದು. ಈ ವರ್ಷ ನವರಾತ್ರಿಯನ್ನು 9 ದಿನಗಳ ಕಾಲ ಆಚರಿಸಲಾಗುವುದು. ಇದನ್ನು ಮಂಗಳಕರ ಎಂದು ಪರಿಗಣಿಸಲಾಗುವುದು.

ಮೂರು ಮಂಗಳಕರ ಘಟನೆಗಳು
ಈ ವರ್ಷದ ನವರಾತ್ರಿಯಲ್ಲಿ ಮೂರು ಮಂಗಳಕರವಾದ ಯೋಗಗಳು ಸಮಭವಿಸುತ್ತವೆ. ರಾಜಯೋಗ, ಸರ್ವತ್ ಸಿದ್ಧಿಯೋಗ ಮತ್ತು ಅಮೃತ್ ಯೋಗವು ಈ ವರ್ಷ ಸಂಭವಿಸುತ್ತದೆ. ಈ ಯೋಗದಿಂದ ವರ್ಷದಲ್ಲಿ ಹೊಸ ಮನೆ, ಯೋಜನೆ, ಹೊಸ ಮನೆ ಪ್ರವೇಶ ಸೇರಿದಂತೆ ವಿವಿಧ ಬಗೆಯ ಮಂಗಳಕರವಾದ ಸಂಗತಿ ಸಂಭವಿಸುವುದು ಎನ್ನಲಾಗುತ್ತದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವು ದಿನಾಂಕಗಳ ಪಟ್ಟಿಯನ್ನು ಈ ಕೆಳಗೆ ನೀಡಲಾಗಿದೆ.
- ಅಕ್ಟೋಬರ್ 10- ಪ್ರತಿಪಾದ ರವಿ ಯೋಗ
- ಅಕ್ಟೋಬರ್ 12- ಚತುರ್ಥಿ ರವಿ ಯೋಗ.
- ಅಕ್ಟೋಬರ್ 13- ಪಂಚಮಿ ರವಿ ಯೋಗ.
- ಅಕ್ಟೋಬರ್ 14 - ಶಶಿ ರವಿಯೋಗ, ಸರ್ವತ್ ಸಿದ್ಧಿಯೋಗ.
- ಅಕ್ಟೋಬರ್ 15- ಸಪ್ತಮಿ ರವಿಯೋಗ.

ಜ್ಯೋತಿಷ್ಯ ಮನೆಯಲ್ಲಿ ಶುಕ್ರ ಗ್ರಹ
ನವರಾತ್ರಿಯ ಸಮಯದಲ್ಲಿ ಶುಕ್ರನು ತನ್ನದೇ ಆದ ಜ್ಯೋತಿಷ್ಯ ಮನೆಯಲ್ಲಿ ನೆಲೆಸಿದ್ದಾನೆ. ಇದನ್ನು ಮಂಗಳಕರವಾದ ಯೋಗ ಎಂದು ಪರಿಗಣಿಸಲಾಗುತ್ತದೆ. ಇದರ ಪರಿಣಾಮದಿಂದ ಜನರು ಎಲ್ಲಾ ಬಗೆಯ ಸಾಹಸಗಳಲ್ಲಿ ಯಶಸ್ಸನ್ನು ಹೊಂದಲು ಸಹಾಯ ಮಾಡುವುದು. ವಿಶೇಷವಾಗಿ ವಿವಾಹದ ಜೀವನದಲ್ಲಿ ಶುಕ್ರನು ಸಂತೋಷ ಹಾಗೂ ನೆಮ್ಮದಿಯನ್ನು ನೀಡುವನು. ಶುಕ್ರನು ತನ್ನ ಸ್ವಂತ ಮನೆಯಲ್ಲಿಯೇ ಇರುವುದರಿಂದ ಅತ್ಯಂತ ಮಂಗಳಕರ ಎಂದು ಪರಿಗಣಿಸಲಾಗುವುದು.

ನವರಾತ್ರಿಯ ಗುರುವಾರದ ಪೂಜೆಯ ಪ್ರಾಮುಖ್ಯತೆ
ನವರಾತ್ರಿಯ ಗುರುವಾರದ ಪೂಜೆಯು ಹೆಚ್ಚು ಉತ್ತಮವಾದದ್ದು. ಈ ವರ್ಷದ ನವರಾತ್ರಿಯ ಪೂಜೆಯು ಎರಡು ಗುರುವಾರವನ್ನು ಒಳಗೊಂಡಿದೆ. ಹಾಗಾಗಿ ಈ ಗುರುವಾರದ ನವರಾತ್ರಿ ಪೂಜೆ ಹಾಗೂ ಉಪವಾಸ ವ್ರತವು ಹೆಚ್ಚು ಮಂಗಳಕರವಾದದ್ದು ಎಂದು ಹೇಳಲಾಗುತ್ತದೆ.



Click it and Unblock the Notifications