Just In
- 5 min ago ವೃಷಭ ರಾಶಿಗೆ ಗುರು ಸಂಚಾರ: 11ನೇ ಮನೆಯಲ್ಲಿ ಗುರು ಕರ್ಕ ರಾಶಿಯವರಿಗೆ ಅದೃಷ್ಟವೋ ಅದೃಷ್ಟ
- 2 hrs ago ವೃಷಭ ರಾಶಿಗೆ ಗುರು ಸಂಚಾರ: 12ನೇ ಮನೆಯಲ್ಲಿ ಗುರು ಮಿಥುನ ರಾಶಿಯ ಮೇಲೆ ಬೀರುವ ಪ್ರಭಾವ ಹೇಗಿರಲಿದೆ?
- 2 hrs ago ಶಾಲೆಯನ್ನೇ ಬ್ಯೂಟಿ ಪಾರ್ಲರ್ ಮಾಡಿಕೊಂಡ ಪ್ರಿನ್ಸಿಪಾಲ್..! ಕೇಳಿದ ಶಿಕ್ಷಕಿ ಕೈ ಕಚ್ಚಿ ಹಲ್ಲೆ..!
- 16 hrs ago ವೃಷಭ ರಾಶಿಗೆ ಗುರು ಸಂಚಾರ: ಗುರು ನಿಮ್ಮ ಲಗ್ನ ಮನೆಯಲ್ಲಿ ಇರುವುದರಿಂದ ಇದರ ಪ್ರಭಾವ ಹೇಗಿರಲಿದೆ?
Don't Miss
- News ಮಹಾರಾಜರು ಬೆಂಗಳೂರು ಅರಮನೆ ಮೈದಾನ ಜಾಗ ಬಿಟ್ಟು ಕೊಡುವಂತೆ ಎಎಪಿ ಆಗ್ರಹ
- Automobiles ರಾಜ್ಯದ ಕೈಜಾರಿ ತಮಿಳುನಾಡು ಸೇರಿದ 9000 ಕೋಟಿಯ ಪ್ರಾಜೆಕ್ಟ್: JLR ಇವಿ ಹಬ್ಗೆ ಸಿದ್ದವಾದ ನೆರೆ-ರಾಜ್ಯ!
- Movies 'ಅವತಾರ ಪುರುಷ 2'ದಿಂದ ನಿರ್ಮಾಪಕ ಜೇಬು ತುಂಬಿತೇ? ಪುಷ್ಕರ್ಗೆ ಹಕ್ಕುಗಳಿಂದ ಬಂದ ಹಣವೆಷ್ಟು?
- Finance ಇಳಿಕೆ ಕಂಡ ನೆಸ್ಲೆ ಇಂಡಿಯಾ ಷೇರು: ಸೆರೆಲಾಕ್ನಲ್ಲಿ ಸಕ್ಕರೆ ಬಗ್ಗೆ ಸಂಸ್ಥೆಯ ಸ್ಪಷ್ಟನೆ ಏನು?
- Technology ವಿವೋ V30e ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
- Sports IPL 2024: ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದರೂ ಹಾರ್ದಿಕ್ ಪಾಂಡ್ಯಗೆ ಭಾರೀ ಮೊತ್ತದ ದಂಡ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಾ. 28 ಪಾಪ ವಿಮೋಚನೆ ಏಕಾದಶಿ: ನಿಮ್ಮ ರಾಶಿ ಪ್ರಕಾರ ಈ ಪರಿಹಾರ ಮಾಡಿ, ಒಳ್ಳೆಯದಾಗುತ್ತೆ
ಮಾರ್ಚ್ 28ರಂದು ಪಾಪ ವಿಮೋಚನಿ ಏಕಾದಶಿಯನ್ನುಆಚರಿಸಲಾಗುತ್ತಿದೆ. ಹೋಲಿಕಾ ದಹನ್ ಹಾಗೂ ಚೈತ್ರ ನವರಾತ್ರಿಯ ನಡುವೆ ಬರುವ ಏಕಾದಶಿಯನ್ನು ಪಾಪ ವಿಮೋಚನಿ ಏಕಾದಶಿ ಎಂದು ಆಚರಿಸಲಾಗುವುದು. ಈ ದಿನ ಏಕಾದಶಿ ವ್ರತ ಮಾಡಿದವರು ಪಾಪಗಳಿಂದ ವಿಮೋಚನೆ ಪಡೆಯುತ್ತಾರೆ, ಅವರ ಎಲ್ಲಾ ಕಷ್ಟಗಳು ದೂರಾಗುವಂತೆ ಶ್ರೀ ವಿಷ್ಣು ಅನುಗ್ರಹಿಸುತ್ತಾನೆ.
ಈ ಏಕಾದಶಿ ಮಹತ್ವ, ಪಾರಣ ಸಮಯ ಹಾಗೂ ನಿಮ್ಮ ರಾಶಿ ಪ್ರಕಾರಣ ಈ ದಿನ ಏನು ಮಾಡಿದರೆ ಒಳ್ಳೆಯದು ಎಂದು ನೋಡೋಣ:
ಪಾಪ ವಿಮೋಚನೆ ಶುಭ ಮುಹೂರ್ತ ಮಾರ್ಚ್ 27 ಸಂಜೆ 06:04ಕ್ಕೆ ಪ್ರಾರಂಭವಾಗಿದೆ, ಮಾರ್ಚ್ 28 ಸಂಜೆ 04:15ಕ್ಕೆ ಏಕಾಶಿ ಮುಕ್ತಾಯವಾಗುತ್ತದೆ.
ಪಾರಣ ಸಮಯ
ಮಾರ್ಚ್ 29 ಬೆಳಗ್ಗೆ 06:15ರಿಂದ 08:43
ಒಟ್ಟು ಅವಧಿ 2 ಗಂಟೆ 28 ನಿಮಿಷಗಳು
ಪಾರಣ ಸಮಯ ಎಂದರೇನು?
ಏಕಾದಶಿ ಉಪವಾಸವನ್ನು ಪೂರ್ಣಗೊಳಿಸುವ ವಿಧಾನವೇ ಪಾರಣ. ಮರುದಿನ ಸೂರ್ಯೋದಯದ ನಂತರ, ದ್ವಾದಶಿ, ಏಕಾದಶಿ ಉಪವಾಸವನ್ನು ಕೊನೆಗೊಳಿಸಲಾಗುತ್ತದೆ. ನೀವು ಏಕಾದಶಿಯಂದು ಉಪವಾಸ ಮಾಡಿದ್ದರೆ, ನೀವು ಅದನ್ನು ಪಾರಣ ದ್ವಾದಶಿ ಅವಧಿಯ ಅಂತ್ಯದೊಳಗೆ ಪೂರ್ಣಗೊಳಿಸಬೇಕು.
ಪಾಪ ವಿಮೋಚನೆ ಏಕಾಶಿ ಮಹತ್ವ
ಪ್ರತಿ ತಿಂಗಳು ಒಂದು ಏಕಾದಶಿ ಇದ್ದು ಅದು ತನ್ನದೇ ಆದ ಮಹತ್ವವನ್ನು ಹೊಂದಿದೆ. ಈ ಏಕಾದಶಿಯನ್ನು ಆಚರಿಸುವುದರಿಂದ ನಾವು ಗೊತ್ತು-ಗೊತ್ತಿಲ್ಲದೇ ಮಾಡಿದ ಪಾಪಗಳಿಂದ ವಿಮೋಚನೆ ಸಿಗುತ್ತದೆ, ಇದರಿಂದ ಮೋಕ್ಷ ಸಿಗುವುದು.
ಏಕಾದಶಿ ಉಪವಾಸವನ್ನು ಮುಗಿಸುವ ಮುನ್ನ ಬಡ ಬ್ರಾಹ್ಮಣನಿಗೆ ತನ್ನ ಸಾಮಾರ್ಥ್ಯಕ್ಕೆ ತಕ್ಕಂತೆ ದಾನ ಮಾಡಿದರೆ ಉಪವಾಸದ ಫಲ ದ್ವಿಗುಣವಾಗುವುದು.
ಪಾಪಮೋಚನಿ ಏಕಾದಶಿಗಾಗಿ ರಾಶಿಪ್ರಕಾರ ಪರಿಹಾರಗಳು
ಮೇಷ ರಾಶಿ : ಮೇಷ ರಾಶಿಯವರು ಪಾಪಮೋಚನಿ ಏಕಾದಶಿಯ ದಿನವಾದ ಇಂದು ಸಿಂಧೂರವನ್ನು ಶುದ್ಧ ತುಪ್ಪದಲ್ಲಿ ಬೆರೆಸಿ ವಿಷ್ಣುವಿಗೆ ಅರ್ಪಿಸಿ. ಹೀಗೆ ಮಾಡಿದರೆ ಎಲ್ಲಾ ಪಾಪಗಳು ದೂರವಾಗುತ್ತವೆ. ಇದರಿಂದ ಪಿತೃ ದೋಷವನ್ನು ಕೂಡ ತೆಗೆದು ಹಾಕಬಹುದು.
ವೃಷಭ ರಾಶಿ: ಈ ದಿನ ಶ್ರೀಕೃಷ್ಣನಿಗೆ ಸಕ್ಕರೆ ಮಿಠಾಯಿ ಜೊತೆಗೆ ಬೆಣ್ಣೆಯನ್ನು ಅರ್ಪಿಸಿ. ಹೀಗೆ ಮಾಡುವುದರಿಂದ, ಚಂದ್ರದೋಷವಿದ್ದರೆ ಅದು ನಿವಾರಣೆಯಾಗುತ್ತೆ, ಜಾತಕದಲ್ಲಿ ಇರುವ ಚಂದ್ರನು ಬಲಗೊಳ್ಳುತ್ತಾನೆ.
ಮಿಥುನ ರಾಶಿ: ಈ ರಾಶಿಯವರು ಅನಂತ ಪದ್ಮನಾಭನಿಗೆ ದೇವರಿಗೆ ಸಕ್ಕರೆ ಮಿಠಾಯಿಯನ್ನು ಅರ್ಪಿಸಬೇಕು. ಇದರಿಂದ ನೀವು ನಿಮ್ಮ ಕಾರ್ಯದಲ್ಲಿ ಯಶಸ್ಸನ್ನು ಪಡೆಯುತ್ತೀರಿ.
ಕರ್ಕ ರಾಶಿ : ಪಾಪಮೋಚಿನಿ ಏಕಾದಶಿಯಂದು ನೀವು ಹಾಲಿಗೆ ಅರಿಶಿನವನ್ನು ಹಾಕಿ ಶ್ರೀ ವಿಷ್ಣುವಿಗೆ ಅರ್ಪಿಸಿ, ಇದರಿಂದ ಪಿತ್ರದೋಷ, ಗುರುಚಂಡಾಲದೋಷ ಇತ್ಯಾದಿಗಳಿಂದ ಮುಕ್ತಿ ಸಿಗುತ್ತದೆ.
ಸಿಂಹ ರಾಶಿ : ಸಿಂಹ ರಾಶಿಯವರು ಪಾಪಮೋಚಿನಿ ಏಕಾದಶಿಯಂದು ಬೆಲ್ಲದಿಂದ ನೈವೇದ್ಯ ಮಾಡಿ ಶ್ರೀಕೃಷ್ಣನಿಗೆ ಅರ್ಪಿಸಿ.
ಕನ್ಯಾ ರಾಶಿ: ಹೆಣ್ಣು ಮಕ್ಕಳು ವಿಷ್ಣುವಿಗೆ ತುಳಸಿಯನ್ನು ಅರ್ಪಿಸಿದರೆ ಜಾತಕದಲ್ಲಿರುವ ದೋಷ ನಿವಾರಣೆಯಾಗುವುದು.
ತುಲಾ ರಾಶಿ: ಈ ದಿನ ನೀವು ಸ್ನಾನ ಮಾಡುವ ನೀರಿಗೆ ಗಂಗಾಜಲ ಮಿಶ್ರ ಮಾಡಿ ಸ್ನಾನ ಮಾಡಿದರೆ ರೋಗ, ನೋವು ಇವೆಲ್ಲಾ ದೂರಾಗುವುದು.
ವೃಶ್ಚಿಕ ರಾಶಿ: ಈ ದಿನ ವಿಷ್ಣುವಿಗೆ ಮೊಸರು ಮತ್ತು ಸಕ್ಕರೆಯನ್ನು ನೈವೇದ್ಯವಾಗಿ ಅರ್ಪಿಸಿ, ಇದರಿಂದ ನಿಮ್ಮ ಅದೃಷ್ಟವು ಬಲಗೊಳ್ಳುತ್ತದೆ.
ಧನು ರಾಶಿ : ಈ ದಿನದಂದು ಧನು ರಾಶಿಯವರು ವಿಷ್ಣುವಿಗೆ ಧಾನ್ಯಗಳನ್ನು ಅರ್ಪಿಸಿ. ಈ ಪರಿಹಾರದಿಂದ, ನೀವು ಖಂಡಿತವಾಗಿಯೂ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸನ್ನು ಪಡೆಯುತ್ತೀರಿ.
ಮಕರ ರಾಶಿ: ಈ ದಿನ ವೀಳ್ಯದೆಲೆಯಲ್ಲಿ ಲವಂಗ ಮತ್ತು ಏಲಕ್ಕಿಯನ್ನು ಹಾಕಿ ದೇವರಿಗೆ ಅರ್ಪಿಸಿ. ಈ ಪರಿಹಾರದಿಂದ, ಸ್ಥಗಿತಗೊಂಡ ಕೆಲಸಗಳು ಪ್ರಾರಂಭವಾಗುತ್ತವೆ ಮತ್ತು ಯಶಸ್ಸು ದೊರೆಯುವುದು.
ಕುಂಭ ರಾಶಿ : ಈ ದಿನ ವಿಷ್ಣುವಿಗೆ ತೆಂಗಿನಕಾಯಿ ಮತ್ತು ಸಕ್ಕರೆ ಮಿಠಾಯಿಯನ್ನು ಅರ್ಪಿಸಿ. ಇದರಿಂದ ಒಳ್ಳೆಯದಾಗುವುದು.
ಮೀನ ರಾಶಿ: ಮೀನ ರಾಶಿಯವರು ಪಾಪಮೋಚಿನಿ ಏಕಾದಶಿಯಯಂದು ಶ್ರೀಹರಿಯವರಿಗೆ ಕುಂಕುಮ ತಿಲಕವನ್ನು ಹಚ್ಚಿದರೆ ಜಾತಕ ದೋಷಗಳು ನಿವಾರಣೆಯಾಗುವುದು.