Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಆರೋಗ್ಯ, ಸಂಪತ್ತಿಗಾಗಿ ಗಣಪನಿಗೆ 6 ವಸ್ತುಗಳನ್ನು ಸಮರ್ಪಿಸಿ
ಸೆಪ್ಟೆಂಬರ್ 10ಕ್ಕೆ ಗಣೇಶ ಚತುರ್ಥಿ ಸಂಭ್ರಮ. ಗಣೇಶನಿಗೆ ಪೂಜೆ ಸಲ್ಲಿಸಲು ಕಟ್ಟು ನಿಟ್ಟಿನ ನಿಯಮಗಳೇನು ಇಲ್ಲ. ಗಣೇಶನಿಗೆ ಭಕ್ತಿಯಿಂದ ಗರಿಕೆ ಸಮರ್ಪಿಸಿದರೆ ಸಾಕು ತೃಪ್ತನಾಗುತ್ತಾನೆ.
ತನ್ನ ನಂಬಿದ ಭಕ್ತರನ್ನು ಎಂದಿಗೂ ಕೈ ಬಿಡಲ್ಲ ಗಣಪ. ಶಕ್ತಿ, ಬುದ್ಧಿವಂತಿಕೆ, ಜ್ಞಾನ, ಸಂಪತ್ತು, ಆರೋಗ್ಯವನ್ನು ನೀಡು ಎಂದು ಭಕ್ತರು ಗಣಪನಲ್ಲಿ ಬೇಡಿಕೊಳ್ಳುತ್ತಾರೆ.

ಗಜಮುಖನಿಗೆ ಪೂಜೆ ಸಲ್ಲಿಸುವಾಗ ಕೆಲವೊಂದು ವಿಧಿ ವಿಧಾನಗಳಿವೆ, ಅವುಗಳಂತೆ ಪೂಜೆ ಸಲ್ಲಿಸಿದರೆ ತುಂಬಾ ತೃಪ್ತನಾಗುತ್ತಾನೆ. ಇಲ್ಲಿ ನಾವು ನೀವು ಗಣಪತಿಗೆ ಪೂಜೆ ಸಲ್ಲಿಸುವಾಗ ಗಮನಿಸಬೇಕಾದ ಪ್ರಮುಖ ಅಂಶಗಳ ಬಗ್ಗೆ ಹೇಳಿದ್ದೇವೆ ನೋಡಿ:

ಗರಿಕೆ
ಗಣಪ ತೃಪ್ತಿಗೊಳ್ಳಲು ನೀವೇನು ಆಡಂಭರದ ವಸ್ತುಗಳನ್ನು ಅರ್ಪಿಸಬೇಕಾಗಿಲ್ಲ. ಭಕ್ತಿಯಿಂದ ಗರಿಕೆಯನ್ನು ಸಮರ್ಪಿಸಿದರೆ ಸಾಕು, ಗಣಪ ತೃಪ್ತನಾಗುತ್ತಾನೆ. ಅಲ್ಲದೆ ಗಣೇಶನ ಪೂಜೆಯಲ್ಲಿ ಗರಿಕೆ ಇಲ್ಲದಿದ್ದರೆ ಆ ಪೂಜೆ ಪೂರ್ಣವಾಗುವುದಿಲ್ಲ. ಗಣೇಶನ ಪೂಜಿಸುವಾಗ 21 ಗರಿಕೆಯನ್ನು ಸಮರ್ಪಿಸುವುದರಿಂದ ಶ್ರೇಯಸ್ಸು ಉಂಟಾಗುವುದು.

ಎಕ್ಕೆಯ ಹೂ
ಗಣಪನಿಗೆ ಎಕ್ಕೆಯ ಹೂ ಸಮರ್ಪಿಸುವುದು ಶ್ರೇಷ್ಠವೆಂದು ಹೇಳಲಾಗುತ್ತದೆ. ಎಕ್ಕೆಯ 21 ಹೂಗಳಿಂದ ಹಾರ ಮಾಡಿ ಗಣೇಶನ ಕೊರಳಿಗೆ ಹಾಕಬೇಕು. ಜೊತೆಗೆ ಗಣೇಶನಿಗೆ ಹಳದಿ ಹೂಗಳಿಂದ ಅಲಂಕಾರ ಮಾಡಿದರೆ ಬೇಗ ಒಲಿಯುತ್ತಾನೆ ಎಂದು ಹೇಳಲಾಗುತ್ತದೆ.

ಮೋದಕ
ಗಣೇಶನ ಪೂಜೆಯಲ್ಲಿ ಮೋದಕ ಇರಲೇಬೇಕು. ಎಷ್ಟೇ ಬಗೆಯ ತಿಂಡಿ ಮಾಡಿ ಆದರೆ ಮೋದಕ ಇಲ್ಲ ಎಂದರೆ ಪೂಜೆ ಸಂಪೂರ್ಣವಾಗುವುದಿಲ್ಲ. ಗಣೇಶನಿಗೆ ತೃಪ್ತಿ ಆಗಬೇಕು ಎಂದರೆ ಮೋದಕ ಇಡಲೇಬೇಕು, ಅದರಲ್ಲೂ 21 ಮೋದಕಗಳನ್ನು ಇಡಬೇಕು. ಮೋದಕ ಜೊತೆಗೆ ಲಡ್ಡು, ಪುರಿ ಉಂಡೆ ಇವುಗಳನ್ನು ಸಮರ್ಪಿಸುತ್ತಾರೆ. ಆದರೆ ಮೋದಕ ಮಾತ್ರ ಇರಲೇಬೇಕು.

ಬಾಳೆಹಣ್ಣು
ಗಣೇಶನ ಪೂಜಿಸುವಾಗ ಎಲ್ಲಾ ಬಗೆಯ ಫಲಗಳನ್ನು ಇಡುತ್ತಾರೆ, ಆದರೆ ಬಾಳೆಹಣ್ಣು ಕಡ್ಡಾಯವಾಗಿ ಇಡಲೇಬೇಕು. ಗಣೇಶನಿಗೆ ಬಾಳೆಹಣ್ಣು ಇಡುವಾಗಲೂ 21 ಬಾಳೆ ಹಣ್ಣು ಇಟ್ಟರೆ ಒಳ್ಳೆಯದು. ಕೆಲವರು 21 ಬಾಳೆ ಹಣ್ಣಿನಿಂದ ಹಾರ ಮಾಡಿ ಗಣಪನಿಗೆ ಹಾಕುತ್ತಾರೆ.

ಶಂಖ
ಹಿಂದೂ ಧರ್ಮದಲ್ಲಿ ಪೂಜೆಯಲ್ಲಿ ಶಂಖ ಬಳಸುವುದು ಸಹಜ. ಆದರೆ ಗಣೇಶನ ಪೂಜೆಯಲ್ಲಿ ಕಡ್ಡಾಯವಾಗಿ ಶಂಖ ಇರಬೇಕು. ಗಣೇಶನ ಒಂದು ಕೈಯಲ್ಲಿ ಶಂಖ ಇದ್ದೇ ಇರುತ್ತದೆ. ಶಂಖನಾದ ಮೊಳಗಿದರೆ ಆ ಪರಿಸರದಲ್ಲಿ ಧನಾತ್ಮಕ ಶಕ್ತಿ ಹೆಚ್ಚುವುದು, ಪೂಜೆ ಮಂಗಳಕರವಾಗಿರುತ್ತದೆ. ಆದ್ದರಿಂದ ಗಣೇಶ ಪೂಜಿಸುವಾಗ ಶಂಖನಾದ ಮೊಳಗಿಸಲಾಗುವುದು.

ಸಿಂಧೂರ
ಸಿಂಧೂರ ಅರ್ಪಿಸಿದರೆ ಗಣೇಶನಿಗೆ ತುಂಬಾ ಇಷ್ಟವಾಗುವುದು. ಚಿಂತೆ, ದುಃಖ, ಆರೋಗ್ಯ ಸಮಸ್ಯೆ ಇವೆಲ್ಲಾ ಸಿಂಧೂರ ಅರ್ಪಿಸುವುದರಿಂದ ದೂರವಾಗುವುದು. ಸಿಂಧೂರ ಶೋಭನಮ್ ರಕ್ತಮ್ ಸೌಭಾಗ್ಯಂ ಸುಖವರ್ಧನಮ್, ಶುಭದಂ ಕಾಮದಮ್ ಚೌವ ಸಿಂಧೂರಮ್ ಪ್ರತಿಗ್ಯತಮ್ ಎಂಬ ಮಂತ್ರದೊಂದಿಗೆ ಸಿಂಧೂರ ಅರ್ಪಿಸಬೇಕು. ಈ ರೀತಿ ಸಿಂಧೂರ ಅರ್ಪಿಸುವುದರಿಂದ ಉದ್ಯೋಗ, ವ್ಯಾಪರದಲ್ಲಿ ಶ್ರೇಯಸ್ಸು ಉಂಟಾಗುವುದು.



Click it and Unblock the Notifications











