Just In
- 1 hr ago ಮೊಲದ ಜೊತೆ ಓಡಿ ಮತ್ತೊಮ್ಮೆ ರೇಸ್ ಗೆದ್ದ ಆಮೆ..! ಈ ಕಥೆ ನಿಜವಾಗಿದ್ದು ಹೇಗೆ ನೋಡಿ.!
- 1 hr ago ಗುರು ಸಂಚಾರ: ಮೇ 1ರಿಂದ 3ನೇ ಸ್ಥಾನದಲ್ಲಿರುವ ಗುರು ಮೀನ ರಾಶಿಯವರಿಗೆ ಅದೃಷ್ಟವೇ?
- 13 hrs ago ಗುರು ಸಂಚಾರದಿಂದ ಕುಂಭ ರಾಶಿಯವರ ಆರ್ಥಿಕ ಬದುಕು ಸುಧಾರಿಸಲಿದೆಯೇ?
- 14 hrs ago ಮೇ 1ರಿಂದ ಗುರು ಮಕರ ರಾಶಿಯಲ್ಲಿ ಪಂಚಮ ಸ್ಥಾನದಲ್ಲಿ ಇರುವುದರಿಂದ ಈ ರೀತಿಯೆಲ್ಲಾ ಪ್ರಯೋಜನಗಳಿವೆ
Don't Miss
- Technology ನಾಳೆ ವಿವೋದ ಈ ಹೊಸ ಫೋನ್ ಫಸ್ಟ್ ಸೇಲ್!..ಬಜೆಟ್ ಬೆಲೆಗೆ ಲಭ್ಯ!
- News Air India: ಹಾರಾಟ ನಿಲ್ಲಿಸಿದ ಆಕಾಶದ ರಾಣಿ: ಐಶಾರಾಮಿ ವಿಮಾನದ ಬಗ್ಗೆ ಇಲ್ಲಿದೆ ಇಂಟ್ರಸ್ಟಿಂಗ್ ಮಾಹಿತಿ
- Movies ಕಲರ್ಫುಲ್ ಲೈಟು.. ಡಿಂಪಲ್ ಸ್ಮೈಲು.. 'ಸಂಜು ವೆಡ್ಸ್ ಗೀತಾ 2' ಒಂದು ಹಾಡಿನ ಸೆಟ್ಟಿಗೆ ಬರೋಬ್ಬರಿ ₹50 ಲಕ್ಷ!
- Sports T20 World Cup 2024: ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಆರಂಭಿಕರನ್ನು ಸೂಚಿಸಿದ ಸೌರವ್ ಗಂಗೂಲಿ
- Automobiles ಫೋಕ್ಸ್ವ್ಯಾಗನ್ ವರ್ಟಸ್ ಕಾರಿಗೆ ಮನಸೋತ ಗ್ರಾಹಕರು: ಭಾರೀ ಬೇಡಿಕೆ
- Finance Bengaluru Karaga: ಇಂದು ಈ ರಸ್ತೆಗಳಲ್ಲಿ ಸಂಚಾರ ಬಂದ್, ಬದಲಿ ಮಾರ್ಗ ವಿವರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜೂನ್2ರ ನಿರ್ಜಲ ಏಕಾದಶಿ ತುಂಬಾ ಮಹತ್ವವಾದ ದಿನ
ಹಿಂದೂ ಪಂಚಾಂಗದ 12 ಮಾಸಗಳ ಶುಕ್ಲ ಪಕ್ಷದ ಮತ್ತು ಕೃಷ್ಣ ಪಕ್ಷದ ಹನ್ನೊಂದನೆಯ ದಿನವನ್ನು ಏಕಾದಶಿಯೆಂದು ಆಚರಿಸಲಾಗುವುದು. ಈ ದಿನ ಉಪವಾಸ ಮಾಡುವ ಸಂಪ್ರದಾಯವಿದೆ. ಈ ಬಾರಿ ನಿರ್ಜಲ ಏಕಾದಶಿ ಬಂದಿದೆ.
ಚಾಂದ್ರಮಾನದ ಜೇಷ್ಠ ಮಾಸದ ಶುಕ್ಲಪಕ್ಷದ ಮೊದಲ ದಿನ ಬರುವುದೇ ನಿರ್ಜಲ ಏಕಾದಶಿ. ಮಹಾವಿಷ್ಣುವಿನ ಕೃಪೆಗಾಗಿ ಪ್ರಾರ್ಥಿಸಿ ಈ ಏಕಾದಶಿಯನ್ನು ಮಾಡಲಾಗುವುದು. ನಿರ್ಜಲ ಏಕಾದಶಿಯನ್ನುಜ್ಯೇಷ್ಠ ಶುಕ್ಲ ಏಕಾದಶಿ ಎಂದೂ ಕೂಡ ಕರೆಯುತ್ತಾರೆ.
ಗಂಗಾದಸರಾದ ಬಳಿಕ ಈ ನಿರ್ಜಲ ಏಕಾದಶಿ ಬರುತ್ತದೆ, ಕೆಲವೊಂದು ವರ್ಷಗಳಲ್ಲಿ ಒಂದೇ ದಿನವೂ ಬರಬಹುದು. ಈ ವರ್ಷ ಗಂಗಾ ದಸರಾ ಬಳಿಕ ನಿರ್ಜಲ ಏಕಾದಶಿ ಬಂದಿದೆ. ಜೂನ್ 2ರಂದು ನಿರ್ಜಲ ಏಕಾದಶಿಯನ್ನು ಆಚರಿಸಲಾಗುವುದು.
ನಿರ್ಜಲ ಏಕಾದಶಿಯಂದು ನೀರು ಸಹ ಮುಟ್ಟದೆ ಉಪವಾಸವಿರುವ ಸಂಪ್ರದಾಯವಿದೆ. ಈ ರೀತಿ ಮಾಡುವುದರಿಂದ ಮನುಷ್ಯ ಮಾಡಿದ ಪಾಪವೆಲ್ಲಾ ಕಳೆದು ಹೋಗಿ ಭಗವಂತನ ಸಾಕ್ಷಾತ್ಕಾರಕ್ಕೆ ಮಾರ್ಗ ತೋರುತ್ತದೆ ಎಂಬ ನಂಬಿಕೆ ಹಿಂದೂಗಳಲ್ಲಿ ಇದೆ.
ಸಮಯ ಮತ್ತು ದಿನಾಂಕ
ನಿರ್ಜಲ ಏಕಾದಶಿ ತಿಥಿ ಜೂನ್ 1 ಮಧ್ಯಾಹ್ನ 2.57ಕ್ಕೆ ಪ್ರಾರಂಭವಾಗಿ ಜೂನ್ 2, 12.04ಕ್ಕೆ ಮುಕ್ತಾಯವಾಗುತ್ತದೆ.
ಪಾಲನೆ ವಿಧಾನ
ನಿರ್ಜಲ ಏಕಾದಶಿಯಂದು ಭಕ್ತರು ಮಹಾವಿಷ್ಣುವನ್ನು ಆರಾಧಿಸುತ್ತಾರೆ. ಮಹಾವಿಷ್ಣುವಿಗೆ ತುಳಸಿ ಅರ್ಪಿಸಿ ಪೂಜೆ ಸಲ್ಲಿಸುತ್ತಾರೆ. ನಂತರ ಮಹಾವಿಷ್ಣುವಿನ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ. ಈ ಏಕಾದಶಿ ಪಾಲಿಸುವವರು ರಾತ್ರಿವಿಡೀ ಎಚ್ಚರವಿದ್ದು ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ. ಈ ಪೂಜೆ ಸಮಯದಲ್ಲಿ ವೇದ, ಮಂತ್ರಗಳು, ವಿಷ್ಣು ಸಹಸ್ರನಾಮ ಹೇಳಲಾಗುವುದು. ಈ ದಿನ ಯಾವುದೇ ಕಾರಣಕ್ಕೆ ಅನ್ನ ಹಾಗೂ ಅಕ್ಕಿಯಿಂದ ಮಾಡಿದ ಆಹಾರ ಸೇವಿಸುವುದಿಲ್ಲ. ಕೆಲವರು ನೀರನ್ನೂ ಕೂಡ ಮುಟ್ಟದೆ ಏಕಾದಶಿ ಆಚರಿಸುತ್ತಾರೆ. ಅನಾರೋಗ್ಯ ಕಾರಣಗಳಿಂದ ಅದು ಸಾಧ್ಯವಾಗದೇ ಇರುವವರು ಬರೀ ಹಣ್ಣುಗಳನ್ನಷ್ಟೇ ತಿನ್ನುತ್ತಾರೆ.
ನಿರ್ಜಲ ಏಕಾದಶಿಯ ಮಹತ್ವ
ಇದನ್ನು ಅತ್ಯಂತ ಫಲ ನೀಡುವ ಏಕಾದಶಿ ಎಂದು ಹೇಳಲಾಗುವುದು. ಈ ಏಕಾದಶಿ ಮಾಡಿದರೆ ಇತರ ಏಕಾದಶಿಗಳ ಫಲ ಕೂಡ ಲಭಿಸುವುದು ಎಂದು ಹೇಳಲಾಗುವುದು. ಇದರಿಂದ ಅಭಿವೃದ್ಧಿ ಉಂಟಾಗುತ್ತದೆ, ಆರೋಗ್ಯ ಉತ್ತಮವಾಗುವುದು, ಆಯುಸ್ಸು ಹೆಚ್ಚುವುದು, 23 ಏಕಾದಶಿಗಳನ್ನು ಆಚರಿಸಲು ಕಷ್ಟವಾಗುವವರು ಇದೊಂದು ಏಕಾದಶಿ ಆಚರಿಸಿದರೆ ಎಲ್ಲಾಏಕಾದಶಿಗಳ ಫಲ ಇದರಿಂದ ದೊರೆಯುವುದು ಎಂದು ಹೇಳುತ್ತಾರೆ.
ಇದರ ಹಿಂದೆ ಒಂದು ಪೌರಾಣಿಕ ಕತೆಯೂ ಇದೆ
ನಿರ್ಜಲ ಏಕಾದಶಿಯನ್ನು ಭೀಮಾಸೇನಾ ಏಕಾದಶಿಯೆಂದು ಕೂಡ ಆಚರಿಸುತ್ತಾರೆ. ಭೀಮನಿಗೆ ಆಹಾರವೆಂದರೆ ತುಂಬಾ ಪ್ರಿಯ, ಸದಾ ತಿನ್ನುತ್ತಲೇ ಇರುತ್ತಿದ್ದ. ಅವನಿಗೆ ತನ್ನ ಹಸಿವು ತಡೆದು ಉಪವಾಸ ಇರಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದ ಮಹಾವಿಷ್ಣುವಿಗೆ ಅವಮಾನ ಮಾಡಿದಂತೆ ಎಂದು ತಿಳಿದ ಭೀಮ ವ್ಯಾಸ ಮಹರ್ಷಿ ಭೇಟಿಯಾಗಿ ಏನು ಮಾಡಬೇಕೆಂದು ಕೇಳುತ್ತಾನೆ. ಆಗ ಅವರು ನಿರ್ಜಲ ಏಕಾದಶಿಯಂದು ಉಪವಾಸವಿದ್ದರೆ ಎಲ್ಲಾ ಏಕಾದಶಿಯ ಫಲ ಸಿಗುವುದು ಎಂದು ಹೇಳುತ್ತಾರೆ. ಅದರಂತೆ ಭೀಮು ಉಪವಾಸವಿದ್ದು ಏಕಾದಶಿ ಫಲವನ್ನು ಪಡೆಯುತ್ತಾನೆ.
ದಾನ-ಧರ್ಮ
ನಿರ್ಜಲ ಏಕಾದಶಿಯಂದು ದಾನಧರ್ಮ ಮಾಡುವುದರಿಂದ ಕೂಡ ಪುಣ್ಯ ದೊರೆಯುವುದು. ಈ ದಿನ ಬಟ್ಟೆ, ಆಹಾರ, ನೀರು ಮತ್ತಿತರ ಅಗತ್ಯ ವಸ್ತುಗಳನ್ನು ಬಡವರಿಗೆ ಹಾಗೂ ಅಪೇಕ್ಷಿತರಿಗೆ ದಾನ ಮಾಡುವುದರಿಂದ ಸತ್ಫಲ ದೊರೆಯುತ್ತದೆ.