Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಕರ ಸಂಕ್ರಾಂತಿ ಹಬ್ಬದಂದು ಅಪ್ಪಿತಪ್ಪಿಯೂ ಇಂತಹ ಕೆಲಸಗಳನ್ನು ಮಾಡಬೇಡಿ
ಮಕರ ಸಂಕ್ರಾಂತಿ ಎನ್ನುವುದು ಹಿಂದೂಗಳಿಗೆ ತುಂಬಾ ಪವಿತ್ರ ಹಾಗೂ ಶುಭವನ್ನು ಉಂಟು ಮಾಡುವಂತಹ ಹಬ್ಬವಾಗಿದೆ. ಗ್ರೆಗೊರಿಯನ್ ಕ್ಯಾಲೆಂಡರ್ ಪ್ರಕಾರ ಜನವರಿ ತಿಂಗಳಲ್ಲಿ ಬರುವಂತಹ ಈ ಹಬ್ಬವು ಸೂರ್ಯನು ಪಥ ಬದಲಾಯಿಸುವಂತಹ ದಿನವಾಗಿದೆ. ಸೂರ್ಯನು ದಕ್ಷಿಣದಿಂದ ಉತ್ತರಕ್ಕೆ ಪ್ರಯಾಣ ಬೆಳೆಸುವನು. ಇದರಿಂದಾಗಿ ಮಕರ ಸಂಕ್ರಾಂತಿಯು ಬೇರೆಲ್ಲಾ ಸಂಕ್ರಾಂತಿಗಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿರುವುದು. ಮಕರ ಸಂಕ್ರಾಂತಿ ವೇಳೆಯಲ್ಲಿ ಕುಂಭ ಮೇಳವು ಆರಂಭವಾಗುವುದು. ಇದು ತುಂಬಾ ಪವಿತ್ರವೆಂದು ಪರಿಗಣಿಸಲಾಗಿದೆ.
ಮಕರ ಸಂಕ್ರಾಂತಿಯನ್ನು ದೇಶದ ವಿವಿಧೆಡೆಗಳಲ್ಲಿ ಹಲವಾರು ರೀತಿಯಿಂದ ಆಚರಿಸಲಾಗುತ್ತದೆ. ಅದರಲ್ಲೂ ಒಂದೊಂದು ರಾಜ್ಯದಲ್ಲಿ ಆಚರಣೆಗಳು ಬದಲಾಗುತ್ತಾ ಹೋಗುತ್ತದೆ. ಹೆಚ್ಚಾಗಿ ಮಕರ ಸಂಕ್ರಾಂತಿಯು ಜನವರಿ 14ರಂದು ಬರುವುದು. ಆದರೆ ಈ ವರ್ಷ ಮಕರ ಸಂಕ್ರಾಂತಿಯು ಜನವರಿ 15ರಂದು ಬಂದಿದೆ. ಜನವರಿ 14ರಂದು ರಾತ್ರಿ ವೇಳೆ ಮಕರ ಸಂಕ್ರಾಂತಿಯು ಆರಂಭವಾಗುವ ಕಾರಣದಿಂದಾಗಿ ಜನವರಿ 15ರಂದು ಇದನ್ನು ಆಚರಿಸಿಕೊಳ್ಳಲಾಗುತ್ತಿದೆ. ಈ ಹಬ್ಬವು ವ್ಯಕ್ತಿಯೊಬ್ಬನ ಜೀವನದಲ್ಲಿ ಹೊಸತನ ಹಾಗೂ ಶಕ್ತಿ ತುಂಬುವುದು.

ಮಕರ ಸಂಕ್ರಾಂತಿಯು ವ್ಯಕ್ತಿ ಹಾಗೂ ಸಂಪೂರ್ಣ ಸಮಾಜಕ್ಕೆ ತುಂಬಾ ಲಾಭಕಾರಿಯಾಗಿರುವುದು. ಇದರಿಂದ ಕ್ರಮಬದ್ಧವಾಗಿ ಮಕರ ಸಂಕ್ರಾಂತಿ ಆಚರಣೆ ಮಾಡಿದರೆ ಅದರಿಂದ ಜೀವನದಲ್ಲಿ ತುಂಬಾ ಒಳ್ಳೆಯದಾಗುವುದು ಎಂದು ಹೇಳಲಾಗುತ್ತದೆ. ಮಕರ ಸಂಕ್ರಾಂತಿಯಂದು ನೀವು ಮಾಡಬಾರದ ಕೆಲವೊಂದು ಕೆಲಸಗಳನ್ನು ನಾವು ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಇದನ್ನು ನೀವು ಓದಲು ಸಿದ್ಧರಾಗಿ...

ಒರಟುತನ ಪ್ರದರ್ಶಿಸುವುದು ರಾಕ್ಷಸರ ಗುಣ
ಮಕರ ಸಂಕ್ರಾಂತಿಯು ತುಂಬಾ ಪವಿತ್ರವಾದ ಹಬ್ಬ ಮತ್ತು ಈ ದಿನದಂದು ಜನರು ತುಂಬಾ ಸಂಭ್ರಮ ಹಾಗೂ ಉಲ್ಲಾಸದ ಆರಂಭ ಪಡೆಯಲು ಬಯಸುವರು. ನೀವು ಕೆಟ್ಟದಾಗಿ ಮಾತನಾಡಿದರೆ ಆಗ ಸುತ್ತಲು ನಕಾರಾತ್ಮಕತೆ ಹಬ್ಬಲಿದ್ದೀರಿ. ಯಾವುದೇ ವ್ಯಕ್ತಿಯು ಈ ದಿನ ತಾಜಾ ಆರಂಭವನ್ನು ಮಾಡಲು ಬಯಸುವುದಾದರೆ ಆಗ ಆತನೊಂದಿಗೆ ತುಂಬಾ ಒರಟಾಗಿ ಮಾತನಾಡಿದರೆ, ಇದರಿಂದ ಆತನಿಗೆ ಪ್ರೇರಣೆ ಇಲ್ಲದಂತೆ ಮಾಡಬಹುದು. ಇದರಿಂದ ಆತ ಅಥವಾ ಆಕೆಯ ಯಶಸ್ಸಿಗೆ ದೊಡ್ಡ ಮಟ್ಟಿನ ತಡೆಯಾಗಬಹುದು. ತುಂಬಾ ನಯವಿನಯದಿಂದ ಮಾತನಾಡುವಂತಹ ವ್ಯಕ್ತಿಗಳನ್ನು ಸೂರ್ಯದೇವರು ತುಂಬಾ ಪ್ರಶಂಸೆ ಮಾಡುವರು. ಸೂರ್ಯ ದೇವರ ಆಶೀರ್ವಾದ ಪಡೆಯುವಂತಹ ವ್ಯಕ್ತಿಯು ತುಂಬಾ ಆತ್ಮವಿಶ್ವಾಸ ಮತ್ತು ಸಮಾಜದಲ್ಲಿ ಪ್ರತಿಷ್ಠೆ ಪಡೆಯುವರು ಎಂದು ಹೇಳಲಾಗುತ್ತದೆ. ಸೂರ್ಯದೇವರು ಅತಿಯಾದ ಒರಟುತನವನ್ನು ಇಷ್ಟಪಡುವುದಿಲ್ಲ.

ವಿವೇಕದಿಂದ ಬಟ್ಟೆ ಧರಿಸಬೇಕು
ಭಾರತದಲ್ಲಿ ಹೆಚ್ಚಾಗಿ ಹಬ್ಬಗಳು ಬಂದರೆ ಮಹಿಳೆಯರು ತುಂಬಾ ಶೃಂಗಾರ ಮಾಡಿಕೊಂಡು, ಆಭರಣ ಧರಿಸಿ ಬಣ್ಣ ಬಣ್ಣದ ದುಬಾರಿ ಬಟ್ಟೆಗಳನ್ನು ಧರಿಸುವರು. ಆದರೆ ಮಕರ ಸಂಕ್ರಾಂತಿಯಂದು ಹೀಗೆ ಮಾಡಬಾರದು. ಮಕರ ಸಂಕ್ರಾಂತಿಯು ಸುಗ್ಗಿಯ ಹಬ್ಬವಾಗಿರುವ ಕಾರಣದಿಂದಾಗಿ ಜನರು ಇದನ್ನು ತುಂಬಾ ಸರಳವಾಗಿ ಆಚರಣೆ ಮಾಡುವರು. ಅತಿಯಾಗಿ ಶೃಂಗಾರ ಮಾಡಿಕೊಂಡರೆ ಆಗ ಈ ಹಬ್ಬದ ಪ್ರಾಮುಖ್ಯತೆಯು ಕಳೆದುಹೋಗುವುದು. ಈ ಹಬ್ಬವನ್ನು ಹೆಚ್ಚಾಗಿ ಕೃಷಿ ಕುಟುಂಬಗಳು ಆಚರಿಸುತ್ತವೆ. ಇದು ಸುಗ್ಗಿ ಋತುವಿನ ಕೊನೆಯ ದಿನವೆಂದು ಹೇಳಲಾಗುತ್ತದೆ. ಇದರಿಂದ ಇದು ಕೃಷಿಕರಿಗೆ ಮೀಸಲಾಗಿದೆ.

ಮರಗಳನ್ನು ಕಡಿಯಬಾರದು
ಪ್ರಕೃತಿಯಲ್ಲಿರುವಂತಹ ಮರಗಳನ್ನು ಹಿಂದೂಗಳು ಹೆಚ್ಚಾಗಿ ಆರಾಧಿಸುವರು. ಕೆಲವೊಂದು ಮರಗಳನ್ನು ದೇವರ ಪ್ರತಿರೂಪವೆಂದು ಭಾವಿಸಲಾಗುತ್ತದೆ. ಮಕರ ಸಂಕ್ರಾಂತಿಯು ಸುಗ್ಗಿಯ ಹಬ್ಬ ಆಗಿರುವ ಕಾರಣದಿಂದಾಗಿ ಇದನ್ನು ಹಸಿರು ಹಾಗೂ ಮರಗಳ ಆರಾಧಿಸಲು ಕೂಡ ಬಳಸಲಾಗುತ್ತದೆ. ಈಗಷ್ಟೇ ಕಟಾವು ಮಾಡಲಾಗಿರುವಂತಹ ಬೆಳೆಗಳಿಗೆ ಇಲ್ಲಿ ಗೌರವ ನೀಡಲಾಗುತ್ತದೆ. ಈ ದಿನ ಮರಗಳನ್ನು ಕಡಿಯುವುದು ನಿಷಿದ್ಧವಾಗಿದೆ. ಮಕರ ಸಂಕ್ರಾಂತಿಯಂದು ಯಾರೂ ಮರಗಳನ್ನು ಕಡಿಯಲು ಹೋಗಬೇಡಿ.

ಮಾಂಸಾಹಾರ ಅಥವಾ ಮದ್ಯಪಾನ ಮಾಡಬೇಡಿ
ಎಲ್ಲಾ ಹಿಂದೂ ಹಬ್ಬಗಳಂತೆ ಮಾಂಸಾಹಾರ ಮತ್ತು ಮದ್ಯಪಾನ ಮಾಡುವುದು ಮಕರ ಸಂಕ್ರಾಂತಿಯಂದು ನಿಷಿದ್ಧವಾಗಿದೆ. ಇದರೊಂದಿಗೆ ನೀವು ಧೂಮಪಾನ ಕೂಡ ಮಾಡಬಾರದು. ಈ ಶುಭ ದಿನದಂದು ಮಾಂಸಾಹಾರ ಸೇವನೆ ಮಾಡದೆ ಸೌಹಾರ್ದತೆಯನ್ನು ಪ್ರದರ್ಶನ ಮಾಡಬೇಕು. ಇದರಿಂದ ಪ್ರಕೃತಿ ಕೂಡ ನಮಗೆ ಒಲಿಯುವುದು. ಈ ದಿನವು ಸಂಪೂರ್ಣವಾಗಿ ಸೂರ್ಯ ದೇವರಿಗೆ ಮೀಸಲಾಗಿರುವ ಕಾರಣದಿಂದ ಈ ದಿನ ಹೆಚ್ಚಿನ ಜನರು ಸೂರ್ಯ ದೇವರ ಆರಾಧನೆ ಮಾಡುವರು. ಈ ದಿನದಂದು ಮದ್ಯಪಾನ ಮತ್ತು ಮಾಂಸಾಹಾರ ಸೇವನೆ ಮಾಡುವುದು ತುಂಬಾ ಅಪವಿತ್ರವೆಂದು ಪರಿಗಣಿಸಲಾಗಿದೆ.



Click it and Unblock the Notifications









