Latest Updates
-
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ?
ನವರಾತ್ರಿಗಳಲ್ಲಿ 'ನವದುರ್ಗೆ'ಯನ್ನು ಪೂಜಿಸುವ ಆ ಒಂಬತ್ತು ರೂಪಗಳು...
ಒಂಬತ್ತು ದಿನಗಳ ದೇವಿಯನ್ನು ಪೂಜಿಸುವ ನವರಾತ್ರಿ ಬಂದೇ ಬಿಟ್ಟಿದೆ. ಈ ಒಂಬತ್ತು ದಿನಗಳ ಕಾಲ ದೇವಿಯ ಅಲಂಕಾರ ಮಾಡಿ ಅವರನ್ನು ಬೇರೆ ಬೇರೆ ರೂಪಗಳಲ್ಲಿ ಅಲಂಕರಿಸಿ ಪೂಜಿಸಲಾಗುತ್ತದೆ. ಈ ಒಂಬತ್ತು ದಿನಗಳ ಕಾಲ ದೇವಿಗೆ ಅಲಂಕಾರ ಮಾಡಿ ಒಂಬತ್ತು ರೂಪಗಳಲ್ಲಿ ದೇವಿಯನ್ನು ಪೂಜಿಸುವ ವಿಧಾನವನ್ನೇ ನವರಾತ್ರಿ ಎಂದು ಕರೆಯಲಾಗುತ್ತದೆ. ದುರ್ಗಾ ಮಾತೆಯು ಅಸುರ ಶಕ್ತಿಯನ್ನು ಹುಟ್ಟಡಗಿಸುವುದಕ್ಕಾಗಿ ಒಂಬತ್ತು ರೂಪಗಳಲ್ಲಿ ಜನ್ಮ ತಾಳಿ ದುಷ್ಟರನ್ನು ವಧಿಸಿ ಶಿಷ್ಟರ ರಕ್ಷಣೆಯನ್ನು ಮಾಡುತ್ತಾರೆ.
ಆಕೆಯ ಶಕ್ತಿ ಮತ್ತು ಪವಾಡಗಳ ಅಂಶವಾಗಿರುವ ನವದುರ್ಗೆಯರು ನಮಗೆ ಒಂಬತ್ತು ಅವತಾರಗಳ ಬಗ್ಗೆ ತಿಳಿಸುತ್ತಾರೆ ಮತ್ತು ಈ ಅವತಾರಗಳ ಮಹತ್ವಗಳನ್ನು ಇಡಿಯ ವಿಶ್ವಕ್ಕೆ ತಿಳಿಸಿದ್ದಾರೆ. ಅಕ್ಟೋಬರ್ 10 ರಿಂದ 18 ರವರೆಗೆ ಈ ಬಾರಿ ನವರಾತ್ರಿ ಇದ್ದು ಈ ಒಂಬತ್ತು ರಾತ್ರಿಗಳೂ ಕೂಡ ದೇವಿಯ ಭಕ್ತರಿಗೆ ಕಣ್ಣಿಗೆ ಆನಂದವನ್ನುಂಟು ಮಾಡಲಿದೆ.

ಅಯಗಿರಿ ನಂದಿನಿ ನಂದಿತ ವೇದಿನಿ ವಿಶ್ವವಿನೋದಿನಿ ಜಿಷ್ಣುನುತೇ ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ ಎಂಬ ಹಾಡು ಎಲ್ಲೆಡೆಯೂ ಮೊಳಗಲಿದೆ. ಮಾತೆಯ ಮಹತ್ವವನ್ನು ಈ ಒಂದೇ ಹಾಡು ಹಾಡಲಿದ್ದು ದೇವರು ಧರಿಸುವ ಒಂಬತ್ತು ರೂಪಗಳಲ್ಲಿ ಇಡಿಯ ವಿಶ್ವಕ್ಕೆ ತಾಯಿಯಾಯ ಮಾತೆಯ ಮಹಿಮೆಯನ್ನು ಅರಿತುಕೊಳ್ಳಬಹುದಾಗಿದೆ.

ಶೈಲಪುತ್ರಿ
ದೇವಿಯ ಒಂಬತ್ತು ರೂಪಗಳಲ್ಲಿ ಮೊದಲನೆಯದ್ದು ಶೈಲಪುತ್ರಿಯಾಗಿದೆ. ಹಿಮಾಲಯದ ಪುತ್ರಿ ಆಗಿದ್ದಾರೆ ಶೈಲಪುತ್ರಿ. ದುರ್ಗೆಯ ಶುದ್ಧ ರೂಪವಾಗಿರುವ ಶೈಲಪುತ್ರಿ ನಿಸರ್ಗದ ಮಾತೆ ಎಂಬುದಾಗಿ ಪರಿಗಣಿತವಾಗಿದ್ದಾರೆ. ಗೂಳಿಯ ಮೇಲೆ ಕುಳಿತಿರುವ ಮಾತೆ ತ್ರಿಶೂಲವನ್ನು ಕೈಯಲ್ಲಿ ಹಿಡಿದುಕೊಂಡಿದ್ದಾರೆ ಮತ್ತು ಕೈಗಳಲ್ಲಿ ತಾವರೆ ಇದೆ. ಸತಿ, ಭವಾನಿ, ಪಾರ್ವತಿ ಮತ್ತು ಹೇಮಾವತಿ ಎಂಬ ಹೆಸರೂ ಶೈಲಪುತ್ರಿಗಿದೆ.

ಬ್ರಹ್ಮಚಾರಿಣಿ
ನವರಾತ್ರಿಯ ಎರಡನೇ ದಿನ ಬ್ರಹ್ಮಚಾರಿಯನ್ನು ಪೂಜಿಸಲಾಗುತ್ತದೆ. ದೈವಿಕ ಅಂಶವನ್ನು ತನ್ನಲ್ಲಿ ಮೈಗೂಡಿಸಕೊಂಡು ಶುದ್ಧರಾಗಿರುವವರು ಎಂಬುದಾಗಿ ಪರಿಗಣಿಸಲಾಗುತ್ತದೆ. ಬಲಕೈಯಲ್ಲಿ ಗುಲಾಬಿ ಹೂವು ಮತ್ತು ಎಡಕೈಯಲ್ಲಿ ನೀರು ಇರುವ ಕಮಂಡಲವನ್ನು ದೇವಿ ಹಿಡಿದುಕೊಂಡಿದ್ದಾರೆ. ಮೋಕ್ಷಕ್ಕೆ ದಾರಿ ತೋರುವ ಮಾತೆಯಾಗಿದ್ದಾರೆ ಬ್ರಹ್ಮಚಾರಿಣಿ. ಶಾಂತಿ, ಸಮೃದ್ಧಿ ಮತ್ತು ವೈವಾಹಿಕ ಸುಖವನ್ನು ಭಕ್ತರಿಗೆ ದೇವಿ ನೀಡುತ್ತಾರೆ

ಚಂದ್ರಘಂಟ
ದುರ್ಗಯೆ ಮೂರನೇ ರೂಪವಾಗಿ ಚಂದ್ರಘಂಟನನ್ನು ಪೂಜಿಸಲಾಗುತ್ತದೆ. ತನ್ನ ಹಣೆಯಲ್ಲಿ ಗಂಟೆಯ ಆಕಾರದ ಚಂದ್ರನನ್ನು ಹೊಂದಿರುವವರು ಎಂದಾಗಿದೆ. ಚಂದ್ರನನ್ನು ಹೊಂದಿರುವಂತೆ ಅವರು ಶಾಂತಿಪ್ರಿಯರಾಗಿದ್ದಾರೆ. ಹತ್ತು ಕೈಗಳು ಮತ್ತು ಮೂರು ಕಣ್ಣುಗಳು ದೇವಿಗಿದೆ. ಅವರು ಎಲ್ಲವನ್ನೂ ನೋಡುತ್ತಿದ್ದಾರೆ ಮತ್ತು ಕೆಟ್ಟದ್ದು ಯಾವ ಭಾಗದಿಂದ ಬಂದರೂ ಅವರು ಅದನ್ನು ನಾಶ ಮಾಡುತ್ತಾರೆ ಎಂದಾಗಿದೆ.

ಕೂಶ್ಮಾಂಡ
ದುರ್ಗೆಯ ನಾಲ್ಕನೇ ರೂಪವಾಗಿದೆ ಕೂಶ್ಮಂಡ. ವಿಶ್ವದ ರಚನೆಕಾರರು ಎಂಬುದಾಗಿ ಈ ರೂಪದಲ್ಲಿ ತಾಯಿಯನ್ನು ನಂಬಲಾಗುತ್ತದೆ. ಅವರು ಎಂಟು ಅಥವಾ ಹತ್ತು ಅವಯವಗಳನ್ನು ಹೊಂದಿರುವಂತೆ ಚಿತ್ರಿಸಲಾಗಿದೆ. ಅವಳು ಅನೇಕ ಆಯುಧಗಳನ್ನು, ಗುಲಾಬಿ, ಕಮಾಂಡಲ ಮತ್ತು ಅವಳ ಕೈಯಲ್ಲಿ ಕೆಲವು ಮಿನುಗುವಿಕೆಗಳನ್ನು ಹೊಂದಿದ್ದಾರೆ. ಅವರ ಕೈಯಿಂದ ಹೊರಬರುವ ಬೆಳಕು ಜಗತ್ತನ್ನು ಅಂಧಕಾರದಿಂದ ದೂರವಿರಿಸುತ್ತದೆ. ಅವರ ಸಿಂಹ ದೈಹಿಕ ಮತ್ತು ಭಾವನಾತ್ಮಕ ಶಕ್ತಿಯನ್ನು ಸಂಕೇತಿಸುತ್ತದೆ.

ಸ್ಕಂದ ಮಾತಾ
ದುರ್ಗೆಯ ಐದನೇ ರೂಪವಾಗಿದೆ ಸ್ಕಂದಮಾತಾ. ಸ್ಕಂದ ಕಾರ್ತಿಕೇಯನ ತಾಯಿಯಾಗಿ ಇವರನ್ನು ಕರೆಯಲಾಗುತ್ತದೆ. ತಮ್ಮ ಬಲಗೈಯಲ್ಲಿ ಅವರು ಕಾರ್ತಿಕೇಯನನ್ನು ಎತ್ತಿಕೊಂಡಿದ್ದಾರೆ. ಇನ್ನೊಂದು ಬಲಗೈಯಲ್ಲಿ ಭಕ್ತರನ್ನು ಹರಸುತ್ತಿದ್ದಾರೆ ಮತ್ತು ಎಡಗೈಯಲ್ಲಿ ತಾವರೆಯನ್ನು ಹಿಡಿದುಕೊಂಡಿದ್ದಾರೆ. ದೇವಿ ಸ್ಕಂದಮಾತೆಯು ನಾಲ್ಕು ಕೈಗಳು ಮತ್ತು ಮೂರು ಕಣ್ಣುಗಳನ್ನು ಹೊಂದಿದ್ದಾರೆ.

ಕಾತ್ಯಾಯಿನಿ

ಕಾಳರಾತ್ರಿ ಮಹಾಮಾಯ
ಕಾಳರಾತ್ರಿ ದುರ್ಗಯೆ ಏಳನೆಯ ರೂಪವಾಗಿದೆ. ಕಾಳರಾತ್ರಿ ಮಹಾಮಾಯ ಎಂಬ ಹೆಸರೂ ದೇವರಿಗಿದೆ. ಕೆಟ್ಟದ್ದನ್ನು ನಾಶ ಪಡಿಸುವ ಅಂಶ ದೇವಿಯ ಈ ರೂಪಕ್ಕಿದೆ. ಕಲಾರತ್ರಿಯು "ವಿನಾಶದ ರಾತ್ರಿ" ಎಂದು ಅನುವಾದಿಸುತ್ತದೆ. ಅವರು ದೆವ್ವದ ಸಂಪೂರ್ಣ ನಾಶವನ್ನು ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಅವರನ್ನು ಶುಭಕರಿ ಎಂದೂ ಕರೆಯುತ್ತಾರೆ, ಅಂದರೆ ಅವರು ಒಳ್ಳೆಯದನ್ನು ಮಾಡುವವರು (ಭಕ್ತರಿಗೆ ಒಳ್ಳೆಯದನ್ನು ಮಾಡುತ್ತಿದ್ದಾರೆ). ಅವಳ ಚಿತ್ರಣಗಳಲ್ಲಿ ದಪ್ಪ ಕೂದಲು ಕೂಡಿರುತ್ತದೆ. ಅವಳು ನಾಲ್ಕು ಕೈಗಳನ್ನು ಮತ್ತು ಮೂರು ಕಣ್ಣುಗಳನ್ನು ಹೊಂದಿರುತ್ತಾರೆ. ಅವರ ಎಡ ಕೈಗಳು ವಜ್ರವನ್ನು ಒಯ್ಯುತ್ತಿರುವಾಗ ಮತ್ತು ದುಷ್ಟ ಗುರಿಯನ್ನು ಕೆಟ್ಟದ್ದನ್ನು ಗುರಿಯಾಗಿಟ್ಟುಕೊಂಡು, ಬಲಗೈಗಳು ಭಕ್ತರನ್ನು ಆಶೀರ್ವದಿಸಿ ಮತ್ತು ಅವರಿಗೆ ರಕ್ಷಣೆ ನೀಡುತ್ತವೆ. ಅವಳು ದೇವತೆ ಮಹಾಕಾಳಿಯನ್ನು ಹೋಲುತ್ತಾರೆ.

ಮಹಾಗೌರಿ
ದೇವಿಯ ಎಂಟನೇ ರೂಪವಾಗಿದೆ ಮಹಾಗೌರಿ. ಅವರ ಪ್ರಕಾಶಮಾನವಾದ ದೇಹದಿಂದ ದೇವಿಗೆ ಈ ಹೆಸರು ಬಂದಿದೆ. ಎಡಗೈಯಲ್ಲಿ ಡಮರುವನ್ನು ಹಿಡಿದುಕೊಂಡು ಅವರು ಇನ್ನೊಂದು ಕೈಯಲ್ಲಿ ಭಕ್ತರನ್ನು ಹರಸುತ್ತಿದ್ದಾರೆ. ಬಲಗೈಯಲ್ಲಿ ತ್ರಿಶೂಲವಿದೆ ಮತ್ತು ಭಯವನ್ನು ಹೊಡೆದೋಡಿಸುತ್ತಿದ್ದಾರೆ. ನಮ್ಮ ಹಿಂದಿನ, ಈಗಿನ ಮತ್ತು ಭವಿಷ್ಯದ ಪಾಪಗಳನ್ನು ಭಕ್ತರಿಂದ ಗೌರಿ ತೊಡೆದು ಹಾಕುತ್ತಾರೆ.

ಸಿದ್ಧಿದಾತ್ರಿ
ದೇವಿಯ ಒಂಭತ್ತನೇ ರೂಪವಾಗಿದೆ ಸಿದ್ಧಿದಾತ್ರಿ. ಅವರ ಹೆಸರೇ ಸೂಚಿಸುವಂತೆ ಅಲೌಕಿಕ ಶಕ್ತಿಯನ್ನು ಅತ್ಯುತ್ತಮವಾಗಿ ಪೂಜಿಸಲಾಗುತ್ತದೆ. ಅವರು ನಾಲ್ಕು ಕೈಗಳನ್ನು ಹೊಂದಿದ್ದು, ಅವರು ತ್ರಿಶೂಲ, ಗದೆ, ಕಮಲ, ಶಂಖ ಮತ್ತು ಸುದರ್ಶನ ಚಕ್ರವನ್ನು ಹಿಡಿದುಕೊಂಡಿದ್ದಾರೆ. ಕಮಲದ ಮೇಲೆ ಕುಳಿತು, ಆಕೆಯು ಎಲ್ಲಾ ಭಕ್ತರ ಮೇಲೆ ಆಶೀರ್ವಾದವನ್ನು ನೀಡುತ್ತಿದ್ದಾರೆ.



Click it and Unblock the Notifications











