Latest Updates
-
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ!
ಶಿವರಾತ್ರಿಯಂದು ಈ ಕಾರ್ಯಗಳನ್ನು ತಪ್ಪಿಯೂ ಮಾಡದಿರಿ
ಫೆಬ್ರವರಿ 18 ರಂದು ಶನಿವಾರ ಮಹಾಶಿವರಾತ್ರಿ ಆಚರಿಸಲಾಗುವುದು. ಫಲ್ಗುಣ ಮಾಸದ ಕೃಷ್ಣಪಕ್ಷದ ಚತುರ್ದಶಿಯಂದು ಮಹಾಶಿವ ರಾತ್ರಿ ಆಚರಿಸಲಾಗುವುದು.

ಶಿವರಾತ್ರಿಯಂದು ಉಪವಾಸ ವ್ರತ ಮಾಡಿ, ಜಾಗರಣೆ ಇದ್ದು ಶಿವನ ಜಪ ಮಾಡುತ್ತಾ ಈ ದಿನವನ್ನು ಕಳೆಯಬೇಕು. ಶಿವರಾತ್ರಿಯನ್ನು ಹೇಗೆ ಆಚರಿಸಬೇಕೆಂಬ ನಿಯಮಗಳಿವೆ. ಅದೇ ರೀತಿ ಈ ಶುಭ ದಿನ ಕೆಲವೊಂದು ಕಾರ್ಯಗಳನ್ನು ಮಾಡಬಾರದು, ಈ ಲೇಖನದಲ್ಲಿ ಶಿವರಾತ್ರಿಯಂದು ಏನು ಮಾಡಬಾರದು ಎಂದು ಹೇಳಲಾಗಿದೆ ನೋಡಿ:

ಶಿವರಾತ್ರಿಯಂದು ಕಪ್ಪು ಬಟ್ಟೆ ಧರಿಸಬೇಡಿ
ಕಪ್ಪು ಬಣ್ಣವನ್ನು ಶಿವರಾತ್ರಿಯಂದು ಧರಿಸಬೇಡಿ. ಶನಿ ದೇವಾಲಯಕ್ಕೆ ಹೋಗುವಾಗ ಅಥವಾ ಅಯ್ಯಪ್ಪ ದೇವಾಲಯಕ್ಕೆ ಹೋಗುವಾಗ ಕಪ್ಪು ಬಟ್ಟೆ ಧರಿಸುತ್ತಾರೆ. ಆದರೆ ಶಿವನ ದೇವಾಲಯಕ್ಕೆ ಹೀಗುವಾಗ ಕೆಂಪು, ಹಳದಿ, ಪಿಂಕ್ ಈ ಬಣ್ಣದ ಉಡುಪು ಧರಿಸಿ.

ಈ ಆಹಾರ ಸೇವಿಸಬೇಡಿ
ಈ ದಿನ ಅಕ್ಕಿ, ಗೋಧಿ, ಧಾನ್ಯಗಳು ಈ ರೀತಿಯ ಆಹಾರ ಸೇವಿಸಬಾರದು. ಈ ದಿನ ಒಂದೋ ಕಟ್ಟು ನಿಟ್ಟಿನ ಉಪವಾಸ ವ್ರತ ಮಾಡಬೇಕು, ಇಲ್ಲದಿದ್ದರೆ ನೀರು, ಹಣ್ಣು ಇವಷ್ಟೇ ಸೇವಿಸಬೇಕು.

ಹಿರಿಯರಿಗೆ ಅಗೌರವ ತೋರಬಾರದು
ಶಿವರಾತ್ರಿಯಂದು ಮನೆಯಲ್ಲಿ ಹಿರಿಯರಿಗೆ ಅಗೌರವ ತೋರಬೇಡಿ ಹಾಗೂ ಮನೆಯಲ್ಲಿ ಕೋಪದಿಂದ ಕಿರಾಚಾಡುವುದು ಏನೂ ಮಾಡಬಾರದು. ಈ ದಿನ ಶಿವನ ಧ್ಯಾನದಲ್ಲಿ ಕಳೆಯುವುದರಿಂದ ಮನ-ಮನೆ ಆಹ್ಲಾದಕರವಾಗಿರುತ್ತೆ.

ಶಿವಲಿಂಗಕ್ಕೆ ಅರ್ಪಿಸಿದ ಪ್ರಸಾದ ಸೇವಿಸಬಾರದು
ದೇವಾಲಯಕ್ಕೆ ಹೋದಾಗ ದೇವರಿಗೆ ಅರ್ಪಿಸಿದ ಪ್ರಸಾದ ಸೇವಿಸುತ್ತೇವೆ. ಆದರೆ ಶಿವರಾತ್ರಿಯಂದು ಶಿವಲಿಂಗಕ್ಕೆ ಅರ್ಪಿಸಿದ ಪ್ರಸಾದ ಸೇವಿಸಬಾರದು ಎಂಬ ನಿಯಮವಿದೆ.

ಶಿವನಿಗೆ ತುಳಸಿ ಅರ್ಪಿಸಬಾರದು
ಹಿಂದೂ ಪೌರಾಣಿಕ ಕತೆಯ ಪ್ರಕಾರ ತುಳಸಿ ವಿಷ್ಣುವಿಗೆ ಅರ್ಪಿತಳು. ಆದ್ದರಿಂದ ಯಾವುದೇ ಕಾರಣಕ್ಕೆ ತುಳಸಿಯನ್ನು ಶಿವನಿಗೆ ಅರ್ಪಿಸಬಾರದು. ಯಾವುದೇ ಶಿವ ಪೂಜೆಯಲ್ಲಿ ತುಳಸಿ ಬಳಸುವುದಿಲ್ಲ.

ಅರಿಶಿಣವನ್ನು ಶಿವಲಿಂಗಕ್ಕೆ ಹಚ್ಚಬಾರದು
ಅರಿಶಿಣ ಪುರುಷ ತತ್ವವನ್ನು ಕುಗ್ಗಿಸುತ್ತೆ,ಅರಿಶಿಣವನ್ನು ಸ್ತ್ರೀಯರಿಗೆ ಎಂದು ಪರಿಗಣಿಸಲಾಗಿದೆ. ಆದ್ದರಿಂದ ಮಹಾದೇವನನ್ನು ಪ್ರಾರ್ಥಿಸುವಾಗ ಅರಿಶಿಣ ಬಳಸಬಾರದು.

ಚಂಪಾ, ಕೇದಗೆ ಹೂ ಬಳಸಬಾರದು
ಶಿವ ಈ ಎರಡೂ ಹೂಗಳಿಗೆ ಶಾಪ ನೀಡಿದ್ದಾನೆ ಎಂದು ಹೇಳಲಾಗುತ್ತದೆ. ಆದ್ದರಿಂದ ಈ ಎರಡು ಹೂಗಳನ್ನು ಬಳಸುವಂತಿಲ್ಲ.



Click it and Unblock the Notifications