Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಶಿವರಾತ್ರಿಯಂದು ಈ ಕಾರ್ಯಗಳನ್ನು ತಪ್ಪಿಯೂ ಮಾಡದಿರಿ
ಫೆಬ್ರವರಿ 18 ರಂದು ಶನಿವಾರ ಮಹಾಶಿವರಾತ್ರಿ ಆಚರಿಸಲಾಗುವುದು. ಫಲ್ಗುಣ ಮಾಸದ ಕೃಷ್ಣಪಕ್ಷದ ಚತುರ್ದಶಿಯಂದು ಮಹಾಶಿವ ರಾತ್ರಿ ಆಚರಿಸಲಾಗುವುದು.

ಶಿವರಾತ್ರಿಯಂದು ಉಪವಾಸ ವ್ರತ ಮಾಡಿ, ಜಾಗರಣೆ ಇದ್ದು ಶಿವನ ಜಪ ಮಾಡುತ್ತಾ ಈ ದಿನವನ್ನು ಕಳೆಯಬೇಕು. ಶಿವರಾತ್ರಿಯನ್ನು ಹೇಗೆ ಆಚರಿಸಬೇಕೆಂಬ ನಿಯಮಗಳಿವೆ. ಅದೇ ರೀತಿ ಈ ಶುಭ ದಿನ ಕೆಲವೊಂದು ಕಾರ್ಯಗಳನ್ನು ಮಾಡಬಾರದು, ಈ ಲೇಖನದಲ್ಲಿ ಶಿವರಾತ್ರಿಯಂದು ಏನು ಮಾಡಬಾರದು ಎಂದು ಹೇಳಲಾಗಿದೆ ನೋಡಿ:

ಶಿವರಾತ್ರಿಯಂದು ಕಪ್ಪು ಬಟ್ಟೆ ಧರಿಸಬೇಡಿ
ಕಪ್ಪು ಬಣ್ಣವನ್ನು ಶಿವರಾತ್ರಿಯಂದು ಧರಿಸಬೇಡಿ. ಶನಿ ದೇವಾಲಯಕ್ಕೆ ಹೋಗುವಾಗ ಅಥವಾ ಅಯ್ಯಪ್ಪ ದೇವಾಲಯಕ್ಕೆ ಹೋಗುವಾಗ ಕಪ್ಪು ಬಟ್ಟೆ ಧರಿಸುತ್ತಾರೆ. ಆದರೆ ಶಿವನ ದೇವಾಲಯಕ್ಕೆ ಹೀಗುವಾಗ ಕೆಂಪು, ಹಳದಿ, ಪಿಂಕ್ ಈ ಬಣ್ಣದ ಉಡುಪು ಧರಿಸಿ.

ಈ ಆಹಾರ ಸೇವಿಸಬೇಡಿ
ಈ ದಿನ ಅಕ್ಕಿ, ಗೋಧಿ, ಧಾನ್ಯಗಳು ಈ ರೀತಿಯ ಆಹಾರ ಸೇವಿಸಬಾರದು. ಈ ದಿನ ಒಂದೋ ಕಟ್ಟು ನಿಟ್ಟಿನ ಉಪವಾಸ ವ್ರತ ಮಾಡಬೇಕು, ಇಲ್ಲದಿದ್ದರೆ ನೀರು, ಹಣ್ಣು ಇವಷ್ಟೇ ಸೇವಿಸಬೇಕು.

ಹಿರಿಯರಿಗೆ ಅಗೌರವ ತೋರಬಾರದು
ಶಿವರಾತ್ರಿಯಂದು ಮನೆಯಲ್ಲಿ ಹಿರಿಯರಿಗೆ ಅಗೌರವ ತೋರಬೇಡಿ ಹಾಗೂ ಮನೆಯಲ್ಲಿ ಕೋಪದಿಂದ ಕಿರಾಚಾಡುವುದು ಏನೂ ಮಾಡಬಾರದು. ಈ ದಿನ ಶಿವನ ಧ್ಯಾನದಲ್ಲಿ ಕಳೆಯುವುದರಿಂದ ಮನ-ಮನೆ ಆಹ್ಲಾದಕರವಾಗಿರುತ್ತೆ.

ಶಿವಲಿಂಗಕ್ಕೆ ಅರ್ಪಿಸಿದ ಪ್ರಸಾದ ಸೇವಿಸಬಾರದು
ದೇವಾಲಯಕ್ಕೆ ಹೋದಾಗ ದೇವರಿಗೆ ಅರ್ಪಿಸಿದ ಪ್ರಸಾದ ಸೇವಿಸುತ್ತೇವೆ. ಆದರೆ ಶಿವರಾತ್ರಿಯಂದು ಶಿವಲಿಂಗಕ್ಕೆ ಅರ್ಪಿಸಿದ ಪ್ರಸಾದ ಸೇವಿಸಬಾರದು ಎಂಬ ನಿಯಮವಿದೆ.

ಶಿವನಿಗೆ ತುಳಸಿ ಅರ್ಪಿಸಬಾರದು
ಹಿಂದೂ ಪೌರಾಣಿಕ ಕತೆಯ ಪ್ರಕಾರ ತುಳಸಿ ವಿಷ್ಣುವಿಗೆ ಅರ್ಪಿತಳು. ಆದ್ದರಿಂದ ಯಾವುದೇ ಕಾರಣಕ್ಕೆ ತುಳಸಿಯನ್ನು ಶಿವನಿಗೆ ಅರ್ಪಿಸಬಾರದು. ಯಾವುದೇ ಶಿವ ಪೂಜೆಯಲ್ಲಿ ತುಳಸಿ ಬಳಸುವುದಿಲ್ಲ.

ಅರಿಶಿಣವನ್ನು ಶಿವಲಿಂಗಕ್ಕೆ ಹಚ್ಚಬಾರದು
ಅರಿಶಿಣ ಪುರುಷ ತತ್ವವನ್ನು ಕುಗ್ಗಿಸುತ್ತೆ,ಅರಿಶಿಣವನ್ನು ಸ್ತ್ರೀಯರಿಗೆ ಎಂದು ಪರಿಗಣಿಸಲಾಗಿದೆ. ಆದ್ದರಿಂದ ಮಹಾದೇವನನ್ನು ಪ್ರಾರ್ಥಿಸುವಾಗ ಅರಿಶಿಣ ಬಳಸಬಾರದು.

ಚಂಪಾ, ಕೇದಗೆ ಹೂ ಬಳಸಬಾರದು
ಶಿವ ಈ ಎರಡೂ ಹೂಗಳಿಗೆ ಶಾಪ ನೀಡಿದ್ದಾನೆ ಎಂದು ಹೇಳಲಾಗುತ್ತದೆ. ಆದ್ದರಿಂದ ಈ ಎರಡು ಹೂಗಳನ್ನು ಬಳಸುವಂತಿಲ್ಲ.



Click it and Unblock the Notifications