Latest Updates
-
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ
ಶಿವರಾತ್ರಿಯಂದು ಈ ಕಾರ್ಯಗಳನ್ನು ತಪ್ಪಿಯೂ ಮಾಡದಿರಿ
ಫೆಬ್ರವರಿ 18 ರಂದು ಶನಿವಾರ ಮಹಾಶಿವರಾತ್ರಿ ಆಚರಿಸಲಾಗುವುದು. ಫಲ್ಗುಣ ಮಾಸದ ಕೃಷ್ಣಪಕ್ಷದ ಚತುರ್ದಶಿಯಂದು ಮಹಾಶಿವ ರಾತ್ರಿ ಆಚರಿಸಲಾಗುವುದು.

ಶಿವರಾತ್ರಿಯಂದು ಉಪವಾಸ ವ್ರತ ಮಾಡಿ, ಜಾಗರಣೆ ಇದ್ದು ಶಿವನ ಜಪ ಮಾಡುತ್ತಾ ಈ ದಿನವನ್ನು ಕಳೆಯಬೇಕು. ಶಿವರಾತ್ರಿಯನ್ನು ಹೇಗೆ ಆಚರಿಸಬೇಕೆಂಬ ನಿಯಮಗಳಿವೆ. ಅದೇ ರೀತಿ ಈ ಶುಭ ದಿನ ಕೆಲವೊಂದು ಕಾರ್ಯಗಳನ್ನು ಮಾಡಬಾರದು, ಈ ಲೇಖನದಲ್ಲಿ ಶಿವರಾತ್ರಿಯಂದು ಏನು ಮಾಡಬಾರದು ಎಂದು ಹೇಳಲಾಗಿದೆ ನೋಡಿ:

ಶಿವರಾತ್ರಿಯಂದು ಕಪ್ಪು ಬಟ್ಟೆ ಧರಿಸಬೇಡಿ
ಕಪ್ಪು ಬಣ್ಣವನ್ನು ಶಿವರಾತ್ರಿಯಂದು ಧರಿಸಬೇಡಿ. ಶನಿ ದೇವಾಲಯಕ್ಕೆ ಹೋಗುವಾಗ ಅಥವಾ ಅಯ್ಯಪ್ಪ ದೇವಾಲಯಕ್ಕೆ ಹೋಗುವಾಗ ಕಪ್ಪು ಬಟ್ಟೆ ಧರಿಸುತ್ತಾರೆ. ಆದರೆ ಶಿವನ ದೇವಾಲಯಕ್ಕೆ ಹೀಗುವಾಗ ಕೆಂಪು, ಹಳದಿ, ಪಿಂಕ್ ಈ ಬಣ್ಣದ ಉಡುಪು ಧರಿಸಿ.

ಈ ಆಹಾರ ಸೇವಿಸಬೇಡಿ
ಈ ದಿನ ಅಕ್ಕಿ, ಗೋಧಿ, ಧಾನ್ಯಗಳು ಈ ರೀತಿಯ ಆಹಾರ ಸೇವಿಸಬಾರದು. ಈ ದಿನ ಒಂದೋ ಕಟ್ಟು ನಿಟ್ಟಿನ ಉಪವಾಸ ವ್ರತ ಮಾಡಬೇಕು, ಇಲ್ಲದಿದ್ದರೆ ನೀರು, ಹಣ್ಣು ಇವಷ್ಟೇ ಸೇವಿಸಬೇಕು.

ಹಿರಿಯರಿಗೆ ಅಗೌರವ ತೋರಬಾರದು
ಶಿವರಾತ್ರಿಯಂದು ಮನೆಯಲ್ಲಿ ಹಿರಿಯರಿಗೆ ಅಗೌರವ ತೋರಬೇಡಿ ಹಾಗೂ ಮನೆಯಲ್ಲಿ ಕೋಪದಿಂದ ಕಿರಾಚಾಡುವುದು ಏನೂ ಮಾಡಬಾರದು. ಈ ದಿನ ಶಿವನ ಧ್ಯಾನದಲ್ಲಿ ಕಳೆಯುವುದರಿಂದ ಮನ-ಮನೆ ಆಹ್ಲಾದಕರವಾಗಿರುತ್ತೆ.

ಶಿವಲಿಂಗಕ್ಕೆ ಅರ್ಪಿಸಿದ ಪ್ರಸಾದ ಸೇವಿಸಬಾರದು
ದೇವಾಲಯಕ್ಕೆ ಹೋದಾಗ ದೇವರಿಗೆ ಅರ್ಪಿಸಿದ ಪ್ರಸಾದ ಸೇವಿಸುತ್ತೇವೆ. ಆದರೆ ಶಿವರಾತ್ರಿಯಂದು ಶಿವಲಿಂಗಕ್ಕೆ ಅರ್ಪಿಸಿದ ಪ್ರಸಾದ ಸೇವಿಸಬಾರದು ಎಂಬ ನಿಯಮವಿದೆ.

ಶಿವನಿಗೆ ತುಳಸಿ ಅರ್ಪಿಸಬಾರದು
ಹಿಂದೂ ಪೌರಾಣಿಕ ಕತೆಯ ಪ್ರಕಾರ ತುಳಸಿ ವಿಷ್ಣುವಿಗೆ ಅರ್ಪಿತಳು. ಆದ್ದರಿಂದ ಯಾವುದೇ ಕಾರಣಕ್ಕೆ ತುಳಸಿಯನ್ನು ಶಿವನಿಗೆ ಅರ್ಪಿಸಬಾರದು. ಯಾವುದೇ ಶಿವ ಪೂಜೆಯಲ್ಲಿ ತುಳಸಿ ಬಳಸುವುದಿಲ್ಲ.

ಅರಿಶಿಣವನ್ನು ಶಿವಲಿಂಗಕ್ಕೆ ಹಚ್ಚಬಾರದು
ಅರಿಶಿಣ ಪುರುಷ ತತ್ವವನ್ನು ಕುಗ್ಗಿಸುತ್ತೆ,ಅರಿಶಿಣವನ್ನು ಸ್ತ್ರೀಯರಿಗೆ ಎಂದು ಪರಿಗಣಿಸಲಾಗಿದೆ. ಆದ್ದರಿಂದ ಮಹಾದೇವನನ್ನು ಪ್ರಾರ್ಥಿಸುವಾಗ ಅರಿಶಿಣ ಬಳಸಬಾರದು.

ಚಂಪಾ, ಕೇದಗೆ ಹೂ ಬಳಸಬಾರದು
ಶಿವ ಈ ಎರಡೂ ಹೂಗಳಿಗೆ ಶಾಪ ನೀಡಿದ್ದಾನೆ ಎಂದು ಹೇಳಲಾಗುತ್ತದೆ. ಆದ್ದರಿಂದ ಈ ಎರಡು ಹೂಗಳನ್ನು ಬಳಸುವಂತಿಲ್ಲ.



Click it and Unblock the Notifications