Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಹಾ ಸಪ್ತಮಿ 2021: ದಿನಾಂಕ, ಪೂಜಾ ಮುಹೂರ್ತ, ಮಹತ್ವ
ಅಕ್ಟೋಬರ್ 12ರಂದು ಮಹಾಸಪ್ತಮಿ ಆಚರಿಸಲಾಗುತ್ತಿದೆ, ಬೆಂಗಾಳಿಗಳಿಗೆ ಇದು ಮಹತ್ವದ ಆಚರಣೆ, ದೇಶದೆಲ್ಲಡೆ ಮಹಾ ಸಪ್ತಮಿ ಆಚರಿಸಲಾಗುವುದು. ದುರ್ಗಾ ಪೂಜೆಯ 2ನೇ ದಿನ ಮಹಾ ಸಪ್ತಮಿ, ಈ ದಿನ ದುರ್ಗಾ ದೇವಿಗೆ ಮಹಾ ಪೂಜೆ ಮಾಡಲಾಗುವುದು.

ಮಹಾ ಸಪ್ತಮಿ ಕುರಿತು ಹೆಚ್ಚಿನ ವಿಷಯಗಳನ್ನು ಈ ಲೇಖನದ ಮೂಲಕ ಅರಿತುಕೊಳ್ಳೋಣ:
ಮಹಾ ಸಪ್ತಮಿ 2021
ಮಹಾ ಸಪ್ತಮಿ ಅಕ್ಟೋಬರ್ 12ರಂದು ಆಚರಿಸಲಾಗುತ್ತಿದೆ.
ಮಹಾ ಸಪ್ತಮಿ ತಿಥಿ ಅಕ್ಟೋಬರ್ 11 ರಾತ್ರಿ 11:5ಕ್ಕೆ ಪ್ರಾರಂಭವಾಗಿದೆ.
ಅಕ್ಟೋಬರ್ 12, ರಾತ್ರಿ 09:47ಕ್ಕೆ ಸಪ್ತಮಿ ತಿಥಿ ಮುಕ್ತಾಯ
ಮಹಾ ಸಪ್ತಮಿಯಂದು ಮಹಾ ಸ್ನಾನ
ಸಪ್ತಮಿಯ ದಿನವನ್ನು ಮಹಾಸಪ್ತಮಿ ಎಂದು ಆಚರಿಸಲಾಗುತ್ತದೆ ಮತ್ತು ಈ ದಿನದಂದು ಮಹಾಸ್ನಾನಕ್ಕೆ ವಿಶೇಷ ಮಹತ್ವವಿದೆ. ಸಪ್ತಮಿಯ ದಿನ ದುರ್ಗಾದೇವಿಯ ವಿಗ್ರಹದ ಮುಂದೆ ಕನ್ನಡಿಯನ್ನು ಇರಿಸುವ ಮೂಲಕ, ಅದರ ಮೇಲೆ ಬೀಳುವ ದುರ್ಗಾದೇವಿಯ ಚಿತ್ರಕ್ಕೆ ಸ್ನಾನ ಮಾಡಲಾಗುತ್ತದೆ ಮತ್ತು ಇದನ್ನು ಮಹಾಸ್ನಾನ ಎಂದು ಕರೆಯಲಾಗುತ್ತದೆ.
ಮಹಾಸಪ್ತಮಿಯ ದಿನ ನವಪತ್ರಿಕೆಯನ್ನು ಪೂಜಿಸಲಾಗುತ್ತದೆ ಅಂದರೆ ಒಂಬತ್ತು ಗಿಡಗಳ ಪವಿತ್ರ ಸ್ನಾನದಿಂದ ದಿನ ಆರಂಭವಾಗುತ್ತದೆ. ಈ ಒಂಬತ್ತು ಸಸ್ಯಗಳನ್ನು ನದಿಗೆ ಅಥವಾ ಕೊಳಕ್ಕೆ ತೆಗೆದುಕೊಂಡು ಹೋಗಿ ಮುಳಗಿಸಿ ಅದಕ್ಕೆ ಕೆಂಪು ಅಥವಾ ಕೇಸರಿ ಬಟ್ಟೆ ಸುತ್ತಿ ದೇವಿಯ ಬಲ ಭಾಗದಲ್ಲಿ ಇಡಲಾಗುವುದು. ಗಿಡಗಳ ಬದಲು ಒಂಬತ್ತು ವಿಧದ ಎಲೆಗಳನ್ನು ಕೂಡ ಬಳಸಬಹುದು.
ಈ ಎಲೆಗಳನ್ನು ಹಳದಿ ದಾರದಿಂದ ಬಿಳಿ ಅಪರಾಜಿತಾ ಗಿಡಗಳ ರೆಂಬೆಗಳಿಗೆ ಕಟ್ಟಲಾಗುತ್ತದೆ. ಮಾ ದುರ್ಗಾದ ಒಂಬತ್ತು ರೂಪಗಳನ್ನು ಈ ಎಲೆಗಳನ್ನು ಒಟ್ಟಿಗೆ ಜೋಡಿಸುವ ಮೂಲಕ ಪ್ರತಿನಿಧಿಸಲಾಗುತ್ತದೆ. ಇವು ಒಂಬತ್ತು ಸಸ್ಯಗಳು ದೇವಿಯ ಅವತಾರಗಳ ಪ್ರತೀಕವಾಗಿದೆ.
ಯಾವ ಎಲೆಗಳನ್ನು ಬಳಸಲಾಗುವುದು
ಬಿಲ್ವೆ ಪತ್ರೆ- ಶಿವ
ಅಶೋಕ ಎಲೆಗಳು - ದೇವಿ ಶೋಕ
ಭತ್ತ - ಲಕ್ಷ್ಮಿ ದೇವತೆ
ಬಾಳೆ ಗಿಡ - ದೇವತೆ ಬ್ರಹ್ಮಣಿ
ಸೀತಾ ಅಶೋಕ ಗಿಡ (Arum Lily) - ಚಾಮುಂಡಾದೇವಿ
ಅರಿಶಿನ ಸಸ್ಯ - ದುರ್ಗಾದೇವಿ
ದಾಳಿಂಬೆ ಎಲೆಗಳು - ರಕ್ತದಂತಿಕ ದೇವತೆ
ಜಯಂತಿ ಸಸ್ಯ - ಕಾರ್ತಿಕೀ ದೇವತೆ
ಕೆಸದ ಎಲೆ - ದೇವತೆ ಕಾಳಿಕಾ



Click it and Unblock the Notifications