Latest Updates
-
ಭಾರತ-ಜಿಂಬಾಬ್ವೆ ಟಿ20 ಪಂದ್ಯದ ಮಜಾ ಸವಿಯುತ್ತಲೇ ಮನೆಯ ಜವಾಬ್ದಾರಿ ನಿಭಾಯಿಸುವುದು ಹೇಗೆ? ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
IMD ರೆಡ್ ಅಲರ್ಟ್: ಭಾರಿ ಮಳೆಯಿಂದ ಮನೆಯನ್ನು ರಕ್ಷಿಸಲು ಈ 5 ಮುನ್ನೆಚ್ಚರಿಕೆಗಳು ಕಡ್ಡಾಯ! -
ಗುರು ಪೂರ್ಣಿಮಾ ಉಪವಾಸ: ಮಧುಮೇಹಿಗಳು ಆರೋಗ್ಯವಾಗಿರಲು ಈ ಸಾತ್ವಿಕ ಆಹಾರ ಕ್ರಮ ಪಾಲಿಸಿ -
ಪೇಪರ್ ಸೋರಿಕೆ ಮಾಡಿದ್ರೆ 10 ವರ್ಷ ಜೈಲು: ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಿಗಲಿದೆ ಹೊಸ ಭದ್ರತೆ! -
ಕಾರ್ಗಿಲ್ ವಿಜಯ್ ದಿವಸ್: ದೇಶಭಕ್ತಿಯ ನಡಿಗೆಯಲ್ಲಿ ಪಾಲ್ಗೊಳ್ಳುವ ಮುನ್ನ ಈ ಆರೋಗ್ಯ ಟಿಪ್ಸ್ ಮರೆಯದಿರಿ -
ದೇವಶಯನಿ ಏಕಾದಶಿ: ದಂಪತಿಗಳ ಬಾಂಧವ್ಯ ಹೆಚ್ಚಿಸಲು ಈ ಉಪವಾಸದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ತೇವಾಂಶ: ನಿಮ್ಮ ದುಬಾರಿ ಸೀರೆ ಮತ್ತು ಶೂಗಳನ್ನು ಬೂಸ್ಟ್ನಿಂದ ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಸಾಕು! -
ಅಹಮದಾಬಾದ್ ಮಳೆ: ಪ್ರವಾಹದ ಸಮಯದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಮಾರ್ಗಸೂಚಿಗಳನ್ನು ಅನುಸರಿಸಿ -
ಕಾಮನ್ವೆಲ್ತ್ ಗೇಮ್ಸ್ 2026: 3ನೇ ದಿನ ಭಾರತದ ಆಟಗಾರರ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ! -
ಮಳೆಗಾಲದ ಜಾರುವ ರಸ್ತೆಗಳಲ್ಲಿ ನಡೆಯುವಾಗ ಎಚ್ಚರ: ಸುರಕ್ಷಿತವಾಗಿರಲು 8 ನಿಮಿಷಗಳ ಈ ವ್ಯಾಯಾಮ ಮಾಡಿ!
ಮಹಾ ಸಪ್ತಮಿ 2021: ದಿನಾಂಕ, ಪೂಜಾ ಮುಹೂರ್ತ, ಮಹತ್ವ
ಅಕ್ಟೋಬರ್ 12ರಂದು ಮಹಾಸಪ್ತಮಿ ಆಚರಿಸಲಾಗುತ್ತಿದೆ, ಬೆಂಗಾಳಿಗಳಿಗೆ ಇದು ಮಹತ್ವದ ಆಚರಣೆ, ದೇಶದೆಲ್ಲಡೆ ಮಹಾ ಸಪ್ತಮಿ ಆಚರಿಸಲಾಗುವುದು. ದುರ್ಗಾ ಪೂಜೆಯ 2ನೇ ದಿನ ಮಹಾ ಸಪ್ತಮಿ, ಈ ದಿನ ದುರ್ಗಾ ದೇವಿಗೆ ಮಹಾ ಪೂಜೆ ಮಾಡಲಾಗುವುದು.

ಮಹಾ ಸಪ್ತಮಿ ಕುರಿತು ಹೆಚ್ಚಿನ ವಿಷಯಗಳನ್ನು ಈ ಲೇಖನದ ಮೂಲಕ ಅರಿತುಕೊಳ್ಳೋಣ:
ಮಹಾ ಸಪ್ತಮಿ 2021
ಮಹಾ ಸಪ್ತಮಿ ಅಕ್ಟೋಬರ್ 12ರಂದು ಆಚರಿಸಲಾಗುತ್ತಿದೆ.
ಮಹಾ ಸಪ್ತಮಿ ತಿಥಿ ಅಕ್ಟೋಬರ್ 11 ರಾತ್ರಿ 11:5ಕ್ಕೆ ಪ್ರಾರಂಭವಾಗಿದೆ.
ಅಕ್ಟೋಬರ್ 12, ರಾತ್ರಿ 09:47ಕ್ಕೆ ಸಪ್ತಮಿ ತಿಥಿ ಮುಕ್ತಾಯ
ಮಹಾ ಸಪ್ತಮಿಯಂದು ಮಹಾ ಸ್ನಾನ
ಸಪ್ತಮಿಯ ದಿನವನ್ನು ಮಹಾಸಪ್ತಮಿ ಎಂದು ಆಚರಿಸಲಾಗುತ್ತದೆ ಮತ್ತು ಈ ದಿನದಂದು ಮಹಾಸ್ನಾನಕ್ಕೆ ವಿಶೇಷ ಮಹತ್ವವಿದೆ. ಸಪ್ತಮಿಯ ದಿನ ದುರ್ಗಾದೇವಿಯ ವಿಗ್ರಹದ ಮುಂದೆ ಕನ್ನಡಿಯನ್ನು ಇರಿಸುವ ಮೂಲಕ, ಅದರ ಮೇಲೆ ಬೀಳುವ ದುರ್ಗಾದೇವಿಯ ಚಿತ್ರಕ್ಕೆ ಸ್ನಾನ ಮಾಡಲಾಗುತ್ತದೆ ಮತ್ತು ಇದನ್ನು ಮಹಾಸ್ನಾನ ಎಂದು ಕರೆಯಲಾಗುತ್ತದೆ.
ಮಹಾಸಪ್ತಮಿಯ ದಿನ ನವಪತ್ರಿಕೆಯನ್ನು ಪೂಜಿಸಲಾಗುತ್ತದೆ ಅಂದರೆ ಒಂಬತ್ತು ಗಿಡಗಳ ಪವಿತ್ರ ಸ್ನಾನದಿಂದ ದಿನ ಆರಂಭವಾಗುತ್ತದೆ. ಈ ಒಂಬತ್ತು ಸಸ್ಯಗಳನ್ನು ನದಿಗೆ ಅಥವಾ ಕೊಳಕ್ಕೆ ತೆಗೆದುಕೊಂಡು ಹೋಗಿ ಮುಳಗಿಸಿ ಅದಕ್ಕೆ ಕೆಂಪು ಅಥವಾ ಕೇಸರಿ ಬಟ್ಟೆ ಸುತ್ತಿ ದೇವಿಯ ಬಲ ಭಾಗದಲ್ಲಿ ಇಡಲಾಗುವುದು. ಗಿಡಗಳ ಬದಲು ಒಂಬತ್ತು ವಿಧದ ಎಲೆಗಳನ್ನು ಕೂಡ ಬಳಸಬಹುದು.
ಈ ಎಲೆಗಳನ್ನು ಹಳದಿ ದಾರದಿಂದ ಬಿಳಿ ಅಪರಾಜಿತಾ ಗಿಡಗಳ ರೆಂಬೆಗಳಿಗೆ ಕಟ್ಟಲಾಗುತ್ತದೆ. ಮಾ ದುರ್ಗಾದ ಒಂಬತ್ತು ರೂಪಗಳನ್ನು ಈ ಎಲೆಗಳನ್ನು ಒಟ್ಟಿಗೆ ಜೋಡಿಸುವ ಮೂಲಕ ಪ್ರತಿನಿಧಿಸಲಾಗುತ್ತದೆ. ಇವು ಒಂಬತ್ತು ಸಸ್ಯಗಳು ದೇವಿಯ ಅವತಾರಗಳ ಪ್ರತೀಕವಾಗಿದೆ.
ಯಾವ ಎಲೆಗಳನ್ನು ಬಳಸಲಾಗುವುದು
ಬಿಲ್ವೆ ಪತ್ರೆ- ಶಿವ
ಅಶೋಕ ಎಲೆಗಳು - ದೇವಿ ಶೋಕ
ಭತ್ತ - ಲಕ್ಷ್ಮಿ ದೇವತೆ
ಬಾಳೆ ಗಿಡ - ದೇವತೆ ಬ್ರಹ್ಮಣಿ
ಸೀತಾ ಅಶೋಕ ಗಿಡ (Arum Lily) - ಚಾಮುಂಡಾದೇವಿ
ಅರಿಶಿನ ಸಸ್ಯ - ದುರ್ಗಾದೇವಿ
ದಾಳಿಂಬೆ ಎಲೆಗಳು - ರಕ್ತದಂತಿಕ ದೇವತೆ
ಜಯಂತಿ ಸಸ್ಯ - ಕಾರ್ತಿಕೀ ದೇವತೆ
ಕೆಸದ ಎಲೆ - ದೇವತೆ ಕಾಳಿಕಾ



Click it and Unblock the Notifications