Latest Updates
-
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ? -
ಪಾರ್ಕ್ಗಳಲ್ಲಿ ನಗು-ಯೋಗದ ಅಲೆ: ಒತ್ತಡ ಮರೆಸಿ ದಿನವಿಡೀ ಎನರ್ಜಿಟಿಕ್ ಆಗಿರೋದು ಹೇಗೆ?
ಮಹಾ ಸಪ್ತಮಿ 2021: ದಿನಾಂಕ, ಪೂಜಾ ಮುಹೂರ್ತ, ಮಹತ್ವ
ಅಕ್ಟೋಬರ್ 12ರಂದು ಮಹಾಸಪ್ತಮಿ ಆಚರಿಸಲಾಗುತ್ತಿದೆ, ಬೆಂಗಾಳಿಗಳಿಗೆ ಇದು ಮಹತ್ವದ ಆಚರಣೆ, ದೇಶದೆಲ್ಲಡೆ ಮಹಾ ಸಪ್ತಮಿ ಆಚರಿಸಲಾಗುವುದು. ದುರ್ಗಾ ಪೂಜೆಯ 2ನೇ ದಿನ ಮಹಾ ಸಪ್ತಮಿ, ಈ ದಿನ ದುರ್ಗಾ ದೇವಿಗೆ ಮಹಾ ಪೂಜೆ ಮಾಡಲಾಗುವುದು.

ಮಹಾ ಸಪ್ತಮಿ ಕುರಿತು ಹೆಚ್ಚಿನ ವಿಷಯಗಳನ್ನು ಈ ಲೇಖನದ ಮೂಲಕ ಅರಿತುಕೊಳ್ಳೋಣ:
ಮಹಾ ಸಪ್ತಮಿ 2021
ಮಹಾ ಸಪ್ತಮಿ ಅಕ್ಟೋಬರ್ 12ರಂದು ಆಚರಿಸಲಾಗುತ್ತಿದೆ.
ಮಹಾ ಸಪ್ತಮಿ ತಿಥಿ ಅಕ್ಟೋಬರ್ 11 ರಾತ್ರಿ 11:5ಕ್ಕೆ ಪ್ರಾರಂಭವಾಗಿದೆ.
ಅಕ್ಟೋಬರ್ 12, ರಾತ್ರಿ 09:47ಕ್ಕೆ ಸಪ್ತಮಿ ತಿಥಿ ಮುಕ್ತಾಯ
ಮಹಾ ಸಪ್ತಮಿಯಂದು ಮಹಾ ಸ್ನಾನ
ಸಪ್ತಮಿಯ ದಿನವನ್ನು ಮಹಾಸಪ್ತಮಿ ಎಂದು ಆಚರಿಸಲಾಗುತ್ತದೆ ಮತ್ತು ಈ ದಿನದಂದು ಮಹಾಸ್ನಾನಕ್ಕೆ ವಿಶೇಷ ಮಹತ್ವವಿದೆ. ಸಪ್ತಮಿಯ ದಿನ ದುರ್ಗಾದೇವಿಯ ವಿಗ್ರಹದ ಮುಂದೆ ಕನ್ನಡಿಯನ್ನು ಇರಿಸುವ ಮೂಲಕ, ಅದರ ಮೇಲೆ ಬೀಳುವ ದುರ್ಗಾದೇವಿಯ ಚಿತ್ರಕ್ಕೆ ಸ್ನಾನ ಮಾಡಲಾಗುತ್ತದೆ ಮತ್ತು ಇದನ್ನು ಮಹಾಸ್ನಾನ ಎಂದು ಕರೆಯಲಾಗುತ್ತದೆ.
ಮಹಾಸಪ್ತಮಿಯ ದಿನ ನವಪತ್ರಿಕೆಯನ್ನು ಪೂಜಿಸಲಾಗುತ್ತದೆ ಅಂದರೆ ಒಂಬತ್ತು ಗಿಡಗಳ ಪವಿತ್ರ ಸ್ನಾನದಿಂದ ದಿನ ಆರಂಭವಾಗುತ್ತದೆ. ಈ ಒಂಬತ್ತು ಸಸ್ಯಗಳನ್ನು ನದಿಗೆ ಅಥವಾ ಕೊಳಕ್ಕೆ ತೆಗೆದುಕೊಂಡು ಹೋಗಿ ಮುಳಗಿಸಿ ಅದಕ್ಕೆ ಕೆಂಪು ಅಥವಾ ಕೇಸರಿ ಬಟ್ಟೆ ಸುತ್ತಿ ದೇವಿಯ ಬಲ ಭಾಗದಲ್ಲಿ ಇಡಲಾಗುವುದು. ಗಿಡಗಳ ಬದಲು ಒಂಬತ್ತು ವಿಧದ ಎಲೆಗಳನ್ನು ಕೂಡ ಬಳಸಬಹುದು.
ಈ ಎಲೆಗಳನ್ನು ಹಳದಿ ದಾರದಿಂದ ಬಿಳಿ ಅಪರಾಜಿತಾ ಗಿಡಗಳ ರೆಂಬೆಗಳಿಗೆ ಕಟ್ಟಲಾಗುತ್ತದೆ. ಮಾ ದುರ್ಗಾದ ಒಂಬತ್ತು ರೂಪಗಳನ್ನು ಈ ಎಲೆಗಳನ್ನು ಒಟ್ಟಿಗೆ ಜೋಡಿಸುವ ಮೂಲಕ ಪ್ರತಿನಿಧಿಸಲಾಗುತ್ತದೆ. ಇವು ಒಂಬತ್ತು ಸಸ್ಯಗಳು ದೇವಿಯ ಅವತಾರಗಳ ಪ್ರತೀಕವಾಗಿದೆ.
ಯಾವ ಎಲೆಗಳನ್ನು ಬಳಸಲಾಗುವುದು
ಬಿಲ್ವೆ ಪತ್ರೆ- ಶಿವ
ಅಶೋಕ ಎಲೆಗಳು - ದೇವಿ ಶೋಕ
ಭತ್ತ - ಲಕ್ಷ್ಮಿ ದೇವತೆ
ಬಾಳೆ ಗಿಡ - ದೇವತೆ ಬ್ರಹ್ಮಣಿ
ಸೀತಾ ಅಶೋಕ ಗಿಡ (Arum Lily) - ಚಾಮುಂಡಾದೇವಿ
ಅರಿಶಿನ ಸಸ್ಯ - ದುರ್ಗಾದೇವಿ
ದಾಳಿಂಬೆ ಎಲೆಗಳು - ರಕ್ತದಂತಿಕ ದೇವತೆ
ಜಯಂತಿ ಸಸ್ಯ - ಕಾರ್ತಿಕೀ ದೇವತೆ
ಕೆಸದ ಎಲೆ - ದೇವತೆ ಕಾಳಿಕಾ



Click it and Unblock the Notifications