Latest Updates
-
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ -
ಗಣೇಶ ಹಬ್ಬ 2026: ಬೆಂಗಳೂರಿನಲ್ಲಿ PoP ಮೂರ್ತಿಗಳ ಮೇಲೆ ಕಠಿಣ ನಿಷೇಧ, ಪರಿಸರ ಸ್ನೇಹಿ ಗಣಪತಿಯನ್ನು ಪತ್ತೆ ಹಚ್ಚುವುದು ಹೇಗೆ? -
ವೈ-ವೈ ನೂಡಲ್ಸ್ ಕಂಪನಿಗೆ FSSAI ಬಿಗ್ ಶಾಕ್: ಉತ್ಪಾದನೆ ಸ್ಥಗಿತ, ಅಸಲಿ ಕಾರಣವೇನು?
ಹನುಮಂತನ ಪೂಜೆಗೆ ಮಂಗಳವಾರ ತುಂಬಾ ಶ್ರೇಷ್ಠ ಏಕೆ? ಪೂಜೆಯ ವಿಧಾನಗಳೇನು?
ಹಿಂದೂ ಧರ್ಮದ ಪ್ರಕಾರ ವಾರದ 7 ದಿನಗಳಲ್ಲಿ ಪ್ರತಿಯೊಂದು ದಿನವೂ ದೇವರ ಆರಾಧನೆಯಲ್ಲಿ ವಿಶೇಷವಾದ ದಿನಗಳು. ಭಾನುವಾರ ಸೂರ್ಯ, ಸೋಮವಾರ ಶಿವ ಹೀಗೆ ವಾರದ ಏಳೂ ದಿನಗಳಲ್ಲಿ ಬೇರೆ-ಬೇರೆ ದೇವರ ಆರಾಧನೆ ಮಾಡಲಾಗುವುದು. ಮುಕ್ಕೋಟಿ ದೇವರುಗಳನ್ನು ಯಾರು ಯಾವಾಗ ಬೇಕಾದರೂ ಪೂಜಿಸಬಹುದು, ಆದರೆ ಕೆಲವೊಂದು ವಿಶೇಷ ದಿನಗಳಲ್ಲಿ, ವಿಶೇಷ ಸಮಯದಲ್ಲಿ, ವಿಶೇಷ ಸಂದರ್ಭಗಳಲ್ಲಿ ಪೂಜಿಸಿದರೆ ಹೆಚ್ಚಿನ ಫಲ ಸಿಗುವ ಕಾರಣ ಆ ದಿನಗಳಲ್ಲಿ ಭಕ್ತರು ಉಪವಾಸವಿದ್ದು ತಮ್ಮ ಇಷ್ಟ ದೈವರ ಆರಾಧನೆ ಮಾಡುತ್ತಾರೆ. ನಾವಿಲ್ಲಿ ಹನುಮಂತನ ಪೂಜೆಗೆ ಶ್ರೇಷ್ಠ ದಿನ ಮಂಗಳವಾರ ಏಕೆ, ಪೂಜಾ ವಿಧಿಗಳೇನು ಎಂಬ ಮಾಹಿತಿ ನೀಡಿದ್ದೇವೆ ನೋಡಿ.
ಶ್ರೀರಾಮನ ಭಕ್ತ ಹನುಮಂತನನ್ನೂ ಮಂಗಳವಾರ ಹಾಗೂ ಶನಿವಾರದೆಂದು ಪೂಜಿಸಲಾಗುವುದು. ಹಿಂದೂ ಪುರಾಣಗಳ ಪ್ರಕಾರ ವಾಯು ಪುತ್ರ ಚೈತ್ರ ಮಾಸದ ಹುಣ್ಣಿಮೆಯೆಂದು ಜನಿಸಿದನು ಎಂದು ಹೇಳಲಾಗುತ್ತದೆ. ಆದ್ದರಿಂದ ಹನುಮಾನ್ ಜಯಂತಿಯನ್ನು ಆ ದಿನದಂದು ಆಚರಿಸಲಾಗುವುದು. ಹನುಮಂತನು ಚಿರಂಜೀವಿ ಅಂದ್ರೆ ಸಾವಿಲ್ಲದವ, ಆದ್ದರಿಂದ ಆತ ಒಂದಲ್ಲಾ ಒಂದು ರೂಪದಲ್ಲಿ ಈಗಲೂ ಇದ್ದಾನೆ ಹಾಗೂ ಕಷ್ಟದಲ್ಲಿ ಇರುವವರನ್ನು ಎಂದಿಗೂ ಕೈ ಬಿಡಲ್ಲ ಎಂಬುವುದು ಆತನ ನಂಬುವ ಭಕ್ತರ ಅಚಲ ನಂಬಿಕೆ.

ಹನುಮಂತನ ಪೂಜೆ ಮಂಗಳವಾರ ತುಂಬಾ ಶ್ರೇಷ್ಠ, ಏಕೆ?
ಮಂಗಳವಾರ ತುಂಬಾ ಶುಭಕರವಾದ ದಿನವಾಗಿರುವುದರಿಂದ ಈ ದಿನದಂದು ಹನುಮಂತನ ಪೂಜಿಸಿದರೆ ಬದುಕಿನಲ್ಲಿ ಯಶಸ್ಸು ದೊರೆಯುವುದು, ನೆಮ್ಮದಿ, ಸಂತೋಷ ನೆಲೆಸುವುದು ಹಾಗೂ ಸವಾಲುಗಳನ್ನು ಎದುರಿಸುವ ಛಲ ದೊರೆಯುವುದು ಎಂದು ಹೇಳಲಾಗುವುದು. ಆದ್ದರಿಂದಲೇ ಹನುಮಂತನ ಗುಡಿಗಳಲ್ಲಿ ಮಂಗಳವಾರದೆಂದು ವಿಶೇಷ ಪೂಜೆ ಇರುತ್ತದೆ.

ಹನುಮಂತನ ಪೂಜಾ-ವಿಧಿಗಳೇನು?
* ಹನುಮಂತನ ಭಕ್ತರು ಮಂಗಳವಾರ ಸ್ನಾನ ಮಾಡಿ ಮಡಿ ಬಟ್ಟೆ ಧರಿಸಿ ಉಪವಾಸ ವ್ರತ ಕೈಗೊಂಡರೆ ಒಳ್ಳೆಯದು.
* ನಂತರ ಸಮೀಪದ ಹನುಮಂತನ ಗುಡಿಗೆ ಹೋಗಿ ಕೈ ಮುಗಿಯಬೇಕು.
* ಭಜರಂಗಿಗೆ ಹೂ, ಹಣ್ಣುಗಳು, ಸುಗಂಧ ಕಡ್ಡಿಗಳನ್ನು ಅರ್ಪಿಸಿ, ದೀಪ ಬೆಳಗಬೇಕು.
* ಇನ್ನು ನೀವು ಆಲದ ಮರದ ಎಲೆಯಲ್ಲಿ ಶ್ರೀ ರಾಮ್ ಎಂದು ಬರೆದಿರುವ ಮಾಲೆಯನ್ನು ಹನುಮಂತನಿಗೆ ಅರ್ಪಿಸಿ.
* ನಂತರ ಆಲದ ಮರಕ್ಕೆ ನೀರು ಹಾಕಿ ಸುತ್ತು ಬಂದು ಹನುಮಾನ್ ಚಾಲೀಸ ಮಂತ್ರಗಳನ್ನು ಹೇಳಿ.

ಹನುಮಾನ ಚಾಲೀಸಾ ಮಂತ್ರ
ಜಯ ಹನುಮಾನ್ ಜ್ಞಾನ ಗುಣಸಾಗರ ! ಜಯ ಕಪೀಶ ತಿಹುಲೋಕ ವುಜಾಗರ
ರಾಮದೂತ ಆತುಲಿತ ಬಲಧಮಾ
ಅಂಜನೀಪ್ರತ್ರ- ಪವನಸುತ ನಾಮಾ
ಮಹಾವೀರ ವಿಕ್ರಮ ಬಜರಂಗೀ ಕುಮತಿ ನಿವಾರಾ ಸುಮತಿ ಕೇ ಸಂಗೀ
ಕಂಚನವರಣ ವಿರಾಜ ಸುವೇಶಾ ಕಾನನ ಕುಂಡಲ ಕುಂಚಿತ ಕೇಶಾ
ಈ ಮಂತ್ರದ ಬಳಿಕ ಆರತಿ ತೆಗೆದುಕೊಳ್ಳಿ.

ಕಷ್ಟಗಳು ದೂರವಾಗಲು ಏನು ಮಾಡಬೇಕು
ಜೀವನದಲ್ಲಿ ತುಂಬಾ ಕಷ್ಟಗಳು ಎದುರಾಗುತ್ತಿದ್ದರೆ ಹನುಮಂತನನ್ನು ಭಕ್ತಿಯಿಂದ ಪ್ರಾರ್ಥಿಸಿ ಪ್ರಸಾದವನ್ನು ಅರ್ಪಿಸಿ, ಆ ಪ್ರಸಾದ ಹಂಚಿ. ಅಲ್ಲದೆ ಪ್ರತಿದಿನ ಹನುಮಾನ್ ಚಾಲೀಸ ಹೇಳುವುದರಿಂದ ಬದುಕಿನಲ್ಲಿ ಶುಭ ಫಲಗಳು ಕಂಡು ಬರುವುದು.



Click it and Unblock the Notifications