Latest Updates
-
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ!
ರಾಹುದೋಷವಿದೆ ಎಂದು ಸೂಚಿಸುವ ಸೂಚನೆಗಳಿವು, ಪರಿಹಾರವೇನು?
ರಾಹು ದೋಷವಿದ್ದರೆ ಅದರ ಪ್ರಭಾವ ಆ ಮನೆಯಲ್ಲಿ ಇರುತ್ತದೆ. ಮನೆಯಲ್ಲಿ ನೆಮ್ಮದಿ ಇರುವುದಿಲ್ಲ, ಹೊಂದಾಣಿಕೆ ಇರುವುದಿಲ್ಲ, ಸದಾ ಜಗಳ, ಒಡ ಹುಟ್ಟಿದವರ ಜೊತೆ ಮನಸ್ತಾಪ, ಆರೋಗ್ಯದ ಸಮಸ್ಯೆ ಇವೆಲ್ಲಾ ಆ ಮನೆಯಲ್ಲಿ ಇರುತ್ತದೆ.

ರಾಹು ದೋಷವಿದ್ದರೆ ಆ ಮನೆಯನ್ನು ನೋಡಿದಾಗ ತಿಳಿಯುತ್ತದೆ, ಯಾವುದೇ ಐಶ್ವರ್ಯ ಇರುವುದಿಲ್ಲ, ಮನೆ ಈ ರೀತಿ ಇದ್ದರೆ ಅದು ರಾಹು ದೋಷದ ಲಕ್ಷಣಗಳಾಗಿವೆ
* ಮನೆಯಲ್ಲಿ ನೀರು ಸೋರಿಕೆಯಾಗುತ್ತಿದ್ದರೆ (ನ್ಲಿ ಅಥವಾ ಪೈಪ್)
* ಮನೆಯಲ್ಲಿ ದೂಳು ದುಂಬಿಕೊಂಡಿದ್ದರೆ
* ಗಿಡ ಸರಿಯಾಗಿ ಬೆಳೆಯುವುದಿಲ್ಲ
* ಮನೆಯೊಳಗಡೆ ಸೂರ್ಯನ ಬೆಳಕು ಸರಿಯಾಗಿ ಬೀಳದಿರುವುದು
* ಕೆಲಸದವರಿಗೆ ಒಳ್ಳೆಯ ಸಂಬಳ ನೀಡಿದರೂ ಅವರು ತುಂಬಾ ಸಮಯ ನಿಲ್ಲುವುದಿಲ್ಲ
* ಆಗಾಗ ಹಾಲು ಹಾಳಾಗುವುದು, ಕೆಲವೊಂದು ವಸ್ತುಗಳು ಹಾಳಾಗುವುದು
* 38-45 ವರ್ಷದವರಿಗೆ ಆರೋಗ್ಯ, ಮತ್ತಿತರ ಸಮಸ್ಯೆಗಳು ಕಂಡು ಬರುವುದು
* ಬೇಡದ ವಿಷಯಗಳಿಗೆ ಹಣ ಖರ್ಚು ಮಾಡುವುದು
* ಯಾವುದೋ ಭಯ ಕಾಡುವುದು
* ಅಡುಗೆ ಮನೆಯ ಗೋಡೆಯಲ್ಲಿ ಬಿರುಕು
* ಮನೆಯಲ್ಲಿ ಸಂತೋಷ ಇಲ್ಲದಿರುವುದು

ರಾಹುವಿನ ಕೆಟ್ಟ ಪರಿಣಾಮ ಹೋಗಲಾಡಿಸಲು ಪರಿಹಾರ
* ಮನೆಯ ಮುಂದುಗಡೆ ಬಿಳಿ ಬಟ್ಟೆಯಲ್ಲಿ ಬಿಳಿ ಕಲ್ಲುಸಕ್ಕರೆ, ಕಪ್ಪು ಧಾನ್ಯಗಳು, ಗೋಮೇಧಿಕ ಹರಳು(gomed stone) ಮತ್ತು ಬೆಳ್ಳಿ ಇವುಗಳನ್ನು ಹಾಕಿ ನೇತು ಹಾಕಿ ಅಥವಾ ಮನೆ ಮುಂದುಗಡೆ ಸುಟ್ಟು ಹಾಕಿ.
* ಪಿತೃದೋಷ ನಿವಾರಣೆಗೆ ದಾನ ಮಾಡಿ
* ಮನೆಗೆ ಪೂರ್ವಜ್ಜರ ಹೆಸರು ಹಾಕಿ
* ಕೆಲಸಕ್ಕೆ ಕೂರುವ ಸ್ಥಳ, ತಿನ್ನುವ ಸ್ಥಳ, ಗಿಡಗಳನ್ನು ನೆಡುವುದು, ಪಕ್ಷಿಗಳಿಗೆ ತಿನ್ನಲು ಹಾಕುವುದು ಇವೆಲ್ಲಾ ಪೂರ್ವ ಭಾಗದಲ್ಇ ಇರಲಿ.

ರಾಹುವಿನ ಪ್ರಭಾವ
ರಾಹುವಿನಿಂದ ಧನಾತ್ಮಕ ಹಾಗೂ ಋಣಾತ್ಮಕ ಪರಿಣಾಮ ಎರಡೂ ಇರುತ್ತದೆ, ವ್ಯಕ್ತಿ ಪ್ರತಿಯೊಂದಕ್ಕೂ ಕಾರಣ ಹುಡುಕುತ್ತಿದ್ದರೆ ರಾಹುವಿನ ಋಣಾತ್ಮಕ ಪ್ರಭಾವವಿರುತ್ತದೆ, ಅದೇ ವ್ಯಕ್ತಿ ಶ್ರಮಪಟ್ಟು ದುಡಿಯಲು ಆರಂಭಿಸಿದರೆ ರಾಹು ಧನಾತ್ಮಕ ಪ್ರಭಾವ ಬೀರುತ್ತಾನೆ. ಗುರುವಿನ ಮಾರ್ಗದರ್ಶನದೊಂದಿಗೆ ಕೆಲಸ ಮಾಡಿ, ಮಕ್ಕಳು ಸ್ಪೋರ್ಟ್ಸ್ನಲ್ಲಿ ತೊಡಗಿಕೊಳ್ಳುವುದರಿಂದ ರಾಹುವಿನ ಪ್ರಭಾವವನ್ನು ಧನಾತ್ಮಕವಾಗಿ ಪರಿವರ್ತಿಸಬಹುದು.

ವ್ಯಕ್ತಿಯ ಮೇಲೆ ರಾಹುವಿನ ಋಣತ್ಮಕ ಪ್ರಭಾವವಿದೆ ಎಂದು ತೋರಿಸುವ ಲಕ್ಷಣಗಳು
* ನಿದ್ದೆ ಮಾಡಲು ಹಾಗೂ ಏಳಲು ತುಂಬಾ ತಡವಾಗುವುದು
* ಸಂಪ್ರದಾಯ, ಆಚಾರಗಳನ್ನು ಆಚರಿಸದಿರುವುದು
* ಕೆಟ್ಟ ಚಟಗಳಿಗೆ ದಾಸರಾಗುವುದು
* ಒಂದು ವಿಷಯದಲ್ಲಿ ಸರಿಯಾಗಿ ಗಮನ ಹರಿಸಲು ಸಾಧ್ಯವಾಗದಿರುವುದು
* ಮೊಬೈಲ್ ಮುಂತಾದ ಗ್ಯಾಡ್ಜೆಟ್ಗೆ ಅಡೆಕ್ಟ್ ಆಗುವುದು
* ಬೇಗನೆ ಕೋಪಗೊಳ್ಳುವುದು, ವಸ್ತುಗಳನ್ನು ಮುರಿಯುವುದು. ವಿವಾಹಿತರು ಸಂಬಂಧವನ್ನು ಕೂಡ ಮುರಿದುಕೊಳ್ಳಬಹುದು
* ಸುಳ್ಳು ಹೇಳಿ ತಪ್ಪಿಸಿಕೊಳ್ಳುವುದು, ಜವಾಬ್ದಾರಿ ತೆಗೆದುಕೊಳ್ಳದಿರುವುದು.

ವ್ಯಕ್ತಿಯ ಮೇಲೆ ರಾಹುವಿನ ಋಣಾತ್ಮಕ ಪ್ರಬಾವವಿದ್ದರೆ ಪರಿಹಾರ
* ಚಿಕ್ಕ ಚಂದನದ ತುಂಡನ್ನು ನೀಲಿ ದಾರದಲ್ಲಿ ಸುತ್ತಿ ಕಟ್ಟಿಕೊಳ್ಳಿ.
* ಸ್ನಾನ ಮಾಡುವ ನೀರಿಗೆ ಅಶೋಕ ಎಲೆ, ಸ್ವಲ್ಪ ಸುಗಂಧ ದ್ರವ್ಯ ಅಥವಾ ಎಣ್ಣೆ ಹಾಕಿ ಸ್ನಾನ ಮಾಡಿ.
* * ತಡರಾತ್ರಿ ತಿನ್ನುವುದು, ತಂಗಳು ಆಹಾರ ಸೇವನೆ ಮಾಡಬೇಡಿ
* ಮೀನುಗಳಿಗೆ ಆಹಾರ ಹಾಕಿ
* ಅಮವಾಸ್ಯೆಯಂದು 4 ಎಳನೀರನ್ನು ದೇವಾಲಯಕ್ಕೆ ನೀಡಿ.
* ರಾಹು ಮಂತ್ರ 'ಉನ್ ಭ್ರು ಭ್ರೂಂ: ರಾಹುವೇ ನಮಃ:' ಪಠಿಸಿ.



Click it and Unblock the Notifications