ರಾಮನು ಯಾವ ಕಾರಣಕ್ಕಾಗಿ ಗಡಿಪಾರು ಶಿಕ್ಷೆಯನ್ನು ಅನುಭವಿಸಬೇಕಾಯಿತು?

ಅಯೋಧ್ಯಾಧಿಪತಿ, ರಘುಕುಲತಿಲಕ, ಸೂರ್ಯವ೦ಶದ ಮುಕುಟಮಣಿಯೆ೦ದೆನಿಸಿಕೊ೦ಡಿದ್ದ ದೊರೆ ಭಗವಾನ್ ರಾಮನ ಬಗ್ಗೆ ಈ ಹಿ೦ದೆ ಹೇಳದೇ, ಬರೆಯದೇ, ಅಥವಾ ಮಾತನಾಡದೇ ಬಾಕಿ ಉಳಿದಿರುವ ವಿಷಯವಾದರೂ ಯಾವುದಿದೆ ಹೇಳಿ?! ನಮಗೆಲ್ಲಾ ಶ್ರೀ ರಾಮನ ಧೈರ್ಯ, ಆತನ ಸ೦ಸ್ಕೃತಿ, ಸ೦ಸ್ಕಾರಗಳು, ಆತನ ನೈತಿಕತೆ, ಭ್ರಾತೃವಾತ್ಸಲ್ಯ ಹಾಗೂ ಮಾತೃವಾತ್ಸಲ್ಯ, ತ೦ದೆತಾಯಿಗಳ ಕುರಿತ೦ತೆ ಹಾಗೂ ಗುರುಹಿರಿಯರ ಕುರಿತ೦ತೆ ಆತನಿಗಿದ್ದ ಗೌರವ, ಆದರಗಳು ಹಾಗೂ ತನ್ನ ಅಸೀಮ ಭಕ್ತನಾಗಿದ್ದ ಹನುಮನ ಕುರಿತ೦ತೆ ಶ್ರೀ ರಾಮನ ಹೃದಯವೈಶಾಲ್ಯ ಇವೆಲ್ಲಾ ನಮಗೆ ಗೊತ್ತು.

ಶ್ರೀ ರಾಮಚ೦ದ್ರನ ಜೀವನ ಚರಿತ್ರೆಯು ತೆರೆದ ಪುಸ್ತಕವಿದ್ದ೦ತೆ, ಅದರಲ್ಲಿ ಯಾವುದೇ ಮುಚ್ಚುಮರೆಗಳಿಲ್ಲ, ತನ್ನ ತಂದೆಯ ಮಾತಿಗೆ ಬೆಲೆ ನೀಡಿ, ವನವಾಸಕ್ಕೆ ತೆರಳಿದ್ದು, ತನ್ನ ಪತ್ನಿಯನ್ನು ರಕ್ಷಿಸಿಕೊಳ್ಳಲು ರಾವಣನೊಡನೆ ಹೋರಾಡಿದ್ದು, ಇವೆಲ್ಲವುದರ ಕುರಿತಾಗಿ ನಮಗೆಲ್ಲಾ ತಿಳಿದಿರುವ೦ತಹದ್ದೇ. ಶ್ರೀ ರಾಮಚ೦ದ್ರನ ಕುರಿತ೦ತೆ ಇಷ್ಟೆಲ್ಲಾ ತಿಳಿದಿದ್ದರೂ ಕೂಡಾ ರಾಮನ ಬಗ್ಗೆ ಇನ್ನಷ್ಟು ತಿಳಿದಿಲ್ಲದ ಸ೦ಗತಿಗಳು ರಾಮಾಯಣದಲ್ಲಿ ಬಹಳಷ್ಟು ಇವೆ, ಶ್ರೀ ರಾಮಚ೦ದ್ರನ ಜೀವನದ ಕುರಿತಾದ, ಕೆಲವೊಂದು ಸಂಗತಿಯನ್ನು ನೀಡುತ್ತಿದ್ದೇವೆ, ಮುಂದೆ ಓದಿ...

rams exile in kannada

ನಮಗೆಲ್ಲಾರಿಗೂ ತಿಳಿದಿರುವಂತೆ ಶ್ರೀರಾಮನನ್ನು ಮೂರು ದಿನಗಳ ಕಾಲ ಗಡಿಪಾರು ಮಾಡಲಾಗಿತ್ತು. ಈ ಗಡೀಪಾರನ್ನು ಸ್ವತಃ ಕೈಕೇಯಿ ಮಾಡಿದ್ದರು. ಈ ಗಡಿಪಾರು ಶಿಕ್ಷೆಯನ್ನು ರಾಮನಿಗೆ ಕೈಕೇಯಿ ಏಕೆ ವಿಧಿಸಿದರು ಎಂಬುದಕ್ಕೆ ಕಾರಣವನ್ನು ನಾವು ಇಂದಿನ ಲೇಖನದಲ್ಲಿ ತಿಳಿಸುತ್ತಿದ್ದೇವೆ. ರಾಜ ದಶರಥನ ಕಿರೀಟ ವಿಷಯದಲ್ಲಿ ಈ ಶಿಕ್ಷೆಯನ್ನು ರಾಮನು ಅನುಭವಿಸಬೇಕಾಯಿತು. ರಾಜ ದಶರಥನು ಮೂವರು ಪತ್ನಿಯರನ್ನು ಹೊಂದಿದ್ದರು. ಸುಮಿತ್ರ, ಕೌಶಲ್ಯ ಹಾಗೂ ಕೈಕೇಯಿ ಎಂಬವರೇ ದಶರಥನ ಪತ್ನಿಯರಾಗಿದ್ದರು. ಯುದ್ಧಗಳಲ್ಲಿ ಪರಿಣಿತಿಯನ್ನು ಹೊಂದಿದ್ದ ಕೈಕೇಯಿ ದಶರಥನಿಗೆ ಯುದ್ಧ ಸಮಯದಲ್ಲಿ ಬೆನ್ನುಲುಬಾಗಿ ನಿಂತಿರುತ್ತಿದ್ದರು.

ಬಾಲಿಯು ದಶರಥನ ಕಿರೀಟವನ್ನು ಹೊತ್ತೊಯ್ದನು

ಒಮ್ಮೆ ದಶರಥ ಮತ್ತು ಬಾಲಿ ಯುದ್ಧವನ್ನು ಮಾಡುತ್ತಿದ್ದರು. ತನ್ನ ಮುಂದಿರುವ ವ್ಯಕ್ತಿಯ ಎಲ್ಲಾ ಶಕ್ತಿಯನ್ನು ತಾನು ಪಡೆದುಕೊಳ್ಳಬಹುದೆಂಬ ವರವನ್ನು ಬಾಲಿಯು ಪಡೆದುಕೊಂಡಿದ್ದನು. ದಶರಥನ ಮೇಲೆ ಈ ವರವನ್ನು ಆತ ಪ್ರಯೋಗಿಸಿ ದಶರಥನ ಸರ್ವ ಶಕ್ತಿಯನ್ನು ಆತ ಪಡೆದುಕೊಳ್ಳುತ್ತಾನೆ. ಈ ಯುದ್ಧ ಸಮಯದಲ್ಲಿ ಕೈಕೇಯಿ ಕೂಡ ರಾಜನೊಂದಿಗೆ ಇರುತ್ತಾರೆ. ವರದಿಂದ ಸೋಲಿಸಿದ ಬಾಲಿಯು ದಶರಥನ ಮುಂದೆ ಎರಡು ಷರತ್ತುಗಳನ್ನು ಇರಿಸುತ್ತಾನೆ ಒಂದೋ ಕೈಕೇಯಿಯನ್ನು ಆತನ ಕೈಗೆ ಒಪ್ಪಿಸುವುದು ಇಲ್ಲದಿದ್ದರೆ ರಾಜ್ಯವನ್ನು ಅಸುರನಿಗೆ ಅರ್ಪಿಸುವುದು. ತನ್ನ ಕಿರೀಟವನ್ನು ದಶರಥನು ಆತನಿಗೆ ಒಪ್ಪಿಸಿ ಪತ್ನಿಯೊಂದಿಗೆ ದಶರಥ ಅಯೋಧ್ಯೆಗೆ ಮರಳುತ್ತಾರೆ.

ಆತಂಕಗೊಂಡ ಕೈಕೇಯಿ

ಕೈಕೇಯಿ ರಾಜನ ಪರಿಸ್ಥಿತಿಯನ್ನು ನೆನೆದು ಪರಿತಪಿಸುತ್ತಾರೆ. ತನ್ನ ಕಿರೀಟವನ್ನು ಕಳೆದುಕೊಂಡ ರಾಜನಿಗೆ ರಾಜ್ಯದಲ್ಲಿ ಬೆಲೆ ಮರ್ಯಾದೆ ಇರುವುದಿಲ್ಲ. ಅದಲ್ಲದೆ ಕಿರೀಟವನ್ನು ಒಪ್ಪಿಸಿದ ನಂತರ ರಾಜ್ಯವನ್ನು ಒಪ್ಪಿಸಿದಂತೆಯೇ. ಒಮ್ಮೆ ಕೈಕೇಯಿಗೆ ದಶರಥನು ವರವನ್ನು ನೀಡಿರುತ್ತಾರೆ. ಅದರಂತೆ ಆಕೆ ಮೂರು ವರಗಳನ್ನು ಪಡೆದುಕೊಂಡಿರುತ್ತಾರೆ. ಅಂತೆಯೇ ರಾಜನಲ್ಲಿ ಒಂದು ವರವನ್ನು ಕೇಳುತ್ತಾರೆ.

ರಾಮನ ಗಡೀಪಾರು

ಕೈಕೇಯಿಗೆ ತಿಳಿದಂತೆ ರಾಜನ ಕಿರೀಟವನ್ನು ಮರುಪಡೆದುಕೊಳ್ಳಲು ರಾಮನು ಸರಿಸಮನಾಗಿದ್ದಾರೆ ಎಂದು. ಯುದ್ಧ ಕಲೆಯಲ್ಲಿ ರಾಮನು ಪರಿಣಿತಿಯನ್ನು ಪಡೆದುಕೊಂಡಿರುತ್ತಾರೆ ಮತ್ತು ದುಷ್ಟ ಅಸುರನನ್ನು ಸೋಲಿಸಿ ಕಿರೀಟವನ್ನು ಮರಳಿ ಪಡೆದುಕೊಳ್ಳಬಹುದು ಎಂಬುದು ಕೈಕೇಯಿಯ ಯೋಜನೆಯಾಗಿತ್ತು. ಇದೇ ಸಮಯದಲ್ಲಿ ರಾಮನಿಗೆ ಪಟ್ಟಾಭಿಷೇಕ ಮಾಡಬೇಕೆಂಬ ಆಸೆಯನ್ನು ದಶರಥನು ಹೊಂದಿರುತ್ತಾರೆ. ತನ್ನ ಮಗ ಭರತನನ್ನು ರಾಜನಾಗಿ ಮಾಡಬೇಕೆಂಬುದು ಕೈಕೇಯಿಯ ಬಯಕೆಯಾಗಿತ್ತು. ಈ ಸಮಯದಲ್ಲಿ ರಾಮನನ್ನೇ ಗಡೀಪಾರು ಮಾಡಿದರೆ ಆ ಸ್ಥಾನವನ್ನು ಭರತನಿಗೆ ನೀಡಬಹುದು ಎಂಬುದು ಆಕೆಯ ಉದ್ದೇಶವಾಗಿತ್ತು.

ರಾಣಿಯ ಬಯಕೆಯನ್ನು ರಾಜ್ಯ ಖಂಡಿಸುತ್ತದೆ

ಇಡಿಯ ರಾಜ್ಯಕ್ಕೆ ಆಕೆಯ ಬಯಕೆ ದುಃಖಕರವಾಗಿತ್ತು. ರಾಮನ ಮೇಲಿನ ಆಕೆಯ ಪ್ರೀತಿಯನ್ನು ಎಲ್ಲರೂ ಪ್ರಶ್ನಿಸುತ್ತಾರೆ. ಆಕೆ ಮಲತಾಯಿಯಾಗಿರುವುದರಿಂದ ರಾಮನ ಗಡೀಪಾರನ್ನು ಪತಿಯ ಬಳಿ ಇಟ್ಟಿದ್ದಾರೆ ಎಂದೇ ಪ್ರಜೆಗಳು ಆಡಿಕೊಳ್ಳುತ್ತಾರೆ. ಆದರೆ ಕಿರೀಟವನ್ನು ಪುನಃ ತರುವುದು ರಾಮನಿಂದ ಮಾತ್ರ ಸಾಧ್ಯ ಎಂಬುದು ಸತ್ಯವಾಗಿತ್ತು.

ಆದೇಶವನ್ನು ಅನುಸರಿಸಿದ ರಾಮ

ತಾಯಿಯ ಮಾತನ್ನು ಒಪ್ಪದ ಭರತನು ಆಕೆಯನ್ನೇ ಖಂಡಿಸುತ್ತಾರೆ. ತನ್ನ ತಂದೆಯ ನಂತರದ ಆತನನ್ನು ಅವರ ಸ್ಥಾನದಲ್ಲಿ ಭರತನು ರಾಮನನ್ನು ನೋಡುತ್ತಾನೆ. ರಾಮನ ಪಟ್ಟಾಭಿಷೇಕವನ್ನು ತನ್ನ ತಲೆಗೆ ತಂದುಕೊಳ್ಳುವ ಯೋಜನೆ ಕೂಡ ಆತನ ಮನಸ್ಸಿನಲ್ಲಿರುವುದಿಲ್ಲ. ತನ್ನ ತಾಯಿ ಕೈಕೇಯಿಯು ತಂದೆಯಿಂದ ಪಡೆದಿದ್ದ ವರವನ್ನು ಇದೀಗ ಪೂರ್ಣ ಮಾಡಿಕೊಳ್ಳುತ್ತಿದ್ದಾರೆ ಎಂಬ ವಿಷಯವನ್ನು ಅರಿತ ರಾಮನು ತಾಯಿಯ ಮಾತನ್ನು ಅನುಸರಿಸಲು ಮುಂದಾಗುತ್ತಾರೆ. ರಾಜ್ಯವನ್ನು ಬಿಟ್ಟು ತೆರಳುವ ನಿರ್ಧಾರವನ್ನು ಅವರು ಸಂತೋಷದಿಂದಲೇ ಒಪ್ಪಿಕೊಳ್ಳುತ್ತಾರೆ. ತನ್ನ ಮುಂದಿನ ಹದಿನಾಲ್ಕು ವರ್ಷವನ್ನು ಅವರು ಅರಣ್ಯದಲ್ಲಿಯೇ ಕಳೆಯುತ್ತಾರೆ. ತನ್ನ ಹಣೆಬರವನ್ನು ಅನುಸರಿಸಿಕೊಂಡು ರಾಮನು ಕೈಕೇಯಿ ಹೇಳಿದಂತೆ ಕಿರೀಟವನ್ನು ತರಲು ಗಡೀಪಾರು ಶಿಕ್ಷೆಯನ್ನು ಅನುಭವಿಸುತ್ತಾರೆ.

ಬಾಲಿ ಮತ್ತು ಸುಗ್ರೀವರನ್ನು ಭೇಟಿಯಾದ ರಾಮ

ಗಡೀಪಾರು ಶಿಕ್ಷೆಯಲ್ಲಿದ್ದ ರಾಮನು ಬಾಲಿ ಮತ್ತು ಸುಗ್ರೀವರೆಂಬ ಸಹೋದರರನ್ನು ಭೇಟಿಯಾಗುತ್ತಾರೆ. ಸುಗ್ರೀವನನ್ನು ರಾಮನ ಬಾಲಿಯಿಂದ ರಕ್ಷಿಸುತ್ತಾರೆ. ತನ್ನ ತಂದೆಯ ಕಿರೀಟದ ಬಗ್ಗೆ ಆತ ಸುಗ್ರೀವನ್ನು ಕೇಳುತ್ತಾರೆ. ಬಾಲಿಯಿಂದ ರಾವಣನು ದಶರಥನ ಕಿರೀಟವನ್ನು ಹೊತ್ತೊಯ್ದಿದ್ದಾರೆಂದು ಸುಗ್ರೀವ ಹೇಳುತ್ತಾರೆ. ಇದಕ್ಕೆ ಪ್ರತಿಯಾಗಿ ತನ್ನ ಮಗ ಅಂಗದ ಕಿರೀಟವನ್ನು ತರುತ್ತಾನೆ ಎಂದು ಸುಗ್ರೀವ ಹೇಳುತ್ತಾರೆ. ಅಂಗದನು ಲಂಕೆಗೆ ಕಿರೀಕ್ಕಾಗಿ ಹೊರಡುತ್ತಾರೆ.

ಅಂಗದನಿಗೆ ಕಿರೀಟ ಮರಳಿ ದೊರಕುತ್ತದೆ

ರಾವಣನಿಂದ ಕಿರೀಟವನ್ನು ಮರಳಿ ಪಡೆದುಕೊಳ್ಳುವ ಸಲುವಾಗಿ ಅಂಗದನು ಲಂಕೆಯನ್ನು ಪ್ರವೇಶಿಸುತ್ತಾರೆ. ತನ್ನ ಶಕ್ತಿ ಪ್ರದರ್ಶನವನ್ನು ಮಾಡುವಂತೆ ಅಂಗದನಿಗೆ ರಾವಣನು ಸವಾಲು ಒಡ್ಡುತ್ತಾರೆ. ಅಂಗದನು ತನ್ನ ಕಾಲುಗಳನ್ನು ಬಲವಾಗಿ ಊರುತ್ತಾರೆ ಮತ್ತು ಅದನ್ನು ಸಡಿಲಿಸುವಂತೆ ಆಹ್ವಾನವನ್ನು ನೀಡುತ್ತಾರೆ. ಯಾರಿಂದಲೂ ಈ ಸಾಹಸ ಸಾಧ್ಯವಾಗದ ಸಮಯದಲ್ಲಿ ರಾವಣನು ಸ್ವತಃ ಅಂಗದ ಕಾಲನ್ನು ಸಡಿಲಿಸಲು ಪ್ರಯತ್ನಿಸುತ್ತಾರೆ. ಈ ಸಮಯದಲ್ಲಿ ಸುಗ್ರೀವನು ರಾವಣನ ಬಳಿಯಲ್ಲಿದ್ದ ಕಿರೀಟವನ್ನು ಕಸಿದುಕೊಳ್ಳುತ್ತಾರೆ. ಹೀಗೆ ಅಯೋಧ್ಯೆ ಮತ್ತು ದಶರಥನ ಗೌರವವನ್ನು ರಾಮನು ಉಳಿಸುತ್ತಾರೆ.

English summary

How Lord Rama Brought His Father's Crown Back

We all know that Lord Rama was sent in exile for three days because of his own mother Kaikeyi. Why would a mother ever do that? Here is the reason. King Dasharatha's Crown was the real reason behind it. Read on. King Dasharath had three queens, Sumitra, Koushalya and Kaikeyi. Kaikeyi was well versed in warship and often used to accompany King Dasharath during battles.
X
Desktop Bottom Promotion