Latest Updates
-
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ
Maha Shivaratri 2026 Wishes : ಓಂ ನಮಃ ಶಿವಾಯ: ಇಲ್ಲಿವೆ ಮಹಾಶಿವರಾತ್ರಿಯ ಶುಭ ಸಂದೇಶಗಳು, ಶುಭಾಶಯಗಳು
Happy Maha Shivaratri 2026: Wishes, Images, Quotes in Kannada : ದೇಶಾದ್ಯಂತ ಆಚರಿಸುವ ಅತಿ ದೊಡ್ಡ ಹಬ್ಬಗಳಲ್ಲಿ ಕೈಲಾಸವಾಸ ಶಿವರಾತ್ರಿ ಹಬ್ಬ ಪ್ರಮುಖವಾದದ್ದು. ಈ ವರ್ಷ ಫೆಬ್ರವರಿ 15ಕ್ಕೆ ಮಹಾಶಿವರಾತ್ರಿ ಆಚರಿಸಲಾಗುವುದು. ಈ ಹಬ್ಬದಂದು ಶಿವನ ಆರ್ಶೀವಾದ ಪಡೆಯಲು ಸಮರ್ಪಿಸಲಾಗಿದೆ.

ಶಿವರಾತ್ರಿ ಎಂದರೆ ಪವಿತ್ರವಾದ ಕತ್ತಲು. ಭಕ್ತರು ಇಂದು ಪೂರ್ಣ ಮನಸ್ಸಿನಿಂದ ಮತ್ತು ಪ್ರಾಮಾಣಿಕತೆಯಿಂದ ಶಿವನ ನಾಮ, ಜಪಮಂತ್ರಗಳನ್ನು ಸ್ಮರಣೆ ಮಾಡುತ್ತಾ ಶಿವನ ಆಶೀರ್ವಾದಕ್ಕೆ ಪಾತ್ರರಾಗಲು ಬಯಸುತ್ತಾರೆ. ಮಹಾಶಿವರಾತ್ರಿ ಸಮಯದಲ್ಲಿ ಶಿವ ಪಾರ್ವತಿ ಸಮೇತ ಭೂಲೋಕಕ್ಕೆ ಬಂದು ಸಂಚಾರ ಮಾಡಲಿದ್ದು, ಈ ದಿನದಂದು ಯಾರು ನಿಷ್ಕಲ್ಮಷ ಮನಸ್ಸಿನಿಂದ, ಶಿವನಾಮ ಸ್ಮರಣೆ ಮಾಡಿ ಪೂಜಿಸುತ್ತಾರೋ ಅವರ ಪಾಪಗಳು ಪರಿಹಾರವಾಗುತ್ತದೆ ಎಂಬ ನಂಬಿಕೆ ಇದೆ.
ನಂಬಿ ಬಂದ ಭಕ್ತರನ್ನು ಎಂದಿಗೂ ನಿರಾಸೆ ಮಾಡದ ದಯಾಮಯಿ ಮಹಾದೇವ ಆರಾಧಕನ ಪವಿತ್ರ ದಿನದಂದು ದೈವೀಕ ಸಂದೇಶ ಸಾರುವ ಅತ್ಯುತ್ತಮ ಶುಭಾಶಯಗಳು ಇಲ್ಲಿವೆ ನೋಡಿ.

ತ್ರಯಂಬಕಂ
ಓಂ ತ್ರಯಂಬಕಂ ಯಜಾಮಹೇ
ಸುಗಂಧಿಂ ಪುಷ್ಠಿ ವರ್ಧನಂ
ಉರ್ವಾರುಕ ಮಿವ ಬಂಧನಾನ್
ಮೃತ್ಯೋರ್ ಮುಕ್ಷೀಯಮಾಮೃತಾತ್
ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು

ನಟರಾಜ
ನೃತ್ಯಕಲೆಯ ಆದಿದೈವ ನಟರಾಜ
ಪತ್ನಿ ಸತಿಯ ಅರ್ಧಾಂಗಿ ಎಂದ ಅರ್ಧನಾರೀಶ್ವರ
ಹೆಣ್ಣಿಗೆ ಅತ್ಯುತ್ತನ ಸ್ಥಾನ ನೀಡಿದ ಗಂಗಾಧರ
ದುಷ್ಟರನ್ನು ಎಲ್ಲಿದರೂ ಬಿಡದ ಸಂಹಾರಕನ ಕೃಪಾಶೀರ್ವಾದ ನಿಮ್ಮದಾಗಲಿ
ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು

ಸನ್ಮಂಗಳ
ಶಿವನ ಶಾಶ್ವತ ಪ್ರೀತಿ ಮತ್ತು ಶಕ್ತಿ ನಿಮಗೆ ಕರುಣಿಸಲಿ
ಸಂತೋಷ ಮತ್ತು ಶಾಂತಿ ಸಹಿತ
ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ
ಶಿವನ ಸಕಲ ಆಶೀರ್ವಾದ ಸಿಗಲಿ
ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು

ಸ್ಕಂದಗುರು
ನಂದಿವಾಹನದಲ್ಲಿ ಮೂರ್ಜಗದಿ ಮೆರೆವ ಶಿವ
ಅಮೃತಘಟದಿಂದು ಉದಯಿಸಿ ವಿಷ ಸೇವಿಸಿದ ಶ್ರೀಕಂಠ
ಕ್ರೋಧದಿಂದ ಕಣ್ತೆರೆದು ಕಂದರ್ಪನನ್ನು ಕೊಂದ ಉಗ್ರ
ಸ್ಕಂದಗುರು, ಗಿರಿಜಾಪತಿ, ವಿಶ್ವೇಶ್ವರ, ತ್ರಿಲೋಕಪತಿ
ಎಂಬೆಲ್ಲಾ ಹೆಸರಿನಿಂದ ಖ್ಯಾತನಾದ ಮಹೇಶ್ವರ
ನಿಮ್ಮ ಬಾಳಲ್ಲಿ ನೆಮ್ಮದಿ, ಸೂಖ- ಶಾಂತಿ ನೀಡಲಿ
ಶಿವರಾತ್ರಿ ಹಬ್ಬದ ಶುಭಾಶಯಗಳು

ನಂದೀಶ
ಭಸ್ಮ ವಿಭೂಶಿತ ಭಕ್ತರ ಕಾಯ್ವ ರುದ್ರಾಕ್ಷ
ತ್ರಿಶೂಲಧಾರಿ, ಮುರ್ಲೋಕ ರಕ್ಷಕ
ಜಟೆಯಲ್ಲಿ ಗಂಗೆ, ಕರಗಳಲ್ಲಿ ಅಗ್ನಿ, ಢಮರು ಹಿಡಿದ ನಂದೀಶ
ಏಕಲಿಂಗ ಜಗದೀಶನ ಆಶೀರ್ವಾದ ನಿಮ್ಮದಾಗಲಿ
ಶಿವರಾತ್ರಿ ಹಬ್ಬದ ಶುಭಾಶಯಗಳು

ಸೃಷ್ಟಿ, ಸ್ಥಿತಿ, ಲಯಕಾರಕ
ಸೂರ್ಯ, ಚಂದ್ರ, ಅಗ್ನಿ ಸ್ವರೂಪ ಮುಕ್ಕಣ್ಣ
ಸೌಂದರ್ಯದ ಪ್ರತಿಬಿಂಬ ಅರ್ಧಚಂದ್ರ
ಜೀವನ ಶಾಶ್ವತೆಯ ಪತೀಕ ಗಂಗೆ
ಜ್ಞಾನದ ಸಂಕೇತ ಹಣೆಯ ಕಣ್ಣು
ಸೃಷ್ಟಿ, ಸ್ಥಿತಿ, ಸಂಹಾರ, ತಿರೋಭಾವ, ಅನುಗ್ರಹಂ
ಪ್ರತಿಪಾದಿಸುವ ನಟರಾಜ ಸರ್ವರಲ್ಲೂ ಒಳಿತು ಮಾಡಲಿ
ಶಿವರಾತ್ರಿ ಹಬ್ಬದ ಶುಭಾಶಯಗಳು

ದಿಗಂಬರಾಯ
ನಾಗೇಂದ್ರ ಹಾರಾಯ ತ್ರಿಲೋಚನಾಯ
ಭಸ್ಮಾಂಗ ರಾಗಾಯ ಮಹೇಶ್ವರಾಯ
ನಿತ್ಯಾಯ ಶುದ್ಧಾಯ ದಿಗಂಬರಾಯ
ತಸ್ಮೈನ ಕಾರಾಯ ನಮಃ ಶಿವಾಯ
ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು

ನಿಷ್ಕಲ್ಮಷ ಮನಸ್ಸಿನ ಪೂಜೆ
ಶೈವೋ ವಾ ವೈಷ್ಣವೋ ವಾಪಿ ಯೋ ವಾಸ್ಯಾದನ್ಯಪೂಜಕಃ
ಸರ್ವಂ ಪೂಜಾಫಲಂ ಹನ್ತಿ ಶಿವರಾತ್ರಿ ಬಹಿರ್ಮುಖಃ
ಶೈವನಾಗಲೀ, ವೈಷ್ಣವನಾಗಲಿ ಅಥವಾ ಇತರೆ ಯಾವುದೇ ದೇವತೆಯ ಉಪಾಸಕನಾಗಲಿ ಶಿವನನ್ನು ಅರಾಧಿಸುವ ಶಿವರಾತ್ರಿಯ ವಿಷಯದಲ್ಲಿ ಬಹಿರ್ಮುಖನಾಗಿದ್ದರೆ ಆತನಿಗೆ ಪೂಜಾಫಲ ಸಿಗುವುದಿಲ್ಲ. ಆದ್ದರಿಂದ ನೀವು ಸಹ ಬಹಿರ್ಮುಖಿಗಳಾಗದೇ ಅಂತರರ್ಮುಖಿಗಳಾಗಿ ನಿಷ್ಕಲ್ಮಷ ಮನಸ್ಸಿನಿಂದ ಶಿವನ ಕೃಪೆಗೆ ಪಾತ್ರರಾಗಿ.
ನಾಡಿನ ಸಮಸ್ತ ಜನತೆಗೆ ಮಹಾ ಶಿವರಾತ್ರಿ ಹಬ್ಬದ ಶುಭಾಶಯಗಳು



Click it and Unblock the Notifications