Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಗುರು ನಾನಕ್ ಜಯಂತಿ: ಈ ದಿನ ಸಿಖ್ರು ಪಾಕಿಸ್ತಾನದ ಕರ್ತಾಪುರಕ್ಕೆ ಭೇಟಿ ನೀಡುವುದೇಕೆ ಗೊತ್ತಾ?
ಸಿಖ್ರ ಪ್ರಮುಖ ಆಚರಣೆಗಳಲ್ಲಿ ಒಂದಾದ ಗುರು ನಾನಕ್ ಜಯಂತಿಯನ್ನು ನವೆಂಬರ್ 27ರಂದು ಆಚರಿಸಲಾಗುವುದು. ಗುರು ನಾನಕ್ ಜಯಂತಿಯನ್ನು ತುಂಬಾನೇ ವಿಜೃಂಭಣೆಯಿಂದ ಆಚರಣೆ ಮಾಡಲಾಗುವುದು.

ಗುರು ನಾನಕ್ ಜಯಂತಿಯನ್ನು ಪ್ರತೀವರ್ಷ ಕಾರ್ತಿಕ ಪೂರ್ಣಿಮೆಯ ದಿನ ಆಚರಿಸಲಾಗುವುದು.

ಗುರು ನಾನಕ್ ಜಯಂತಿ ಮಹತ್ವ
ಗುರು ನಾನಕ್ ಜಯಂತಿಯನ್ನು ಕಾರ್ತಿಕ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತಿದ್ದು ಈ ದಿನದಂದು ಸಿಖ್ ಧರ್ಮದಲ್ಲಿ ಅನೇಕ ಧಾರ್ಮಿಕ ಆಚರಣೆಗಳನ್ನು ಮಾಡಲಾಗುವುದು. ಈ ಆಚರಣೆಯನ್ನು ಗುರು ಪರ್ಬ ಎಂದು ಕರೆಯಲಾಗುವುದು. ಗುರು ನಾನಕ್ ಸಿಖ್ ಧರ್ಮದ ಮೊದಲು ಗುರು, ಇವರು ಜನಿಸಿದ ದಿನವನ್ನು ಗುರು ನಾನಕ್ ದಿನವನ್ನಾಗಿ ಆಚರಿಸಲಾಗುವುದು. ಈ ಬಾರಿ ಗುರುನಾನಕ್ ಅವರ 553ನೇ ಜಯಂತಿಯನ್ನು ಆಚರಿಸಲಾಗುತ್ತಿದೆ.

ಯಾರಿವರು ಗುರು ನಾನಕ್ ?
ಗುರು ನಾನಕ್ ಅವರು ಸಿಖ್ ಧರ್ಮದ ಮೊದಲ ಗುರುವಾಗಿದ್ದಾರೆ. ಇವರು ಆಗ ಅಖಂಡ ಭಾರತವಾಗಿದ್ದ ತಲ್ವಾಂಡಿಯಲ್ಲಿ ಜನಿಸಿದರು (ಈಗ ಆ ಜಾಗ ಪಾಕಿಸ್ತಾನಕ್ಕೆ ಸೇರಿದೆ). ಆ ಸ್ಥಳದಲ್ಲಿ ನಂಕಾನಾ ಸಾಹಿಬ್ ಎಂಬ ಗುರುದ್ವಾರವಿದೆ. ಗುರುನಾನಕ್ ದೇವ್ ಅವರಿಗೆ 16ನೇ ವಯಸ್ಸಿನಲ್ಲಿ ವಿವಾಹ ಮಾಡಲಾಗುತ್ತೆ. ಇವರು ಸಿಖ್ ಧರ್ಮದ ಉದಯಕ್ಕೆ ಅಡಿಪಾಯ ಹಾಕುತ್ತಾರೆ. ಅದಾದ ಬಳಿಕ ವಿಶ್ವದ ಹಲವು ಭಾಗಗಳಿಗೆ ತಮ್ಮ ಸಹಚರರ ಜೊತೆ ಅಫ್ಘಾನಿಸ್ತಾನ, ಪರ್ಷಿಯಾ ಮತ್ತು ಅರೇಬಿಯಾದ ಮುಂತಾದ ದೇಶಗಳಿಗೆ ಹೋಗಿ ಬರುತ್ತಾರೆ. ಇವರೊಬ್ಬ ಸಂತರಾಗಿದ್ದರು, ತಮ್ಮ ಇಡೀ ಜೀವನವನ್ನು ಸಮಾಜದ ಸುಧಾರಣೆಗೆ ಮೀಸಲಿಡುತ್ತಾರೆ. ತಮ್ಮ ಜೀವನದ ಕೊನೆಯ ಸಮಯವನ್ನು ಕರ್ತಾರ್ಪುರದಲ್ಲಿ ಕಳೆಯುತ್ತಾರೆ, ಅಲ್ಲಿಯೇ ಮರಣವೊಂದುತ್ತಾರೆ. ಹಾಗಾಗಿ ಪಾಕಿಸ್ತಾನದ ಕರ್ತಾರ್ಪುರ ಸಾಹಿಬ್ಗೆ ಈಗಲೂ ತುಂಬಾನೇ ಮಹತ್ವವಿದೆ.

ಇವರ ನಿಸ್ವಾರ್ಥ ಸೇವೆ
ಸಮಾಜಕ್ಕೆ ಇವರು ಸಲ್ಲಿಸಿದ ನಿಸ್ವಾರ್ಥ ಸೇವೆಯನ್ನು ಈಗಲೂ ನೆನೆಸಲಾಗುತ್ತೆ. ಇವರು ಸಾಮಾಜಿಕ ನ್ಯಾಯ, ಮಾನವೀಯತೆಗೆ ಹೆಚ್ಚು ಒತ್ತು ನೀಡುತ್ತಿದ್ದರು. ಈ ವಿಶೇಷ ದಿನ ಗುರುದ್ವಾರಗಳಲ್ಲಿ ಅಖಂಡ ಪಥವನ್ನು ನಿರಂತರ 48 ಗಂಟೆ ಪಠಿಸಲಾಗುವುದು. ಸಿಖ್ರು ಗುರು ನಾನಕ್ ಜಯಂತಿ ದಿನ ಕರ್ತಾರ್ಪುರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುತ್ತಾರೆ, ಸಿಖ್ರ ಆ ಪವಿತ್ರ ಕ್ಷೇತ್ರಕ್ಕೆ ತೆರಳಲು ಕರ್ತಾರ್ಪುರ ಕಾರಿಡಾರ್ ನಿರ್ಮಿಸಲಾಗಿದೆ.
ಗುರು ನಾನಾಕ್ರವರ ನೆನಪಿಗಾಗಿ ರಾವಿ ನದಿ ದಂಡೆಯಲ್ಲಿ ಸ್ಮಾರಕ ಕೂಡ ಇದೆ.



Click it and Unblock the Notifications
