Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಗುರುವಾರದಂದು ಸಾಯಿಬಾಬಾರನ್ನು ಹೀಗೆ ಆರಾಧಿಸಿದರೆ ಶುಭಫಲ ಪ್ರಾಪ್ತಿ
ಎಲ್ಲಾ ಧರ್ಮದಿಂದಲೂ ಪೂಜಿಸಲ್ಪಡುವ ಆಧ್ಯಾತ್ಮಿಕ ನಾಯಕರಾಗಿದ್ದವರು, ಶಿವನ ಅವತಾರ ಎಂಬ ನಂಬಿಕೆಯೂ ಇದೆ ಮತ್ತು ದತ್ತಾತ್ರೇಯ ಎಂದು ಹೇಳಲಾಗುವ ಆರಾಧ್ಯದೈವ ಶಿರಡಿ ಸಾಯಿಬಾಬಾ. ಸಾಯಿಬಾಬಾರವರು ಮಾನವ ರೂಪದಲ್ಲಿರುವ "ದೇವರು" ಎಂಬುದಲ್ಲದೆ, ಸಂತ ಮತ್ತು ಫಕೀರ್ ಎಂದು ಕರೆಯಲ್ಪಡುತ್ತಿದ್ದರು.

1835 ರಲ್ಲಿ ಜನಿಸಿದರು ಮತ್ತು 1918 ರಲ್ಲಿ ನಿಧನರಾದ ಸಾಯಿಬಾಬಾ ಸ್ವಯಂ-ಸಾಕ್ಷಾತ್ಕಾರದ ಬೋಧಕ ಎಂದು ಕರೆಯುತ್ತಾರೆ ಆದ್ದರಿಂದ ಅವರ ಆರಾಧಕರು ಪ್ರಾಮಾಣಿಕತೆ, ಶಾಂತಿ ಮತ್ತು ಕ್ಷಮೆಯ ಮಾರ್ಗವನ್ನು ಅನುಸರಿಸುತ್ತಾರೆ. ಇವರನ್ನು ಗುರುವಾರದಂದು ಆರಾಧಿಸಿದರೆ ಭಕ್ತರಿಗೆ ಶುಭಫಲ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.
ಸಾಯಿಬಾಬಾವನ್ನು ಗುರುವಾರ ಹೇಗೆ ಪೂಜಿಸಬೇಖು, ಯಾವೆಲ್ಲಾ ಫಲಾಹಾರ ನೀಡಿದರೆ ಸಾಯಿಬಾಬಾ ಕೃಪೆ ನಮ್ಮದಾಗುತ್ತದೆ ಮುಂದೆ ನೋಡೋಣ:

ಆರತಿ ಮತ್ತು ಮಂತ್ರಗಳನ್ನು ಪಠಿಸುವುದು
ಸಾಯಿ ಭಕ್ತ ಮಾಧವ ಅಡ್ಕರ್ ರಚಿಸಿದ ಆರತಿಯು ಸಾಯಿಬಾಬಾರನ್ನು ಆರಾಧಿಸುವಾಗ ಪಠಿಸಲು ಅತ್ಯುತ್ತಮ ಸ್ತೋತ್ರವಾಗಿದೆ. ಅಷ್ಟೇ ಅಲ್ಲದೆ, ಇತರ ಸಾಯಿಬಾಬಾ ಆರತಿಯನ್ನು ಸಹ ಪಠಿಸಬಹುದು. ನೂರು, ಸಾವಿರ ಬಾರಿ ಸಾಯಿಬಾಬಾ ಮಂತ್ರ ಪಠಿಸಿದರೆ ಶುಭ ಎಂದು ಹೇಳಲಾಗುತ್ತದೆ ಆದರೂ, ಅಂತಿಮವಾಗಿ ಎಣಿಕೆ ಏನೆಂದರೆ ಪ್ರಯತ್ನದ ಹಿಂದೆ ಹೃದಯದ ಸಮರ್ಪಣೆ ಮತ್ತು ಶುದ್ಧತೆ.

ಹೂವು, ಸುಗಂಧ ದ್ರವ್ಯಗಳು
ಸಾಯಿಬಾಬಾರವರ ದೇವಸ್ಥಾನಕ್ಕೆ ಭೇಟಿ ನೀಡಿದಾಗಲೆಲ್ಲ ನೀವು ಹೂವುಗಳು, ಸುಗಂಧ ದ್ರವ್ಯಗಳು, ಹಣ್ಣುಗಳು ಮತ್ತು ಸಿಹಿತಿಂಡಿಗಳನ್ನು ಅರ್ಪಿಸಬೇಕು. ಹೂವನ್ನು ಅಲಂಕಾರಕ್ಕಾಗಿ ಬಳಸುವುದರಿಂದ ದೇವಾಲಯದಲ್ಲಿ ಉತ್ಸಾಹಭರಿತ ವಾತಾವರಣವನ್ನು ಇಡಲು ಸಹಾಯ ಮಾಡುತ್ತದೆ. ಸುಗಂಧ ದ್ರವ್ಯಗಳು ವಿಗ್ರಹಗಳಿಗೆ ಉತ್ತಮ ಸುಗಂಧವನ್ನು ನೀಡುತ್ತವೆ. ಹಣ್ಣುಗಳನ್ನು ಸಿಹಿಯಾಗಿ ದೇವರಿಗೆ ಮತ್ತು ಭಕ್ತರಿಗೆ ಪೂಜೆಗೆ ಬರಲು ಅರ್ಪಿಸಲಾಗುತ್ತದೆ.

ಬಡವರಿಗೆ ಆಹಾರ ನೀಡುವುದು
ಎಲ್ಲಾ ಧರ್ಮಗಳಲ್ಲಿ ದಾನವನ್ನು ಬೋಧಿಸಲ್ಪಟ್ಟಿದೆ, ಬಡವರಿಗೆ ಆಹಾರ ನೀಡುವುದು ದೇವರನ್ನು ಆರಾಧಿಸುವ ಅತ್ಯುತ್ತಮ ಮಾರ್ಗಗಳಲ್ಲಿ ಒಂದಾಗಿದೆ. ಏಕೆಂದರೆ ಜಗತ್ತಿನಲ್ಲಿ ನಿಮಗೆ ಎಲ್ಲಾ ಸಂಪನ್ಮೂಲಗಳನ್ನು ಒದಗಿಸಿದ್ದಕ್ಕಾಗಿ ನೀವು ದೇವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೀರಿ. ಯಾವಾಗಲೂ ಅಗತ್ಯವಿರುವವರಿಗೆ ಸಹಾಯ ಮಾಡಿ ಮತ್ತು ಅದು ಸ್ವತಃ ದೇವರನ್ನು ಆರಾಧಿಸುವ ನಿಮ್ಮ ಮಾರ್ಗವಾಗಿದೆ ಎಂಬುದು ಸಾಯಿಬಾಬಾ ಅನುಯಾಯಿಗಳ ಸಲಹೆ.

ಸಾಯಿಬಾಬಾನಿಗೆ ಇಷ್ಟವಾದ ನೈವೇದ್ಯಗಳು
ಪಾಲಕ್
ಪಾಲಕ್ ಅತ್ಯಂತ ಆರೋಗ್ಯಕರ ಮಾತ್ರವಲ್ಲ, ಸಾಯಿಬಾಬಾರ ನೆಚ್ಚಿನ ತರಕಾರಿ ಎಂದು ಹೇಳಲಾಗುತ್ತದೆ. ಸಾಯಿಬಾಬಾರವರಿಗೆ ಗುರುವಾರದಂದು ಪಾಲಕ್ ಸೊಪ್ಪನ್ನು ಅರ್ಪಿಸಬೇಕು.



Click it and Unblock the Notifications